Category Archives: ಶ್ರೀಪಾದ್ ಭಟ್

ಒಳ್ಳೆಯ ಮುಸ್ಲಿಂ ಅಂದರೆ ಏನು?

ಇಂಗ್ಲೀಷ್ : ಸಾಬಾ ನಕ್ವಿ
ಅನುವಾದ : ಬಿ.ಶ್ರೀಪಾದ ಭಟ್

ಜುಲೈ 30 ರಂದು ಎರಡು ದೇಹಗಳನ್ನು ಮುಸ್ಲಿಂರ ಶವ ಸಂಸ್ಕಾರಕ್ಕೆ ಬಳಸುವ ಸಡಿಲವಾದ ಹೊದಿಕೆಗಳಿಂದ ಸುತ್ತಲಾಗಿತ್ತು. ಇವರಲ್ಲಿ ಒಬ್ಬರನ್ನು ರಾಷ್ಟ್ರೀಯ ಹೀರೋ ಎಂದು ಕರೆಯಲಾಗಿತ್ತು ಮತ್ತು ಅವರ ದೇಹವನ್ನು ರಾಷ್ಟ್ರೀಯ ಧ್ಜಜದಿಂದ ಸುತ್ತಲಾಗಿತ್ತು, ಮತ್ತೊಬ್ಬರನ್ನು ಜೈಲಿನಲ್ಲಿ ನೇಣುಗಂಬಕ್ಕೇರಿಸಲಾಗಿತ್ತು. ನಮ್ಮ ಕಣ್ಣ ಮುಂದೆ ಒಳಿತು ಕೆಡಕುಗಳ ನೈತಿಕತೆಯ ನೃತ್ಯ ನಡೆಯುತ್ತಿರುವಾಗ ಈ ಎರಡು ಸಾವುಗಳು ವಿಭಿನ್ನ ಕಾರಣಗಳಿಗಾಗಿ, ವಿಭಿನ್ನ ರೀತಿಗಳಿಗಾಗಿ ರಾಷ್ಟ್ರೀಯ ರಸಾನುಭವಗಳನ್ನು ತಂದುಕೊಡುತ್ತಿರುವಂತಿವೆ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಮತ್ತು ಬಾಂಬೆ apj-kalamಸ್ಪೋಟದ ಅಪರಾಧಿ ಯಾಕುಬ್ ಮೆನನ್ ಇವರಿಬ್ಬರನ್ನೂ ಒಂದೇ ದಿನದಂದು ಶವ ಸಂಸ್ಕಾರ ಮಾಡುತ್ತಿರುವುದು ಒಂದು ಕಾಕತಾಳೀಯ.

ಆದರೆ ಜಗತ್ತಿನ ಅತಿ ದೊಡ್ಡ ದೇಶದಲ್ಲಿ, ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಜಗತ್ತಿನ ಮೂರನೇ ದೇಶದಲ್ಲಿ ‘ಒಳ್ಳೆಯ ಮುಸ್ಲಿಂ, ಕೆಟ್ಟ ಮುಸ್ಲಿಂ’ ಎನ್ನುವ ರೂಢಿಬದ್ಧ ಹಣೆಪಟ್ಟಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ‘ಒಳ್ಳೆಯ ಮುಸ್ಲಿಂ, ಕೆಟ್ಟ ಮುಸ್ಲಿಂ’ ಎನ್ನುವ ನುಡಿಕಟ್ಟನ್ನು ಅಮೇರಿಕಾದ ಮಾಜಿ ಅಧ್ಯಕ್ಷ ಜಾರ್ಜ ಬುಶ್ ಅದನ್ನು 9/11 ಸಂದರ್ಭದಲ್ಲಿ ಬಳಸಿದ್ದರು. ಇದನ್ನೇ ಬಳಸಿಕೊಂಡು ಮೊಹಮ್ಮದ್ ಮಂದಾನಿ ಅವರು “Good Muslim, Bad Muslim: America, the Cold War, and the Roots of Terror” ಎನ್ನುವ ಪುಸ್ತಕವನ್ನು ಸಹ ಬರೆದಿದ್ದರು. ಈ ಪುಸ್ತಕದಲ್ಲಿ ‘ಒಳ್ಳೆಯ’ ಮತ್ತು ‘ಕೆಟ್ಟ’ ಎನ್ನುವ ಪದಬಳಕೆಯನ್ನು ಆ ಧರ್ಮದ ಪಾವಿತ್ರ್ಯತೆ ಅಥವಾ ಅದರ ಕೊರತೆಯನ್ನು ಆಧರಿಸಿ ಹೇಳಿದ್ದಲ್ಲ. ಬದಲಾಗಿ ಅಮೇರಿಕಾದ ವಿದೇಶಾಂಗ ನೀತಿಯು ತನ್ನ ಉಪಯುಕ್ತತೆಗೆ ಅನುಕೂಲವಾಗುವಂತೆ ನಿರ್ಧರಿಸುವ ತೀರ್ಪಿನ ಆಧಾರದ ಮೇಲೆ ಬಳಸಾಗುತ್ತದೆ. ಯಾವ ಇಮೇಜ್ ಅನ್ನು ಅವರು ನಿರ್ಮಿಸುತ್ತಾರೆಯೋ ಅದರ ಮೇಲೆ ಸಹ ನಿರ್ಧಾರವಾಗುತ್ತದೆ

ಆಕಸ್ಮಿಕವೋ ಎಂಬಂತೆ ಮುಸ್ಲಿಂ ಧರ್ಮದವರಾಗಿದ್ದ ಅಬ್ದುಲ್ ಕಲಾಂ ಇಂಡಿಯಾದ ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿಯಾಗಿರುವಷ್ಟರ ಮಟ್ಟಿಗೆ ಮೇರು ವ್ಯಕ್ತಿತ್ವದವರಾಗಿದ್ದರೆ? ವಿಜ್ಞಾನ ಕ್ಷೇತ್ರದಲ್ಲಿ ಅವರ ಸಾಧನೆಗಳು ಏನೇ ಇರಲಿ (ಅದರ ಕುರಿತಾಗಿಯೂ ತಕರಾರುಗಳಿವೆ) ಕಲಾಂ ಅವರನ್ನು ಮತ್ತು ಅವರ ಜನಪ್ರಿಯತೆಯನ್ನು ಸಮಾಜ ಮತ್ತು ರಾಜಕೀಯ-ಮಿಲಿಟರಿಯ ಸಂಕೀರ್ಣತೆಯು ರೂಪಿಸಿತ್ತು. ಭವಿಷ್ಯದಲ್ಲಿ ಇಂಡಿಯಾ ದೇಶವು ಮಿಲಿಟರಿಯಲ್ಲಿ ಸೂಪರ್ ಶಕ್ತಿಯಾಗಿ ಹೊರಹೊಮ್ಮಬೇಕೆಂದು ಕಲಾಂ ಅವರ ದರ್ಶನವಾಗಿತ್ತು. ಕಾಣ್ಕೆಯಾಗಿತ್ತು. ಅವರು ಒಬ್ಬ ಸರಳವಾದ “ಮಿಸೈಲ್ ಮನುಷ್ಯ”ರಾಗಿದ್ದರು ಮತ್ತು ಅವರ ಪುಸ್ತಕಗಳು ಬೇರೆ ಲೇಖಕರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದವು, ಅವರ ಭಾಷಣದ ಸಭಾಂಗಣಗಳು ಸದಾಕಾಲ ಹೌಸ್‍ಫುಲ್ ಆಗಿರುತ್ತಿದ್ದವು. ಅವರನ್ನು ಮಕ್ಕಳು ಆರಾಧಿಸುತ್ತಿದ್ದರು. ಅವರ ಸರಳತೆ ಮಕ್ಕಳನ್ನು ಸೆಳೆಯುತ್ತಿತ್ತು

ಮತ್ತು ಅವರು ಇಂಡಿಯಾ ದೇಶ ಬಯಸುವಂತಹ ಒಬ್ಬ ಪರಿಪೂರ್ಣ ಮುಸ್ಲಿಂ ಆಗಿದ್ದರು. ತಮ್ಮ ಎದೆಯ ಮೇಲೆ ಧರ್ಮವನ್ನು ಛಾಪಿಸಿಕೊಳ್ಳದ, ಸಾಧಾರಣ ಹಿನ್ನೆಲೆಯಿಂದ ಬಂದಂದತಹ, ಸ್ವಪರಿಶ್ರಮದಿಂದ ಮೇಲಕ್ಕೇರಿದ ವ್ಯಕ್ತಿ. ಗಡ್ಡಧಾರಿಯಾದ, ಸದಾ ಅವ್ಯವಸ್ಥೆಯ ghetto ಗಳಲ್ಲಿ ಬದುಕುವ ಪೀಡಕನಂತೆ ಕಂಗೊಳಿಸುವ ರೂಢಿಗತ ಮುಸ್ಲಿಂರ ಪರಿಕಲ್ಪನೆಗಿಂತ ಸಂಪೂರ್ಣ ಭಿನ್ನವಾಗಿದ್ದರು. ಮುಖ್ಯವಾಗಿ ಕಲಾಂ ಎಂದಿಗೂ ವ್ಯವಸ್ಥೆಯನ್ನು ವಿರೋಧಿಸಿರಲಿಲ್ಲ ಮತ್ತು ಅನ್ಯಾಯದ ವಿರುದ್ಧ ಪ್ರತಿಭಟಿಸಿರಲಿಲ್ಲ. ಇದಕ್ಕೆ ಬದಲಾಗಿ ಅವರು ಪ್ರಭುತ್ವದ ವ್ಯವಸ್ಥೆಯನ್ನು ಮತ್ತು ಅದರ ಮಿಲಿಟರಿ-ಕೈಗಾರಿಕಾ ಸಂಕೀರ್ಣತೆಯನ್ನು ವೈಭವೀಕರಿಸಿದ್ದರು. ಬಲಪಂಥೀಯರು ಸದಾ ಕರೆದುಕೊಳ್ಳುವ ಬಲಪಂಥೀಯ ಐಡಿಯಾಲಜಿಯ ಶೈಲಿಯ ‘ದೇಶವನ್ನು ಕಟ್ಟುವ’ ಮಾದರಿಗೆ ಉಪಯುಕ್ತರಾಗಿದ್ದರು. ಅಷ್ಟಕ್ಕೂ ರಾಷ್ಟ್ರಪತಿ ಹುದ್ದೆಗೆ ಅವರ ಹೆಸರನ್ನು ಸೂಚಿಸಿದ್ದು ಬಿಜೆಪಿ ಪಕ್ಷದ ನಾಯಕ ಎ.ಬಿ.ವಾಜಪೇಯಿ.The Prime Minister Shri Atal Bihari Vajpayee calls on the President Dr. A.P.J. Abdul Kalam in New Delhi on July 25, 2002 (Thursday) ಆರೆಸ್ಸಸ್‍ನ ಮುಖವಾಣಿ ‘ಪಾಂಚಜನ್ಯ’ದ ಆಗಿನ ಸಂಪಾದಕರಾಗಿದ್ದ ತರುಣ್ ವಿಜಯ್ ಅವರು 2002ರಲ್ಲಿ ಔಟ್‍ಲುಕ್ ವಾರಪತ್ರಿಕೆಗೆ ಬರೆದ ಅಂಕಣದಲ್ಲಿ “ಭಾರತೀಕರಣವೆಂದರೆ ಹಿಂದುತ್ವ. ಇದರ ಅರ್ಥ ಮುಸ್ಲಿಂರು ಹಿಂದೂಯಿಸಂಗೆ ಮತಾಂತರವಾಗಬೇಕು ಅಂತಲ್ಲ, ಅಥವಾ ಕ್ರಿಶ್ಚಿಯನ್ನರು ದೇವಸ್ಥಾನಗಳಿಗೆ ಭೇಟಿ ಕೊಡಬೇಕಂತಲೂ ಅಲ್ಲ. ಬದಲಾಗಿ ನೀನು ಏನು ಆಗಬೇಕೆಂದುಕೊಳ್ಳುತ್ತೀಯಾ ಅದೇ ಅದರ ಅರ್ಥ. ಡಾ.ಅಬ್ದುಲ್ ಕಲಾಂ ಅವರ ಕಾಣ್ಕೆಯಂತೆ” ಎಂದು ಬರೆದಿದ್ದರು ಮತ್ತು ಇಸ್ರೋದಲ್ಲಿ ಕಲಾಂ ಅವರ ಸಹೋದ್ಯೋಗಿಗಳು ಅವರನ್ನು ಕಲಾಂ ಐಯ್ಯರ್ ಎಂದು ಕರೆಯುತ್ತಿದ್ದರು ಎಂದು ಹೆಮ್ಮಯಿಂದ ಬರೆದಿದ್ದರು. ಕಲಾಂ ಅವರ ಈ ನಾಮಕರಣಕ್ಕೆ ಅವರು ಸಸ್ಯಾಹಾರಿಯಾಗಿದ್ದರು, ಅವರು ಸಂಸ್ಕೃತದಲ್ಲಿ ಪರಿಣಿತರಾಗಿದ್ದರು, ಭಗವದ್ಗೀತವನ್ನು ಓದಿಕೊಂಡಿದ್ದರು ಮತ್ತು ವೀಣೆಯನ್ನು ನುಡಿಸುತ್ತಿದ್ದರು ಎನ್ನುವ ಗುಣಗಳೂ ಕಾರಣವಾಗಿದ್ದವು.

ದಿನನಿತ್ಯ ಯೋಗ, ಸೂರ್ಯ ನಮಸ್ಕಾರ ಮಾಡುವ, ಗೀತೆಯ ಭಾಗಗಳನ್ನು ಓದಲು ಪ್ರಯತ್ನಿಸುವ ಅನೇಕರು ಕಲಾಂರ ಮೇಲಿನ ಗುಣಗಳು ಅವರನ್ನು ಮುಸ್ಲಿಂ ಎನ್ನುವ ಅಂಶವನ್ನು ತೆಳುಗೊಳಿಸುತ್ತದೆ ಎಂದು ಭಾವಿಸುತ್ತಾರೆ. ಆದರೆ ನಾನು ಇದನ್ನು ಸಂದೇಹಿಸುತ್ತೇನೆ. ದೆಹಲಿಯ ಲುಟ್ಯೇನ್ ಪ್ರದೇಶದಲ್ಲಿರುವ ಔರಂಗಜೇಬ್ ರಸ್ತೆಯನ್ನು ಮರು ನಾಮಕರಣ ಮಾಡಿ ಅದಕ್ಕೆ ಕಲಾಂ ಅವರ ಹೆಸರಿಡಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿರುವವರೊಂದಿಗೆ ನನ್ನ ಸಹಮತವಿಲ್ಲ. ನನ್ನ ಒಂದು ಸಲಹೆ ಈ ಔರಂಗಜೇಬ್ ರಸ್ತೆಗೆ ದಾರಾ ಶಿಖೋವ ಅವರ ಹೆಸರನ್ನು ಇಡಬೇಕು. ಇತಿಹಾಸ ಗೊತ್ತಿಲ್ಲದವರಿಗೆ ಈ ದಾರಾ ಶಿಖೋವನನ್ನು ಶಹಜಾನ್ ಅವರ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಗಿತ್ತು ಮತ್ತು ಈತನನ್ನು ಔರಂಗಜೇಬ್ ಸಾಯಿಸಿದ್ದ. ಈ ದಾರಾ ಶಿಖೋವ ಬಹುರೂಪಿ ಸಂಸ್ಕೃತಿಯ ವಕ್ತಾರನಾಗಿದ್ದ. ಕೋಮು ಸೌಹಾರ್ದತೆಗೆ ತುಡಿಯುತ್ತಿದ್ದ. ಸಂಸ್ಕೃತದಿಂದ 50 ಉಪನಿಷದ್‍ಗಳನ್ನು ಪರ್ಷಿಯನ್‍ಗೆ ಅನುವಾದ ಮಾಡಿದ್ದ.

ಯಾಕುಬ್ ಮೆಮನ್‍ಗೆ ಮೇಲಿನ ಯಾವುದೇ ಛಾಯೆಗಳಿರಲಿಲ್ಲ. ಆತ ಕೇವಲ ಕೆಟ್ಟ ಮುಸ್ಲಿಂನಾಗಿದ್ದ. ವ್ಯಾಪಕವಾದ ಭಯೋತ್ಪಾದನೆಯ ಸಂಚಿಗೆ ಸೆಳೆಯಲ್ಪಟ್ಟ ಸುಶಿಕ್ಷಿತ ಚಾರ್ಟೆಡ್ ಅಕೌಂಟೆಂಟ್ ಆಗಿದ್ದ. ಅಷ್ಟಕ್ಕೂ ಮುಸ್ಲಿಂ ಎಂದರೆ ಭಯೋತ್ಪಾದಕ ಎನ್ನುವ ಪ್ರಚಲಿತ ನಿರ್ಮಿತಿಯನ್ನು ಇಡೀ ಜಗತ್ತು ಒಕ್ಕೊರಲಿನಿಂದ ಒಪ್ಪಿಕೊಂಡಿದೆ. ಯಾಕೂಬ್ ಅನಾಯಾಸವಾಗಿ ಈ ಚೌಕಟ್ಟಿನಲ್ಲಿ ತುಂಬಿಕೊಳ್ಳುತ್ತಾನೆ. ಆದರೆ ಯಾಕೂಬ್‍ನ ಕತೆಗಳಲ್ಲಿ ತುಂಬಾ ಸೂಕ್ಷ್ಮ ವ್ಯತ್ಯಾಸಗಳಿವೆ. ಮತ್ತು ಈ ಸೂಕ್ಷ್ಮ ವ್ಯತ್ಯಾಸಗಳನ್ನು ವ್ಯವಸ್ಥೆಯು ಅನುಕಂಪದ ಮನಸ್ಥಿತಿಯಿಂದ ಅರ್ಥ ಮಾಡಿಕೊಳ್ಳುವುದೂ ಇಲ್ಲ. ಇವರೆಲ್ಲಾ ಪ್ರಶ್ನೆಗಳನ್ನು ಎತ್ತುತ್ತಲೇ ಜೊತೆಗೆ ಸಾಧ್ಯತೆಗಳನ್ನೂ ಸೂಚಿಸುತ್ತಾರೆ. ಯಾಕೂಬ್ ತಾನು ಮಾಡಿದ ಕೃತ್ಯಕ್ಕೆ ಕ್ಷಮೆ ಕೇಳುತ್ತಾನೆಯೇ? ಆತನಿಗೆ ಪ್ರಾಯಶ್ಚಿತವಾಗಿದೆಯೇ? ಆತ ಭಾರತದ ಏಜೆನ್ಸಿಗಳೊಂದಿಗೆ ಡೀಲ್ ಮಾಡಿಕೊಂಡಿದ್ದಾನೆಯೇ? ಅದರ ಅನುಸಾರ ಆತನ ಕುಟುಂಬವನ್ನು ಸುರಕ್ಷಿತವಾಗಿ ಭಾರತಕ್ಕೆ ಮರಳಿ ಕರೆತರುವುದರ ಕುರಿತಾಗಿ ಒಪ್ಪಂದವಾಗಿದೆಯೇ? ಶಿಕ್ಷೆಯನ್ನು ನಿರೀಕ್ಷಿಸುತ್ತಾನೆಯೇ? ಆದರೆ ವ್ಯವಸ್ಥೆಯಿಂದ ನ್ಯಾಯವನ್ನೂ ಬಯಸುತ್ತಾನೆಯೇ?

ಆತನ ಸಾವಿನಲ್ಲಿ ಯಾಕೂಬ್‍ನನ್ನು ಮಿತಿ ಮೀರಿದ ವ್ಯಕ್ತಿಯನ್ನಾಗಿ ನೋಡುತ್ತಿರುವ ಇಂದಿನ ಸಂದರ್ಭದಲ್ಲಿ ಈ ಎಲ್ಲಾ ಪ್ರಶ್ನೆಗಳು ಗಾಳಿಯಲ್ಲಿ ತೇಲುತ್ತಿವೆ. ಒಂದು ವೇಳೆ ಆತ ಬದುಕಿದ್ದರೆ ಜೀವಾವಧಿ ಶಿಕ್ಷೆಗೊಳಗಾಗಿರುವ ಇತರೇ ಖೈದಿಗಳಂತೆ ಆತನೂ ಜೈಲಿನಲ್ಲಿ ಮರೆತು ಹೋಗುತ್ತಿದ್ದ. ಆದರೆ ಆತನ ಸಾವನ್ನು ಅಷ್ಟು ಸುಲುಭವಾಗಿ ಮಣ್ಣು ಮಾಡಲಾಗುವುದಿಲ್ಲ. ಅಪಾಯವೇನೆಂದರೆ ಯಾಕೂಬ್‍ನನ್ನು ಹುತಾತ್ಮನನ್ನಾಗಿ ಮಾಡುವುದರಿಂದ ದೇಶ ವಿರೋಧಿ ಶಕ್ತಿಗಳಿಗೆ ಹೆಚ್ಚಿನ ಲಾಭವಿದೆ

ತನ್ನ ‘ಒಳ್ಳೆಯ ಮುಸ್ಲಿಂ, ಕೆಟ್ಟ ಮುಸ್ಲಿಂ’ ಎನ್ನುವ ಪುಸ್ತಕದಲ್ಲಿ goodmuslimbadmuslimಮಂದಾನಿ ‘ವಿಸ್ತೃತವಾದಕ್ಕೆ ನೈತಿಕ ಮೇಲುಹೊದಿಕೆಯಾಗಿ ನಿಯೋಜಿಸಲ್ಪಡುವ, ಬಳಸಲ್ಪಡುವ ಮುಸ್ಲಿಂ ಮತ್ತು ಇಸ್ಲಾಂ ಕ್ಯಾರಿಕೇಚರ್’ ಅನ್ನು ತೆರೆದಿಡುತ್ತಾನೆ. ಭಯೋತ್ಪಾದನೆಯ ವಿಶ್ಲೇಷಣೆಯನ್ನು ವ್ಯವಸ್ಥೆಯೊಳಗಿನ ಹುಳುಕುಗಳನ್ನು ತೋರಿಸುವುದಕ್ಕೆ ಬಳಸಿಕೊಳ್ಳವುದಿಲ್ಲ, ಬದಲಾಗಿ ರಾಜ್ಯದ ನೀತಿಯನ್ನಾಗಿ ಬಳಸಿಕೊಳ್ಳತ್ತಾರೆ ಎಂದು ಹೇಳುತ್ತಾನೆ. ಆ ಭಯೋತ್ಪಾದನೆಯ ಕೃತ್ಯಗಳಿಗೆ ಕಾರಣಗಳನ್ನು ಪರೀಕ್ಷಿಸುವುದೇ ಭಯೋತ್ಪಾದನೆಗೆ ಸಮರ್ಥನೆಯಾಗುತ್ತದೆ ಮತ್ತು ಇದು ದೇಶದ ಹಿತಕ್ಕೆ ಮಾರಕವಾಗುತ್ತದೆ ಎಂದು ಹೇಳಲಾಗುತ್ತದೆ ಮತ್ತು ಬೋಧಿಸಲಾಗುತ್ತದೆ ಮತ್ತು ಇದು ಯಾಕೂಬ್ ಮೆಮನ್ ವಿಚಾರದಲ್ಲಿಯೂ ಸತ್ಯ.. ಮತೊಂದು ಮಗ್ಗುಲಿನಿಂದ ಹೇಳಬೇಕೆಂದರೆ ಪ್ರಧಾನ ಧಾರೆಯ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಚರ್ಚೆ ಮತ್ತು ವಿವರಣೆಗಳಲ್ಲಿ ಈ ಬಾಂಬೆ ಬಾಂಬ್ ಸ್ಪೋಟಕ್ಕೆ ಕಾರಣವಾದ ಬಾಂಬೆಯಲ್ಲಿ ನಡೆದ ಹತ್ಯೆ ಮತ್ತು ಕೋಮು ಗಲಭೆಗಳ ಕುರಿತಾಗಿ ಕೈಗೆತ್ತಿಕೊಳ್ಳುವುದೂ ಇಲ್ಲ. ಅದರ ನೆನಪನ್ನೂ ಮಾಡಿಕೊಳ್ಳುವುದಿಲ್ಲ ಅಥವಾ ಈ ಬಾಂಬೆ ಗಲಭೆಗಳು ನಂತರದ ಬಾಂಬೆ ಬಾಂಬ್ ಸ್ಪೋಟಕ್ಕೆ ಮೂಲ ಕಾರಣವಾದ ಬಾಬರಿ ಮಸೀದಿ ಧ್ವಂಸದ ದುಷ್ಕೃತ್ಯಗಳು ಸ್ವಲ್ಪವೂ ಚರ್ಚೆಗೆ ಒಳಪಡುವುದಿಲ್ಲ. ಈ ಬಾಂಬೆ ಕೋಮು ಗಲಭೆಗಳಿಗೆ, ಬಾಬರಿ ಮಸೀದಿ ಧ್ವಂಸಕ್ಕೆ ಕಾರಣಕರ್ತರು ಇಂದಿಗೂ ಶಿಕ್ಷೆಗೆ ಒಳಗಾಗಿಲ್ಲ. ಆದರೆ ನಾವು ಭಯೋತ್ಪಾದನೆಯು ಸಾಮಾಜಿಕ-ರಾಜಕೀಯ ನೆಲೆಯ ಒಂದು ರೋಗಪರಿಶೋಧಕ ಗೂಡಿಗೆ ತಳ್ಳಲ್ಪಟ್ಟಿರುವುದನ್ನು ಕುರಿತಾಗಿ ಚರ್ಚಿಸುತ್ತೇವೆ

ಆದರೆ ಈ ದೇಶದ ವಿಶೇಷವೇನೆಂದರೆ ಇಲ್ಲಿ ಪರ್ಯಾಯ ಚರ್ಚೆಗಳಿಗೆ ಅವಕಾಶಗಳಿವೆ. ಯಾಕೂಬ್ ಮೆಮನ್‍ಗೆ ಗಲ್ಲು ಶಿಕ್ಷೆಯಂದ ವಿನಾಯಿತಿ ಕೊಡಿಸಲು ಕಡೆಗಳಿಗೆವರೆಗೂ ಅಪೀಲು ಮಾಡಿದ ಫ್ರೊಫೆಸರ್‌ಗಳು, ಚಿಂತಕರು, ಹೋರಾಟಗಾರರು, ವಕೀಲರು ಮತ್ತು ಕೆಲ ಎಡಪಂಥೀಯ ಪಕ್ಷಗಳನ್ನು ಇಲ್ಲಿ ನೆನಪಿಸಿಕೊಳ್ಳಬೇಕಿದೆ. ಪೋಲೀಸರು, ನ್ಯಾಯಾಂಗ ಮತ್ತು ಕಾರ್ಯಾಂಗದೊಂದಿಗೆ ಮುಖಾಮುಖಿಯಾದಾಗ ಸದಾ ಬಲಿಪಶುಗಳಾಗುವ ಇಂಡಿಯಾದ ಅಲ್ಪಸಂಖ್ಯಾತರು, ದಲಿತರು ಮತ್ತು ಆದಿವಾಸಿಗಳಿಗಾಗಿ ಕೆಲಸ ಮಾಡುವ ಒಂದು ಸಹನೀಯ ವ್ಯವಸ್ಥೆಯನ್ನು ಕಲ್ಪಿಸುವುದು ಇವರೆಲ್ಲರ ಆಶಯಗಳಾಗಿತ್ತು.

ರಾಷ್ಟ್ರಪತಿಗಳಾಗಿ ಕಲಾಂ ಅವರು ಮರಣದಂಡನೆ ಶಿಕ್ಷೆಯನ್ನು ವಿರೋಧಿಸಿದ್ದರು. ಇವರು ಯಾಕೂಬ್ ಮೆಮನ್‍ಗೆ ಗಲ್ಲು ಶಿಕ್ಷೆ ವಿಧಿಸುತ್ತಿದ್ದರೆ ಅಥವಾ ಅನುಕಂಪೆ ತೋರಿಸುತ್ತಿದ್ದರೆ? ಇಂದಿಗೂ ನಮಗೆ ಇದು ಆಶ್ಚರ್ಯವೇ.

ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳು ಮತ್ತು ಸಿದ್ಧಾಂತಗಳು: ಸ್ವರೂಪ ಮತ್ತು ಮಾದರಿಗಳು

– ಬಿ.ಶ್ರೀಪಾದ ಭಟ್

“My social philosophy may be said to be enshrined in three words: liberty, equality and fraternity. My philosophy has roots in religion and not in political science. I have derived them from the teachings of my master, the Buddha.” – ಡಾ.ಬಿ.ಆರ್.ಅಂಬೇಡ್ಕರ್

1912ರಲ್ಲಿ ಬಾಂಬೆ ವಿಶ್ವ ವಿದ್ಯಾಲಯದಿಂದ ಎಕನಾಮಿಕ್ಸ್, ರಾಜಕೀಯ ಶಾಸ್ತ್ರದಲ್ಲಿ ಪದವಿ ಗಳಿಸಿದ ಅಂಬೇಡ್ಕರ್ 1915ರಲ್ಲಿ ಕೊಲಂಬಿಯಾ ವಿಶ್ವ ವಿದ್ಯಾಲಯದಿಂದ ಎಕನಾಮಿಕ್ಸ್, ಸಾಮಾಜಿಕ ಶಾಸ್ತ್ರ, ಮಾನವ ಶಾಸ್ತ್ರ,ಫಿಲಾಸಫಿ ಯಲ್ಲಿ ಸ್ನಾತಕ್ಕೋತ್ತರ ಪದವಿ ಗಳಿಸಿದ್ದರು. ಕೊಲಂಬಿಯಾ ವಿ.ವಿ.ಯಲ್ಲಿ ಅಧ್ಯಯನ ಮಾಡುತ್ತಿದ್ದಾಗ ಪ್ರಸಿದ್ಧ ಫಿಲಾಸಫರ್ ‘ಜಾನ್ ಡೇವೇ’ ಅವರ ಗುರುಗಳಾಗಿದ್ದರು. ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳ ಸ್ವರೂಪವನ್ನು ಅಧ್ಯಯನ ಮಾಡಿದಾಗ ಅವರು “liberal thinker with orientation sociologist” ಆಗಿದ್ದರು ಎಂದು ತಿಳಿದುಬರುತ್ತದೆ. ಅಂಬೇಡ್ಕರ್ ಅವರು ಸಾಮಾಜಿಕ-ಮಾನವಿಕ-ಆರ್ಥಿಕ ತಜ್ಞರಾಗಿದ್ದರು. ಅಂಬೇಡ್ಕರ್ ಅವರ ಆರ್ಥಿಕ ಸಿದ್ಧಾಂತವು ಶಾಸ್ತ್ರೀಯ ಆರ್ಥಿಕ ತತ್ವಾಧಾರಿತ ಅಭಿವೃದ್ಧಿ, ಮಾರ್ಕ್ಸ್ ತತ್ವಾಧಾರಿತ ಅಭಿವೃದ್ಧಿ, ಸಾಮಾಜಿಕ ನ್ಯಾಯ, ಬಂಡವಾಳಶಾಹಿ ತೊಡಕುಗಳು, ಕೃಷಿ ಆರ್ಥಿಕ ಅಭಿವೃದ್ಧಿ, ಭೂ ಸುಧಾರಣೆ, Young_Ambedkarಉತ್ಪಾದನಾ ಸಾಮರ್ಥ್ಯದ ಹೆಚ್ಚಳ, ಕೈಗಾರೀಕರಣಗಳನ್ನು ಒಳಗೊಂಡಿತ್ತು. ಚಿಂತಕ ಆನಂದ್ ತೇಲ್ತುಂಬ್ಡೆ ಅವರು ಅಂಬೇಡ್ಕರ್ ಸೋಷಿಲಿಸ್ಟ್ ಆಗಿದ್ದರು ಎಂದು ಅಭಿಪ್ರಾಯ ಪಡುತ್ತಾರೆ. ಅಂಬೇಡ್ಕರ್ ಅವರ ಸೋಷಿಯಲಿಸಂ ಚಿಂತನೆಗಳನ್ನು ಕುರಿತು ತೇಲ್ತುಂಬ್ಡೆ ಅವರು ‘ಅಂಬೇಡ್ಕರ್ ಅವರ ಮೊಟ್ಟ ಮೊದಲ ರಾಜಕೀಯ ಪಕ್ಷ ‘ಇಂಡಿಯನ್ ಲೇಬರ್ ಪಾರ್ಟಿ’ ಫೇಬಿಯನ್ ಮಾದರಿಯ ಸೋಷಿಯಲಿಸ್ಟ್ ಪಕ್ಷವಾಗಿತ್ತು. ಅಂಬೇಡ್ಕರ್ ಅವರು ಈ ಮೊದಲು ಸಹ ‘ಬ್ರಾಹ್ಮಿನಿಸಂ ಮತ್ತು ಕ್ಯಾಪಿಟಲಿಸಂ’ ತಳಸಮುದಾಯಗಳ ಮೊದಲ ಶತೃಗಳು ಎಂದು ಹೇಳಿದ್ದರು. ಇವೆರೆಡೂ ಪರಸ್ಪರ ಪೂರಕವಾಗಿ ವರ್ತಿಸುತ್ತವೆ ಎಂದು ವಿವರಿಸಿದ್ದರು. ಇಂಡಿಯನ್ ಲೇಬರ್ ಪಕ್ಷವು ಕಾರ್ಮಿಕರ ಪಕ್ಷವಾಗಿತ್ತು ಮತ್ತು ಸಶಕ್ತ ಸಂಘಟನೆಯಿಂದ ಜಾತಿ ಮತ್ತು ವರ್ಗಗಳನ್ನು ನಾಶಮಾಡಬಹುದು ಎಂದು ಹೇಳಿದ್ದರು. ಮುಂದಿನ ವರ್ಷಗಳಲ್ಲಿ ರಾಜಕೀಯ ವ್ಯವಸ್ಥೆಯು ಕೋಮುವಾದಿ ಕಡೆಗೆ ತಿರುಗುತ್ತಿರುವುದನ್ನು ಮನಗಂಡ ಅಂಬೇಡ್ಕರ್ ಇಂಡಿಯನ್ ಲೇಬರ್ ಪಕ್ಷವನ್ನು ವಿಸರ್ಜಿಸಿದ್ದರು’ ಎಂದು ಬರೆಯುತ್ತಾರೆ.

ಇಂದಿನ ದಿನಗಳಲ್ಲಿ ಅಥವಾ ಕಳೆದ ಕೆಲವು ವರ್ಷಗಳಿಂದ ಅಂಬೇಡ್ಕರ್ ಅವರು ಮುಕ್ತ ಮಾರುಕಟ್ಟೆ ಮತ್ತು ಜಾಗತೀರಣದ ಪರವಾಗಿದ್ದರು ಎನ್ನುವ ಸಂಪೂರ್ಣ ತಪ್ಪು ಗ್ರಹಿಕೆಗಳನ್ನು ಹೇಳಲಾಗುತ್ತಿದೆ. ಆದರೆ ಮುಕ್ತ ಮಾರುಕಟ್ಟೆ, ಉದಾರೀಕರಣ ಅಥವಾ ಜಾಗತೀಕರಣ ವ್ಯವಸ್ಥೆಯಲ್ಲಿ ನೇರವಾದ ಕೊಡುಕೊಳ್ಳುವ ಪದ್ಧತಿ ಇರುತ್ತದೆ. ಇಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸೌಲಭ್ಯಗಳನ್ನು, ಅನುಕೂಲವನ್ನು ಪಡೆದಂತಹ ವ್ಯಕ್ತಿ ಅಥವಾ ಸಂಸ್ಥೆ ಅದೇ ಸ್ತರದ ಮತ್ತೊಂದು ವ್ಯಕ್ತಿ ಅಥವಾ ಸಂಸ್ಥೆಯೊಂದಿಗೆ ವ್ಯವಹಾರ, ಸಂಬಂಧಗಳನ್ನು ಬೆಳೆಸಿಕೊಳ್ಳಲು ಮಾತ್ರ ಅವಕಾಶವಿರುತ್ತದೆ. ಪ್ರತಿಯೊಂದು ಹಣಕಾಸಿನ ವಹಿವಾಟು ಕೇಂದ್ರೀಕೃತ ವ್ಯವಸ್ಥೆಯನ್ನು ಸೃಷ್ಟಿಸುತ್ತಿರುತ್ತದೆ. ಪ್ರಜೆಗಳಿಂದ ಆಯ್ಕೆಯಾಗಿ ಪ್ರಜೆಗಳಿಗಾಗಿ ಜವಬ್ದಾರಿ ಹೊರಬೇಕಿದ್ದ ಸರ್ಕಾರವು ಈ ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ತನ್ನ ಎಲ್ಲಾ ನಿಯಂತ್ರಣ ಮತ್ತು ಹಿಡಿತವನ್ನು ಕಳಚಿಕೊಳ್ಳುತ್ತ ಅದನ್ನು ಮಾರುಕಟ್ಟೆಗೆ, ಖಾಸಗಿ ಬಂಡವಾಳಶಾಹಿಗೆ ಹಸ್ತಾಂತರಿಸುತ್ತದೆ. ಜನಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಲು, ಕೈಗೆತ್ತಿಕೊಳ್ಳಲು ಈ ಖಾಸಗಿ ಮಾರುಕಟ್ಟೆ ನಿರಾಕರಿಸುತ್ತದೆ ಮತ್ತು ಕೇವಲ ತನ್ನ ಸಂಪತ್ತನ್ನು ವೃದ್ಧಿಸುವಂತಹ ವಲಯಗಳಲ್ಲಿ ಮಾತ್ರ ವಹಿವಾಟನ್ನು ನಡೆಸುತ್ತದೆ. ಈ ಉದಾರೀಕರಣದ ಆರ್ಥಿಕ ನೀತಿಯು ವ್ಯಕ್ತಿ ಅಥವಾ ಸಂಸ್ಥೆಯ ಬಳಿ ಸಂಪತ್ತಿನ ಕ್ರೋಢೀಕರಣಕ್ಕೆ ಪುಷ್ಟಿ ನೀಡುತ್ತದೆ. ಸಂಪತ್ತು ಕೆಲವೇ ಜನ/ಸಂಸ್ಥೆಗಳ ಬಳಿ ಕೇಂದ್ರೀಕೃತಗೊಂಡ ಈ ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಈ ರೀತಿಯ ಸಂಬಂಧಗಳಿಂದಾಗಿ ಮೇಲ್ವರ್ಗಗಳು / ಮಧ್ಯಮವರ್ಗಗಳು ಮತ್ತು ಬಡಜನರ ನಡುವೆ ಉಂಟಾಗುವ ದೊಡ್ಡ ಕಂದಕ ಅಸಮಾನತೆ ಮತ್ತು ಪ್ರತ್ಯೇಕತೆಯನ್ನು ಹೆಚ್ಚಿಸುತ್ತದೆ. ಇದು ಸಾಮಾಜಿಕ ನ್ಯಾಯದ ಆಶಯಗಳಿಗೂ ಮಾರಕ.

ಆದರೆ ಅಸಮಾನತೆ, ಪ್ರತ್ಯೇಕತೆ ಮತ್ತು ತಾರತಮ್ಯವನ್ನು ವಿರೋಧಿಸಿದ ಅಂಬೇಡ್ಕರ್ ಸಹಜವಾಗಿಯೇ ಈ ಮುಕ್ತ ಮಾರುಕಟ್ಟೆ ಮತ್ತು ಜಾಗತೀಕರಣದ ವಿರೋಧಿಯೂ ಆಗಿದ್ದರು. ಅಂಬೇಡ್ಕರ್ ಈ ಸಂಪತ್ತಿನ ಕ್ರೋಢೀಕರಣವನ್ನು ಟೀಕಿಸುತ್ತಿದ್ದರು ಮತ್ತು State Socialism ಸಿದ್ಧಾಂತವನ್ನು ಪ್ರತಿಪಾದಿಸುತ್ತಿದ್ದರು. ಸರ್ಕಾರದ ನೀತಿಗಳು ಈ ಮುಕ್ತ ಮಾರುಕಟ್ಟೆ ಮಾದರಿಯ ಬೂಜ್ರ್ವ ವ್ಯವಸ್ಥೆಯ ಬೆಳೆವಣಿಗೆಯನ್ನು ಕಡಿವಾಣ ಹಾಕುವಂತಹ ನೀತಿಗಳನ್ನು ರೂಪಿಸಬೇಕು ಎಂದು ಒತ್ತಾಯಿಸುತ್ತಿದ್ದ ಅಂಬೇಡ್ಕರ್ ಮುಕ್ತ ಮಾರುಕಟ್ಟೆಯ ಆರ್ಥಿಕ ನೀತಿಯನ್ನು ಸಮರ್ಥಿಸಲು ಸಾಧ್ಯವೇ ಇಲ್ಲ.

ಆನಂದ ತೇಲ್ತುಂಬ್ಡೆ ಅವರು ‘ವೈಯುಕ್ತಿಕ, ಸಾಮಾಜಿಕ-ಆರ್ಥಿಕ, ಸಾಮಾಜಿಕ-ರಾಜಕೀಯ, ಸಾಮಾಜಿಕ-ಸಾಂಸ್ಕೃತಿಕ’ ಎನ್ನುವ ನಾಲ್ಕು ಮಾದರಿಯ ಸಬಲೀಕರಣವನ್ನು ಗುರುತಿಸುತ್ತಾರೆ. ಈ ನಾಲ್ಕೂ ನೆಲೆಯ ಸಬಲೀಕರಣವು ಕೈಗೂಡಿದರೆ ತಳ ಸಮುದಾಯಗಳಿಗೆ ವಿಮೋಚನೆ ದೊರಕಿದಂತೆ. ಇಲ್ಲಿ ಶಿಕ್ಷಣ ಮತ್ತು ಆರೋಗ್ಯ ವೈಯುಕ್ತಿಕ ಸಬಲೀಕರಣ, ಭೂ ಸುಧಾರಣೆ ಮತ್ತು ಉದ್ಯೋಗ ಸಾಮಾಜಿಕ-ಆರ್ಥಿಕ ಸಬಲೀಕರಣ, ಪ್ರಜಾಪ್ರಭುತ್ವದ ವ್ಯವಸ್ಥೆಯು ಸಾಮಾಜಿಕ-ರಾಜಕೀಯ ಸಬಲೀಕರಣ ಮತ್ತು ಆಧುನಿಕತೆ ಸಾಮಾಜಿಕ-ಸಾಂಸ್ಕೃತಿಕ ಸಬಲೀಕರಣಕ್ಕೆ ಪ್ರಮುಖವಾಗಿವೆ ಎಂದು ಗುರುತಿಸುತ್ತಾರೆ. ಆದರೆ ನವ ಉದಾರೀಕರಣದ ಇಂದಿನ ಭಾರತದಲ್ಲಿ ಶಿಕ್ಷಣ ಮತ್ತು ಆರೋಗ್ಯ ವಲಯಗಳು ಸಂಪೂರ್ಣವಾಗಿ ಖಾಸಗೀಕರಣಗೊಳ್ಳುತ್ತಾ ಸಾರ್ವಜನಿಕ ಸೇವಾ ವಲಯದಿಂದ ಕಣ್ಮರೆಯಾಗಿವೆ ಮತ್ತು ಇಂದು ಈ ಎರಡೂ ವಲಯಗಳು ಖಾಸಗೀಕರಣದ ದೊಡ್ಡ ಶಕ್ತಿ ಕೇಂದ್ರಗಳಾಗಿವೆ. ಇಂದು ಭೂಸುಧಾರಣೆಯು ತನ್ನ ಜನಪರವಾದ ಸೋಷಿಯಲಿಸಂ ನೀತಿಯಿಂದ ಕಳಚಿಕೊಂಡು ಭೂ ಮಾಲೀಕರು ಮತ್ತು ಬಂಡವಾಳಶಾಹಿಗಳ, ಮಧ್ಯವರ್ತಿಗಳ ರಿಯಲ್ ಎಸ್ಟೇಟ್ ವ್ಯವಹಾರವಾಗಿದೆ. ದಲಿತರಿಗೆ ಏಕೈಕ ಆಶಾದೀಪವಾಗಿದ್ದ ಸರ್ಕಾರಿ ಉದ್ಯೋಗಗಳು ಕುಂಠಿತಗೊಳ್ಳುತ್ತಾ ಮೀಸಲಾತಿಯ ಸಾಮಾಜಿಕ ನ್ಯಾಯದ ಪರಿಕಲ್ಪನೆ ಕ್ರಮೇಣವಾಗಿ ಮೂಲೆಗುಂಪಾಗಿದೆ ಮತ್ತು ಪ್ರಜಾಪ್ರಭುತ್ವವು ಇಂದು ಕೇವಲ ಚುನಾವಣೆಯ ಸಂದರ್ಭದಲ್ಲಿ ಮಾತ್ರ ತನ್ನ ಐಡೆಂಟಿಟಿ ಉಳಿಸಿಕೊಂಡಿದೆ ಮತ್ತು ಚುನಾವಣೆಯ ಹೊರತಾಗಿ ಪ್ರಜೆಗಳಿಗೆ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಸ್ಪೇಸ್ ಇಲ್ಲ. ಈ ಎಲ್ಲಾ ಸಂಕೀರ್ಣ ಸ್ವರೂಪಗಳ ಮೂಲಕಾರಣಗಳೇ ಜಾತಿ ಪದ್ಧತಿ ಮತ್ತು ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಎಂದು ಅಂಬೇಡ್ಕರ್ ಸ್ಪಷ್ಟವಾಗಿ ಹೇಳುತ್ತಿದ್ದರು. ಇದಕ್ಕೆ State Socialism ಸಿದ್ಧಾಂತದ ಮೂಲಕ ಪರಿಹಾರ ಕಂಡುಕೊಳ್ಳಬಹುದೆಂದು ಪ್ರತಿಪಾದಿಸಿದ್ದರು. ಇದರ ಎಲ್ಲಾ ದುಷ್ಪರಿಣಾಮಗಳನ್ನು ಜಾಗತೀಕರಣದ ಎರಡು ದಶಕಗಳ ನಂತರ ಇಂದು ಇಂಡಿಯಾದಲ್ಲಿನ ಪ್ರಸ್ತುತ ಸಂದರ್ಭದವನ್ನು ಅಧ್ಯಯನ ಮಾಡಿದರೆ ಅರಿವಾಗುತ್ತದೆ. ಇದಕ್ಕೆ ಮೊದಲು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಬಲಿಯಾಗಿದ್ದು ತಳ ಸಮುದಾಯಗಳು.

ಆರ್ಥಿಕ ಚಿಂತನೆಗಳ ಕುರಿತಾಗಿ ಅಂಬೇಡ್ಕರ್ ಅವರು ಮೂರು ಪುಸ್ತಕಗಳನ್ನು ಬರೆದಿದ್ದರು. ಅವು:

  1. ಈಸ್ಟ್ ಇಂಡಿಯಾ ಕಂಪನಿಯ ಆಡಳಿತ ಮತ್ತು ಹಣಕಾಸು
  2. ಬ್ರಿಟೀಷ್ ಇಂಡಿಯಾದಲ್ಲಿ ಪ್ರಾಂತೀಯ ಹಣಕಾಸಿನ ವಿಕಸನ ( 1925)
  3. ರೂಪಾಯಿಯ ಮಗ್ಗಟ್ಟು: ಅದರ ಉಗಮ ಮತ್ತು ಅದರ ಅರ್ಥ ವಿವರಣೆ ( 1923)

ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳನ್ನು ಕೆಳಗಿನ ಕೆಲವು ಪ್ರಮುಖ ವಲಯಗಳ ಮೂಲಕ ಅಧ್ಯಯನ ಮಾಡಬಹುದೆಂದು ಪ್ರೊ. ಜಯಶ್ರೀ ಸರೋದೆ ಅವರು ಹೇಳುತ್ತಾರೆ. ಅವೆಂದರೆ:

  1. ಕೃಷಿ ಮತ್ತು ಭೂ ಸುಧಾರಣೆ
  2. ಭಾರತದ ಹಣಕಾಸಿನ ಬಿಕ್ಕಟ್ಟು
  3. ಸಾರ್ವಜನಿಕ ಹಣಕಾಸಿನ ತೊಂದರೆಗಳು
  4. ತೆರಿಗೆ ನೀತಿಗಳು
  5. ಕೈಗಾರಿಕೆಗಳ ರಾಷ್ಟ್ರೀಕರಣ
  6. ಆರ್ಥಿಕ ಅಭಿವೃದ್ಧಿಯ ರಣನೀತಿಗಳು
  7. ಮುಕ್ತ ಮಾರುಕಟ್ಟೆ
  8. ಜನಸಂಖ್ಯಾ ನಿಯಂತ್ರಣ
  9. ಮಹಿಳೆಯರ ಆರ್ಥಿಕ ಸಬಲೀಕರಣ
  10. ಮಾನವ ಬಂಡವಾಳ ತತ್ವ
  11. ಹಿಂದೂ ಆರ್ಥಿಕ ಪದ್ಧತಿಯ ವಿರೋಧ

ಕೃಷಿ ಮತ್ತು ಭೂ ಸುಧಾರಣೆ : ಅಂಬೇಡ್ಕರ್ ಅವರ ಚಿಂತನೆಗಳು

  • ಹೆಚ್ಚುವರಿ ಭೂಮಿಯನ್ನು (Surplus Land) ಯನ್ನು ಬಳಸಿಕೊಂಡು ಉತ್ಪಾದನಾ ಸಾಮಥ್ರ್ಯವನ್ನು ಹೆಚ್ಚಿಸುವ ಜಮೀನ್ದಾರಿ ಮಾದರಿಯ ಕೃಷಿ ಪದ್ಧತಿಯನ್ನು ತಿರಸ್ಕರಿಸಬೇಕು.
  • ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಕೃಷಿ ಕಾರ್ಮಿಕರನ್ನು ಬಳಸಿಕೊಂಡು ಉತ್ಪಾದನೆ ಮತ್ತು ಉತ್ಪಾದನಾ ಸಾಮಥ್ರ್ಯವನ್ನು ವೃದ್ಧಿಸಿಕೊಳ್ಳಬೇಕು
  • ಭೂ ಮಾಲೀಕರು, ಸಣ್ಣ ಹಿಡುವಳಿದಾರರು,ಕೂಲಿ ಕಾರ್ಮಿಕರ ನಡುವೆ ಅಸಮಾನತೆ ಮತ್ತು ತಾರತಮ್ಯ ನೀತಿಗಳನ್ನು ರದ್ದು ಪಡಿಸಬೇಕು
  • ಭೂ ಸುಧಾರಣೆಯಾಗಬೇಕು ಮತ್ತು ಭೂಮಿಯು ಸಮಾನವಾಗಿ ಹಂಚಿಕೆಯಾಗಬೇಕು ಮತ್ತು ಭೂಮಿಯನ್ನು ರಾಷ್ಟ್ರೀಕರಣಗೊಳಿಸಬೇಕು
  • ಕೃಷಿ ಸಾಗುವಳಿ ಮತ್ತು ವ್ಯವಸಾಯವನ್ನು ಸಹಕಾರ ಸಂಘಗಳ ತತ್ವದ ಅಡಿಯಲ್ಲಿ ನಡೆಸಬೇಕು.ಇದಕ್ಕಾಗಿ ಭೂಮಿಯು ರಾಷ್ಟ್ರೀಕರಣಗೊಳ್ಳಬೇಕು
  • ಕೃಷಿ, ಕೈಗಾರಿಕೆ,ಆರ್ಥಿಕ ವಲಯಗಳಲ್ಲಿ State Socialism ಸಿದ್ಧಾಂತವು ಜಾರಿಗೊಳ್ಳಬೇಕು.
  • ಭೂಮಿಯ ಮೇಲೆ ಖಾಸಗಿಯವರ ಒಡೆತನ ರದ್ದುಗೊಳ್ಳಬೇಕು ಮತ್ತು ಸಾಮೂಹಿಕ, ಸಮುದಾಯದ ಕೃಷಿ ಪದ್ಧತಿಯು ಜಾರಿಗೆ ಬರಬೇಕು
  • ವ್ಯವಸಾಯವನ್ನು ರಾಜ್ಯ ಕೈಗಾರಿಕೆ ಎಂದು ಮಾನ್ಯತೆ ಕೊಡಬೇಕು
  • ವ್ಯವಸಾಯ ಉತ್ಪನ್ನಗಳು ಮತ್ತು ಅದರ ಮೌಲ್ಯಗಳ ಮುಕ್ಕಾಲು ಭಾಗ ನೇರವಾಗಿ ರೈತರಿಗೆ, ಕೃಷಿ ಕಾರ್ಮಿಕರಿಗೆ ತಲುಪಬೇಕು. ಉಳಿದ ಭಾಗ ಸರ್ಕಾರಕ್ಕೆ ಲೆವಿಯ ರೂಪದಲ್ಲಿ ಸಂದಾಯವಾಗಬೇಕು. ಈ ಧಾನ್ಯ-ಕಾಳುಗಳನ್ನು ಸರ್ಕಾರವು ಸಬ್ಸಿಡಿ ದರದಲ್ಲಿ ಬಡವರಿಗೆ ಹಂಚಬೇಕು (ಇದೇ ಇಂದಿನ ನ್ಯಾಯ ಬೆಲೆ ಪದ್ಧತಿ) ಈ ಮೂಲಕ ಸರ್ಕಾರವೇ ಕೃಷಿ ಕೈಗಾರಿಕೆಯನ್ನು ನಿಯಂತ್ರಿಸಬೇಕು
  • ಭೂ ಸ್ವಾಧೀನದ ಪರಿಹಾರ ಮೊತ್ತವನ್ನು ಬಾಂಡ್‍ಗಳ ರೂಪದಲ್ಲಿ ಕೊಡಬೇಕು

State Socialism ಸಿದ್ಧಾಂತವನ್ನು ಸಂವಿಧಾನದಲ್ಲಿ ಅಳವಡಿಸಲು ಅಂಬೇಡ್ಕರ್ ಅವರು ಬಹಳ ಪ್ರಯತ್ನ ನಡೆಸಿದರು. ಅಂಬೇಡ್ಕರ್ ಅವರ ಈ ಚಿಂತನೆಗಳನ್ನು ಮುಂದಿನ ವರ್ಷಗಳಲ್ಲಿ Land Ceiling Act ನ ಮೂಲಕ ಜಾರಿಗೊಳಿಸಲಾಯಿತು.

1926ರಲ್ಲಿ ಬಾಂಬೆ ವಿಧಾನ ಪರಿಷತ್ತಿನ ಸದಸ್ಯರಾಗಿದ್ದಾಗ ಗ್ರಾಮೀಣ ಬಡವರ, ಕೃಷಿ ಕಾರ್ಮಿಕರ ಸಬಲೀಕರಣಕ್ಕೆ ಮೊದಲ ಆದ್ಯತೆಯನ್ನು ನೀಡಿದ್ದರು. ಆಗ ಮಹಾರಾಷ್ಟ್ರದಲ್ಲಿ “ಕೋಥೀ” ಪದ್ಧತಿ ಜಾರಿಯಲ್ಲಿತ್ತು. ಇದರ ಅನುಸಾರ ಸರ್ಕಾರದಿಂದ ನೇಮಕಗೊಂಡ ತೆರಿಗೆ ಸಂಗ್ರಹಕಾರರು ಗೇಣೀದಾರರು, ಸಣ್ಣ ಹಿಡುವಳಿದಾರರು, ಕೂಲಿ ಕಾರ್ಮಿಕರು, ಬಡ ರೈತರಿಂದ ತೆರಿಗೆಯನ್ನು ಸಂಗ್ರಹಿಸಿ ಅದನ್ನು ಸರ್ಕಾರಕ್ಕೆ ಪಾವತಿಸುತ್ತಿದ್ದರು. ತಮ್ಮ ಈ ಅಧಿಕಾರವನ್ನು ಬಳಸಿಕೊಂಡು ಕೂಲಿ ಕಾರ್ಮಿಕರನ್ನು ಶೋಷಿಸುತ್ತಿದ್ದರು. ಅವರೆಲ್ಲ ಮನೆಮಠಗಳನ್ನು ಕಳೆದುಕೊಂಡು ಬೀದಿಪಾಲಾಗುತ್ತಿದ್ದರು. ಈ “ಕೋಥಿ” ಪದ್ಧತಿಯ ವಿರುದ್ಧ ಮೊಟ್ಟಮೊದಲು ದನಿಯೆತ್ತಿದ್ದು ಅಂಬೇಡ್ಕರ್. 17,ಸೆಪ್ಟೆಂಬರ್ 1937ರಂದು ಬಾಂಬೆ ವಿಧಾನ ಪರಿಷತ್ತಿನಲ್ಲಿ ಈ ಕೋಥೀ ಪದ್ಧತಿಯನ್ನು ರದ್ದು ಪಡಿಸುವ ವಿಶೇಷ ಮಸೂದೆಯನ್ನು ಮಂಡಿಸಿದ್ದರು. ಮತ್ತು ಅದಕ್ಕೆ ಬಹುಮತ ದೊರಕಿಸಲೂ ಯಶಸ್ವಿಯಾದರು
(ಆಧಾರ : ಸಣ್ಣ ಹಿಡುವಳಿದಾರರು ಮತ್ತು ಪರಿಹಾರ ( 1917) ಸಂಪುಟ 1,2,3 , ಅಂತಸ್ತಿನ ಸ್ಥಾನಮಾನ ಮತ್ತು ಅಲ್ಪಸಂಖ್ಯಾತರು (1947) – ಬಿ.ಆರ್.ಅಂಬೇಡ್ಕರ್)

ಸಾರ್ವಜನಿಕ ಹಣಕಾಸಿನ ತೊಂದರೆಗಳು : ಅಂಬೇಡ್ಕರ್ ಚಿಂತನೆಗಳು

ಕೇಂದ್ರೀಕೃತ ಹಣಕಾಸಿನ ವ್ಯವಸ್ಥೆಯನ್ನು ಟೀಕಿಸಿದ ಅಂಬೇಡ್ಕರ್ 1833-1871ರ ವರೆಗಿನ ಸಾಮ್ರಾಜ್ಯಶಾಹಿ ಹಣಕಾಸು ಪದ್ಧತಿಯನ್ನು ಉದಾಹರಿಸುತ್ತಾರೆ. ಇಂಡಿಯಾದಲ್ಲಿ 1833ರಲ್ಲಿ ಕಲೋನಿಯಲ್ ಫೈನಾನ್ಸ್ ಪದ್ಧತಿ ಪ್ರಾರಂಭವಾಯಿತು. ಇದನ್ನು ವಿವರಿಸುತ್ತಾ ಅಂಬೇಡ್ಕರ್ ಅವರು ‘1858ರ ನಂತರದ ಬ್ರಿಟೀಷ್ ಆಡಳಿತದಲ್ಲಿ (ಈಸ್ಟ್ ಇಂಡಿಯಾ ಕಂಪನಿಯ ನಂತರ) ಕಲೋನಿಯಲ್ ಸರ್ಕಾರದ ಬಳಿ (ಕೇಂದ್ರ ಸರ್ಕಾರ) ಲಾ & ಆರ್ಡರ್ ಮತ್ತು ರಕ್ಷಣಾ ಇಲಾಖೆಯ ಸಂಪೂರ್ಣ ಜವಬ್ದಾರಿ ಮತ್ತು ಹಿಡಿತಗಳಿದ್ದರೆ ಪ್ರಾಂತೀಯ ಸರ್ಕಾರಗಳಿಗೆ ಕೇವಲ ಆಡಳಿತದ ಜವಬ್ದಾರಿ ಮಾತ್ರ ಕೊಡಲಾಗಿತ್ತು. ಪ್ರಾಂತೀಯ ಸರ್ಕಾರಗಳು ಮುಂಗಡಪತ್ರವನ್ನು ಸಿದ್ಧಪಡಿಸಿದರೆ ಕಲೋನಿಯಲ್ ಸರ್ಕಾರವು ಹಣಕಾಸಿನ ಹಂಚಿಕೆಯನ್ನು ನಿರ್ವಹಿಸುತ್ತಿತ್ತು.ಪ್ರಾಂತೀಯ ಸರ್ಕಾರಗಳಿಗೆ ಅಭಿವೃದ್ಧಿ, ಬದಲಾವಣೆ, ರಕ್ಷಣಾ ವ್ವವಸ್ಥೆ, ಕಾನೂನು ವ್ಯವಸ್ಥೆಗಳ ಮೇಲೆ ಯಾವುದೇ ಅಧಿಕಾರವಿರಲಿಲ್ಲ. ಆದರೆ ಕಲೋನಿಯಲ್ ಸರ್ಕಾರವು ಪ್ರಾಂತೀಯ ಸರ್ಕಾರಗಳಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಹೊಂದಿತ್ತು’ ಎಂದು ಗುರುತಿಸುತ್ತಾರೆ. 1871ರ ನಂತರ ಪ್ರಾಂತೀಯ ಸರ್ಕಾರಗಳಿಗೆ ಹಣಕಾಸಿನ ವಿನಿಮಯದ ಅಧಿಕಾರ ದೊರಕಿತು ಎಂದು ಅಭಿಪ್ರಾಯಪಡುತ್ತಾರೆ. ಆದರೆ ಈ ಕೇಂದ್ರೀಕೃತ ಹಣಕಾಸು ವ್ಯವಸ್ಥೆಯಿಂದ ವಿತ್ತೀಯ ಕೊರತೆ ಹೆಚ್ಚಾಗಿ ಆ ಕೊರತೆಯನ್ನು ತುಂಬಿಸಲು ತೆರಿಗೆ ಸಂಗ್ರಹಣೆ ಕಾರ್ಯವನ್ನು ತೀವ್ರಗೊಳಿಸಲಾಯಿತು. ಇದರ ದುಷ್ಪರಿಣಾಮಗಳು ಸಣ್ಣ ಹಿಡುವಳಿದಾರರು, ಕೂಲಿ ಕಾರ್ಮಿಕರ ಮೇಲೆ ಉಂಟಾಯಿತು ಎಂದು ಹೇಳುತ್ತಾರೆ. ಅಂಬೇಡ್ಕರ್ ಅವರ ಈ ಆರ್ಥಿಕ ಚಿಂತನೆಗಳು ಮುಂದೆ ಸ್ವಾತಂತ್ರೋತ್ತರ ಭಾರತದಲ್ಲಿ ಕೇಂದ್ರ – ರಾಜ್ಯ ಸರ್ಕಾರಗಳ ಸಂಬಂಧಗಳ ಕುರಿತಂತೆ ಹೊಸ ಸಂವಾದಗಳಿಗೆ ಬುನಾದಿಯಾಯ್ತು.

ತೆರಿಗೆ ನೀತಿಗಳು : ಅಂಬೇಡ್ಕರ್ ಚಿಂತನೆಗಳು

1936ರ ಪ್ರಾಂತೀಯ ಚುನಾವಣೆಯ ಸಂದರ್ಭದಲ್ಲಿ ಅಂಬೇಡ್ಕರ್ ಅವರು ತೆರಿಗೆ ನೀತಿಗಳನ್ನು ತಮ್ಮ ‘ಇಂಡಿಯನ್ ಲೇಬರ್ ಪಕ್ಷ’ದ ಮಾನಿಫೆಸ್ಟೋದಲ್ಲಿ ಅಳವಡಿಸಿದ್ದರು. 1938ರಲ್ಲಿ ಬಾಂಬೆಯ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ ಭೂ ಕಂದಾಯದ ತೆರಿಗೆಯ ಮೌಲ್ಯವನ್ನು ಹೆಚ್ಚಿಸಿರುವುದಕ್ಕೆ ಮತ್ತು ಶ್ರೀಮಂತರಿಗೆ ಹೆಚ್ಚಿನ ತೆರಿಗೆಯನ್ನು ವಿಧಿಸಲು ವಿಫಲವಾದ ಆಗಿನ ಬಾಂಬೆ ಸರ್ಕಾರವನ್ನು ಟೀಕಿಸಿದ್ದರು.

ಅಂಬೇಡ್ಕರ್ ಅವರ ಪ್ರಮುಖ ಚಿಂತನೆಗಳು:

  1. ವೈಯುಕ್ತಿಕ ತೆರಿಗೆಯ ಮಾನದಂಡವನ್ನು ಆ ವ್ಯಕ್ತಿಯ ತೆರಿಗೆಯನ್ನು ಪಾವತಿಸುವ ಸಾಮರ್ಥ್ಯದ ಮೇಲೆ ನಿರ್ಧರಿಸಬೇಕು ಹೊರತಾಗಿ ಆತನ ಆದಾಯದ ಮೇಲೆ ಅಲ್ಲ
  2. ತೆರಿಗೆ ನೀತಿ ಮತ್ತು ಮೌಲ್ಯಗಳು ಪ್ರಗತಿಪರವಾಗಿರಬೇಕು ಶ್ರೀಮಂತರಿಗೆ ಹೆಚ್ಚಿನ ತೆರಿಗೆಯನ್ನು ಬಡವರಿಗೆ ಕಡಿಮೆ ತೆರಿಗೆಯನ್ನು ವಿಧಿಸಬೇಕು
  3. ಒಂದು ಹಂತದ ಆದಾಯದವರೆಗೆ ತೆರಿಗೆ ವಿನಾಯ್ತಿಯನ್ನು ನಿಗದಿಗೊಳಿಸಬೇಕು
  4. ತೆರಿಗೆ ಪದ್ಧತಿಯು ಸಮಾನತೆಯನ್ನು ಸಾಧಿಸಬೇಕು ಹೊರತಾಗಿ ಅಸಮಾನತೆಯನ್ನು ಸೃಷ್ಟಿಸಬಾರದು
  5. ತೆರಿಗೆ ಪದ್ಧತಿಯು ಸಾಮಾನ್ಯ ಜನರ ಬದುಕಿನ ಗುಣಮಟ್ಟವನ್ನು ಕಳಪೆಗೊಳಿಸುವಂತಾಗಬಾರದು
  6. ಮಾರಾಟ ತೆರಿಗೆಯನ್ನು ಸಂಗ್ರಹಿಸುವ ಅಧಿಕಾರ ಪ್ರಾಂತೀಯ ಸರ್ಕಾರಗಳ ಬಳಿ ಇರಬೇಕು
  7. ಸಮಾಜದ ಅರ್ಥ ವ್ಯವಸ್ಥೆಯನ್ನು ಸಮತೋಲದಲ್ಲಿ ಕಾಪಾಡಿಕೊಳ್ಳುವುದು ಸರ್ಕಾರದ ಜವಬ್ದಾರಿ ಮತ್ತು ಅದರ ಹೊಣೆಯನ್ನು ಮಾರುಕಟ್ಟೆಯ ನೀತಿ ನಿಯಮಗಳಿಗೆ, ಖಾಸಗಿ ಬಂಡವಾಳಶಾಹಿಗಳಿಗೆ ಹಸ್ತಾಂತರಿಸಬಾರದು

ಕೈಗಾರಿಕೆಗಳು ಮತ್ತು ರಾಷ್ಟ್ರೀಕರಣ : ಅಂಬೇಡ್ಕರ್ ಚಿಂತನೆಗಳು

  1. ದೊಡ್ಡ ಮತ್ತು ಅತಿ ದೊಡ್ಡ ಕೈಗಾರಿಕೆಗಳು ಸರ್ಕಾರದ ಒಡೆತನದಲ್ಲಿರಬೇಕು
  2. ಗೃಹ ಕೈಗಾರಿಕೆಗಳು ಮತ್ತು ಸಣ್ಣ ಕೈಗಾರಿಕೆಗಳು ಖಾಸಗಿ ಒಡೆತನದಲ್ಲಿರಬೇಕು
  3. ಜೀವ ವಿಮೆ,ಸಾರಿಗೆ ವ್ಯವಸ್ಥೆ ರಾಷ್ಟ್ರೀಕರಣಗೊಳ್ಳಬೇಕು
  4. ಕಾರ್ಮಿಕರು ತಮ್ಮ ಹಕ್ಕುಗಳನ್ನು ಕಾಪಾಡಲು,ಅದಕ್ಕೆ ಧಕ್ಕೆ ಒದಗಿದರೆ ಪ್ರತಿಭಟಿಸಲು ಮುಷ್ಕರಗಳಿಗೆ ಮುಕ್ತ ಅವಕಾಶಗಳಿಬೇಕು
  5. ಈ ಎಲ್ಲಾ ಹಕ್ಕುಗಳು ಮತ್ತು ಅವಕಾಶಗಳು ಸರ್ಕಾರಿ ನೀತಿಗಳ Directive Principles ನ ಅಡಿಯಲ್ಲಿ ಸೇರಿಸಬೇಕು
  6. ಸಾಮಾಜಿಕ ನ್ಯಾಯದ ತತ್ವಕ್ಕೆ ಬದ್ಧವಾದಾಗ ಮಾತ್ರ Industrial Peace ಸಾಧಿಸಬಹುದು

ಅಂಬೇಡ್ಕರ್ ಅವರ ಮೇಲಿನ ಚಿಂತನೆಗಳು ಫೇಬಿಯನ್ ಸೋಷಿಯಲಿಸ್ಟ್ ಮಾದರಿಯಾಗಿವೆ. State Socialism ಸಿದ್ಧಾಂತವನ್ನು ಪ್ರತಿಪಾದಿಸುತ್ತವೆ.

ಅಂಬೇಡ್ಕರ್ ಅವರು ಇಂಡಿಯನ್ ಎಕಾನಮಿಯನ್ನು ಹಿಂದೂ ಪ್ರಭಾವಿತ ಎಕಾನಮಿ ಎಂದು ತಿರಸ್ಕರಿಸಿದ್ದರು. ಅದರ ಎಲ್ಲಾ ಲೋಪದೋಷಗಳನ್ನು ವಿವರಿಸಿದ್ದರು. ಜಾತಿ ಪದ್ಧತಿಯು ಕೇವಲ ಅಂತಸ್ಥಿನ, ಸ್ಥಾನಮಾನದ ನಡುವಿನ ಅಂತರವಲ್ಲ ಅದು ಕೂಲಿ ಕಾರ್ಮಿಕರ ನಡುವಿನ ಅಂತರವೂ ಹೌದು. ಇದು ಆರ್ಥಿಕ ಅಭಿವೃದ್ಧಿಗೆ ದೊಡ್ಡ ಅಡಚಣೆ. ಇದು ಪರಿಸ್ಥಿತಿಯ ದುರ್ಲಾಭ ಪಡೆದುಕೊಳ್ಳುವ ನೀತಿ ಎಂದು ಹೇಳಿದ್ದರು.

ಇಂದು ಮತೀಯವಾದಿ ಸಂಘಟನೆ ಆರೆಸ್ಸಸ್ ಅಂಬೇಡ್ಕರ್ ಅವರನ್ನು Appropriation ಮಾಡಿಕೊಳ್ಳುತ್ತಿದೆ. ಬಂಡವಾಳಶಾಹಿಗಳ ವಕ್ತಾರ ಮತ್ತು ಮುಕ್ತ ಮಾರುಕಟ್ಟೆಯ ಬೆಂಬಲಿಗರಾದ ಪ್ರಧಾನಿ ನರೇಂದ್ರ ಮೋದಿ ಅಂಬೇಡ್ಕರ್ ಅವರನ್ನು ರಾಜಕೀಯ ಅಸ್ಪøಶ್ಯತೆಯಂದ ಬಿಡುಗಡೆಗೊಳಿಸುತ್ತೇನೆ, ಅವರ ಹಾದಿಯಲ್ಲಿ ಸಾಗುತ್ತೇನೆ ಎಂದು ಭಾಷಣ ಮಾಡಿದ್ದಾರೆ. ಆದರೆ ಅಂಬೇಡ್ಕರ್ ಅವರು ಮುಕ್ತ ಮಾರುಕಟ್ಟೆ ಮಾದರಿಯ ಆರ್ಥಿಕ ವ್ಯವಸ್ಥೆಗೆ ವಿರೋಧಿಯಾಗಿದ್ದರು, ಫೇಬಿಯನ್ ಮಾದರಿಯ ಸೋಷಿಯಲಿಸಂನಲ್ಲಿ ನಂಬಿಕೆ ಇಟ್ಟಿದ್ದರು ಮತ್ತು State Socialism ಸಿದ್ಧಾಂತವನ್ನು ಪ್ರತಿಪಾದಿಸುತ್ತಿದ್ದರು. ಈ ಮೋದಿ ಸರ್ಕಾರದ ಭೂಸ್ವಾಧೀನ ಮಸೂದೆ 2014, ಅಂಬೇಡ್ಕರ್ ಅವರ ಭೂಸುಧಾರಣೆ ಮತ್ತು ಭೂ ರಾಷ್ಟ್ರೀಕರಣ ತತ್ವಕ್ಕೆ ವಿರುದ್ಧ ದಿಕ್ಕಿನಲ್ಲಿದೆ. ಮೋದಿ ಸರ್ಕಾರದ ಬಂಡವಾಳಶಾಹಿಪರವಾದ ಸಂಪೂರ್ಣ ಖಾಸಗೀಕರಣದ ಕೈಗಾರಿಕೆ ನೀತಿಗೂ ಅಂಬೇಡ್ಕರ್ ಅವರ ಫೇಬಿಯನ್ ಸೋಷಿಯಲಿಸಂ ಮಾದರಿಯ ಕೈಗಾರೀಕರಣ ಸಿದ್ಧಾಂತಕ್ಕೂ ಸ್ವಲ್ಪವೂ ಸಾಮ್ಯತೆ ಇಲ್ಲ. ಸಂಘ ಪರಿವಾರದ ಸನಾತನವಾದ ಮತ್ತು ಮುಕ್ತ ಮಾರುಕಟ್ಟೆಯ ಆರ್ಥಿಕ ನೀತಿಗಳಿಗೂ ಅಂಬೇಡ್ಕರ್ ಅವರ State Socialism ಸಿದ್ಧಾಂತದ ಆರ್ಥಿಕ ನೀತಿಗೂ ಯಾವುದೇ ಸಾಮ್ಯತೆ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ಹುಸಿ ಚಿಂತನೆಗಳ ಹೊಳೆ : ಆತ್ಮದ್ರೋಹವಾಗುತ್ತಿರುವ ಮಾತುಗಳು

ಬಿ.ಶ್ರೀಪಾದ ಭಟ್

***

ಆತ ಗ್ರೀಕ್ ಸಿನಿಮಾ ನಿರ್ದೇಶಕ. ಕಳೆದ 35 ವರ್ಷಗಳಿಂದ ತನ್ನ ದೇಶ ಗ್ರೀಕ್ ತೊರೆದು ಅಮೇರಿಕಾದಲ್ಲಿ ನೆಲೆಸಿದ್ದ. ಹಾಲಿವುಡ್‍ನಲ್ಲಿ ಸಿನಿಮಾಗಳನ್ನು ತಯಾರಿಸಿದ್ದ, ನಿರ್ದೇಶಿಸಿದ್ದ. ಆ ನಿರ್ದೇಶಕನ ಹೆಸರು ‘A’. 35 ವರ್ಷಗಳ ನಂತರ ತನ್ನ ಅತ್ಯಂತ ವಿವಾದಗ್ರಸ್ಥ ಸಿನಿಮಾದ ಪ್ರದರ್ಶನಕ್ಕಾಗಿ ತವರು ನೆಲ ಗ್ರೀಕ್‍ಗೆ ಮರಳಿದ್ದ.

ಆದರೆ ನಿರ್ದೇಶಕ ‘A’ನ ಉದ್ದೇಶ ಬೇರೆಯದಾಗಿತ್ತು. ಸಿನಿಮಾ ulyssesgazeಎನ್ನುವ ಮಾಂತ್ರಿಕತೆಯ ಪ್ರಾರಂಭದ ದಿನಗಳ ಸಂದರ್ಭದಲ್ಲಿ ಅಂದರೆ ಸುಮಾರು 1905ರಲ್ಲಿ ಛಾಯಾಗ್ರಾಹಕರಾದ ‘ಮನಕಿಯಾ’ ಸಹೋದರರು ಬಾಲ್ಕನ್ ಪ್ರದೇಶಕ್ಕೆ (ಪೂರ್ವ ಸೈಬೀರಿಯಾದ ಪರ್ವತ ಪ್ರದೇಶಗಳಿಂದ ಪೂರ್ವ ಬಲ್ಗೇರಿಯಾದ ಕಪ್ಪು ಸಮುದ್ರದವರೆಗೆ) ದೇಶಾಂತರ ಹೋಗಿ ಅಲ್ಲಿನ ಸಂಸ್ಕೃತಿ, ಜನಾಂಗದ ಆಚರಣೆಗಳು, ಮೂಲ ನಿವಾಸಿಗಳ ಬದುಕಿನ ಕುರಿತಾಗಿ 3 ರೀಲುಗಳ ಚಿತ್ರೀಕರಣ ಮಾಡಿಕೊಂಡಿದ್ದರು. ನಂತರ ಈ 3 ರೀಲುಗಳ ಸಿನಿಮಾ ಕಣ್ಮರೆಯಾಗಿತ್ತು. ಆದರೆ ಎಂದೂ ಬೆಳಕಿಗೆ ಬಾರದ ಈ ನಿಗೂಢ ರೀಲುಗಳ ತಲಾಶೆಗಾಗಿ ಗ್ರೀಕ್ ನಿರ್ದೇಶಕ ‘A’ ತನ್ನ ತಾಯ್ನಾಡಿಗೆ ಮರಳಿ ಬಂದಿದ್ದ.

‘ಮನಕಿಯಾ’ ಸೋದರರು ಚಿತ್ರೀಕರಿಸಿದ ಆ 3 ರೀಲುಗಳಲ್ಲಿ ಏನು ಅಡಗಿದೆ? ಅಂತಹ ಜನಾಂಗೀಯ ಘರ್ಷಣೆಗಳಿದ್ದ ಬಾಲ್ಕನ್ ಪ್ರದೇಶಕ್ಕೆ ಅಪಾಯಕಾರಿಯಾದ ಪಯಣವನ್ನು ಕೈಗೊಂಡಿರುವ ಉದ್ದೇಶ ಅಲ್ಲಿನ ಮೂಲನಿವಾಸಿಗಳ ಬದುಕನ್ನು ಚಿತ್ರೀಕರಿಸುವುದು ಮಾತ್ರವಾಗಿತ್ತೇ?

ಕಡೆಗೆ ಈ 3 ರೀಲುಗಳ ‘ಮನಕಿಯಾ ಸೋದರರ’ ಸಿನಿಮಾದ ಹುಡುಕಾಟಕ್ಕೆ ಹೊರಡುವ ನಿರ್ದೇಶಕ ‘A’ ಗ್ರೀಕ್‍ನಿಂದ ತನ್ನ ಪ್ರಯಾಣ ಆರಂಭಿಸುತ್ತಾನೆ. ಅಲ್ಲಿಂದ ಅಲ್ಬೇನಿಯಾದ ಗಡಿ ಭಾಗಕ್ಕೆ ತಲಪುತ್ತಾನೆ. ನಂತರ ಹಡಗಿನ ಮೂಲಕ ‘ಸರಜೀವೋ’ ಪ್ರಾಂತ್ಯಕ್ಕೆ ತಲುಪುತ್ತಾನೆ. UlyssesGaze-5ಆದರೆ ಅಲ್ಬೇನಿಯನ್, ಬೋಸ್ನಿಯನ್, ಬಲ್ಗೇರಿಯನ್, ಕ್ರೋಷಿಯನ್, ಗ್ರೀಕ್ಸ್, ಸ್ಲೋವಿಯನ್ಸ್, ಸೆರ್ಬಿಯನ್ಸ್, ರೊಮಾನಿಯನ್ಸ್ ಹೀಗೆ ವಿಭಿನ್ನ ಜನಾಂಗಗಳನ್ನೊಳಗೊಂಡ ಇಡೀ ಬಾಲ್ಕನ್ ಪೆನಿಸುಲಾ ಪ್ರಾಂತ್ಯವು ಜನಾಂಗೀಯ ಯುದ್ಧದಲ್ಲಿ ಮುಳುಗಿ ಹೋಗಿರುತ್ತದೆ. ಇಡೀ ಪ್ರಾಂತ್ಯವನ್ನೇ ಅಪಾಯಕಾರಿ ಪ್ರದೇಶವೆಂದು ಘೋಷಿಸಲಾಗಿರುತ್ತದೆ. ಇಂತಹ ಭೀಕರ ಜನಾಂಗೀಯ ಯುದ್ಧದ ಸಂದರ್ಭದಲ್ಲಿ, ಪ್ರತಿ ಕ್ಷಣಕ್ಕೂ ಪ್ರಾಣಪಾಯವಿರುವ ಪ್ರದೇಶಕ್ಕೆ ನಿರ್ದೇಶಕ ‘A’ ಬಂದು ತಲಪುತ್ತಾನೆ.

***

ಇದು ಗ್ರೀಕ್ ನಿರ್ದೇಶಕ ‘ಅಂಜೆಲೋಪೋಲಸ್’ ನ ನಿರ್ದೇಶನದ “Ulysses’ Gaze” ನ ಸ್ಥೂಲ ಕಥೆ. ಆದರೆ ಈ ನಿರ್ದೇಶಕ ‘A’ ಬಾಲ್ಕನ್ ಪ್ರದೇಶಕ್ಕೆ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಒಂದು ಫ್ಲಾಶ್‍ಬ್ಯಾಕ್ ಬರುತ್ತದೆ. ಅದು 1945ರ ಸಂದರ್ಭ. ನಿರ್ದೇಶಕ ‘A’ ನ ಬೆಲ್‍ಗ್ರೇಡ್ ಸ್ನೇಹಿತ ಹೇಳುತ್ತಾನೆ, ‘ನಾವು ಒಂದು ಜಗತ್ತಿನಲ್ಲಿ ಗಾಢ ನಿದ್ರೆಗೆ ಜಾರಿಕೊಳ್ಳುತ್ತೇವೆ ಮತ್ತು ಮತ್ತೊಂದು ಜಗತ್ತಿನಲ್ಲಿ ನಮ್ಮನ್ನು ಅತ್ಯಂತ ಒರಟಾಗಿ ಎಚ್ಚರಿಸಲಾಗುತ್ತದೆ’. ಇದು “Ulysses’ Gaze” ಸಿನಿಮಾದ ಭಾಷ್ಯೆಯನ್ನು ಹೇಳುತ್ತದೆ ಎAದೆನಿಸುತ್ತದೆ. ಏಕೆಂದರೆ ನಿರ್ದೇಶಕ ‘A’ ಯಾತಕ್ಕಾಗಿ ತನ್ನ ಜೀವದ ಹಂಗನ್ನು ತೊರೆದು ಕಳೆದು ಹೋದ ಆ ನಿಗೂಢ 3 ರೀಲುಗಳ ಸಿನಿಮಾದ ಹುಡುಕಾಟಕ್ಕೆ ಬರುತ್ತಾನೆ? ಆತನಿಗೆ 20ನೇ ಶತಮಾನದ ಆರಂಭದಲ್ಲಿ ಬದುಕಿದ್ದ ಇದೇ ಬಾಲ್ಕನ್ ಪ್ರಾಂತದ ಮೂಲ ನಿವಾಸಿಗಳ ಮನದ ಮಾತುಗಳನ್ನು ಅರಿತುಕೊಳ್ಳುವ ತವಕ. ಎಂಬತ್ತು ವರ್ಷಗಳ ನಂತರ ಇಂದು ವಿಭಿನ್ನ ಜನಾಂಗಗಳ ಪ್ರಾಂತವಾದ Ulysses'_Gaze_Posterಬಾಲ್ಕನ್ ಪೆನಿನ್ಸುಲಾದಲ್ಲಿ ಜನಾಂಗೀಯ ಘರ್ಷಣೆಗಳಾಗುತ್ತಿವೆ. ಪರಸ್ಪರ ಕಾದಾಡುತ್ತಿದ್ದಾರೆ. ಜನಾಂಗದ ಶ್ರೇಷ್ಟತೆಯ ಹೆಸರಿನಲ್ಲಿ ರಕ್ತಪಾತವಾಗುತ್ತಿದೆ. ಆದರೆ ಇವರ ಮೂಲ ನಿವಾಸಿಗಳು ಎಂಬತ್ತು ವರ್ಷಗಳ ಹಿಂದೆ ಏನು ಮಾತನಾಡಿದ್ದರು? ಇದು ಒಬ್ಬ ಕ್ರಿಯಾಶೀಲ ನಿರ್ದೇಶಕನ್ನು ಗಾಢವಾಗಿ ಕಾಡುತ್ತದೆ. ಹಾಗೆಯೇ ನಿರ್ದೇಶಕ ‘A’ ಗೂ ಕಾಡುತ್ತದೆ.

ಹೋಮರನ ಕಾವ್ಯದ ಓಡೆಶಿಯಸ್ ಟ್ರಾಯ್ ಯದ್ಧದ ಹತ್ತುವರ್ಷಗಳ ನಂತರ ತನ್ನ ತವರಿಗೆ ಮರಳುತ್ತಾನೆ. ಓಡೆಶಿಯಸ್‍ನ ಈ ಪಯಣವನ್ನು “Ulysses’ Gaze” ಸಿನಿಮಾದಲ್ಲಿ ಪ್ರತಿನಿಧಿಸುತ್ತಲೇ ನಿರ್ದೇಶಕ ‘ಅಂಜೆಲೋಪೋಲಸ್’ ಕೇವಲ ಗತಕಾಲದ ಹುಡುಕಾಟದಲ್ಲಿ ಮಾತ್ರ ತೊಡಗುವುದಿಲ್ಲ, ಬಾಲ್ಕನ್ ಪೆನಿಸುಲಾದ ಜನಾಂಗೀಯ ಗುಂಪುಗಳ ಮೂಲ ನಿವಾಸಿಗಳ ಮುಗ್ಧತೆ, ಅವರ ಸಂಸ್ಕೃತಿಯನ್ನು ಅರಿಯಲು ಆ 3 ರೀಲುಗಳ ಸಿನಿಮಾದ ಮೂಲಕ ಕಂಡುಕೊಳ್ಳಲು ಪ್ರಯತ್ನಿಸುತ್ತಾನೆ. ಅದಕ್ಕಾಗಿ ರಕ್ಷಣೆ ಇಲ್ಲದ ಅಪಾಯಕಾರಿ ಯುದ್ಧನಿರತ ಪ್ರಾಂತಕ್ಕೆ ತಲಪುತ್ತಾನೆ. ಸಿನಿಮಾದಲ್ಲಿ ನಿರ್ದೇಶಕ ‘A’ ತನ್ನ ಹುಡುಕಾಟದ ಕುರಿತಾಗಿ“ ಈ ಪ್ರಾಂತದ ಘರ್ಷಣೆಗಳು, ಸಂಧಿಗ್ಧತೆ, ತಲ್ಲಣಗಳು, ವಿರೋಧಾಭಾಸಗಳು ಮನಕಿಯಾ ಸೋದರರ 3 ರೀಲುಗಳ ಸಿನಿಮಾದಲ್ಲಿ ಹೇಳಲಾಗಿದೆ” ಎಂದು ಹೇಳುತ್ತಾನೆ. ಅಲ್ಬೇನಿಯಾ, ರೊಮೇನಿಯಾ, ಸ್ಲೋವಿಯಾ ಪ್ರಾಂತಗಳಲ್ಲಿ ಹಾದುಹೋಗುವಾಗ ಅಲ್ಲಿ ಯುದ್ಧದ ಸಾವುಗಳು, ಜನಾಂಗೀಯ ದಾಯಾದಿ ಕಲಹಗಳು ಅಲ್ಲಿನ ಮೂಲ ನಿವಾಸಿಗಳ ಕನಸುಗಳನ್ನು ನಾಶಗೊಳಿಸುತ್ತಿರಬಹುದೇ? ಆ ಮೂಲನಿವಾಸಿಗಳ ಕನಸುಗಳನ್ನು, ಬದುಕಿನ ಆಶಯಗಳನ್ನು ಅರಿಯಲು ಆ 3 ರೀಲಿನ ಸಿನಿಮಾಗಳ ಅವಶ್ಯಕತೆ ಇದೆ.

ಇಡೀ ಸಿನಿಮಾದ ಅವಧಿ ಸುಮಾರು 3 ತಾಸುಗಳು. ಇಡೀ ಸಿನಿಮಾದ ದಟ್ಟತೆಗೆ ಈ ಅವಧಿ ತುಂಬಾ ದೀರ್ಘವೆನಿಸುತ್ತದೆ. ಅನೇಕ ವೇಳೆ ಪ್ರೇಕ್ಷಕನ ಸಹನೆಯನ್ನು ಪರೀಕ್ಷಿಸುತ್ತದೆ. ಆದರೆ ಈ ಎಲ್ಲಾ ಬಿಡಿ ಬಿಡಿಯಾದ ಆಯಾಮಗಳನ್ನು ಒಂದೇ ಎಳೆಯಲ್ಲಿ ಜೋಡಿಸಲು ಹೊರಟ ನಿರ್ದೇಶಕ ‘ಅಂಜೆಲೋಪೋಲಸ್’ ಇದನ್ನು ಅತ್ಯಂತ ಕಾವ್ಯಾತ್ಮಕವಾಗಿ ಅನೇಕ ರೂಪಕಗಳಲ್ಲಿ ಹೇಳುತ್ತಾನೆ. ಒಂದು ದೃಶ್ಯದಲ್ಲಿ ದೇಹದಿಂದ ಬೇರ್ಪಟ್ಟ ಲೆನಿನ್‍ನ ವಿಗ್ರಹದ ತಲೆಯ ಭಾಗ ಮತ್ತು ದೇಹವನ್ನು ಹಡಗಿನಲ್ಲಿ ಮಲಗಿಸಿ ಸಾಗಿಸುತ್ತಾರೆ. ಎಲ್ಲಿಗೆ ಮತ್ತು ಯಾವ ದಿಕ್ಕಿಗೆ ಎಂದು ಗೊತ್ತಾಗುವುದಿಲ್ಲ. ಇದು ಸೋವಿಯತ್ ಛಿದ್ರಗೊಳ್ಳುತ್ತಿರುವ ಸಂದರ್ಭ. ಸೈಬೀರಿಯಾದ ಇಡೀ ಪ್ರಾಂತವೇ ಗಲಭೆಗ್ರಸ್ತವಾಗಿದೆ. UlyssesGaze-4ಭಗ್ನಗೊಂಡ ಲೆನಿನ್‍ನ ಭವ್ಯ ವಿಗ್ರಹವನ್ನು ಹಡಗಿನಲ್ಲಿ ಸಾಗಿಸುವ ದೃಶ್ಯ ಪರಿಣಾಮಕಾರಿಯಾಗಿದೆ.

ಗರುಕೆ ಹುಲ್ಲನ್ನೂ ಕೂಡ ಬೆಳೆಯಲು ಬಿಡದ ಮನುಷ್ಯ ಮೂಲಭೂತವಾಗಿ ‘ಈವಿಲ್’ ಎಂದು ಲಂಕೇಶ್ ಹೇಳಿದ್ದರು. ತನ್ನ ಸ್ವಾರ್ಥ ಮತ್ತು ಸ್ವಹಿತಾಸಕ್ತಿಗಾಗಿ ತನ್ನವರ ಕತ್ತನ್ನು ತಾನೇ ಸೀಳುವ ಹಂತಕ್ಕೆ ತಲಪುವ ಸ್ಥಿತಿಯನ್ನು ಸ್ವತಂತ್ರ ಪ್ರವೃತ್ತಿ ಎಂದು ಕರೆಯುವ ಚಿಂತಕ ಗ್ರಾಮ್ಷಿ ಮುಂದೆ ಇದನ್ನು ತನ್ನ ಮೂಲ ಹುಟ್ಟಿನ ನೆಲೆಯಿಂದ ಬಿಡುಗಡೆಗೊಂಡು ತಾನು ಮಾತ್ರ ಬಚಾವಾಗುವ ಪ್ರವೃತ್ತಿ ಎಂದು ಹೇಳುತ್ತಾನೆ. ಈ ಹುಟ್ಟಿನ ಮೂಲವನ್ನು ಹೇಳುವ ಮೂಲನಿವಾಸಿಗಳ ಮಾತುಗಳನ್ನು ಕೆಳುವ ವ್ಯವಧಾನ ನಮ್ಮಲ್ಲಿ ಎಲ್ಲಿದೆ? ತಳ ಸಮುದಾಯಗಳ ಪರವಾಗಿ ಅಕಡೆಮಿಕ್ ಭಾಷೆಯಲ್ಲಿ ಮಾತನಾಡುವ ಸಂದರ್ಭದಲ್ಲಿ ಮೂಲನಿವಾಸಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ನಮ್ಮ ಪಾಂಡಿತ್ಯದ ಪ್ರದರ್ಶನ ಮಾತ್ರ ಅನಾವರಣಗೊಳ್ಳುತ್ತಿರುತ್ತದೆ. ಈ ನೆಲದ ಮಕ್ಕಳ, ಇಲ್ಲಿನ ಮೂಲನಿವಾಸಿಗಳ ಒಳಗುದಿಯನ್ನು ಆಲಿಸಲು ಸದಾ ನಿರಾಕರಿಸುವ ನಾವೆಲ್ಲ ಕೇವಲ ವಿಶ್ವವಿದ್ಯಾಲಯಗಳ ಲೈಬ್ರೆರಿಗಳ ಮೂಲಕ ನಮ್ಮ ಪಾಂಡಿತ್ಯವನ್ನು ರೂಪಿಸಿಕೊಂಡಿರುತ್ತೇವೆ. ನವ ಉದಾರೀಕರಣದ ಸಂದರ್ಭದಲ್ಲಿ ಮುಕ್ತ ಮಾರುಕಟ್ಟೆಯ ಫಲಾನುಭವಿಗಳಾದ ನಮ್ಮೆಲ್ಲರ ಸಂವೇದನೆಗಳು ಕ್ಷೀಣಿಸುತ್ತಾ ಹೋಗುತ್ತವೆ. ಸಂವಹನದ ಮಾರ್ಗಗಳುUlyssesGaze-2 ಕೈಕೊಡುತ್ತವೆ. ನಮ್ಮ ಪ್ರಸ್ತುತೆಯನ್ನು ಗಟ್ಟಿಗೊಳಿಸಿಕೊಳ್ಳಲು ಮೂಲನಿವಾಸಿಗಳನ್ನು ವಿಸ್ಮೃತಿಗೆ ತಳ್ಳಲು ಹೇಸದ ಸುಸಂಸ್ಕೃತ ನಾಗರಿಕ ಸಮಾಜವು ಅವರ ಸಂಸ್ಕೃತಿಯ ಪರವಾಗಿ ಕಿರುಚುವುದನ್ನು ನಿಲ್ಲಿಸುವುದಿಲ್ಲ. ಕಣ್ಣಿನ ಪಟ್ಟಿಯನ್ನು ಕಳಚಿಕೊಂಡಿದ್ದೇವೆ ಎನ್ನುವ ಭ್ರಮೆಯಲ್ಲಿರುವ ನಾವೆಲ್ಲ ನಿಮ್ಮ ಕತ್ತಲನ್ನು ಓಡಿಸುತ್ತೇವೆ ಎಂದು ವ್ಯವಸ್ಥೆಯಲ್ಲಿನ ಅವಮಾನಿತ ತಳ ಸಮುದಾಯಗಳಿಗೆ ಆಶ್ವಾಸನೆ ಕೊಡುತ್ತೇವೆ. ಆದರೆ ಸ್ವತಃ ಬೆಳಕನ್ನು ಹಿಡಿದು ನಿಂತ ಮೂಲನಿವಾಸಿಗಳನ್ನು ಒದ್ದು ಗೋಳೀಕರಣದ ಗ್ಲೋಬಲ್‍ಗೆ ಜಿಗಿಯುತ್ತೇವೆ. ಚಾರಿತ್ರಿಕ ದೃಷ್ಟಿಕೋನದಿಂದ ನೋಡಲು ನಿರಾಕರಿಸುವ ನಾವೆಲ್ಲ ಮೂಲ ನಿವಾಸಿಗಳ UlyssesGaze-3ಅಂತರಂಗದ ಹತ್ತಿರಕ್ಕೂ ಸುಳಿಯಲು ಸೋಲುತ್ತೇವೆ.

ನಮ್ಮೆಲ್ಲರಿಗೂ ಆ 3 ರೀಲುಗಳ ಸಿನಿಮಾದಲ್ಲಿ ಬಾಲ್ಕನ್ ಪ್ರಾಂತದ ಮೂಲನಿವಾಸಿಗಳು ಏನು ಮಾತನಾಡುತ್ತಿದ್ದಾರೆ, ಅವರ ಸಂವೇದನೆಗಳೇನು ಎಂದು ಅರಿಯುವ ವ್ಯವಧಾನವೇ ಇಲ್ಲ. 80 ವರ್ಷಗಳ ಹಿಂದೆ ಅವರ ಮಾತನಾಡುವ ನುಡಿಕಟ್ಟಿಗೂ ನಮ್ಮ ಇಂದಿನ ಸಂದರ್ಭಕ್ಕೂ ಇರುವ ಕನೆಕ್ಷನ್ ಕುರಿತಾದ ಸೋಜಿಗವೂ ನಮ್ಮಲ್ಲಿ ಉಳಿದಿಲ್ಲ. ಹೀಗಾಗಿಯೇ ನಿರ್ದೇಶಕ ‘A’ ದೇಶಭ್ರಷ್ಟನಾಗಿ, ಪ್ರಾಣವನ್ನು ಪಣಕ್ಕಿಟ್ಟು ಅ ಮೂಲನಿವಾಸಿಗಳ ಸಂವೇದನೆಯನ್ನು ಹೇಳುವ ಸಿನಿಮಾ ರೀಲುಗಳಿಗಾಗಿ ಯುದ್ಧಭೂಮಿಯಲ್ಲಿ ಅಲೆಯುವುದನ್ನು ನಮಗೆಲ್ಲ ಒಂದು ಹುಚ್ಚಾಟದಂತೆಯೇ ಭಾಸವಾಗುತ್ತದೆ. ಏಕೆಂದರೆ ನಾಗರಿಕ ಸಮಾಜಕ್ಕೆ ನಡೆಕಾರನ ನಡೆಗಳು ಮತ್ತು ಬದುಕು ಸದಾ ಅಪಥ್ಯ. ಎಲ್ಲವನ್ನು ತಲಸ್ಪರ್ಶಿಯಾಗಿಯೇ ನೋಡುತ್ತೇವೆ ಎನ್ನುವ ಭ್ರಮೆಯಲ್ಲಿರುವ ನಾವೆಲ್ಲ ಚಾರಿತ್ರಿಕ ಕುರೂಪಗಳನ್ನು ಅರ್ಥ ಮಾಡಿಕೊಂಡಿರುವುದಿಲ್ಲ ಅಥವಾ ನಮ್ಮ ಪ್ರಜ್ಞೆಯನ್ನು ವಿಸ್ಮೃತಿಗೆ ತಳ್ಳಿರುತ್ತೇವೆ.

ಮೋದಿ ಸರ್ಕಾರದ ಒಂದು ವರ್ಷದ ಆಡಳಿತ : ಸುಳ್ಳುಗಳ ವಿಜೃಂಭಣೆ ಮತ್ತು ’ಬಹುತ್ವ’, ’ಬಂಧುತ್ವ’ ತತ್ವಗಳ ನಾಶ

– ಬಿ. ಶ್ರೀಪಾದ ಭಟ್

[ಇಲ್ಲಿನ ಪರಾಮರ್ಶೆಯಲ್ಲಿ ಕಾಂಗ್ರೆಸ್ ಪರವಾದ ಯಾವುದೇ ಧೋರಣೆಗಳಿಲ್ಲ. ನಾನು ಕಾಂಗ್ರೆಸ್ ವಕ್ತಾರನೂ, ಬೆಂಬಲಿಗನೂ ಅಲ್ಲ. ಕಳೆದ ದಶಕಗಳಲ್ಲಿ ಕಾಂಗ್ರೆಸ್ ಮಾಡಲಾರದ್ದನ್ನು ಈ ಮೋದಿ ಸರ್ಕಾರ ಒಂದು ವರ್ಷದಲ್ಲಿ ಮಾಡಬೇಕೆನ್ನುವ ಹಠವೇಕೆ ಎನ್ನುವ ಆತ್ಮವಂಚನೆಯ, ವಿತಂಡವಾದದ ಪ್ರಶ್ನೆಗಳಿಗೆ ಉತ್ತರವೂ ಅಲ್ಲ. ಏಕೆಂದರೆ ಈ ಬಿಜೆಪಿ ಮತ್ತು ಮೋದಿಯ ಸರ್ವಾಧಿಕಾರದ, ಹಿಂದುತ್ವದ ವಿರುದ್ಧ ಮಾತನಾಡುವವರನ್ನೆಲ್ಲ ಕಾಂಗ್ರೆಸ್ ಎಂಜೆಂಟ್ ಎಂದು ಜರೆಯುವ ಕಾಮಾಲೆ ಮನಸ್ಸುಗಳಿಗೆ ಉತ್ತರಿಸುವ ಬಾಲಿಶತನದ ಅವಶ್ಯಕತೆ ಸಹ ಇಲ್ಲ. ಹಿಂದಿನ ಯುಪಿಎ ಸರ್ಕಾರದ ಜನ ಕಲ್ಯಾಣ ಯೋಜನೆಗಳನ್ನು ಹೈಜಾಕ್ ಮಾಡಿ ತಮ್ಮದೆಂದು ಸುಳ್ಳು ಹೇಳುತ್ತಿರುವ ಮೋದಿ ಸರ್ಕಾರದ ನಿಜಸ್ವರೂಪವನ್ನು ಬರೆಯಲು ಈ ಹೋಲಿಕೆಯನ್ನು ಮಾಡಲಾಗುತ್ತಿದೆ.]

ಕೇಂದ್ರದಲ್ಲಿ ಎನ್‌ಡಿಎ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಸಂದರ್ಭದಲ್ಲಿ ಬಿಜೆಪಿ ಪಕ್ಷದ ನಾಯಕರು,ಕೇಂದ್ರದ ಮಂತ್ರಿಗಳು modi_bjp_conclaveಮತ್ತು ಮಥುರಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿ ಹೇಳಿದ ಸುಳ್ಳುಗಳ ಕೆಲವು ಸ್ಯಾಂಪಲ್:

ಸುಳ್ಳು : ಎನ್‌ಡಿಎ ಸರ್ಕಾರದ ಮುಖ್ಯ ಯೋಜನೆ ’ಸ್ವಚ್ಛ ಭಾರತ ಆಭಿಯಾನ್’.
ಸತ್ಯ : ಯುಪಿಎ ೨ ನೇ ಸರ್ಕಾರ ಜಾರಿಗೊಳಿಸಿದ್ದ ’ನಿರ್ಮಲ್ ಭಾರತ್ ಆಭಿಯಾನ್’ ಅನ್ನು ಹೆಸರು ಬದಲಿಸಿ ’ಸ್ವಚ್ಛ ಭಾರತ್ ಆಭಿಯಾನ್’ ಎಂದು ಕರೆಯಲಾಗಿದೆ.

ಸುಳ್ಳು : ಗ್ರಾಹಕರ ಖಾತೆಗೆ ನೇರವಾಗಿ ಹಣದ ವರ್ಗಾವಣೆ (Direct Transfer of Cash) ಯ ಯೋಜನೆಯು ಮೋದಿ ನೇತೃತ್ವದ ಸರ್ಕಾರದ ಯೋಜನೆ.
ಸತ್ಯ : ಯುಪಿಎ ೨ ಸರ್ಕಾರವು ೨1 ಅಕ್ಟೋಬರ್ ೨೦೧೨ರಂದು ರಾಜಸ್ತಾನದ ದುಡು ಗ್ರಾಮದಲ್ಲಿ ಆಗಿನ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ’ನೇರವಾಗಿ ಹಣದ ವರ್ಗಾವಣೆ’ (Direct Transfer of Cash) ಯೋಜನೆಯನ್ನು ಉದ್ಘಾಟಿಸಿದರು. ಈ ಹಣದ ವರ್ಗಾವಣೆಯು ವೃದ್ಧರ ಪಿಂಚಣಿ, ಅರೋಗ್ಯದ ವಿಮೆ, ಉದ್ಯೋಗ ಖಾತ್ರಿ ಯೋಜನೆ ನರೇಗಾದಂದತಹ ಯೋಜನೆಗಳಿಗೆ ಅನುಕೂಲವಾಗುವಂತೆ ರೂಪಿಸಲಾಗಿತ್ತು.

ಸುಳ್ಳು : ಎನ್‌ಡಿಎ ಸರ್ಕಾರದ ಆಡಳಿತದ ಕಳೆದ ಒಂದು ವರ್ಷದ (೨೦೧೪-೧೫) ವಿದ್ಯುತ್ ಉತ್ಪಾದನೆಯು ಕಳೆದ ೩೦ ವರ್ಷಗಳ ವಿದ್ಯುತ್ ಉತ್ಪಾದನೆಗೆ ಸರಿಗಟ್ಟಿದೆ.
ಸತ್ಯ : ಜಗತ್ತಿನ ಇತಿಹಾಸದಲ್ಲಿಯೇ ಯಾವುದೇ ಸರ್ಕಾರವು ೩೦ ವರ್ಷಗಳ ವಿದ್ಯುತ್ ಉತ್ಪಾದನೆಯನ್ನು ಕೇವಲ ಒಂದು ವರ್ಷದಲ್ಲಿ ಸರಿಗಟ್ಟಲು ಸಾಧ್ಯವೇ? ಯಾವುದೇ ಬೇಜವಬ್ದಾರಿ ವ್ಯಕ್ತಿ, ಹೊಣೆಗಾರಿಕೆ ಇಲ್ಲದ ವ್ಯಕ್ತಿ ಇಂತಹ ಶತಮಾನದ ಸುಳ್ಳನ್ನು ನುಡಿಯಲು ಸಾಧ್ಯ. ಆದರೆ ಈ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ತನ್ನ ಬೆನ್ನನ್ನು ತಟ್ಟಿಕೊಳ್ಳುವ ಆತ್ಮರತಿಯ ಪ್ರಲಾಪ ಫಲವಾಗಿ ಇಂತಹ ಅಸಂಬದ್ಧ ಮತ್ತು ಶತಮಾನದ ಸುಳ್ಳನ್ನು ಹೇಳಿದ್ದಾರೆ.

ಸುಳ್ಳು : ಪ್ರಾವಿಡೆಂಟ್ ಫಂಡ್‌ನ ಖಜಾನೆಯಲ್ಲಿ ಬಡ ಕಾರ್ಮಿಕರ ಸುಮಾರು ೨೭,೦೦೦ ಕೋಟಿ ಹಣ ಕೊಳೆಯುತ್ತಾ ಇತ್ತು. ಕಳೆದ ವರ್ಷ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು Unique Identity Number ನ ಮೂಲಕ ಕೆಲಸವನ್ನು ಬದಲಾಯಿಸಿದರೂ ಸಂಬಧಪಟ್ಟ ಹಣವನ್ನು ಯಾವುದೇ ಅಡೆತಡೆಯಿಲ್ಲದೆ ವರ್ಗಾಯಿಸುವ ಕಾನೂನನ್ನು ಜಾರಿಗೊಳಿಸಿತು.
ಸತ್ಯ : ಆಗಿನ ಯುಪಿಎ ೨ ಸರ್ಕಾರ ತನ್ನ ಅಧಿಕಾರದ ಕೊನೆಯ ದಿನಗಳಲ್ಲಿ, ೨೪ ಮಾರ್ಚ ೨೦೧೪ರಂದು, ನೌಕರರ ಪ್ರಾವಿಡೆಂಟ್ ಫಂಡ್ (EPFO) ಇಲಾಖೆಯು ಹೊಸದಾದ Universal Account Number ಅನ್ನು ಘೋಷಿಸಿ ಅದಕ್ಕೆ ಬಳಕೆದಾರರ ಕೈಪಿಡಿ ಅನ್ನು ನೀಡಿ ಜುಲೈ ೨೦೧೪ ರಿಂದ ಆನ್‌ಲೈನ್ ವರ್ಗಾವಣೆಯನ್ನು ಆರಂಭಿಸಿತು.

ಸುಳ್ಳು : ಎನ್‌ಡಿಎ ಸರ್ಕಾರವು ರಸ್ತೆಗಳನ್ನು ನಿರ್ಮಿಸುವಲ್ಲಿ ಪರಿಣಿತಿಯನ್ನು ಸಾಧಿಸಿದೆ. ಈ ವಲಯದಲ್ಲಿ ಯುಪಿಎ ಸಂಪೂರ್ಣವಾಗಿ ವಿಫಲವಾಗಿದೆ.
ಸತ್ಯ : ಹಣಕಾಸು ಮಂತ್ರಿ ಅರುಣ್ ಜೈಟ್ಲಿ ೨೦೧೫-೧೬ರ ಮುಂಗಡ ಪತ್ರದಲ್ಲಿ ’ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ’ ಅಡಿಯಲ್ಲಿ ರಸ್ತೆ ನಿರ್ಮಾಣಕ್ಕಾಗಿ ಮೀಸಲಿಟ್ಟಿರುವ ಹಣ ೧೪,೦೦೦ ಕೋಟಿ ರೂ.ಗಳು. ಆದರೆ ಈಗಾಗಲೇ ಚಾಲ್ತಿಯಲ್ಲಿರುವ ರಸ್ತೆಗಳ ನಿರ್ಮಾಣವನ್ನು Modi-selfieಪೂರ್ತಿಗೊಳಿಸಲು ರಾಜ್ಯ ಸರ್ಕಾರಗಳಿಗೆ ಸುಮಾರು ೫೭,೦೦೦ ಕೋಟಿ ಹಣ ಬೇಕೆಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ. ಆದರೆ ಬಜೆಟ್‌ನಲ್ಲಿ ಮೀಸಲಿಟ್ಟ ಹಣ ಕೇವಲ ಕಾಲು ಭಾಗ ಮಾತ್ರ!!!

ಇತರೆ ಉದಾಹರಣೆಗಳು :

  • ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಮನಮೋಹನ್ ಸಿಂಗ್ ಅವರು 100% Finance Inclusion ಎನ್ನುವ ಯೋಜನೆಯನ್ನು ರೂಪಿಸಿ ಪ್ರತಿಯೊಬ್ಬ ನಾಗರಿಕನೂ ಬ್ಯಾಂಕ್ ಖಾತೆ ಹೊಂದಬೇಕೆನ್ನುವ ಆಶಯವನ್ನು ವ್ಯಕ್ತಪಡಿಸಿದ್ದರು. ಆದರೆ ಜುಲೈ.೨೦೧೪ರ ವೇಳೆಗೆ ಶೇಕಡಾ ೫೮ ರಷ್ಟನ್ನು ಮಾತ್ರ ಸಾಧಿಸಲಾಗಿತ್ತು. ೨೦೦೧ರಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ದೇಶದಲ್ಲಿ ೪೩.೯ ಕೋಟಿ ಬ್ಯಾಂಕ್ ಖಾತೆಗಳಿದ್ದವು. ೨೦೧೪ರಲ್ಲಿ ಯುಪಿಎ ಸರ್ಕಾರದ ಅಧಿಕಾರ ಕೊನೆಗೊಂಡಾಗ ದೇಶದಲ್ಲಿ ೭೭.೩೨ ಕೋಟಿಯಷ್ಟು ಬ್ಯಾಂಕ್ ಖಾತೆಗಳಿಗೆ ವೃದ್ಧಿಯಾಗಿತ್ತು ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. ಆದರೆ ನರೇಂದ್ರ ಮೋದಿ ‘ಜನಧನ ಯೋಜನೆ’ ಎನ್ನುವ ಹೆಸರಿನಲ್ಲಿ ಪ್ರತಿಯೊಬ್ಬ ನಾಗರಿಕನೂ ಬ್ಯಾಂಕ್ ಖಾತೆ ಹೊಂದಬೇಕೆನ್ನುವ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಈ ಯೋಜನೆಯು ಯುಪಿಎ ಸರ್ಕಾರದ ಮುಂದುವರೆದ ಯೋಜನೆ ಅದೂ ಬದಲುಗೊಂಡ ಹೆಸರಿನಲ್ಲಿ.
  • ಯುಪಿಎ ಸರ್ಕಾರ ಆರಂಭಿಸಿದ Skill India ಯೋಜನೆಯು ಮೋದಿ ಸರ್ಕಾರದಲ್ಲಿ Skill Development Mission ಆಗಿ ನಾಮ ಬದಲಾವಣೆ ಹೊಂದಿದೆ.
  • ಯುಪಿಎ ಸರ್ಕಾರದ ‘Rajiv Gandhi Mission for Clean Ganga Yojana’ ಯೋಜನೆಯು ಮೋದಿ ಸರ್ಕಾರದಲ್ಲಿ ‘Namo Gange’ ಎನ್ನುವ ಹೆಸರಿನಲ್ಲಿ ನಾಮ ಬದಲಾವಣೆ ಆಗಿದೆ.
  • ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಉತ್ಪಾದನಾ ಸಾಮರ್ಥ್ಯದ ಹೆಚ್ಚಳವು ಶೇಕಡಾ ೫.೨% ರಷ್ಟಿದ್ದರೆ ಈ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಒಂದು ವರ್ಷದ ಅವಧಿಯಲ್ಲಿ ಅದು ಕೇವಲ ಶೇಕಡಾ ೨.೧% ರಷ್ಟು ಮಾತ್ರ.
  • ‘ಮೇಕ್ ಇನ್ ಇಂಡಿಯಾ’ದ ಸ್ಲೋಗನ್ ಅಡಿಯಲ್ಲಿ ಕಳೆದ ಒಂದು ವರ್ಷದ ಮೋದಿ ನೇತೃತ್ವದಲ್ಲಿ ಸೃಷ್ಟಿಯಾದ ಉದ್ಯೋಗಗಳ ಸಂಖ್ಯೆ ೦.

ಯಾವುದೇ ಸಂದರ್ಭದಲ್ಲಿಯೂ ಅಧಿಕಾರದಲ್ಲಿರುವ ಪಕ್ಷವೊಂದು ಪರಾಭವಗೊಂಡು ಬದಲೀ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದಾಗ ಸಹಜವಾಗಿಯೇ ಹಿಂದಿನ ಸರ್ಕಾರದ ಕೆಲವು ಜನಪ್ರಿಯ ಜನ ಕಲ್ಯಾಣ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗಲಾಗುತ್ತದೆ. ಇದು ಹೊಸದೇನಲ್ಲ. SwachhBharath_Modiಹೊಸ ಸರ್ಕಾರವು ತನ್ನ ಪಕ್ಷದ ಗೌರವಾನ್ವಿತ, ಜನಪ್ರಿಯ ನಾಯಕರ ಹೆಸರಿನಲ್ಲಿ ಈ ಯೋಜನೆಗಳನ್ನು ಮರು ನಾಮಕರಣ ಮಾಡುತ್ತದೆ. ಇದನ್ನು ಒಪ್ಪಿಕೊಳ್ಳಲಾಗದಿದ್ದರೂ ಸಹ ಹೊಸದೇನಲ್ಲ. ಆದರೆ ಈ ಸದರಿ ಮೋದಿ ಸರ್ಕಾರವು ಕಳೆದ ಯುಪಿಎ ಸರ್ಕಾರದ ಹತ್ತು ವರ್ಷಗಳ ಆಡಳಿತದ ಜನಕಲ್ಯಾಣ ಯೋಜನೆಗಳನ್ನು ಹೈಜಾಕ್ ಮಾಡಿ ನಾಮ ಬದಲೀಕರಣ ಮಾಡಿ ಅದು ತನ್ನ ಕಳೆದ ಒಂದು ವರ್ಷದ ಸಾಧನೆ ಎಂದು ಅಸಹ್ಯಕರವಾಗಿ ಪ್ರಚಾರ ಮಾಡಿಕೊಳ್ಳುತ್ತಿರುವುದು ಇತಿಹಾಸದಲ್ಲಿಯೇ ಪ್ರಥಮ. ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಇಂತಹ ಲಜ್ಜಗೇಡಿ, ಅಪ್ರಬುದ್ಧ ವರ್ತನೆಗಳಿಗೆ ಪರ್ಯಾಯ ಉದಾಹರಣೆಗಳೇ ಇಲ್ಲ. ಈ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಹಿಂದಿನ ಯುಪಿಎ ಸರ್ಕಾರದ ಕ್ಷಮತೆ ಏನು, ಅದರಲ್ಲಿ ಎಷ್ಟರಮಟ್ಟಿಗೆ ಯಶಸ್ಸು ಸಾಧಿಸಿದೆ ಎನ್ನುವ ಕನಿಷ್ಟ ರಾಜಕೀಯ ಪ್ರಶ್ನೆಗಳನ್ನು ಕೇಳುವ ಅವಕಾಶಗಳನ್ನು ಕೈಬಿಟ್ಟ ಈ ಮೋದಿ ಸರ್ಕಾರ ತನ್ನ ಸುಳ್ಳುಗಳನ್ನು ಪ್ರಚಾರ ಮಾಡಲು ಈ ಮೇಲಿನ ಹೈಜಾಕ್ ಮಾದರಿಯ ಕೆಳಮಟ್ಟದ ತಂತ್ರಗಳನ್ನು ಅನುಸರಿಸುತ್ತಿದೆ. ತನ್ನ ಹಿಂದಿನ ಸರ್ಕಾರದ ಜನ ಕಲ್ಯಾಣ ಯೋಜನೆಗಳನ್ನು ತನ್ನದೆಂದು ಹೇಳಿಕೊಂಡು ಇಂದು ಪ್ರಜ್ಞಾವಂತರ ಎದುರು ನಗೆಪಾಟಿಲಿಗೀಡಾಗಿರುವ ಈ ಮೋದಿಯವರಲ್ಲಿ ಆಧುನಿಕ ಪ್ರಜ್ಞೆಯ ಕೊರತೆ, ಪ್ರಜಾಪ್ರಭುತ್ವದ ಸ್ವರೂಪದ ಕುರಿತಾದ ಕನಿಷ್ಟ ತಿಳುವಳಿಕೆಗಳ ಕೊರತೆ ಮತ್ತು ಮುಖ್ಯವಾಗಿ ‘ಎಲ್ಲರ ವಿಕಾಸ ಎಲ್ಲರ ಜೊತೆಗೆ’ ಎನ್ನುವ ಸ್ಲೋಗನ್‌ನ ಆಶಯದ ಕುರಿತಾಗಿ ಇರುವ ದಿವ್ಯ ನಿರ್ಲಕ್ಷ ಇಂದು ಒಂದು ವರ್ಷದ ಈ ಎನ್‌ಡಿಎ ಸರ್ಕಾರವನ್ನು ಸಂಪೂರ್ಣವಾಗಿ ಹಳಿ ತಪ್ಪಿಸಿದೆ.

ಕಳೆದ ವರ್ಷದ ಲೋಕಸಭೆಯ ಚುನಾವಣೆಯಲ್ಲಿ ಕ್ಯಾಪಿಟಲಿಸ್ಟ್, ಮಧ್ಯಮವರ್ಗ, ಯುವ ಜನತೆ ಮೋದಿಯ ‘ಅಚ್ಛೇ ದಿನ್’ ಸ್ಲೋಗನ್ ಕುರಿತಾಗಿ ಮಾರುಹೋಗಿ ಸಂಪೂರ್ಣವಾಗಿ ನರೇಂದ್ರ ಮೋದಿಯನ್ನು ಬೆಂಬಲಿಸಿ ಅಧಿಕಾರದಲ್ಲಿ ಕೂಡಿಸಿದ್ದರು. ಇಲ್ಲಿನ ಪ್ರಜ್ಞಾವಂತರು ಲಿಬರಲ್ ಮೋದಿಯ ವ್ಯಕ್ತಿತ್ವದ ಕುರಿತಾಗಿ ಅನುಮಾನಗಳನ್ನು ಇಟ್ಟುಕೊಂಡೇ ಕಡೆಗೆ ಈ ದೇಶದ ಪ್ರಜಾಪ್ರಭುತ್ವ, ಸಾಮಾಜಿಕ, ಸಾಂಸ್ಕೃತಿಕ ವೈವಿದ್ಯತೆ ಮತ್ತು ಮುಖ್ಯವಾಗಿ ಸಂವಿಧಾನದ ಆಶಯಗಳು ಈ ಮೋದಿಯ ಅಹಂಕಾರದ ವ್ಯಕ್ತಿತ್ವವನ್ನು, ಸರ್ವಾಧಿಕಾರಿ ಗುಣಗಳನ್ನು ನಿಯಂತ್ರಿಸುತ್ತದೆ ಎಂದು ನಂಬಿದ್ದರು. ಆದರೆ ಒಂದು ವರ್ಷದ modi_amit_shahನಂತರ ದೇಶದ ಪ್ರಧಾನಮಂತ್ರಿಯಾಗಿ ಮೋದಿ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಯಾವುದೇ ಪಾಠಗಳನ್ನು ಕಲಿಯಲು ಸೋತಿದ್ದಾರೆ. ಅವರ ಸರ್ವಾಧಿಕಾರದ ವ್ಯಕ್ತಿತ್ವ, ಠೇಂಕಾರದ ನಡುವಳಿಕೆಗಳು ಮತ್ತಷ್ಟು ಬಲಗೊಂಡಿವೆ. ಮೋದಿಯ ನೇತೃತ್ವದಲ್ಲಿ ೨೦೦೨ರಲ್ಲಿ ಗುಜರಾತ್‌ನಲ್ಲಿ ನಡೆದ ಮುಸ್ಲಿಂ ಹತ್ಯಾಕಾಂಡದ ಪ್ರಶ್ನೆಗಳನ್ನೆತ್ತಿಕೊಂಡು ಹಿಂತಿರುಗಿ ನೋಡುವ ಪ್ರಮೇಯವೇ ಇಲ್ಲವೆನ್ನುವಷ್ಟರ ಮಟ್ಟಿಗೆ ಇಂದು ಮೋದಿ ಒಬ್ಬ ಸ್ವತಂತ್ರ, ಒತ್ತಡರಹಿತ, ಪಕ್ಷದ ಕಟ್ಟುಪಾಡುಗಳಿಲ್ಲದ ನಾಯಕನಾಗಿ ಬೆಳೆದು ನಿಂತಿದ್ದಾರೆ. ಇಂದು ಪ್ರಧಾನಮಂತ್ರಿ ಕಾರ್ಯಾಲಯವು ಅತ್ಯಂತ ಬಲಿಷ್ಟ ಮತ್ತು ಪ್ರಭಾವಶಾಲಿ ಮುಖ್ಯ ಕಛೇರಿಯಾಗಿದೆ

ಉದಾಹರಣೆಗೆ ಈ ಪ್ರಧಾನ ಮಂತ್ರಿ ನರೇಂದ್ರ ಮೋದಿ ಒಂದು ವರ್ಷದ ಅವಧಿಯಲ್ಲಿ ತಾವು ಸದಸ್ಯರಾಗಿರುವ ಭಾರತದ ಸಂಸತ್ತಿನಲ್ಲಿ ಕೆಲವೇ ಗಂಟೆಗಳಷ್ಟು ಪಾಲ್ಗೊಂಡು ವಿದೇಶಿ ಸಂಸತ್ತುಗಳಲ್ಲಿ ಅಧಿಕ ಸಮಯದಲ್ಲಿ ಭಾಗವಹಿಸಿದ್ದಾರೆ.

ಸಂವಿಧಾನಬದ್ಧ ಸಂಸ್ಥೆಗಳಾದ ಮುಖ್ಯ ಮಾಹಿತಿ ಕಮಿಷನರ್ (CIC) ಗೆ ಕಳೆದ ಒಂಬತ್ತು ತಿಂಗಳುಗಳಿಂದ ಅಂದರೆ ಸೆಪ್ಪೆಂಬರ್ ೨೦೧೪ರಿಂದ ಮುಖ್ಯಸ್ಥರನ್ನು ನೇಮಿಸಿಲ್ಲ. ಇದೇ ಸಂಸ್ಥೆಯಲ್ಲಿ ೩ ಮಾಹಿತಿ ಕಮಿಷನರ್ ಹುದ್ದೆಗಳೂ ಖಾಲಿ ಇವೆ. ಭ್ರಷ್ಟಾಚಾರ ನಿಗ್ರಹಣ ಸಂಸ್ಥೆ ಮುಖ್ಯ ಜಾಗೃತ ಕಮಿಷನರ್ (CVC) ಗೆ ಕಳೆದ ಒಂಬತ್ತು ತಿಂಗಳುಗಳಿಂದ ಅಂದರೆ ಸೆಪ್ಪೆಂಬರ್ ೨೦೧೪ರಿಂದ ಮುಖ್ಯಸ್ಥರನ್ನು ನೇಮಿಸಿಲ್ಲ. ಈ ಸಂಸ್ಥೆಗಳಿಗೆ ಮುಖ್ಯಸ್ಥರನ್ನು ನೇಮಿಸಲು ಪ್ರಧಾನ ಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರನ್ನೊಳಗೊಂಡ ಸಮಿತಿಯ ಸಭೆಯನ್ನು ಕಳೆದ ಒಂದು ವರ್ಷದಲ್ಲಿ ಕೇವಲ ಎರಡು ಬಾರಿ ನಡೆಸಲಾಗಿದೆ, ಅದೂ ಔಪಚಾರಿಕವಾಗಿ. ಇದು ಭ್ರಷ್ಟಾಚಾರ ಮುಕ್ತ ಭಾರತಕ್ಕಾಗಿ ಮೋದಿಯವರ ಜವಬ್ದಾರಿಯುತ ನಡೆಗಳ ಮಾದರಿ!!

ಫ್ರೊ. ಬಲವೇರ್ ಅರೋರರು, “ನೆಹ್ರೂವಿಯನ್ ಸಿದ್ಧಾಂತದ ಕಡೆಯ ಕಟ್ಟಡದಂತಿದ್ದ ‘ಯೋಜನಾ ಆಯೋಗ’ವನ್ನು ರದ್ದುಗೊಳಿಸಿ ಅದರ ಬದಲಿಗೆ ನೀತಿ ಆಯೋಗವನ್ನು ಸ್ಥಾಪಿಸಿ ಇತಿಹಾಸದ ತಪ್ಪುಗಳನ್ನು ಸರಿಪಡಿಸುವ ನಾಯಕನೆಂದು ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರು ಛಾಪುಗೊಳ್ಳಬೇಕೆಂದು Modiಬಯಸುವ ಈ ಮೋದಿ ತಾನು ಇತಿಹಾಸದ ಈ ತಪ್ಪುಗಳನ್ನು ಸರಿಪಡಿಸುವುದರ ಮೂಲಕ ಈ ದೇಶಕ್ಕೆ ಒಂದು ಘನತೆಯನ್ನು ತಂದುಕೊಡುತ್ತೇನೆ ಎಂದೇ ನಂಬಿದ್ದಾರೆ. ತಮ್ಮ ಭಾಷಣದಲ್ಲಿ ಸಹಕಾರಿ ಫೆಡರಲಿಸಂ ಕುರಿತಾಗಿ ಮಾತನಾಡಿರುವ ಮೋದಿಯವರಿಗೆ ಅದರ ಕುರಿತಾದ ಬದ್ಧತೆಗಳು ಸಹ ಇನ್ನೂ ಪ್ರಕಟಗೊಂಡಂತಿಲ್ಲ. ಆದರೆ ಅಧಿಕಾರ ಮತ್ತು ಜವಬ್ದಾರಿಗಳನ್ನು ಮೂರು ಸ್ತರಗಳಲ್ಲಿ ಹಂಚಿಕೊಳ್ಳುವುದು ಈ ರಾಜ್ಯಗಳ ಸಹಕಾರಿ ಫೆಡರಲಿಸಂನ ಮುಖ್ಯ ಲಕ್ಷಣಗಳಲ್ಲೊಂದು. ಇದರಲ್ಲಿ ಜನರ ಆದೇಶದ ಮೂಲಕ ಆಯ್ಕೆಯಾಗುವ ರಾಜ್ಯ ಸರ್ಕಾರಗಳ ಸಂವಿಧಾನಾತ್ಮಕ ಅಧಿಕಾರವನ್ನು ಗೌರವಿಸುವುದು ಅತ್ಯಂತ ಪ್ರಮುಖ ಸಹಕಾರಿ ಫೆಡರಲಿಸಂನ ತತ್ವಗಳಲ್ಲೊಂದು. ಅದರಲ್ಲೂ ವಿರೋಧ ಪಕ್ಷಗಳ ಸರ್ಕಾರಗಳು ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದರೆ ಕೇಂದ್ರ ಸರ್ಕಾರವು ಮತ್ತಷ್ಟು ಜಾಗರೂಕತೆಯಿಂದ, ಈ ಸಹಕಾರಿ ಫೆಡರಲಿಸಂನ ನೀತಿಗೆ ಬದ್ಧವಾಗಿರಬೇಕಾಗುತ್ತದೆ. ಸಂಶಯಾತೀತರಾಗಿ ವರ್ತಿಸಬೇಕಾಗುತ್ತದೆ. ರಾಜ್ಯಗಳ ಈ ಸಹಕಾರಿ ಫೆಡರಲಿಸಂ ನೀತಿಯು ಕೇಂದ್ರವು ರಾಜ್ಯಗಳೊಂದಿಗೆ ಅಧಿಕಾರವನ್ನು ಹಂಚಿಕೊಳ್ಳುವ ರಾಜಕೀಯ ಇಚ್ಚಾಶಕ್ತಿಯನ್ನು ನಿರೀಕ್ಷಿಸುತ್ತದೆ” ಎಂದು ಬರೆಯುತ್ತಾರೆ.

ಪ್ರಜಾಪ್ರಭುತ್ವದ ಕುರಿತಾಗಿ, ರಾಜ್ಯಗಳ ಜೊತೆ ಸಹಕಾರಿ ಫೆಡರಲಿಸಂ ಕುರಿತಾಗಿ ನಿರರ್ಗಳವಾಗಿ ಮಾತನಾಡುವ ಬಿಜೆಪಿ ವಕ್ತಾರರು ಮತ್ತು ಮೋದಿ ಮೊನ್ನೆಯವರೆಗೂ ರಾಜ್ಯಗಳ ಸ್ವಾಯತ್ತತೆಯ ಪರವಾಗಿ ವಾದಿಸುತ್ತಿದ್ದರು. ರಾಜ್ಯಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವುದರ ಕುರಿತಂತೆ ಇವರಲ್ಲಿ ಒಮ್ಮತವಿದ್ದಂತಿತ್ತು. ಆದರೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಈ ಎಲ್ಲಾ ಗುಣಲಕ್ಷಣಗಳು ಕಣ್ಮರೆಯಾಗಿವೆ.

೨೦೧೪ರಲ್ಲಿ ದೆಹಲಿ ಚುನಾವಣೆಯಲ್ಲಿ ಬಹುಮತದಿಂದ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಕ್ಷವು ನಂತರದ ದಿನಗಳಲ್ಲಿ ಅನೇಕ ಬಿಕ್ಕಟ್ಟುಗಳಿಗೆ ಬಲಿಯಾಗಬೇಕಾಯ್ತು. ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರ ಜೊತೆ ಅಧಿಕಾರ ಹಂಚಿಕೆಯ ಕುರಿತಾಗಿ ಬೀದಿ ಕಾಳಗಕ್ಕೆ ಇಳಿದಿದ್ದಾರೆ. ಈ ಲೆಫ್ಟಿನೆಂಟ್ ಗವರ್ನರ್ ಜಂಗ್ ಅವರ ಅಧಿಕಾರಶಾಹಿ ಧೋರಣೆಗಳು, ತೀರ್ಮಾನಗಳು, ನೇಮಕಾತಿಗಳು ಅವರು ಕೇಂದ್ರದ ಏಜೆಂಟರಂತೆ ವರ್ತಿಸುತ್ತಿರುವುದಕ್ಕೆ ಸಾಕ್ಷಿಯಂತಿವೆ. ಆದರೆ ಈ ಎಲ್ಲಾ ಗೊಂದಲಗಳ ಮಧ್ಯೆ ಈ ತನ್ನ ವಿರೋಧ ಪಕ್ಷ ಆಮ್ ಆದ್ಮಿ ಪಕ್ಷ ಮತ್ತು ಗವರ್ನರ್ ನಡುವಿನ ದೆಹಲಿಯ ತಿಕ್ಕಾಟಕ್ಕೆ ಮಧ್ಯಪ್ರವೇಶಿಸಿದ ಕೇಂದ್ರ ಸರ್ಕಾರ ತನ್ನ ವಿವರಣೆಯನ್ನು ನೀಡುತ್ತಾ ಮೇ modi-kejriwal೨೧, ೨೦೧೫ರಂದು ಕೇಂದ್ರ ಗೃಹ ಇಲಾಖೆಯಿಂದ ಒಂದು ನೋಟಿಫಿಕೇಶನ್ ಪ್ರಕಟವಾಯಿತು. ಅದರ ಸಂಕ್ಷಿಪ್ತ ವಿವರಗಳು ಹೀಗಿವೆ: “ದೆಹಲಿಯ ಸೇವೆಗಳ ಜವಾಬ್ದಾರಿಯು ಲೆಫ್ಟಿನೆಂಟ್ ಗವರ್ನರ್ ಅವರ ಸುಪರ್ದಿಗೆ ಬರುತ್ತವೆ. Sub-clause (a) of clause (3) of Article 239AA ನಲ್ಲಿ ನಮೂದಿಸಿರುವ ರಾಜ್ಯಗಳ ಪಟ್ಟಿ ಮತ್ತು ಅದಕ್ಕೆ ಸಂಬಂಧಿಸಿದ ಸಂಗತಿಗಳು ಕೇಂದ್ರಾಡಳಿತ ರಾಜ್ಯಗಳಿಗೂ ಅನ್ವಯವಾಗುತ್ತವೆ. ರಾಷ್ಟ್ರದ ರಾಜಧಾನಿ ಪ್ರಾಂತವಾದ ದೆಹಲಿ ತನ್ನದೇ ಆದ ರಾಜ್ಯ ಮಟ್ಟದ ಸಾರ್ವಜನಿಕ ಸೇವಾ ವಲಯಗಳನ್ನು ಹೊಂದಿಲ್ಲ. ಎಲ್ಲಿ ಶಾಸಕಾಂಗದ ಅಧಿಕಾರವಿಲ್ಲವೋ ಅಲ್ಲಿ ಕಾರ್ಯಾಂಗದ ಅಧಿಕಾರವೂ ಇಲ್ಲವೆಂದು ಇಲ್ಲಿ ಸ್ಪಷ್ಟವಾಗುತ್ತದೆ. Entries 1, 2, & 18 ಅನುಸಾರ ರಾಜ್ಯಗಳ ಪಟ್ಟಿಯಲ್ಲಿ ಸಾರ್ವಜನಿಕ ಪ್ರಕಟಣೆ, ಪೋಲೀಸ್, ಭೂಮಿ ಮತ್ತು ಸೇವಾ ಕ್ಷೇತ್ರಗಳು ಕೇಂದ್ರಾಡಳಿತ ರಾಜ್ಯವಾದ ದೆಹಲಿಯ ಶಾಸಕಾಂಗದ ಅಧಿಕಾರದ ಪರಿಧಿಯೊಳಗೆ ಬರುವುದಿಲ್ಲ ಮತ್ತು ಈ ಕೇಂದ್ರಾಡಳಿತ ರಾಜ್ಯವಾದ ದೆಹಲಿಯ ಸರ್ಕಾರಕ್ಕೆ ಎಕ್ಸಿಕ್ಯೂಟಿವ್ ಅಧಿಕಾರಗಳು ಇರುವುದಿಲ್ಲ ಮತ್ತು ಈ ವಿಶೇಷ ಅಧಿಕಾರಗಳು ರಾಷ್ಟ್ರಪತಿ ಅಥವಾ ಅವರ ಪ್ರತಿನಿಧಿಯಾದ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಇರುತ್ತವೆ. ರಾಷ್ಟ್ರದ ರಾಜಧಾನಿ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಮುಂದಿನ ಸೂಚನೆಗಳು ದೊರಕುವವರೆಗೂ ಸಾರ್ವಜನಿಕ ಪ್ರಕಟಣೆಗಳು, ಸೇವಾ ಕ್ಷೇತ್ರ, ಪೋಲಿಸ್, ಮತ್ತು ಭೂಮಿಗೆ ಸಂಬಂಧಪಟ್ಟಂತೆ ಅವರು ತಮ್ಮ ಅಧಿಕಾರವನ್ನು ಬಳಸಿಕೊಳ್ಳಬಹುದು ಮತ್ತು ಕೇಂದ್ರ ಸರ್ಕಾರದ ಕರ್ತವ್ಯಗಳನ್ನು ನಿರ್ವಹಿಸಬಹುದು.”

ಕೇಂದ್ರ ಸರ್ಕಾರದ ಗೃಹ ಇಲಾಖೆಯ ಮೇಲಿನ ನೋಟಿಫಿಕೇಶನ್‌ನ ಉದ್ದೇಶ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಮುಖಾಂತರ ಚುನಾಯಿತ ಸರ್ಕಾರದ ಮೇಲೆ ಹಿಡಿತವನ್ನು ಸಾಧಿಸುವುದು. ಕೆಲವು ದಿನಗಳ ಹಿಂದೆ ಪಶ್ಚಿಮ ಬಂಗಾಲದಲ್ಲಿ ಮಾತನಾಡುತ್ತ ರಾಜ್ಯಗಳ ಸಹಕಾರಿ ಫೆಡರಲಿಸಂ ಅವಶ್ಯಕತೆಯ ಕುರಿತಾಗಿ ಮಾತನಾಡಿದ್ದ ಮೋದಿ ಇಂದು ದೆಹಲಿಯ ಕೇಜ್ರಿವಾಲ್ ಸರ್ಕಾರದ ಸಂವಿಧಾನಬದ್ಧ ಹಕ್ಕುಗಳನ್ನು ಕತ್ತರಿಸುತ್ತಿರುವುದು ಮೋದಿ ಸರ್ಕಾರದ ಸರ್ವಾಧಿಕಾರದ ನೀತಿಯಲ್ಲದೆ ಮತ್ತೇನಿಲ್ಲ.

ಆದರೆ ೨೬,ಮೇ,೨೦೧೫ ರಂದು ದೆಹಲಿ ಹೈಕೋರ್ಟ್, “ಲೆಫ್ಟಿನೆಂಟ್ ಗವರ್ನರ್ ಅವರು ಮಂತ್ರಿಮಂಡಲದ ಸಲಹೆ ಮತ್ತು ಸಹಕಾರದೊಂದಿಗೆ ಕಾರ್ಯ ನಿರ್ವಹಿಸಬೇಕು ಮತ್ತು ಜನರ ತೀರ್ಪನ್ನು ಲೆಫ್ಟಿನೆಂಟ್ ಗವರ್ನರ್ ಗೌರವಿಸಬೇಕು ಮತ್ತು ಶಾಸಕಾಂಗದ ಅಸೆಂಬ್ಲಿಯ ಪರಿಧಿಯೊಳಗೆ ಕಾರ್ಯ ನಿರ್ವಹಿಸಬೇಕು” ಎನ್ನುವ ಮಹತ್ವದ ತೀರ್ಪನ್ನು ನೀಡಿದೆ. ಹೈಕೋರ್ಟ್ ತೀರ್ಪಿನಿಂದ ಮುಖಭಂಗ ಅನುಭವಿಸಿರುವ ಕೇಂದ್ರ ಸರ್ಕಾರ ಹೈಕೋರ್ಟಿನ ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಆದರೆ ಸುಪ್ರೀಂ ಕೋರ್ಟ ಸಹ ಇದಕ್ಕೆ ಸ್ಟೇ ನೀಡಲು ನಿರಾಕರಿಸಿದೆ.

ಕೇವಲ ಲಾಭ ನಷ್ಟದ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಚುನಾಯಿತ ಆಮ್ ಆದ್ಮಿ ಪಕ್ಷದ ಅಧಿಕಾರವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ. ಇಂದು ಆಮ್ ಆದ್ಮಿ ಪಕ್ಷ ಪಕ್ಷದ ಪ್ರಜಾಪ್ರಭುತ್ವದ ಹಕ್ಕುಗಳನ್ನು, ಸ್ವಾತಂತ್ರವನ್ನು ಮೊಟಕುಗೊಳಿಸಲು ಪ್ರಯತ್ನಿಸುತ್ತಿರುವ ಬಿಜೆಪಿ ಸರ್ಕಾರದ ಈ ಸರ್ವಾಧಿಕಾರದ ಧೋರಣೆಗಳಿಗೆ ಮುಂದಿನ ದಿನಗಳಲ್ಲಿ ಇತರೇ ಪ್ರಾಂತೀಯ ಸರ್ಕಾರಗಳು ಬಲಿಯಾಗುವುದನ್ನು ನಾವು ಸಂದೇಹಿಸುವಂತಿಲ್ಲ.

ಚೆನ್ನೈನಲ್ಲಿರುವ ಐಐಟಿ-ಮದ್ರಾಸ್‌ನ ವಿದ್ಯಾರ್ಥಿ ಅಸೋಸಿಯೇಶನ್‌ನ ’ಅಂಬೇಡ್ಕರ್-ಪೆರಿಯಾರ್ ಸ್ಟಡಿ ಸರ್ಕಲ್’ ಅನ್ನು ನಿಷೇಧಗೊಳಿಸಿ ಅಲ್ಲಿನ ಆಡಳಿತ ಮಂಡಳಿ ನೋಟೀಸ್ ನೀಡಿದೆ. (ದ ಹಿಂದೂ, ಮೇ ೨೯,೨೦೧೫). ಇದಕ್ಕೆ ಈ ಆಡಳಿತ ಮಂಡಳಿ ನೀಡಿರುವ ಕಾರಣ ಯಾವುದೋ periyar-ambedkarಅನಾಮಧೇಯ ದೂರನ್ನು ಕೇಂದ್ರದ ಮಾನವ ಸಂಪನ್ಮೂಲ ಇಲಾಖೆಗೆ ಸಲ್ಲಿಸಲಾಗಿದೆ. ಈ ದೂರಿನಲ್ಲಿ ’ಅಂಬೇಡ್ಕರ್-ಪೆರಿಯಾರ್ ಸ್ಟಡಿ ಸರ್ಕಲ್’ ಮೋದಿಯವರ ಆಡಳಿತವನ್ನು ಟೀಕಿಸುವಂತಹ ಕರಪತ್ರವನ್ನು ಹಂಚಿ ದ್ವೇಷದ ಭಾವನೆಯನ್ನು ಬಿತ್ತುತ್ತಿದ್ದಾರೆ ಎಂದು ಆರೋಪಿಸಲಾಗಿದೆ.’ಅದಕ್ಕಾಗಿ ಈ ನಿಷೇಧ. ಈ ನಿಷೇಧವನ್ನು ಮಾನವ ಸಂಪನ್ಮೂಲ ಇಲಾಖೆಯ ಮಂತ್ರಿ ಸ್ಮೃತಿ ಇರಾನಿ ಸಮರ್ಥಿಸಿಕೊಂಡಿದ್ದಾರೆ. ಆದರೆ ’ಅಂಬೇಡ್ಕರ್-ಪೆರಿಯಾರ್ ಸ್ಟಡಿ ಸರ್ಕಲ್‌’ನ ವತಿಯಿಂದ ಮೋದಿ ಸರ್ಕಾರದ ಅರ್ಥಿಕ ಮತ್ತು ಸಾಂಸ್ಕೃತಿಕ ನೀತಿಗಳನ್ನು ಟೀಕಿಸಲಾಗಿತ್ತು. ಎಲ್ಲಿಯೂ ವ್ಯಕ್ತಿಗತ ತೇಜೋವಧೆಗೆ ನಡೆದಿರಲಿಲ್ಲ. ಆದರೆ ಈ ವಿದ್ಯಾರ್ಥಿ ಒಕ್ಕೂಟವನ್ನು ನಿಷೇಧಿಸಲಾಗಿದೆ.’ಈ ಮೂಲಕ ’ಕೇಂದ್ರ ಸರ್ಕಾರದ ಮತ್ತು ಮೋದಿಯವರ ನೀತಿಗಳ ಕುರಿತು ಚರ್ಚಿಸುವವರನ್ನು, ಟೀಕಿಸುವವರನ್ನು ನಿಷೇಧಿಸುತ್ತೇವೆ’ ಎನ್ನುವ ಸರಳವಾದ ಆದರೆ ಬ್ರೂಟಲ್ ಆದ ಸಂದೇಶವನ್ನು ಭಾರತೀಯರಿಗೆ ರವಾನಿಸಿದ್ದಾರೆ. ಆದರೆ ಶತಮಾನಗಳ ಕಾಲದಿಂದಲೂ ವಿದ್ಯಾಲಯಗಳು, ವಿಶ್ವವಿದ್ಯಾಲಯಗಳು ರಾಜಕೀಯ, ಸಾಂಸ್ಕೃತಿ ಚರ್ಚೆ, ಸಂವಾದ, ಟೀಕೆಗಳಿಗೆ ವೇದಿಕೆಯಾಗಿದ್ದವು ಎನ್ನುವ ಸರಳ ಇತಿಹಾಸದ ಜ್ಞಾನ ಈ ಸ್ಮೃತಿ ಇರಾನಿಯವರಿಗೆ ಇಲ್ಲದಿರುವುದು ಈ ದೇಶದ ಶಿಕ್ಷಣ ರಂಗದ ಬುರೇ ದಿನ್‌ಗಳಿಗೆ ಸಾಕ್ಷಿ.

ಇದಕ್ಕೂ ಹಿಂದೆ ಜೂನ್ ೨೦೧೪ರಂದು ಕೇರಳದ ಗುರುವಾಯೂರಿನ ಕೃಷ್ಣ ಕಾಲೇಜಿನ ೯ ವಿದ್ಯಾರ್ಥಿಗಳನ್ನು ಬಂಧಿಸಲಾಗಿತ್ತು. ಈ ವಿದ್ಯಾರ್ಥಿಗಳು ಕ್ರಾಸ್‌ವರ್ಡ ಪದಬಂಧವನ್ನು ಬರೆಯುವ ಸಂದರ್ಭದಲ್ಲಿ ಮೋದಿಯವರನ್ನು ಹೀಗೆಳೆಯುವಂತಹ ಭಾಷೆ ಬಳಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಮೋದಿ ಸರ್ಕಾರ ಭಾರತೀಯರಿಗೆ ಭರವಸೆ ನೀಡಿದ್ದ ಅಚ್ಛೇ ದಿನ್‌ಗಳೆಂದರೆ ಈ ಮಾದರಿಯದ್ದೇ?? ಇದು ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಫ್ಯಾಸಿಸಂ ಧೋರಣೆಯ ಲೇಟೆಸ್ಟ್ ಉದಾಹರಣೆ.

ಯುವ ಕಾದಂಬರಿಕಾರ ಚಂದ್ರಹಾಸ್ ಚೌಧುರಿ ಅವರು “ಮೋದಿ ಜನಿಸಿದ ಸುಮಾರು ೧೯೫೦ರ ದಶಕದ ಸಾಂಪ್ರದಾಯಿಕ ಭಾರತವು ಪ್ರಜಾಪ್ರಭುತ್ವದ ಹಕ್ಕುಗಳು, ಸ್ವಾತಂತ್ರ ಮತ್ತು ಧಾರ್ಮಿಕ ಸ್ವಾತಂತ್ರದ ಪರಿಕಲ್ಪನೆಗಳಲ್ಲಿ ಇಂದಿನ ಭಾರತ ದೇಶದ ಸಂದರ್ಭದಲ್ಲಿ ಬಹು ದೂರ ಸಾಗಿ ಬಂದಿದೆ. ಇಂದಿನ ಯುವಜನತೆ ಅಂತರ್ಜಾತೀಯ ವಿವಾಹದ ಕಡೆಗೆ ಸಹಜವಾಗಿ ಒಲವು ತೋರಿಸುತ್ತಿದ್ದಾರೆ. ಗೇ ಹಕ್ಕುಗಳ ಪರವಾಗಿ ಹೋರಾಡುತ್ತಿದ್ದಾರೆ. ಮಹಿಳಾ ಸ್ವಾತಂತ್ರ ಮತ್ತು ವಿಮೋಚನೆಗಳ ಪರವಾಗಿ ಹೋರಾಡುತ್ತಿದ್ದಾರೆ. ಈ ಯುವಜನತೆಯ ಈ ನಡುವಳಿಕೆಗಳು ಮತ್ತು ಕ್ರಿಯಾಶೀಲತೆಯು ಮುಖ ಗಂಟಿಕ್ಕದೆ ಸಾರ್ವಜನಿಕವಾಗಿ ಮುಸ್ಲಿಂ ಹೆಸರನ್ನು ಹೇಳಲು ಅಸಮರ್ಥಗೊಂಡಿರುವ ಈ ಮೋದಿಯವರಿಗಿಂತ ತುಂಬಾ ಹೆಚ್ಚಿನ ಲಿಬರಲ್ ಆಗಿವೆ. ೪೦ ವರ್ಷಗಳಿಗಿಂತ ಕೆಳಗಿರುವ ಯುವ ಜನತೆ ಪೂರ್ವಗ್ರಹವಿಲ್ಲದೇ ಇತಿಹಾಸದಲ್ಲಿ ಸತ್ಯವನ್ನು ಹುಡುಕಾಡಲು ಬಯಸುತ್ತಿದ್ದರೆ ತನ್ನ ತಾರುಣ್ಯದ ದಿನಗಳಿಂದಲೂ ಹಿಂದೂ ಧರ್ಮದ ಪುನರುಜ್ಜೀವನದ ಅಜೆಂಡಾಗಳು ಮತ್ತು ಅದರ ಪಾವಿತ್ರತೆಯನ್ನು ಬೋಧಿಸುವ ಹಿಂದೂ ರಾಷ್ಟ್ರೀಯ ಚಳುವಳಿಗಳ ಚಿಂತನೆಗಳನ್ನು ಕಲಿತು, ಮೈಗೂಡಿಸಿಕೊಂಡಿರುವ ಈ ಮೋದಿ ಈ ಐಡಿಯಾಲಜಿಯ ಇತಿಹಾಸದ ಚಿಂತನೆಗಳ ಬಂದಿಯಾಗಿದ್ದಾರೆ ಮತ್ತು ಈ ಇತಿಹಾಸದ ಏಜೆಂಟರಾಗಿದ್ದಾರೆ. ಒಂದು ಸಾಂಪ್ರದಾಯಿಕ ಹಿಂದೂ ಬಡ ಕುಟುಂಬದಲ್ಲಿ ಜನಿಸಿದ ಮೋದಿ ಇಂದು ಅತ್ಯಂತ ಶಕ್ತಿಶಾಲಿ ನಾಯಕನಾಗಿದ್ದಾರೆ. ಆದರೆ ಇಂಡಿಯಾದ ವೈವಿಧ್ಯತೆಯನ್ನು ಒಪ್ಪಿಕೊಳ್ಳಲು ಅವರ ಮನಸ್ಸು ನಿರಾಕರಿಸುತ್ತದೆ. ಈ ಮೋದಿಯವರ ಪ್ರಧಾನ ಮಂತ್ರಿಯಾಗಿ ಒಂದು ವರ್ಷದ ಆಡಳಿತವನ್ನು ಅವಲೋಕಿಸಿದಾಗ ಇಂದಿನ ಸಂಕೀರ್ಣ ಮನಸ್ಥಿತಿಯ ಇಂಡಿಯಾಗೆ ಮೋದಿಯ ನಿಲುವುಗಳು ಮತ್ತು ಮನಸ್ಥಿತಿ ತುಂಬಾ ಹಳೆಯ ಕಾಲದ್ದು ಎಂದೆನಿಸುತ್ತದೆ. ೨೦೧೪ರಲ್ಲಿ ಯುವಜನತೆ ಸಮಗ್ರವಾಗಿ ಈ ಮೋದಿಯ ಪರ ಮತ ಚಲಾಯಿಸಿ ಅಧಿಕಾರ ತಂದುಕೊಟ್ಟರೆ ೨೦೧೯ರಲ್ಲಿ ಹೊಸದೊಂದು ಯುವಜನತೆಯ ಅಭೂತಪೂರ್ವ ಮೂವ್‌ಮೆಂಟ್‌ನ ಅಲೆ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸುತ್ತದೆ” ಎಂದು ವಿವರಿಸಿದ್ದಾರೆ.

“ಭಾರತದ ಪ್ರಜಾಪ್ರಭುತ್ವವು ತನ್ನ ಬಾಲ್ಯಾವಸ್ಥೆಯಿಂದ ಬೆಳೆದು ಮಾಗಬೇಕಾದರೆ “ಬಂಧುತ್ವ” (Fraternity) ಚಿಂತನೆಯನ್ನು ಬೆಳೆಸಿಕೊಳ್ಳಬೇಕು ಮತ್ತು ಬಂಧುತ್ವವು ಕೇಂದ್ರಸ್ಥಾನವನ್ನು ಅಲಂಕರಿಸಬೇಕು. ಒಳಗೊಳ್ಳುವಿಕೆ ಮತ್ತು ಬಹುತ್ವ ಚಿಂತನೆಗಳನ್ನು ಈ ಬಂಧುತ್ವ ಒಳಗೊಂಡಿರಬೇಕು” ಎಂದು ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾರೆ. ಆದರೆ ಈ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಕಳೆದ ಒಂದು ವರ್ಷದ ಆಡಳಿತದಲ್ಲಿ ‘ಬಹುಸಂಖ್ಯಾತ ತತ್ವ’ದ ಪ್ರಚಾರ ಮತ್ತು ‘ನ್ಯಾಯಾಂಗ’ ಹಾಗೂ ‘ಶಾಸಕಾಂಗ’ಗಳ ಪ್ರಸ್ತುತತೆಯನ್ನೇ ಅಸಿಂಧುಗೊಳಿಸುವ ನೀತಿಗಳ ಮೂಲಕ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ.

ಚಾಯ್ ಪೆ ಚರ್ಚಾ : ಸುಳ್ಳುಗಾರನ ಬಂಡವಾಳಶಾಹಿ ಆಡಳಿತದ ಒಂದು ವರ್ಷ

– ಬಿ. ಶ್ರೀಪಾದ ಭಟ್

ಪ್ರಧಾನ ಮಂತ್ರಿ ನರೇಂದ್ರ ಮೋದಿಯ ವ್ಯಕ್ತಿತ್ವವನ್ನು ಮತ್ತು ಅವರ ಸರ್ಕಾರ ಒಂದು ವರ್ಷ ತುಂಬಿದ್ದರ ಕುರಿತಾಗಿ ವಿವರಿಸುತ್ತಾ ಪತ್ರಕರ್ತ ನೀಲಂಜನ್ ಮುಖ್ಯೋಪಾಧ್ಯಾಯ್ ಅವರು “ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ರಚನೆಗಳೊಂದಿಗೆ ಕಾರ್ಯ ನಿರ್ವಹಿಸಲು ಮೋದಿ ಅಸಮರ್ಥರೆಂಬುದನ್ನು ಬಿಜೆಪಿ ಸರ್ಕಾರದ ಒಂದು ವರ್ಷದ ಆಡಳಿತವು ಸಾಕ್ಷೀಕರಿಸುತ್ತದೆ. ಮೋದಿಯು ಏಕವ್ಯಕ್ತಿ ಪ್ರದರ್ಶನದ ಮಾದರಿಗೆ ಹೊಂದಿಕೊಳ್ಳುತ್ತಾರೆ. Modiಒಬ್ಬ ವ್ಯಕ್ತಿ, ಏಕ ನಿಷ್ಠೆ, ಒಂದು ಸಂಸ್ಥೆ, ಏಕ ಸದನದ ಸಂಸತ್ತು; ಹೀಗೆ ಒಂದು ರೀತಿ ಏಕಮುಖಿ ಸಂಚಾರದಂತೆ. ಅಂದರೆ ಪರಸ್ಪರ ಸಂಭಾಷಣೆಯ ರೀತಿಯದಲ್ಲ, ಬದಲಾಗಿ ಸ್ವಗತ, ಆತ್ಮಗತ ಭಾಷಣದಂತೆ, ಮತ್ತು ನಿಜ, ಕಡ್ಡಾಯವಾಗಿ ಯಾವುದೇ ಪ್ರಶ್ನೆಗಳಿರುವುದಿಲ್ಲ” ಎಂದು ಬರೆಯುತ್ತಾರೆ.

ಸಮಾಜ ಶಾಸ್ತ್ರಜ್ಞ ನಿಸ್ಸಿಮ್ ಮನ್ನತುಕ್ಕರೆನ್ ಅವರು ಬರೆಯುತ್ತಾ, “ಒಂದು ವರ್ಷದ ಹಿಂದೆ ಮೋದಿ ಪ್ರಧಾನಿ ಆದಾಗ ಮೋದಿಯು ಇಂಡಿಯಾವನ್ನು ಬದಲಿಸುತ್ತಾರ? ಮನಮೋಹನ್ ಸಿಂಗ್ ಮಾಡಲಾಗದ್ದು ಇವರು ಮಾಡುತ್ತಾರ?ಮೋದಿಯು ಇಂಡಿಯಾವನ್ನು ಸೂಪೆರ್‌ಪವರ್ ಘಟ್ಟಕ್ಕೆ ಕೊಂಡೊಯ್ಯುತ್ತಾರ? ಎನ್ನುವ ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು. ಆದರೆ ಅತ್ಯಂತ ಮುಖ್ಯವಾದ ಮತ್ತು ಸೂಕ್ಷ್ಮವಾದ ವಿಚಾರವೇನೆಂದರೆ ಪ್ರಜಾಪ್ರಭುತ್ವದ ಆಶಯಗಳಿಗೆ ಮೇಲಿನ ಪ್ರಶ್ನೆಗಳು ಸಂಪೂರ್ಣವಾಗಿ ವಿರೋಧಾತ್ಮಕವಾಗಿವೆ. ಆದರೆ ಈ ವಿರೋಧಾತ್ಮಕ ಮನಸ್ಥಿತಿಯಿಂದ ಹೊರಬರಲು ಅಸಮರ್ಥವಾಗಿರುವುದೇ ಇಂಡಿಯಾ ರಾಜಕೀಯದ ಒಂದು ದೊಡ್ಡ ಬಿಕ್ಕಟ್ಟು. ಪ್ರಜೆಗಳ ಹಕ್ಕು ಮತ್ತು ಶಕ್ತಿಯನ್ನು ವ್ಯವಸ್ಥಿತವಾಗಿ ನಾಶಪಡಿಸುತ್ತ ಅವರನ್ನು ಪ್ರಭುತ್ವಕ್ಕೆ, ಆಡಳಿತಗಾರರಿಗೆ ಶರಣಾಗಿಸಲಾಗುತ್ತಿದೆ. ಇಲ್ಲಿ ಮೋದಿಯು ತನಗೆ ಅಧಿಕಾರವನ್ನು ತಂದುಕೊಟ್ಟ ವ್ಯವಸ್ಥೆಯಿಂದಲೇ ಬೇರ್ಪಟ್ಟ ಒಂದು ನೀರ್ಗುಳ್ಳೆಯಂತೆ. ನಾವು ನಾಯಕನನ್ನು ಈ ರೀತಿಯಾಗಿ ಉದ್ಧಾರಕನೆಂದು ಪರಿಭಾವಿಸುವುದು ಸರಿಯೆ ಎನ್ನುವ ಪ್ರಶ್ನೆಗಳನ್ನು ಮತ್ತೆ ಮತ್ತೆ ಕೇಳುತ್ತಾ ಹೋದಂತೆ ಪಾರ್ಲಿಮೆಂಟರಿ ವ್ಯವಸ್ಥೆಯನ್ನೇ ತಿರಸ್ಕರಿಸುವ ಮತ್ತು ಪ್ರಧಾನ ಮಂತ್ರಿಯು ತನ್ನ ಸಹೋದ್ಯೋಗಿಗಳಿಗಿಂತ ಮೊದಲಿಗ ಎನ್ನುವ ಧೋರಣೆಯನ್ನು ನಾವು ಎದುರಿಸಬೇಕಾಗುತ್ತದೆ. modi_bjp_conclaveಪ್ರಧಾನ ಮಂತ್ರಿಯೊಬ್ಬರನ್ನು ಶಕ್ತಿಶಾಲಿ ಸರ್ವಜ್ಞನೆಂಬುವ ತರ್ಕಕ್ಕೆ ಬಲಿಯಾಗಿಸುವ ಕೈಮೀರಿದ ಕ್ಯಾಬಿನೆಟ್ ಅನ್ನು ನಾವು ಮತ್ತೆಲ್ಲಿ ಕಾಣಲು ಸಾಧ್ಯ? ಪ್ರಧಾನ ಮಂತ್ರಿ ಮೋದಿಯ ಎದುರು ಶಾಲಾ ಮಕ್ಕಳಂತೆ ಕೈಕಟ್ಟಿ ನಿಂತುಕೊಂಡ ಅವರ ಕ್ಯಾಬಿನೆಟ್ ಮಂತ್ರಿಗಳ ಪ್ರಾರಂಭದ ದುರದೃಷ್ಟಕರ ದಿನಗಳಿಂದ ಮೊದಲುಗೊಂಡು ವಿದೇಶಾಂಗ ಸಚಿವೆಯ ಎಲ್ಲಾ ಅಧಿಕಾರ ಮತ್ತು ಜವಬ್ದಾರಿಗಳನ್ನು ಕತ್ತರಿಸಿ ಅವರ ರೆಕ್ಕೆಗಳನ್ನೇ ತುಂಡರಿಸುವ ಅತಿಕ್ರೌರ್ಯದ ಅಧಿಕಾರದ ಇಂದಿನ ದಿನಗಳವರೆಗಿನ ಒಂದು ವರ್ಷದ ಆಡಳಿತ ಇಂಡಿಯಾದ ಜಾಗತಿಕ ಶಕ್ತಿಯನ್ನು ಕೀಳುದರ್ಜೆಗೆ ಇಳಿಸಿದೆ. ಹಳೆಯ ಯುಪಿಎ ಸರ್ಕಾರದಲ್ಲಿ ಅದರ ಪ್ರಧಾನಿ ಮನಮೋಹನ್ ಸಿಂಗ್ ಮಾತ್ರ ಮೌನಿಯಾಗಿದ್ದರೆ ಇಂದಿನ ಮೋದಿ ಸರ್ಕಾರದಲ್ಲಿ ಇಡೀ ಕ್ಯಾಬಿನೆಟ್ ಮೌನಿಯಾಗಿದೆ. ಈ ಮೌನಗೊಂಡ ಕ್ಯಾಬಿನೆಟ್ ದೇಶವನ್ನು ’ಮನ್ ಕಿ ಬಾತ್’ ಎನ್ನುವ ಆತ್ಮರತಿಯ ಮೂಲಕ ಗಣರಾಜ್ಯವನ್ನು ಕಟ್ಟಬಹುದೆಂದು ಅಹಂಕಾರದಿಂದ ವರ್ತಿಸುತ್ತಿದೆ. ೧೩೦ ಕೋಟಿ ಜನರ ಭವಿಷ್ಯವನ್ನು ಕೇವಲ ಒಂದು ವ್ಯಕ್ತಿಯ ಕೈಗೆ ಕೊಡಲಾಗುವುದಿಲ್ಲ” ಎಂದು ವಿವರಿಸುತ್ತಾರೆ. ( ದ ಹಿಂದೂ,೨೨,೨೩, ೨೦೧೫)

ಪ್ರಧಾನ ಮಂತ್ರಿ ಮೋದಿಯ ಒಂದು ವರ್ಷದ ಆಡಳಿತದ ಸಾಧನೆಯೆಂದರೆ ಅದು ಸ್ವತಃ ‘ಮೋದಿಯ ಪುನಃಸೃಷ್ಟಿ, ಶೋಧನೆ ಮತ್ತು ಮಾರಾಟ’ ಎಂದು ಸೋಷಿಯಾಲಜಿಸ್ಟ್ ಶಿವ ವಿಶ್ವನಾಥನ್ ಹೇಳಿದ್ದಾರೆ.

೫೬ ಇಂಚಿನ ಎದೆಯ ಸರ್ಕಾರ್ ಅವರ ಆಡಳಿತಕ್ಕೆ ಒಂದು ವರ್ಷ ತುಂಬಿದೆಯಂತೆ. ಅರುಣ್ ಜೇಟ್ಲಿ ಮನೆಯಲ್ಲಿ ದೇಶದ ಪ್ರಮುಖ ಪತ್ರಕರ್ತರು, ಸಂಪಾದಕರ ಜೊತೆ ಏರ್ಪಡಿಸಿದ್ದ ಮಧ್ಯರಾತ್ರಿಯ ಔತಣಕೂಟದಲ್ಲಿ ೫೬ ಇಂಚಿನ ಎದೆಯ ಸರ್ಕಾರ್ ಭಾಗವಹಿಸಿದ್ದರು. modi_ambani_tata_kamathಈ ಸರ್ಕಾರ್ ಅವರ ಋಣ ತೀರಿಸಲೋ ಎಂಬಂತೆ ಇಂಡಿಯಾದ ಮಾಧ್ಯಮಗಳು ಪುಂಖಾನುಪುಂಖವಾಗಿ ಸಮೀಕ್ಷೆಗಳು, ಚರ್ಚೆಗಳನ್ನು ಮಾಡುತ್ತಿವೆ. ದೇಶದ ಪ್ರತಿಯೊಂದು ಸ್ಟುಡಿಯೋಗಳಲ್ಲಿ ಬಿಜೆಪಿ ವಕ್ತಾರರು, ಕೇಂದ್ರ ಮಂತ್ರಿಗಳ ದಂಡೇ ನೆರೆದಿರುವಂತೆ ವ್ಯವಸ್ಥಿತವಾಗಿ ಆಯೋಜಿಸಲಾಗಿದೆ. ಗೋಬೆಲ್ಸ್ ತಂತ್ರವನ್ನು ಬಳಸಿಕೊಂಡು ಸುಳ್ಳುಗಳನ್ನು ದಿನವಿಡೀ ಪ್ರಚಾರ ಮಾಡಲಾಗುತ್ತಿದೆ. ಇದಕ್ಕೆ ಮಾಧ್ಯಮಗಳೂ ತಮ್ಮ ಶಕ್ತಿ ಮೀರಿ ಶ್ರಮಿಸುತ್ತಿವೆ. ಸುಳ್ಳುಗಳ ಭಾರವನ್ನು ಹೊತ್ತುಕೊಂಡ, ಅತಿರಂಜಿತ ಅಂಕಿಅಂಶಗಳನ್ನು ಉತ್ಪಾದಿಸಿ ಮಾಧ್ಯಮಗಳಲ್ಲಿ ಪ್ರಕಟಿಸಲಾಗುತ್ತಿದೆ. ೫೬ ಇಂಚಿನ ಎದೆಯ ಸರ್ಕಾರ್ ’ಖುಷ್ ಹೋನೇ ಕೆ ಲಿಯೆ’ ಸಂಘ ಪರಿವಾರ ಮತ್ತು ಬಹುಪಾಲು ಮಾಧ್ಯಮಗಳು ಹಗಲಿರುಳು ಶ್ರಮಪಡುತ್ತಿದ್ದಾರೆ. ಈ ೫೬ ಇಂಚಿನ ಎದೆಯ ಸರ್ಕಾರ್ ಅವರ ವರ್ಣರಂಜಿತ ಫೋಟೋಗಳು, ಅಸದೃಶ್ಯವಾದ ಡ್ರೆಸ್‌ಗಳು, ಫ್ಲೆಕ್ಸ್ ಬೋರ್ಡಗಳು ಕೇವಲ ಇಂಡಿಯಾದಲ್ಲಿ ಮಾತ್ರವಲ್ಲ, ವಿಶ್ವದಾದ್ಯಾಂತ ರಾರಾಜಿಸಲಿವೆ. ಆಕಾಶ ಮತ್ತು ಭೂಮಿಯನ್ನು ಒಳಗೊಂಡಂತೆ ಎಲ್ಲವೂ ಮೋದಿಯ ಆಡಳಿತ ಫಲವಾಗಿ ಸೃಷ್ಟಿಯಾಗಿವೆ ಎನ್ನುವ ಜಾಹೀರಾತುಗಳು ದೇಶದಾದ್ಯಾಂತ ಕಂಗೊಳಿಸಲಿವೆ

ಕಳೆದ ೬೫ ವರ್ಷಗಳಿಂದ ಬೆಸೆದುಕೊಂಡಿದ್ದ ಇಂಡಿಯಾದ ಗಣರಾಜ್ಯ ಪ್ರಜಾಪ್ರಭುತ್ವ ವ್ಯವಸ್ಥೆಯ ಎಲ್ಲಾ ಎಳೆಗಳನ್ನು, ಬಂಧಗಳನ್ನು ಕಳೆದ ಒಂದು ವರ್ಷದಲ್ಲಿ ನಾಶಗೊಳಿಸಿ, ಕ್ಯಾಬಿನೆಟ್ ಅರ್ಥಾತ್ ಕೇಂದ್ರ ಮಂತ್ರಿಮಂಡಲವನ್ನೇ ಅದೃಶ್ಯಗೊಳಿಸಿ ಅಧಿಕಾರವನ್ನು ತನ್ನ ಬಳಿ ಕೇಂದ್ರೀಕರಿಸಿಕೊಂಡ ಈ ಮೋದಿ ಅವರ ಸರ್ವಾಧಿಕಾರಿಯ ವ್ಯಕ್ತಿತ್ವವನ್ನು ’ಮನ್ ಕಿ ಬಾತ್’ ಎಂದು ವೈಭವೀಕರಿಸಿ ದೇಶದೆಲ್ಲಡೆ ಹಂಚಲಾಗುತ್ತಿದೆ. ಮೊಟ್ಟ ಮೊದಲು ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಭಾವೋದ್ರೇಕದಿಂದ ಭಾಷಣ ಮಾಡಿದ ಮೋದಿಯವರ ನಂತರದ ಒಂದು ವರ್ಷದ ಆಡಳಿತದಲ್ಲಿ ರೈತರು ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟು ಅವರ ಭವಿಷ್ಯವನ್ನು ಮಾರಕ ಭೂ ಸ್ವಾಧೀನ ಮಸೂದೆ ೨೦೧೪ರಲ್ಲ್ಲಿ ಮಣ್ಣು ಮಾಡಲಾಗಿದೆ. ambani-modiಮೋದಿಯ ಕಾರ್ಪೋರೇಟ್ ಪರವಾದ ಆರ್ಥಿಕ ನೀತಿಗಳ ಅನುಸಾರ ಕೃಷಿ ಸಾಗುವಳಿಯೇ ಹಂತಹಂತವಾಗಿ ಕಣ್ಮರೆಯಾಗಲಿದೆ. ದೇಶದ ತೆರಿಗೆದಾರರ ಹಣವನ್ನು ಬಳಸಿಕೊಂಡು (ಕಳೆದ ೯ ತಿಂಗಳ ಪ್ರವಾಸದ ಖರ್ಚು ೩೧೭ ಕೋಟಿ) ದೂರ ಜಿಗಿತದ ಹರ್ಡಲ್ಸ್ ಓಟಗಾರನ ಹಾಗೆ ಒಂದು ವರ್ಷದಲ್ಲಿ ೧೮ ವಿದೇಶಗಳನ್ನು ಸುತ್ತಿದ ಈ ಮೋದಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಮಹಾರಾಷ್ಟ್ರ, ಪಂಜಾಬ್, ತೆಲಂಗಾಣ ರಾಜ್ಯಗಳ ಕಡೆ ಕಾಲಿಟ್ಟಿಲ್ಲ. ಉದ್ಯೋಗ ಖಾತ್ರಿ ಯೋಜನೆಯ ನರೇಗಾದಿಂದ ಮೊದಲುಗೊಂಡು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಒಳಗೊಂಡಂತೆ ಅನೇಕ ಜನಕಲ್ಯಾಣ ಯೋಜನೆಗಳಿಗೆ (Social Welfare Schemes) ಸಂಬಂದಿಸಿದ ಅನುದಾನವನ್ನು ಕ್ರಮೇಣ ಕಡಿತಗೊಳಿಸಿರುವುದು ಮೋದಿ ಸರ್ಕಾರದ ಮತ್ತೊಂದು ಕೊಡುಗೆ. ಬಂಡವಾಳಶಾಹಿಗಳಿಗಾಗಿಯೇ ಸರ್ಕಾರವನ್ನು ಸಜ್ಜುಗೊಳಿಸಿರುವ ಮುಕ್ತ ಮಾರುಕಟ್ಟೆಯ, ನವ ಉದಾರೀಕರಣದ ವ್ಯಾಮೋಹಿಯಾದ ಮೋದಿ ಯಾವುದೇ ಮಾದರಿಯ ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಮಾನ್ಯ ಮಾಡುವುದಿಲ್ಲ. ಎಲ್ಲಾ ಬಡಜನರ ಪರವಾದ ಯೋಜನೆಗಳು ಮುಂದಿನ ನಾಲ್ಕು ವರ್ಷಗಳಲ್ಲಿ ಹಂತಹಂತವಾಗಿ ರದ್ದಾದರೆ ಆಶ್ಚರ್ಯವಿಲ್ಲ.

ವಿದೇಶದಿಂದ ಕಪ್ಪುಹಣವನ್ನು ಮರಳಿ ತರುವ, ತಪ್ಪಿತಸ್ಥರನ್ನು ಶಿಕ್ಷಿಸುವ ಛಾತಿ ಬೇಕೆಂದರೆ ನನ್ನಂತೆ ೫೬ ಇಂಚಿನ ಎದೆ ಬೇಕು ಎಂದು ಚುನಾವಣಾ ಭಾಷಣದಲ್ಲಿ ಹೇಳಿದ್ದ ಈ ಮೋದಿ ಕನಿಷ್ಠ ಒಂದಂಕಿಯ ಮೊತ್ತವನ್ನೂ ಭಾರತೀಯರಿಗೆ ತಂದು ತೋರಿಸದೆ, ಈ ಕಪ್ಪು ಹಣವನ್ನು ಮರಳಿ ತರುವ ಆಶಯಗಳನ್ನು “Money Laundering Bill” ನಲ್ಲಿ ಮಣ್ಣು ಮಾಡಲಾಗಿದೆ. ಸದರಿ ಮೋದಿ ಸರ್ಕಾರದ ಯಶಸ್ವೀ ಮಸೂದೆ ಎಂದೇ ಬಣ್ಣಿಸಲಾಗುವ ಕಲ್ಲಿದ್ದಲು ಮತ್ತು ಸ್ಪೆಕ್ಟ್ರಮ್ ಹರಾಜು ನೀತಿಗಳು ಮುಂದಿನ ದಿನಗಳಲ್ಲಿ ನೇರವಾಗಿಯೇ ಕಾರ್ಪೋರೇಟ್ ಕುಟುಂಬಗಳಿಗೆ Autonomous ನ ಮುಕ್ತ ಸ್ವಾತಂತ್ರವನ್ನು ತಂದುಕೊಡುತ್ತವೆ. ಒಮ್ಮೆ ಈ ಕಾರ್ಪೋರೇಟ್ ಶಕ್ತಿಗಳಿಗೆ ಯಾವುದೇ ಕಾನೂನಿನ ಕಟ್ಟುಪಾಡುಗಳಿಲ್ಲದ ಮುಕ್ತ ಸ್ವಾತಂತ್ರ ದೊರೆತರೆ ಕಲ್ಲಿದ್ದಲಿನ, ಸೇವಾ ವಲಯದ, ಸರಕುಗಳ ಬೆಲೆಗಳು ಊಹೆಗೆ ನಿಲುಕದಷ್ಟು ಏರಿಕೆಯಾಗುತ್ತವೆ. ಜನಸಾಮಾನ್ಯರ ಬದುಕು ದುರ್ಭರಗೊಳ್ಳತೊಡಗುತ್ತದೆ. ಅವರು ಅಂಚಿಗೆ ತಳ್ಳಲ್ಪಡುತ್ತಾರೆ. ಇದು ಈ ಮೋದಿಯ ಒಂದು ವರ್ಷದ ಆಡಳಿತದ ಫಲ.

ಸ್ವಾತಂತ್ರದ ನಂತರದ ಮೊದಲ ಸಂಸತ್ತಿನ ಅಧಿವೇಶನದಲ್ಲಿ (೧೯೪೯-೫೦) ಮಕ್ಕಳ ಶಿಕ್ಷಣ ಹಕ್ಕಿನ ಕುರಿತಾಗಿ ಚರ್ಚೆchild-labour ನಡೆದಾಗ ಅನೇಕ ಸಂಸದರು ಮಕ್ಕಳೆಲ್ಲಾ ಶಾಲೆಗೆ ಸೇರಿಕೊಂಡರೆ ನಮ್ಮ ಹೊಲ ಗದ್ದೆಗಳಲ್ಲಿ ಕೂಲಿ ಮಾಡುವವರು ಯಾರು ಎಂದು ಪ್ರಶ್ನಿಸಿದ್ದರು. ಅಗ ಇದನ್ನು ಬಹುಪಾಲು ಸಂಸದರು ವಿರೋಧಿಸಿ ೧೧ ವಯಸ್ಸಿನವರೆಗೂ ಶಿಕ್ಷಣವನ್ನು ಕಡ್ಡಾಯ ಮಾಡಬೇಕು ಎಂದು ಗೊತ್ತುವಳಿ ಮಂಡಿಸಿದರು. ಇದನ್ನು ಮಾರ್ಪಡಿಸಿದ ಅಂಬೇಡ್ಕರ್ ಅವರು ಮಕ್ಕಳು ಬಾಲಕಾರ್ಮಿಕರಾಗುವುದೇ ೧೧ನೇ ವಯಸ್ಸಿನ ಸಂದರ್ಭದಲ್ಲಿ. ಬದಲಿಗೆ ೧೪ನೇ ವಯಸ್ಸಿನವರೆಗೂ ಮಕ್ಕಳ ಶಿಕ್ಷಣ ಕಡ್ಡಾಯ ಮತ್ತು ಹಕ್ಕು ಎಂದು ಪ್ರತಿಪಾದಿಸಿದರು. ನಂತರ ಅದು ಅನುಮೋದನೆಗೊಂಡು ೧೪ನೇ ವಯಸ್ಸಿನವರೆಗೂ ಶಿಕ್ಷಣ ಕಡ್ಡಾಯ ಮತ್ತು ಮಕ್ಕಳ ಹಕ್ಕಾಗಿ ಪರಿಗಣಿತವಾಯಿತು. ಆದರೆ ೧೩ ಮೇ, ೨೦೧೫ ರಂದು ಪ್ರಧಾನ ಮಂತ್ರಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಬಾಲ ಕಾರ್ಮಿಕ ಪದ್ಧತಿ (ನಿಷೇಧ ಮತ್ತು ನಿಯಂತ್ರಣ) ೨೦೧೨ರ ಮಸೂದೆಗೆ ಮತ್ತಷ್ಟು ತಿದ್ದುಪಡಿಗಳನ್ನು ಅನುಮೋದಿಸಿದೆ. ಈ ಮೊದಲಿನ ಬಾಲ ಕಾರ್ಮಿಕ ಪದ್ಧತಿಗೆ ಇರುವ ನಿಷೇಧಕ್ಕೆ ತಿದ್ದುಪಡಿಗಳನ್ನು ಮಾಡಿ ಕೌಟುಂಬಿಕ ಕೆಲಸಗಳು, ಕೌಟುಂಬಿಕ ಉದ್ಯಮದಲ್ಲಿ, ಅಪಾಯಕಾರಿಯಲ್ಲದ ಹೊರಗುತ್ತಿಗೆ ಕೆಲಸಗಳಲ್ಲಿ ಬಾಲಕರನ್ನು ಕಾರ್ಮಿಕರಾಗಿ ಬಳಸಿಕೊಳ್ಳಬಹುದೆಂದು ವಿವರಿಸಿದೆ. ಇದಕ್ಕೆ ಈ ಮೋದಿ ಸಚಿವ ಸಂಪುಟ ಸಭೆ ಕೊಟ್ಟ ವಿವರಣೆ ’ಮಕ್ಕಳ ಕೌಶಲ್ಯವನ್ನು ಹೆಚ್ಚಿಸುವುದು!’ ಅಂದರೆ ಈ ಸದರಿ ಮೋದಿ ಸರ್ಕಾರಕ್ಕೆ ಮಕ್ಕಳಿಗೆ ಶಿಕ್ಷಣದ ಅವಶ್ಯಕತೆಗಿಂತಲೂ ಕೌಟುಂಬಿಕ, ಕುಶಲ ಕೆಲಸಗಳಲ್ಲಿ ಕೌಶಲ್ಯವನ್ನು ಹೆಚ್ಚಿಸುವುದು ಪ್ರಮುಖವಾಗಿದೆ. ಅಂದರೆ ಭಾರತದಂತಹ ಸಂಕೀರ್ಣ ಸಾಮಾಜಿಕ ವ್ಯವಸ್ಥೆಯಲ್ಲಿನ ಕೌಟುಂಬಿಕದ ಹಿನ್ನೆಲೆಯಲ್ಲಿ ಬಾಲಕಿಯರಿಗೆ ದಿನವಿಡೀ ಕೆಲಸಕ್ಕೆ ಕೊರತೆ ಇರುವುದಿಲ್ಲ. ಈ ಮೋದಿ ಸರ್ಕಾರದ ಮಸೂದೆ ಜಾರಿಗೊಂಡರೆ ಮುಖ್ಯವಾಗಿ ಬಾಲಕಿಯರು child-marriage-indiaಕೌಟುಂಬಿಕ ಕೆಲಸಗಳಿಗೆ ಸೀಮಿತಗೊಂಡು ಅವರ ಶಿಕ್ಷಣ ಮೊಟಕುಗೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಇದು ಗ್ರಾಮೀಣ ಭಾಗದ ಬಾಲಕರಿಗೂ ಅನ್ವಯಿಸುತ್ತದೆ. ಇಂಡಿಯಾದಂತಹ ಸಾಮಾಜಿಕ-ಆರ್ಥಿಕ ಸಂರಚನೆಯೇ ದುರ್ಬಲವಾಗಿರುವ ದೇಶದಲ್ಲಿ ಶಾಲೆಯಿಂದ ಹೊರಗುಳಿಯುವ ಮಕ್ಕಳ ಪ್ರಮಾಣವನ್ನು ಹೆಚ್ಚಾಗುತ್ತದೆ. ಇದು ಭಾರತದ ಮಕ್ಕಳಿಗೆ ತನ್ನ ಒಂದು ವರ್ಷದ ಆಡಳಿತ ಪೂರೈಸಿದ ಮೋದಿ ಸರ್ಕಾರದ ಪ್ರತಿಗಾಮಿ ನೀತಿಯ ಕೊಡುಗೆ

ಬಹುಸಂಖ್ಯಾತರ ಪ್ರಜಾಪ್ರಭುತ್ವದಲ್ಲಿ ಬಹುಸಂಖ್ಯಾತ ತತ್ವದ (Majoritarianism) ಪರವಾದ ಗುಣಗಳನ್ನು ಗೌಣಗೊಳಿಸಿಕೊಂಡು ಬಹುತ್ವದ, ಎಲ್ಲರನ್ನೂ ಒಳಗೊಳ್ಳುವಿಕೆಯ ಸಿದ್ಧಾಂತವನ್ನು ರೂಪಿಸಬೇಕಾದ ಅಗತ್ಯವಿರುತ್ತದೆ. ಆದರೆ ಮೋದಿ ಸ್ವತಃ ಒಬ್ಬ Authoritarian ವ್ಯಕ್ತಿತ್ವದ, Majoritarianism ತತ್ವದ ಪರವಾಗಿ ಅಪಾರವಾದ ಒಲವಿರುವ, ತನ್ನನ್ನು ಹಿಂದೂ ರಾಷ್ಟ್ರೀಯವಾದಿ ಎಂದು ಬಣ್ಣಿಸಿಕೊಂಡ ಪ್ರಧಾನಿ. ಆರೆಸ್ಸಸ್‌ನ ಕೇಂದ್ರ ಕಛೇರಿಯಲ್ಲಿ ರಾಜಕೀಯ ಫಿಲಾಸಫಿಯನ್ನು ನಿರ್ಧರಿಸುವ ಅಧಿಕಾರವನ್ನು ರೂಪಿಸಲಾಗಿದೆ. ಇದಕ್ಕೆ ಮೋದಿಯವರ ಅನುಮೋದನೆ ಇದೆ. ಆರೆಸ್ಸಸ್ ಹೆಡ್ ಕ್ವಾಟ್ರಸ್‌ನಲ್ಲಿ ರಾಜಕೀಯ, ಸಾಮಾಜಿಕ ತತ್ವ ಸಿದ್ದಾಂತಗಳು ರೆಕ್ಕೆ ಪಡೆದುಕೊಳ್ಳತೊಡಗಿದರೆ ಅಲ್ಲಿಗೆ ಈ ದೇಶದ ಜನರ ಸೆಕ್ಯುಲರಿಸಂ ಮತ್ತು ಸಾಮಾಜಿಕ ನ್ಯಾಯದ ಎಲ್ಲಾ ಆಶಯಗಳು ಮುಣ್ಣುಗೂಡಿದಂತೆ. ಕಳೆದ ಒಂದು ವರ್ಷದಲ್ಲಿ ಅಲ್ಪಸಂಖ್ಯಾತರ ದನಿಯನ್ನೇ ಒತ್ತಿ ಹಿಡಿಯಲಾಗಿದೆ. ಸಂಘ ಪರಿವಾರದ ಸದಸ್ಯರು, ಮೋದಿ ಮಂತ್ರಿಮಂಡಲದ ಮಂತ್ರಿಗಳು ಅಲ್ಪಸಂಖ್ಯಾತರ ವಿರುದ್ಧ ಕಳೆದ ವರ್ಷವಿಡೀ ಪ್ರಚೋದನಾತ್ಮಕವಾಗಿ ಹೇಳಿಕೆಗಳನ್ನು ಕೊಡುತ್ತ,ಬೆದರಿಸುತ್ತಾ ಅವರಿಗೆ ’ಹಿಂದೂ’ಸ್ತಾನದ ಮಹತ್ವವನ್ನು ಪ್ರತಿ ಕ್ಷಣಕ್ಕೂ ಮನವರಿಕೆ ಮಾಡಿಕೊಡಲಾಗುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ ಮೋದಿ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಸಂದರ್ಭದ ವಿಜಯೋತ್ಸವಕ್ಕಾಗಿ ಸಂಘ ಪರಿವಾರದ ಕಾರ್ಯಕರ್ತರು ದೆಹಲಿಯ ರಸ್ತೆಗಳಿಗೆ ಮುಸ್ಲಿಂ ರಾಜರು, ನಾಯಕರುಗಳ ಹೆಸರಿರುವ ಸಫ್ದರ್ ಹಶ್ಮಿ ಮಾರ್ಗ, ಫಿರೋಜ್ ಶಾ ರಸ್ತೆ, ಔರಂಗಜೇಬ್ ರಸ್ತೆ, ಅಕ್ಬರ್ ರಸ್ತೆಗಳ ನಾಮಫಲಕಗಳಿಗೆ ಕಪ್ಪು ಮಸಿಯನ್ನು ಬಳಿದಿದ್ದಾರೆ ಮತ್ತು ಇಂಡಿಯಾದಲ್ಲಿ ಇಸ್ಲಾಮೀಕರಣವನ್ನು ಸಹಿಸುವುದಿಲ್ಲ ಎನ್ನುವ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ

ಕಳೆದ ಒಂದು ವರ್ಷದಲ್ಲಿ ಗಾಂಧಿ ಹಂತಕ ನಾತುರಾಮ್ ಗೋಡ್ಸೆಯ ವೈಭವೀಕರಣ, ಕೇಂದ್ರ ಶಿಕ್ಷಣ ಇಲಾಖೆಯ ಕೇಸರೀಕರಣ, narender_modi_rssಚರ್ಚುಗಳ ಮೇಲೆ ದಾಳಿ, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರನ್ನು ಮರಳಿ ಹಿಂದೂ ಧರ್ಮಕ್ಕೆ ಮತಾಂತರಗೊಳಿಸುವ ‘ಘರ್ ವಾಪಸಿ’ ಎನ್ನುವ ಮೂಲಭೂತವಾದಿ ಕಾರ್ಯಚಟುವಟಿಕೆಗಳು, ಲವ್ ಜಿಹಾದಿಯ ಹೆಸರಿನಲ್ಲಿ ಹಿಂದೂ ಮಹಿಳೆಯರ ಮೇಲೆ ದೌರ್ಜನ್ಯ (ಮುಸ್ಲಿಂರನ್ನು ಮದುವೆಯಾಗುತ್ತಾರೆ ಎನ್ನುವ ಕಾರಣಕ್ಕೆ) ಗಳಂತಹ ಫ್ಯಾಸಿಸ್ಟ್ ಪ್ರವೃತ್ತಿಯ ವರ್ತನೆಗಳು, ಹಲ್ಲೆಗಳಿಂದಾಗಿ ಇಂಡಿಯಾದ ಸಾರ್ವಜನಿಕ ಬದುಕಿನ ಜೀವಪರವಾದ ಎಲ್ಲಾ ಸೆಲೆಗಳು ಮತ್ತು ಬಹುಸಂಸ್ಕೃತಿಯ ಜೀವನ ಶೈಲಿ ನಾಶಗೊಂಡಿದೆ.

ಕಡೆಗೆ ಕಳೆದ ಒಂದು ವರ್ಷದ ಹಿಂದೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸದರಿ ನರೇಂದ್ರ ಮೋದಿಯ ಚುನಾವಣಾ ಪ್ರಚಾರಕ್ಕೆ ದಾಖಲೆ ಹಣವನ್ನು ಖರ್ಚು ಮಾಡಲಾಗಿದೆ. ಇದರ ಸಂಪೂರ್ಣ ವೆಚ್ಚವನ್ನು ಇಂಡಿಯಾದ ಪ್ರಮುಖ ಕಾರ್ಪೋರೇಟ್ ಕುಟುಂಬಗಳು ವಹಿಸಿಕೊಂಡಿದ್ದವು. ಈ ಕಾರ್ಪೋರೇಟ್ ಹಣದಿಂದ ಚುನಾವಣೆಯನ್ನು ಜಯಿಸಿದ ಮೋದಿ ಇಂದು ಅದರ ಮೊತ್ತವನ್ನು ಬಡ್ಡಿ ಸಮೇತ ಪಾವತಿಸಬೇಕಾದಂತಹ ಪರಿಸ್ಥಿತಿಯಲ್ಲಿದ್ದಾರೆ. ಈ ಕಾರ್ಪೋರೇಟ್ ಕುಟುಂಬಗಳಿಗೆ ಋಣ ತೀರಿಸಲು “ಭೂಸ್ವಾಧೀನ ಮಸೂದೆ ೨೦೧೪” ನ್ನು ಹಠದಿಂದ ಸಂಸತ್ತಿನಲ್ಲಿ ಅಥವಾ ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಲು ಮೋದಿ ಪಣತೊಟ್ಟಿದ್ದಾರೆ. ಮತ್ತೊಂದೆಡೆ ಆರೆಸ್ಸಸ್ ತನ್ನ ಹಿಂದೂ ರಾಷ್ಟ್ರೀಯತೆಯ ತತ್ವಗಳನ್ನು ಜಾರಿಗೊಳಿಸುವ ತವಕದಲ್ಲಿದೆ. ಈ ಧಾರ್ಮಿಕ ಮೂಲಭೂತವಾದ ಮತ್ತು ಕಾರ್ಪೋರೇಟ್ ಶಕ್ತಿಗಳ ದೌರ್ಜನ್ಯದ ನಡುವೆ ಇಂದು ಇಂಡಿಯಾದ ಜನ ಸಾಮಾನ್ಯರು ಧ್ವಂಸವಾಗುತ್ತಿದ್ದಾರೆ. ಇದು ಯಾವ ಬಗೆಯ “ಅಚ್ಚೇ ದಿನ್”?