– ನವೀನ್ ಸೂರಿಂಜೆ
ದನ ಸಾಗಾಟ ಮಾಡುತ್ತಿದ್ದ ಎಂಬ ಕಾರಣಕ್ಕಾಗಿ ನಕ್ಸಲ್ ನೆಪದಲ್ಲಿ ಪೊಲೀಸರು ಅಮಾಯಕ ಮುಸ್ಲಿಂ ಯುವಕನನ್ನು ಚಿಕ್ಕಮಗಳೂರಿನಲ್ಲಿ ಗುಂಡಿಕ್ಕಿ ಕೊಂದಿದ್ದಾರೆ. ಭಜರಂಗದಳ ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆಯಂತೆ ಈ ಘಟನೆ ಕಂಡು ಬರುತ್ತಿದ್ದು ಸಮಗ್ರ ತನಿಖೆಯಾಗಬೇಕಿದೆ. ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಭಜರಂಗದಳದ ಕೆಲಸವನ್ನು ಪೊಲೀಸರೇ ನಿರ್ವಹಿಸುತ್ತಿದ್ದು, ಈ ರೀತಿಯ ಹಲವಾರು ಘಟನೆಗಳ ಕುರಿತಂತೆ ಅಮೂಲಾಗ್ರವಾದ ತನಿಖೆ ಆಗಬೇಕಿದೆ. ಆದರೆ ತನಿಖೆ ನಡೆಸಲು ಆಗ್ರಹಿಸಬೇಕಾದ ನಮ್ಮ ”ಸಾಕ್ಷಿ ಪ್ರಜ್ಞೆ”ಗಳು ಕಾಂಗ್ರೆಸ್ ಸರಕಾರಕ್ಕೆ ಬಹುಪರಾಕ್ ಕೂಗುವಲ್ಲಿ ನಿರತವಾಗಿವೆ.
ದನವನ್ನು ಅಧಿಕೃತವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆಗಟ್ಟಿದ ಹಿಂದುತ್ವವಾದಿ ಪೊಲೀಸರು ಕಬೀರ್ ನನ್ನು ಕೊಲೆ ಮಾಡಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ. ಗುಂಡೇಟಿಗೆ ಒಳಗಾಗಿ ಕೊಲೆಯಾದ ಕಬೀರ್ ನ ಕುಟುಂಬ ವಂಶಪರಂಪರ್ಯವಾಗಿ ದನದ ವ್ಯಾಪಾರವನ್ನು ನಡೆಸುತ್ತಿದೆ. ಇವರ ಮೇಲೆ ಈವರೆಗೆ ದನ ಕಳ್ಳತನದ ಆರೋಪವಿಲ್ಲ. ಮೂಲತಃ ಜೋಕಟ್ಟೆಯ ಕಬೀರ್ ಕುಟುಂಬ ಇತ್ತೀಚೆಗಷ್ಟೇ ಸುರತ್ಕಲ್ ಸಮೀಪದ ಕೃಷ್ಣಾಪುರಕ್ಕೆ ತಮ್ಮ ನಿವಾಸವನ್ನು ಸ್ಥಳಾಂತರಿಸಿತ್ತು. ಅಧಿಕೃತ ದನದ ವ್ಯಾಪಾರವನ್ನು ಮಾಡುತ್ತಿದ್ದ ಕಬೀರ್ ಚುನಾವಣೆಯ ನೀತಿ ಸಂಹಿತೆ ಘೋಷಣೆಯ ನಂತರ ದನದ ವ್ಯಾಪಾರಕ್ಕೆ ಹೋಗಿರಲಿಲ್ಲ. ಅದಕ್ಕೆ ಕಾರಣವೂ ಇದೆ. ಅಧಿಕೃತ ದನದ ವ್ಯಾಪಾರವಾದರೂ ಕೂಡಾ ಅಲ್ಲಲ್ಲಿ ಚೆಕ್ಕಿಂಗ್ ಮಾಡುವ ಪೊಲೀಸರಿಗೆ ಮಾಮೂಲು ಕೊಟ್ಟು ಲಾಭವೇನೂ ಉಳಿಯುವುದಿಲ್ಲ ಎಂಬ ಕಾರಣಕ್ಕೆ ದನದ ವ್ಯಾಪಾರಕ್ಕೆ ಹೋಗಿರಲಿಲ್ಲ. ನಿನ್ನೆ ಸಂಜೆಯವರೆಗೂ ಕೃಷ್ಣಾಪುರದಲ್ಲಿ ಕ್ರಿಕೆಟ್ ಆಡಿಕೊಂಡಿದ್ದ ಕಬೀರ್ ನಿನ್ನೆ ರಾತ್ರಿ ವ್ಯಾಪಾರಕ್ಕೆ ತೆರಳಿದ್ದ.
ತೀರ್ಥಹಳ್ಳಿಯಲ್ಲಿ ದನ ಖರೀದಿ ಮಾಡಿ, ಅಲ್ಲಿಂದ ಶ್ರಂಗೇರಿಗೆ ಬಂದ ಕಬೀರ್ ಇದ್ದಂತಹ ವ್ಯಾಪಾರಿ ತಂಡ ಶ್ರಂಗೇರಿಯಲ್ಲೂ ದನ ಖರೀದಿ ಮಾಡಿದೆ. ತೀರ್ಥ ಹಳ್ಳಿ ಚೆಕ್ ಪೋಸ್ಟ್ ನಲ್ಲಿ ಪೊಲೀಸರಿಗೆ ಮಾಮೂಲು ನೀಡಿ ಚೀಟಿಯೊಂದನ್ನು ತೋರಿಸಿ ಶ್ರಂಗೇರಿಗೆ ಬಂದಿದ್ದಾರೆ. ಶ್ರಂಗೇರಿಯಲ್ಲೂ ಪೊಲೀಸರಿಗೆ ಮಾಮೂಲು ನೀಡಿ ಖರೀದಿಯ ಚೀಟಿ ತೋರಿಸಿ ಕಾರ್ಕಳ ಮಾರ್ಗವಾಗಿ ಬರುತ್ತಿದ್ದರು. ಆ ಸಂಧರ್ಭದಲ್ಲಿ ಮಾರ್ಗ ಮಧ್ಯೆ ಎಎನ್ಎಫ್ ಪೊಲೀಸರು ವಾಹನ ನಿಲ್ಲಿಸಿದ್ದಾರೆ. ವಾಹನ ನಿಲ್ಲಿಸಿದ ಕಬೀರ್ ತಂಡ ಎಎನ್ಎಫ್ ಪೊಲೀಸರಿಗೆ ಮಾಮೂಲು ನೀಡಲು ಇಳಿದಿದ್ದಾರೆ. ವಾಹನದಲ್ಲಿ ದನ ಇರುವುದನ್ನು ಗುರುತಿಸಿದ ಪೊಲೀಸನೊಬ್ಬ ಹಿಂಬದಿಯಲ್ಲಿ ಕುಳಿತಿದ್ದ ಕಬೀರನನ್ನು ಇಳಿಯುವಂತೆ ಸೂಚಿಸಿದ್ದಾನೆ. ಕಬೀರ ವಾಹನದಿಂದ ಇಳಿದ ತಕ್ಷಣ ಗುಂಡಿನ ಶಬ್ದ ಕೇಳಿದೆ. ಗುಂಡಿನ ಶಬ್ದ ಕೇಳಿ ಮೂವರು ಪರಾರಿಯಾಗಿದ್ದಾರೆ. ಒಬ್ಬ ಪೊಲೀಸ್ ವಶವಾಗಿದ್ದಾನೆ. ಕಬೀರ ಶವವಾಗಿದ್ದಾನೆ
ಭಜರಂಗದಳ-ಪೊಲೀಸ್ ಜಂಟಿ ಕಾರ್ಯಾಚರಣೆ ?
ಈ ಗುಂಡು ಹಾರಾಟ ಮತ್ತು ಕಬೀರ್ ಸಾವಿನ ಹಿಂದೆ ಹಿಂದುತ್ವವಾದಿ ಸಂಘಟನೆಗಳು ಮತ್ತು ಪೊಲೀಸರ ನಂಟಿನ ವಾಸನೆ ಬರುತ್ತಿದೆ. ಎಎನ್ಎಫ್ ಸಿಬ್ಬಂದಿಗಳು ವಾಹನ ನಿಲ್ಲಿಸಲು ಹೇಳಿದಾಗ ವಾಹನ ನಿಲ್ಲಿಸಿಲ್ಲ ಎಂಬ ವಾದ ಪೊಲೀಸರದ್ದು. ಮೂವರು ತಪ್ಪಿಸಿಕೊಂಡಿದ್ದು ವಾಹನ ನಿಲ್ಲಿಸಿದ್ದರಿಂದಲೇ ಸಾಧ್ಯವಾಗಿದೆ. ವಾಹನ ನಿಂತ ನಂತರವೂ ಗುಂಡು ಹಾರಿಸುವ ಅಗತ್ಯ ಇರಲಿಲ್ಲ. ಪರಾರಿಯಾಗುತ್ತಿದ್ದ ಆರೋಪಿಗಳ ಬಳಿ ಬಂದೂಕುಗಳು ಕಂಡು ಬಂದಲ್ಲಿ ಗುಂಡು ಹಾರಿಸಿದ್ದನ್ನು ಸಮರ್ಥಿಸಬಹುದಿತ್ತು. ಆದರೆ ಇಂತಹ ಯಾವ ಸಮರ್ಥನೆಗಳಿಗೂ ಇಲ್ಲಿ ಅವಕಾಶವಿಲ್ಲ. ಪೊಲೀಸರು ತಪ್ಪು ಕಲ್ಪನೆಗೆ ಒಳಗಾಗಿ ಶೂಟ್ ಮಾಡಿದರು ಎಂದಿಟ್ಟುಕೊಂಡರೂ ನಂತರ ನಡೆದ ವಿದ್ಯಾಮಾನಗಳು ತೀರಾ ಅಮಾನವೀಯವಾದುದ್ದು.
ಮಾಡದ ತಪ್ಪಿಗೆ ಸಾವನ್ನಪ್ಪಿದ ಹರೆಯದ ಯುವಕ ಕಬೀರ್ ನ ಸಾವಿನಿಂದ ಕಂಗಟ್ಟ ಕುಟುಂಬಕ್ಕೆ ಅವನ ಶವವನ್ನು ಕೊಂಡೊಯ್ಯಲು ಭರಂಗದಳದವರು ಅಡ್ಡಿಪಡಿಸಿದರು. ಕನಿಷ್ಠ ಶವ ಕೊಂಡೊಯ್ಯಲು ಬಂದ ದುಃಖತಪ್ತ ಕಟುಂಬದವರು ಎನ್ನುವ ಕನಿಕರವೂ ಇಲ್ಲದೆ ಶ್ರಂಗೇರಿ ಶವಾಗಾರದಲ್ಲಿರುವ ಶವವನ್ನು ಕೊಂಡೊಯ್ಯಲು ಮಂಗಳೂರಿನಿಂದ ಹೊರಟ ಹೆತ್ತವರ ವಾಹನವನ್ನು ಪುಡಿ ಮಾಡಲಾಯಿತು. ಇವೆಲ್ಲವನ್ನೂ ನೋಡಿದಾಗ ಭಜರಂಗದಳದ ಅಜೆಂಡಾದ ಭಾಗವಾಗಿಯೇ ಶೂಟೌಟ್ ನಡೆದಿರುವಂತೆ ಕಾಣುತ್ತಿದೆ.
ಹೆಚ್ಚುತ್ತಿರುವ ಮುಸ್ಲಿಂ-ದಲಿತ-ಮಹಿಳೆಯರ ಮೇಲಿನ ದಾಳಿ
ಕಾಂಗ್ರೆಸ್ ಸರಕಾರ ಬಂದ ನಂತರ ಮುಸ್ಲೀಮರು, ದಲಿತರು ಮತ್ತು ಮಹಿಳೆಯರ ಮೇಲೆ ದಾಳಿಗಳು ಹೆಚ್ಚಾಗಿವೆ. ಅಂಕಿ ಅಂಶಗಳನ್ನು ಗಮನಿಸಿದರೆ ಬಿಜೆಪಿ ಸರಕಾರ ಅಸ್ತಿತ್ವದಲ್ಲಿ ಇದ್ದಾಗ ನಡೆದ ನೈತಿಕ ಪೊಲೀಸ್ ಗಿರಿಗಿಂತಲೂ ಅಧಿಕ ನೈತಿಕ ಪೊಲೀಸ್ ಗಿರಿಗಳು ಕಳೆದ ಒಂದು ವರ್ಷದಲ್ಲಿ ನಡೆದಿವೆ. ಅಲ್ಪಂಖ್ಯಾತರ ಮೇಲೆ ದಾಳಿಗಳು ನಡೆದಿವೆ. ಇಷ್ಟೆಲ್ಲಾ ಆದರೂ ಯಾವೊಬ್ಬ ಕಾಂಗ್ರೆಸ್ ಜನಪ್ರತಿನಿಧಿಯೂ ದನಿಯೆತ್ತುತ್ತಿಲ್ಲ. ಕೇಳಿದರೆ “ಕಾನೂನು ಅದರ ಕ್ರಮ ಕೈಗೊಳ್ಳುತ್ತದೆ. ನಾವು ಅದರಲ್ಲಿ ಕೈ ಹಾಕುವುದಿಲ್ಲ” ಎನ್ನುತ್ತಾರೆ. ಈ ಮಾತು ಕೇಳಲು ಅಂದವಾಗಿದ್ದರೂ ಅಮಾನವೀಯವಾಗಿದೆ. ಈ ರೀತಿಯ ದೌರ್ಜನ್ಯ ಮತ್ತು ಸಂವೇದನಾ ರಹಿತ ಜನಪ್ರತಿನಿಧಿಗಳನ್ನು ವಿರೋಧಿಸಿಯೇ ಜನರು ಕಾಂಗ್ರೆಸ್ ಗೆ ಮತ ಹಾಕಿದ್ದು ಎಂಬುದನ್ನು ಸರಕಾರ ಮರೆತಂತಿದೆ.
ಒಂದೆಡೆ ಹೆಚ್ಚುತ್ತಿರುವ ನೈತಿಕ ಪೊಲೀಸ್ ಗಿರಿ ಮತ್ತೊಂದೆಡೆ ಭಜರಂಗಿಗಳ ಕೆಲಸವನ್ನು ಮಾಡುತ್ತಿರುವ ಪೊಲೀಸರು. ಮಂಗಳೂರಿನ ಹಲವಾರು ಪ್ರಕರಣಗಳನ್ನು ಅವಲೋಕಿಸಿದಾಗ ಇವರು ಪೊಲೀಸರೋ ಭಜರಂಗಿಗಳೋ ಎಂಬ ಅನುಮಾನ ಮೂಡುವಂತಿದೆ. ಜನವರಿ-ಫೆಬ್ರವರಿ- ಮಾರ್ಚ್ ಈ ಮೂರು ತಿಂಗಳಲ್ಲಿ 15ಕ್ಕೂ ಅಧಿಕ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಕರಾವಳಿಯಲ್ಲಿ ದಾಖಲಾಗಿದೆ. ಇನ್ನು ಪೊಲೀಸರು ಪ್ರಕರಣ ದಾಖಲಿಸದೆ ಪ್ರೇಮಿಗಳಿಗೇ ಎಚ್ಚರಿಕೆ ಕೊಟ್ಟು, ಭಜರಂಗಿಗಳಿಗೆ ಟೀ ಕೊಟ್ಟು ಕಳುಹಿಸಿದ ಉದಾಹರಣೆಗಳು ಅವೆಷ್ಟೋ ಇವೆ. ಇದಲ್ಲದೆ ನಿರಾತಂಕವಾಗಿ ನಡೆಯುತ್ತಿರುವ ದೇವದಾಸಿ ಪದ್ದತಿ, ಸಿಡಿ ಆಚರಣೆ, ದಲಿತ ದೌರ್ಜನ್ಯ ಪ್ರಕರಣಗಳು… ಇವೆಲ್ಲದರ ಮಧ್ಯೆ ಮುಸ್ಲೀಮರ ಮೇಲಿನ ದಾಳಿ.
ಬಿಜೆಪಿ ಸರಕಾರ ಅಸ್ತಿತ್ವದಲ್ಲಿದ್ದ ಸಂಧರ್ಭ ನಾನು ನೂರಾರು ನೈತಿಕ ಪೊಲೀಸ್ ಗಿರಿ, ಅಲ್ಪಸಂಖ್ಯಾತರ ಮೇಲಿನ ದಾಳಿ, ದಲಿತರ ಮೇಲಿನ ದಾಳಿಯನ್ನು ಸುದ್ದಿ ಮಾಡಿದ್ದೆ. ಆ ಸಂಧರ್ಭದಲ್ಲಿ ಸುಮಾರು 45 ಜನ ಕೋಮುವಾದಿ ಕಾರ್ಯಕರ್ತರು ಮಂಗಳೂರು ಜೈಲಿನಲ್ಲಿದ್ದರು. ಕೆಲವರು ಒಂದು ವರ್ಷಕ್ಕಿಂತಲೂ ಅಧಿಕ ಜೈಲುವಾಸವನ್ನು ಅನುಭವಿಸಿದರು. ನೀವು ನಂಬಲೇ ಬೇಕು. ಈಗ ಇಷ್ಟೆಲ್ಲಾ ದಾಳಿಯಾಗುತ್ತಿದ್ದರೂ ಒಬ್ಬನೇ ಒಬ್ಬ ಕೋಮುವಾದಿ ಮಂಗಳೂರು ಜೈಲಿನಲ್ಲಿ ಇಲ್ಲ. ಇತ್ತೀಚೆಗೆ ನೈತಿಕ ಪೊಲೀಸ್ ಗಿರಿ ನಡೆಸಿದ, ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಿದ ಹಲವು ಕೋಮುವಾದಿಗಳ ಮೇಲೆ ಒಂದಕ್ಕಿಂತಹ ಅಧಿಕ ಕೊಲೆ ಪ್ರಕರಣಗಳಿವೆ. ಆದರೂ ಒಂದೋ ಬಂಧಿಸಿದ ಎರಡೇ ದಿನದಲ್ಲಿ ಜಾಮೀನು ದೊರೆಯುತ್ತದೆ. ಇಲ್ಲವೇ ಬಂಧನಕ್ಕೊಳಗಾಗುವ ಮೊದಲೇ ಜಾಮೀನು ದೊರೆಯುತ್ತದೆ. ಅಷ್ಟೊಂದು ಕಠಿಣ ಕ್ರಮಗಳನ್ನು ಕಾಂಗ್ರೆಸ್ ಸರಕಾರ ಕೈಗೊಂಡಿದೆ!!
”ಏನ್ ಸಾರ್ ನೀವು… ಆಡಳಿತಗಾರರ ಜೊತೆ ಸೇರ್ಕೊಂಡ್ರಲ್ಲಾ ” ಎಂದು ಕಾಂಗ್ರೆಸ್ ಸರಕಾರ ರಚನೆಯಾದ ಸಂಧರ್ಭ ಪ್ರಗತಿಪರರೊಬ್ಬರನ್ನು ಕೇಳಿದಾಗ ”ನೋಡ್ರಿ ಈ ಚಳುವಳಿಗಳನ್ನೇ ಮಾಡುತ್ತಾ ಕೂರುವುದಲ್ಲ. ಅವಕಾಶ ಸಿಕ್ಕಿದಾಗ ಆಡಳಿತಗಾರರ ಹತ್ತಿರ ಹೋಗಿ ವ್ಯವಸ್ಥೆಯನ್ನು ಸರಿ ಮಾಡುವ ಕೆಲಸ ಮಾಡಬೇಕು” ಎಂದಿದ್ದರು. ಈಗ ನಮ್ಮ ಬಹಳಷ್ಟು ಪ್ರಗತಿಪರರು ಆಡಳಿತಗಾರರ ಅಕ್ಕಪಕ್ಕ ಕಾಣಸಿಗುತ್ತಾರೆ. ಇದೇ ಧೈರ್ಯದಲ್ಲಿ ಪೊಲೀಸರು ಅಲ್ಪಸಂಖ್ಯಾತರು-ದಲಿತರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಪ್ರೇಮಿಗಳ ಮೇಲೆ ದಾಳಿ ನಡೆಸಿದ ಭಜರಂಗಿಗಳಿಗೆ ಟೀ ಕೊಟ್ಟು ಕಳುಹಿಸುತ್ತಾರೆ. ಅದೇ ಪ್ರಗತಿಪರರ ಧೈರ್ಯದಲ್ಲಿ ಇಂದು ನಮ್ಮ ಕಬೀರನನ್ನು ಕೊಂದು ಹಾಕಿದ್ದಾರೆ.
ಒಬ್ಬ ವ್ಯಕ್ತಿಯನ್ನು ಈ ರೀತಿ ಕಾರಣವಿಲ್ಲದೆ ಅಮಾನುಷವಾಗಿ ಪೊಲೀಸರೇ ಕೊಲ್ಲುತ್ತಾರೆ ಎಂದರೆ ನಮ್ಮ ರಾಜ್ಯವು ಎಂಥ ಅರಾಜಕತೆಯತ್ತ ಹೋಗುತ್ತಿದೆ ಎಂದು ಊಹಿಸಬಹುದು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಬಳಿ ಸಮರ್ಪಕ ಅಧಿಕಾರ ಇರುವಂತೆ ಕಾಣುವುದಿಲ್ಲ. ರಾಜ್ಯದ ಪೋಲೀಸ್ ಪಡೆಯಲ್ಲ್ಲಿನುಸುಳಿದ ಮತಾಂಧರ ಮೇಲೆ ರಾಜ್ಯ ಸರ್ಕಾರಕ್ಕೆ ಹಿಡಿತ ಇಲ್ಲದಿರುವುದು ಇದರಿಂದ ಕಂಡುಬರುತ್ತದೆ. ಧರ್ಮದ ಅಫೀಮು ತುಂಬಿಕೊಂಡ ಮತಾಂಧ ಹಾಗೂ ದುಷ್ಟ ಪೋಲೀಸರನ್ನು ಗುರುತಿಸಿ ಅವರನ್ನು ಪೋಲೀಸ್ ಪಡೆಯಿಂದ ಹೊರದಬ್ಬದಿದ್ದರೆ ಇಂಥ ಘಟನೆಗಳು ಹಾಗೂ ನೈತಿಕ ಪೋಲೀಸ್ಗಿರಿಗಳು ನಿರಂತರವಾಗಿ ಮುಂದುವರಿಯಲಿವೆ. ಮುಖ್ಯಮಂತ್ರಿಯಾದ ನಂತರ ಸಿದ್ಧರಾಮಯ್ಯನವರು ಸಂವೇದನೆಯನ್ನು ಕಳೆದುಕೊಂಡು ಅಧಿಕಾರಕ್ಕೆ ಅಂಟಿಕೊಂಡಿರುವುದು ಕಂಡುಬರುತ್ತದೆ. ಸಿದ್ಧರಾಮಯ್ಯನವರು ಈ ರೀತಿ ಸಂವೇದನಾಹೀನ ಮನುಷ್ಯರಾಗಬಹುದು ಎಂದು ಯಾರೂ ಊಹಿಸಿರಲಿಲ್ಲ. ಅಧಿಕಾರ ಮನುಷ್ಯನ ಅಂತರಂಗದ ಸಂವೇದನೆಯನ್ನು ಕೊಲ್ಲುವುದನ್ನು ನೋಡುವಾಗ ಸಮಾಜವಾದಿ ಹಿನ್ನೆಲೆಯ ಸಿದ್ಧರಾಮಯ್ಯನವರಿಗೂ ಇಂದಿನ ಸಿದ್ಧರಾಮಯ್ಯನವರಿಗೂ ಅಜಗಜಾಂತರ ವ್ಯತ್ಯಾಸ ಕಂಡುಬರುತ್ತದೆ. ಅಧಿಕಾರಕ್ಕೆ ಅಂಟಿ ಕುಳಿತುಕೊಳ್ಳಲು ತಾನು ನಂಬಿದ ಮೌಲ್ಯಗಳೊಂದಿಗೆ ಸಿದ್ಧರಾಮಯ್ಯ ಈ ರೀತಿಯ ರಾಜಿ ಮಾಡಿಕೊಳ್ಳಬಹುದೆಂದು ಅನಿಸಿರಲಿಲ್ಲ.
ಕರ್ನಾಟಕದ ಘನ ಸರಕಾರವು ಅದಕ್ಷ ಮತ್ತು ಮಂದ ಬುದ್ದಿಯ ಕೆ. ಜೆ. ಜಾರ್ಜ್ ಅವರಿಂದ ಗೃಹ ಖಾತೆಯನ್ನು ಬೇರೊಬ್ಬ ದಕ್ಷ ಮತ್ತು ಖಡಕ್ ವ್ಯಕ್ತಿಯ ಕೈಗೆ ಕೊಡದಿದ್ದರೆ ಈ ರಾಜ್ಯಕ್ಕೆ ಉಳಿಗಾಲವಿಲ್ಲ. ಪ್ಲೀಸ್ ಸಿದ್ಧರಾಮಯ್ಯ ಡೂ ಸಮ್ಥಿಂಗ್. ಆಸ್ಕರಣ್ಣ, ನೀವು ಆಯ್ಕೆ ಮಾಡಿದ ಗೃಹ ಮಂತ್ರಿ ಸರಿ ಇಲ್ಲಣ್ಣ.
Stupid argument, if any Hindu got killed then can we see similar sentiments? Anyone who is breaking law must be punished.
Brother innocent is innocent whether he is hindu or muslim, we all condemn these nonsence things.
ಗುಂಡಿನ ಚಕಮಕಿಯಲ್ಲಿ ಸತ್ತ ಕಬೀರ ನಿಜಕ್ಕೂ ನಿರ್ದೋಷಿ ಯುವಕನೆ ಅಥವಾ ಉಗ್ರನೆ? ಈತ ದನಗಳನ್ನುಕಾನೂನು ಬಾಹಿರವಾಗಿ ಕಳ್ಳತನದಿಂದ ಸಾಗಿಸುತ್ತಿದ್ದನಲ್ಲವೇ? ಎಎನ್ಎಫ್ ಪೊಲೀಸರನ್ನು ಕಂಡ ತಕ್ಷಣ ಆತ ಮತ್ತು ಅವನ ಜೊತೆಗಾರರು ಓಡಿ ಹೋಗಲು ಏಕೆ ಯತ್ನಿಸಿದರು? ಈ ಎಲ್ಲಾ ಪ್ರಶ್ನೆಗಳಿಗೆ ತನಿಖೆಯ ಬಳಿಕ ಸಮರ್ಪಕ ಉತ್ತರ ಸಿಗುತ್ತದೆ. ಈಗ ಶಂಕಿತ ಉಗ್ರ ಕಬೀರನ ಪರ ವಹಿಸಿ ಮಾತನಾಡುವುದು ತಪ್ಪು. ಆತ ಮುಸಲ್ಮಾನ ಎಂಬ ಕಾರಣಕ್ಕೆ ನಿರ್ದೋಷಿ ಎನ್ನುವುದು ಮತೀಯ ಅಂಧತನ.
ಅತ್ಯಂತ ಅಮಾನುಷ, ನಾವು ಯಾವ ದೇಶದಲ್ಲಿ ಬದುಕುತ್ತಿದ್ದೇವೆ ಎಂಬುದೇ ಗೊತ್ತಾಗುತ್ತಿಲ್ಲ. ದಲಿತರು, ಅಲ್ಭಸಂಖ್ಯಾತರು ಈ ದೇಶದಲ್ಲಿ ಹುಟ್ಟಿರುವುದೇ ತಪ್ಪೆ?
alpasankhyatanobba huttidaroo sattaroo suddiyagtade, lekhanavaagtade, bhaashanagalaagtade. bahusanhyatarallobbanaagi ee deshadalli huttabaaradu. bhaaratadalli hindoo aagi huttabaradu, muslim deshagalalli hindoo aagi baalabaaradu
Ms anitha your thinking very poor. Hindu Muslim any one they have one human. You know how many Hindu brother and sister working in Muslim country.
Muslim deshagalalli Hindoogalu dudiyuttiruvudakke pratiphala padeyuttiddaare ashte. Allina kaanoonugalu muslim paravagive, Hindoogala staana eradaneyadu. Idu ellarigoo tilida sathya. Hindu Muslim any one they have one human. Correct. Then why Mr Vijayakumar discriminated Dalith and minorities from other humans?
Kanon kaige tagulva hakku yarigu illa . atha yaude komu irali athava yaude paksavirali kanonina munde ellaru onde. Munde ondu dina policsara mele iruva nambike visvasa janarige illavaguthade. Amayaka yuvakana hathy kandanaharha. Desha kapadalu horatirva yodaru desha hodeyalu avkasa kodabaradu. Tanobba manava endu tilidare saaku . devaru kotta jeeva adannu tegeyalu namage yava hakku illa. Hindu Muslim ene aagu modalu neenu manavanagu kuvempu avara barthada parti obba prajege anvaisudade. Jai Barth mathaki
ನೀವೇಕೆ ಘಟನೆ ಜರುಗಿದ ಸ್ಥಳದಲ್ಲಿದ್ದು ಎಲ್ಲವನ್ನೂ ನೋಡಿದ ಪ್ರತ್ಯಕ್ಷದರ್ಶಿಗಳ ಹಾಗೆ ಕಬೀರ ಅಮಾಯಕ ಎಂದು ಹೇಳುತ್ತಿದ್ದೀರಿ? ಕಾನೂನು ಪ್ರಕಾರ ತನಿಖೆಯಾಗಿ ಸತ್ಯ ಹೊರಬರಲಿ. ಕಬೀರ ನಿಜಕ್ಕೂ ಅಮಾಯಕನಾಗಿದ್ದರೆ ತನಿಖೆಯಲ್ಲಿ ಸತ್ಯ ಹೊರಬರುತ್ತದೆ.
@ಸೂರಿಂಜೆ:
“ಕಾಂಗ್ರೆಸ್ ಸರಕಾರ ಬಂದ ನಂತರ ಮುಸ್ಲೀಮರು, ದಲಿತರು ಮತ್ತು ಮಹಿಳೆಯರ ಮೇಲೆ ದಾಳಿಗಳು ಹೆಚ್ಚಾಗಿವೆ. ಅಂಕಿ ಅಂಶಗಳನ್ನು ಗಮನಿಸಿದರೆ ಬಿಜೆಪಿ ಸರಕಾರ ಅಸ್ತಿತ್ವದಲ್ಲಿ ಇದ್ದಾಗ ನಡೆದ ನೈತಿಕ ಪೊಲೀಸ್ ಗಿರಿಗಿಂತಲೂ ಅಧಿಕ ನೈತಿಕ ಪೊಲೀಸ್ ಗಿರಿಗಳು ಕಳೆದ ಒಂದು ವರ್ಷದಲ್ಲಿ ನಡೆದಿವೆ. ಅಲ್ಪಂಖ್ಯಾತರ ಮೇಲೆ ದಾಳಿಗಳು ನಡೆದಿವೆ. ಇಷ್ಟೆಲ್ಲಾ ಆದರೂ ಯಾವೊಬ್ಬ ಕಾಂಗ್ರೆಸ್ ಜನಪ್ರತಿನಿಧಿಯೂ ದನಿಯೆತ್ತುತ್ತಿಲ್ಲ.”
ಏಕೆ ಇಂತಹ ಪರಿಸ್ಥಿತಿ ಇದೆ? ಕಾಂಗ್ರೆಸ್ ಪಕ್ಷ ಭಾಜಪಕ್ಕಿಂತ ಹೆಚ್ಚು ಹಿಂದುತ್ವವಾದಿಯಾಗಿಬಿಟ್ಟಿದೆಯೇ? ಅಥವಾ ಭಜರಂಗದಳದಂತಹ ಪುಂಡರ ಸೇನೆಗೆ ಕಾಂಗ್ರೆಸ್ ಜನಪ್ರತಿನಿಧಿಗಳು ಹೆದರಿ ಮೌನವಾಗಿದ್ದಾರೆಯೇ?
Mr. Mohammed investigation poorthi aguva modale Kabir nirdoshi anta heluvudu childishness.
Mr rajesh kabeer aropi athava apradhi agiddare polisaru edhege gundu hodedannu samarutira.? Atha neejavagi aparadiyagiddaru kanoon prakarvagi bandisa bekithu. Manavethe masi baleyalu yathnisad anf sibbandi mukavada kalachi bidide. Innadaru intha brasta sibbandya para vakalathu vahisudu sariyalla. Adhe reethi kabeerna kutumbada mele Halle nadesidu estu mattige sari anthiri. Intha aviveki anf sibbandi bagge samarthisudu makkalata.
ವಿಷಯ ಏನೇ ಇರಲಿ, ಅದನ್ನು ತಿರುಚಿ, ತಮಗೆ ಬೇಕಾದ ಬಣ್ಣ ಬಳಿದು, ಹಿಂದು-ಮುಸ್ಲಿಂ-ದಲಿತ ಮಸಾಲೆ ಸೇರಿಸಿ ಬೆಂಕಿ ಹಚ್ಚುವ ಕಾರ್ಯವನ್ನು ಕೆಲವರು ಅನ್ನ ಸಂಪಾದನೆಯ ಮಾರ್ಗವಾಗಿ, ಸುದ್ದಿಯಲ್ಲಿರುವ ಮಾರ್ಗವಾಗಿ, ತಮ್ಮ ಉಕ್ಕಿ ಹರಿಯವ ‘ಮಾನವೀಯತೆ’ ಯನ್ನು ತೋಡಿಕೊಳ್ಳುವ ಮಾರ್ಗವಾಗಿ ಕಂಡುಕೊಂಡಿದ್ದಾರೆ. ಹೋರಾಟ, ಸತ್ಯಶೋಧನಾ ಸಮೀತಿ ಗಳನ್ನು ಮಾಡುವುದು ಇವರಿಗೆ ಹೊಸದೇನಲ್ಲ. ಇವರಿಗೆ ಬೇಕಾದ ‘ಪ್ರಜ್ಞಾವಂತರ’ ಬೆಂಬಲದ ಜಾತ್ಯತೀತ ಸರಕಾರ ಬೇರೆ ಇದೆ ರಾಜ್ಯದಲ್ಲಿ. ಅಪರಾಧ ನಡೆದಿದ್ದಕ್ಕೆ, ನಿಷ್ಕಾರಣವಾಗಿ ಹತ್ಯೆ ನಡೆದಿದ್ದಕ್ಕೆ ಇವರ ಹತ್ತಿರ ಸಾಕ್ಷವಿದ್ದಲ್ಲಿ, ಕೇಸ್ ಹಾಕಿ. ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸಲಿ. “ಈ ಘಟನೆ ಕಂಡು ಬರುತ್ತಿದ್ದು” ಎಂಬ ಅನುಮಾನದಿಂದ ಪ್ರಾರಂಭವಾಗಿ “ಕೊಲೆ ಮಾಡಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ” ಸ್ಫಷ್ಟತೆ ಇರುವಾಗ ಕಬೀರನಿಗೆ ನ್ಯಾಯ ದೊರಕಿಸುವಲ್ಲಿ ತಡವೇಕೆ?
ಹಿಂದುತ್ವವಾದಿ ಪೋಲಿಸರಂತೆ!..೨೦೦೬ ರಲ್ಲಿ ಕಾಂಗೈ ಸರಕಾರ ಸೈನದಲ್ಲಿ ಮತವನ್ನು ಆಧಾರಿಸಿ ಗಣತಿ ಮಾಡಿಸಲು ಹೋಗಿ ಉಗಿಸಿಕೊಂಡಿತು. ಮೊನ್ನೆ ಅಜಂ ಖಾನ ಕಾರ್ಗಿಲ್ ನ್ನು ಮುಸ್ಲಿಂ ಸೈನಿಕರು ಗೆದ್ದದ್ದು ಎಂದು ಹೇಳಿ ನಿವೃತ್ತ ಮುಸ್ಲಿಂ ಮಿಲಿಟರಿ ಅಧಿಕಾರಿಗಳಿಂದಲೇ ಎಕ್ಕಾ-ಮಕ್ಕಾ ಝಾಡಿಸಿಕೊಂಡ. ಈಗ ಇಲ್ಲಿ ಕೆಲವರು ಪೋಲಿಸರನ್ನು ಮತದ ಆಧಾರದ ಮೇಲೆ ಒಡೆಯುವ, ಇಲಾಖೆಯೇ ಹೀಗೆ ಎಂದು ಬಿಂಬಿಸುವ ಕಾರ್ಯಕ್ಕೆ ಇಳಿದಿದ್ದಾರೆ. ನಾಳೆ ಯಾರಾದರೂ ಅಪರಾಧದಲ್ಲಿ ತೊಡಗಿದ್ದರೆ, ಪೋಲಿಸರು ಅವನ ಮೇಲೆ ಕಾರ್ಯಾಚರಣೆ ಮಾಡುವ ಮೊದಲು ಅವನ ಜಾತಿ-ಮತ ಎಲ್ಲವನ್ನು ಕೇಳಿಕೊಂಡೇ, ಅವನನ್ನು ಹಿಡಿಯುವುದು, ಬಿಡುವುದೊ ಎಂಬ ನಿರ್ಣಯ ತೆಗೆದುಕೊಳ್ಳಬೇಕು. ಇನ್ನು ಮೇಲೆ ಆಯಾ ಜಾತಿ/ಮತದ ಅಪರಾಧಿಯನ್ನು ಆಯಾ ಜಾತಿ/ಮತದ ಪೋಲಿಸರೇ ಹಿಡಿಯಬೇಕು, ಕ್ರಮ ಕೈಗೊಳ್ಳಬೇಕು ಎಂಬ ಕಾನೂನು ಮಾಡಿದರೆ ಒಳ್ಳೆಯದು. ನ್ಯಾಯಾಲಯದಲ್ಲೂ ಅದೇ ವ್ಯವಸ್ಥೆ ಮಾಡಬೇಕು..ಆಯಾ ಮತದ ನ್ಯಾಯಾಧೀಶರೇ ನ್ಯಾಯ ಕೊಡಬೇಕು ಎಂದು!
ಅತ್ಯಂತ ಅಮಾನವೀಯ ರೀತಿಯಲ್ಲಿ ಕೊಲೆಗೆಯ್ಯಲ್ಪಟ್ಟ ನಿರ್ದೋಷಿ ಯುವಕ ಕಬೀರನ ಮರಣದಲ್ಲೂ ಸುಖ ಕಾಣುವ,ಅದನ್ನು ನ್ಯಾಯೀಕರಿಸುವ ಒಂದು ಸಮೂಹವೇ ಇದೆಯಂದರೆ ಅದು ಒಂದು ಮಾನವೀಯ ದುರಂತವೇ ಸರಿ. face book ನಲ್ಲಿ ಒಬ್ಬ ದುರುಳ ಬರೆದಿದ್ದ ‘ದನವನ್ನು ಸಾಗಾಟ ಮಾಡಿದ್ದಕ್ಕೆ ಅದು ದೇವರು ಕೊಟ್ಟ ಶಿಕ್ಷೆ ‘ ಎಂದು ಅವನಲ್ಲಿ ಮಾನವೀಯತೆಯೂ ನಾಶವಾಗಿ,ಕೇವಲ ಮೋದಿ ಬೆಳಸಿದ ಮತಾಂದತೆ ಮಾತ್ರ ತುಂಬಿದೆ
of course ಓರ್ವ ಪತ್ರಕರ್ತನ ಲೇಖನಿ ಅವನ ‘bread and butter’ .ಈ ಲೇಖಕನಂತ ಮನುಷ್ಯ ಪ್ರೇಮಿ ಬರವಣಿಗೆ ಗಾರರಿಂದಲೇ ಇವತ್ತು ಕರಾವಳಿ ಕರ್ನಾಟಕದಲ್ಲಿ Saffron Brigade ಗೆ ಮತ್ತು ಮತಾಂದರಿಗೆ ಒಂದು ಅಂಕುಶವಿಟ್ಟನ್ತೆ ಇರುವುದು ಮುಸ್ಲಿಂ ರು ಸ್ವಲ್ಪವಾದರೂ ಭಯ ಬೀತಿಯಿಲ್ಲದೆ ನೆಲೆ ನಿಂತಿರುವುದುರಲ್ಲಿ ಕೇವಲ ಬೆರಳಿನಿಕೆಯಲ್ಲಿರುವ ಇಂಥ ನಿರ್ಬೀತ ,ದೌರ್ಜನ್ಯದ ವಿರುದ್ದ ಅಹರ್ನಿಶಿ ಹೋರಾಡುವ ಯುವಕರ ಪಾತ್ರ ಗಣ್ಯವಾಗಿ ಇದೆ . ಇವರೆಂದೂ ಬಕೆಟ್ ಸಿಂಘ ,ಅಥವಾ ಎಂ.ಜೆ. ಅಕ್ಬರನಂತೆ ಮೋದಿಯ ಕಾಲಡಿಯಲ್ಲಿ, ತಮ್ಮ ಪತ್ರಿಕಾ ದರ್ಮವನ್ನು ,ಸ್ವಾಭಿಮಾನವನ್ನು ಒತ್ತೆ ಇಟ್ಟವರಲ್ಲ .
ನಿರ್ದೋಷಿ ಯುವಕ?!! ದನಗಳನ್ನುಕಾನೂನು ಬಾಹಿರವಾಗಿ ಕಳ್ಳತನದಿಂದ ಸಾಗಿಸುತ್ತಿದ್ದಾತ ನಿರ್ದೋಷಿ ಹೇಗೆ ಆಗುತ್ತಾನೆ ಮಿ. ಬಾವ? ಆತ ಮುಸಲ್ಮಾನ ಎಂಬ ಕಾರಣಕ್ಕೆ ಆತನ ಪರ ವಕಾಲತ್ತು ವಹಿಸಿ ಮಾತನಾದುತ್ತಿದೀರಲ್ಲ ನೀವು! ಕಬೀರ ನಿರ್ದೋಷಿಯಾಗಿದ್ದರೆ ಎಎನ್ಎಫ್ ಪೊಲೀಸರನ್ನು ಕಂಡ ತಕ್ಷಣ ಆತ ಮತ್ತು ಅವನ ಜೊತೆಗಾರರು ಓಡಿ ಹೋಗಲು ಏಕೆ ಯತ್ನಿಸಿದರು?
Gobole Sir-ನಿರ್ದೋಷಿ ಯುವಕ?!! ದನಗಳನ್ನುಕಾನೂನು ಬಾಹಿರವಾಗಿ ಕಳ್ಳತನದಿಂದ ಸಾಗಿಸುತ್ತಿದ್ದಾತ ನಿರ್ದೋಷಿ ಹೇಗೆ ಆಗುತ್ತಾನೆ ಮಿ. ಬಾವ? ಆತ ಮುಸಲ್ಮಾನ ಎಂಬ ಕಾರಣಕ್ಕೆ ಆತನ ಪರ ವಕಾಲತ್ತು ವಹಿಸಿ ಮಾತನಾದುತ್ತಿದೀರಲ್ಲ ನೀವು! ಕಬೀರ ನಿರ್ದೋಷಿಯಾಗಿದ್ದರೆ ಎಎನ್ಎಫ್ ಪೊಲೀಸರನ್ನು ಕಂಡ ತಕ್ಷಣ ಆತ ಮತ್ತು ಅವನ ಜೊತೆಗಾರರು ಓಡಿ ಹೋಗಲು ಏಕೆ ಯತ್ನಿಸಿದರು?
ಇದರ ಉತ್ತರ ಲೇಖನದಲ್ಲಿ ಅತ್ಯಂತ clear ಆಗಿ ಇದೆ – “ತೀರ್ಥಹಳ್ಳಿಯಲ್ಲಿ ದನ ಖರೀದಿ ಮಾಡಿ, ಅಲ್ಲಿಂದ ಶ್ರಂಗೇರಿಗೆ ಬಂದ ಕಬೀರ್ ಇದ್ದಂತಹ ವ್ಯಾಪಾರಿ ತಂಡ ಶ್ರಂಗೇರಿಯಲ್ಲೂ ದನ ಖರೀದಿ ಮಾಡಿದೆ. ತೀರ್ಥ ಹಳ್ಳಿ ಚೆಕ್ ಪೋಸ್ಟ್ ನಲ್ಲಿ ಪೊಲೀಸರಿಗೆ ಮಾಮೂಲು ನೀಡಿ ಚೀಟಿಯೊಂದನ್ನು ತೋರಿಸಿ ಶ್ರಂಗೇರಿಗೆ ಬಂದಿದ್ದಾರೆ. ಶ್ರಂಗೇರಿಯಲ್ಲೂ ಪೊಲೀಸರಿಗೆ ಮಾಮೂಲು ನೀಡಿ ಖರೀದಿಯ ಚೀಟಿ ತೋರಿಸಿ ಕಾರ್ಕಳ ಮಾರ್ಗವಾಗಿ ಬರುತ್ತಿದ್ದರು. ಆ ಸಂಧರ್ಭದಲ್ಲಿ ಮಾರ್ಗ ಮಧ್ಯೆ ಎಎನ್ಎಫ್ ಪೊಲೀಸರು ವಾಹನ ನಿಲ್ಲಿಸಿದ್ದಾರೆ. ವಾಹನ ನಿಲ್ಲಿಸಿದ ಕಬೀರ್ ತಂಡ ಎಎನ್ಎಫ್ ಪೊಲೀಸರಿಗೆ ಮಾಮೂಲು ನೀಡಲು ಇಳಿದಿದ್ದಾರೆ. ವಾಹನದಲ್ಲಿ ದನ ಇರುವುದನ್ನು ಗುರುತಿಸಿದ ಪೊಲೀಸನೊಬ್ಬ ಹಿಂಬದಿಯಲ್ಲಿ ಕುಳಿತಿದ್ದ ಕಬೀರನನ್ನು ಇಳಿಯುವಂತೆ ಸೂಚಿಸಿದ್ದಾನೆ. ಕಬೀರ ವಾಹನದಿಂದ ಇಳಿದ ತಕ್ಷಣ ಗುಂಡಿನ ಶಬ್ದ ಕೇಳಿದೆ. ಗುಂಡಿನ ಶಬ್ದ ಕೇಳಿ ಮೂವರು ಪರಾರಿಯಾಗಿದ್ದಾರೆ. ಒಬ್ಬ ಪೊಲೀಸ್ ವಶವಾಗಿದ್ದಾನೆ. ಕಬೀರ ಶವವಾಗಿದ್ದಾನೆ”
Mr. Bava, this is Mr. Soorinje’s version of the incident. Mr. Soorinje was not at the site of the event. Police and local people have given a different version. That’s why let an inquiry be done and truth come out. Till then lets not over-react.
it is not only his version ,it is a proper journalism ethics what he followed.And it’s unusual that the main stream print media,mainly kannada one, in Karnataka has been almost entirely silent about this issue.And this is even more galling than the hands-off policy adopted by Karnataka Govt.,home minister and other politicians.
ಪೊಲೀಸರಿಗೆ ಮಾಮೂಲು ಕೊಟ್ಟು ಮುಂದುವರಿದರು ಅಂದರೆ ಯಾವುದೊ ಕಾನೂನು ಬಾಹಿರ ಕೆಲಸ ಮಾಡುತ್ತಿದ್ದಾರೆ ಎಂದಾಯಿತಲ್ಲವೇ? ನ್ಯಾಯವಾಗಿ ವ್ಯಾಪಾರ ಮಾಡಿ ಹೋಗುತ್ತಿದ್ದರೆ ಪೊಲಿಸರಿಗೇಕೆ ಮಾಮೂಲಿ ಕೊಡಬೇಕು?
ಚೀಟಿಯೊಂದನ್ನು ತೋರಿಸಿದ್ದಾರೆ ಎಂದು ಬರೆದಿದ್ದಾರೆ. ಹಾಗಾದರೆ ಆ ಚೀಟಿಯಲ್ಲೇನಿದೆ?
ಇದರ ಅರ್ಥ ಈತ ಅಮಾಯಕನಲ್ಲ. ಯಾವುದೊ ಕಾನೂನು ಬಾಹಿರ ಕೃತ್ಯ (ದನ ಕಳ್ಳ ಸಾಗಾಟ ) ಮಾಡಿ ಸಿಕ್ಕಿ ಬೀಳುವ ನೆಪದಿಂದ ಓಡಿದ. ಆ ಪ್ರದೇಶದಲ್ಲಿ ನಕ್ಷಲರ ಉಪಟಳ ಹೆಚ್ಚಾಗಿದ್ದು ಇವನು ಓಡಿ ಹೊಗುವುದನ್ನು ನೋಡಿ ನಕ್ಷಲ್ ಎಂದು ಭಾವಿಸಿ ಪೊಲೀಸರು ಗುಂಡು ಹಾರಿಸಿದರು.
“ಇವರೆಂದೂ ಬಕೆಟ್ ಸಿಂಘ ,ಅಥವಾ ಎಂ.ಜೆ. ಅಕ್ಬರನಂತೆ ಮೋದಿಯ ಕಾಲಡಿಯಲ್ಲಿ, ತಮ್ಮ ಪತ್ರಿಕಾ ದರ್ಮವನ್ನು ,ಸ್ವಾಭಿಮಾನವನ್ನು ಒತ್ತೆ ಇಟ್ಟವರಲ್ಲ .”
ವಿವಾದಾತ್ಮಕ ಪತ್ರಕರ್ತ ಸೂರಿಂಜೆ ಅವರಿಗೆ ಏಕೆ ಸರ್ಟಿಫಿಕೇಟ್ ಕೊಡುತ್ತಿದ್ದೀರಿ? ಅವರನ್ನು ಹತ್ತಿರದಿಂದ ಬಲ್ಲಿರಾ? ಅವರ ಎಲ್ಲಾ ವ್ಯವಹಾರಗಳ ಅರಿವು ನಿಮಗೆ ಇದೆಯಾ? ಭಾರತದ ಅಲ್ಪಸಂಖ್ಯಾತರ ಭದ್ರತೆ ಹಾಗೂ ಅಭ್ಯುದಯವನ್ನೇ ತನ್ನ ಧ್ಯೇಯವಾಗಿಸಿಕೊಂಡಿರುವ ಕಾಂಗ್ರೆಸ್ ಪಕ್ಷವನ್ನೇ ಮುಸ್ಲಿಂ ವಿರೋಧಿ ಅಂತ ಇದೇ ಲೇಖನದಲ್ಲೇ ಹೇಳಿರುವ ಸೂರಿಂಜೆ ಬಗೆ ಮುಸ್ಲೀಮರು ಹೇಗೆ ತಾನೇ ವಿಶ್ವಾಸ ಇಡಬಲ್ಲರು?
“ಕಬೀರನ ಮರಣದಲ್ಲೂ ಸುಖ ಕಾಣುವ,ಅದನ್ನು ನ್ಯಾಯೀಕರಿಸುವ ಒಂದು ಸಮೂಹವೇ ಇದೆ”
ಇದು ನಿಜಕ್ಕೂ ಖೇದನೀಯ. ಆದರೆ ಕಬೀರನ ಮರಣದಲ್ಲಿ ಹಿಂದುತ್ವವಾದಿಗಳ ಕೈವಾಡವನ್ನು ಆರೋಪಿಸುವ, ಪೋಲೀಸರ ವೃತ್ತಿನಿಷ್ಠೆ ಬಗ್ಗೆ ಅನುಮಾನದ ಬೀಜ ಬಿತ್ತುವ, ಮುಸಲ್ಮಾನರೆಲ್ಲರೂ ಅಮಾಯಕರು ನಿರಪರಾಧಿಗಳು ಎಂದು ಏರು ಕಂಠದಲ್ಲಿ ಕೂಗುವ ದೊಡ್ಡ ಸಮೂಹವೂ ಇದೆ.
“ವಿವಾದಾತ್ಮಕ “-ಇದು ಯಾವ ಅರ್ಥದಲ್ಲಿ ? ಪಟ್ಟಭದ್ರರ ಪರವಾಗಿ,ಕೆಲವರ ಮೂಗಿನ ನೇರಕ್ಕೆ ತಮ್ಮ ಲೇಖನಿ ಚಲಾಯಿಸದಿದ್ದರೆ ಕೊಡುವ ಪದವಿ. ಈ ಲೇಖಕರನ್ನು ನಿರ್ಭೀತ ,ಶೋಷಿತ ರ ಪರ ಹೋರಾಡುವ ಪತ್ರಕರ್ತ ಅಂತ ಕರೆಯುವುದು ಉಚಿತ
“ಅವರನ್ನು ಹತ್ತಿರದಿಂದ ಬಲ್ಲಿರಾ? ಅವರ ಎಲ್ಲಾ ವ್ಯವಹಾರಗಳ ಅರಿವು ನಿಮಗೆ ಇದೆಯಾ? “.ಇದು ಎಂಥಾ ಭಾಲಿಶ ಪ್ರಶ್ನೆ ?ಇದನ್ನೇ ತಿರುಗಿ ನಾನು ನಿಮಗೆ ಕೇಳಿದರೆ ?ನಾನು ಇಲ್ಲಿ ಯಾವುದೇ ವ್ಯಕ್ತಿ ಯನ್ನು ನ್ಯಾಯೀಕರಿಸುವ ಪ್ರಶ್ನ ಅಲ್ಲ.,ಅಥವಾ ಅವರ ಭಟ್ಟೀಂಗಿ ತನ ಮಾಡುವುದು ಅಲ್ಲ. ಅವರು ಒಂದು ಸಾಮುದಾಯಿಕ issue ನ ಕುರಿತು ತೆಗದೆ stand ನದ್ದು !ಅವರ credibility ಸಹಾ ಈ ವಿಷಯದಲ್ಲಿ ಇಡೀ ಕರ್ನಾಟಕ್ಕೆ ತಿಳಿದಿದೆ ,ನಿಮಗೆ ಅದರ ಅರಿವು ಇಲ್ಳದ್ದಿದ್ದರೆ ಅದು ನನ್ನ ಹೊಣೆಗಾರಿಕೆ ಆಲ್ಲ .ನನಗೆ ತಿಳಿದ ಹಾಗೆ ಅವರು ಸತ್ಯದ ಪರವಾಗಿ ನಿಂತದಕ್ಕೆ ತು೦ಬಾ ಕಿರುಕುಳ ಮತ್ತು ಜ್ಯೆಲುವಾಸ ಸಹಾ ಅನುಭಿವಿಸಿದದಾರ್ .ಇನ್ನು ಒಂದು ಗುಟ್ಟಿನ ಸಂಗತಿ ಅ೦ದರೆ – ನಂಗೆ ಅವರ ವ್ಯಉಕ್ತಿಕ ಪರಿಚಯ ಸಹಾ ಇಲ್ಲ ಮತ್ತು ಅದ್ರ ಅಗತ್ಯ ಸಹಾ ಇಲ್ಲ ! ಇನ್ನು Outlook,India Todayನ ಯಾವುದೇ ಲೇಖ ನಕ್ಕೂ ಸಿಕ್ಕದ “Like”ಅವರ ಲೆಇಖನಕ್ಕೆ Face bookನಲ್ಲಿ ಸಿಕ್ಕುವುದು ಮಾತ್ರ ಸತ್ಯ.
“ಭಾರತದ ಅಲ್ಪಸಂಖ್ಯಾತರ ಭದ್ರತೆ ಹಾಗೂ ಅಭ್ಯುದಯವನ್ನೇ ತನ್ನ ಧ್ಯೇಯವಾಗಿಸಿಕೊಂಡಿರುವ ಕಾಂಗ್ರೆಸ್ ಪಕ್ಷವನ್ನೇ ಮುಸ್ಲಿಂ ವಿರೋಧಿ ಅಂತ ಇದೇ ಲೇಖನದಲ್ಲೇ ಹೇಳಿರುವ ಸೂರಿಂಜೆ ಬಗೆ ಮುಸ್ಲೀಮರು ಹೇಗೆ ತಾನೇ ವಿಶ್ವಾಸ ಇಡಬಲ್ಲರು?”
ನೀವು assume ಮಾಡುವುದು ಏನೆಂದರೆ – ಭಾರತದ ಮುಸ್ಲಿಮರೆಲ್ಲಾ Congressna Card carrying member ಎಂದಾ ? Very wrong.
“ಆದರೆ ಕಬೀರನ ಮರಣದಲ್ಲಿ ಹಿಂದುತ್ವವಾದಿಗಳ ಕೈವಾಡವನ್ನು ಆರೋಪಿಸುವ, ಪೋಲೀಸರ ವೃತ್ತಿನಿಷ್ಠೆ ಬಗ್ಗೆ ಅನುಮಾನದ ಬೀಜ ಬಿತ್ತುವ, ಮುಸಲ್ಮಾನರೆಲ್ಲರೂ ಅಮಾಯಕರು ನಿರಪರಾಧಿಗಳು ಎಂದು ಏರು ಕಂಠದಲ್ಲಿ ಕೂಗುವ ದೊಡ್ಡ ಸಮೂಹವೂ ಇದೆ.”
ಇರಬಹುದು ,ಅದನ್ನು ನಾನು ಅಲ್ಲಗೆಳೆಯುದಿಲ್ಲ. ಆದ್ರೆ ಭಾರತದ ಪೋಲೀಸರ ಬಗ್ಗೆ ಕೇವಲ ಅನುಮಾನ ಮಾತ್ರ್ವಲ್ಲ. ಜಗತ್ತಿನಲ್ಲಿಯೇ ಇವರ standing ಆತೀ ನೀಚ ತರಹದ್ದು ಆಗಿದೆ..
ಜಗತ್ತು ಸುತ್ತಿರುವ ನನಗೆ ಇದರ ನೇರ ಪರಿಚಯ ಇದೆ.
ಇನ್ನು ಮನುಷ್ಯ ಜೀವ ಅದು ಕಬೀರ್ನದ್ದೆ ಇರಲಿ,ರಾಮ ಅಥವಾ ಜೊರ್ಜನದ್ದೇ ಇರಲಿ ಅದು ಅತೀ ಅಮೂಲ್ಯ ಅಂತ ಒಳಗೊಳ್ಳುವ ಒಂದು mind set ನಮ್ಮೆಲ್ಲರಲ್ಲಿ ಬೆಳೆಯಬೇಕು ,ಆಗ
ಇಂಥಾ planned encounter ಗಳು ಇಲ್ಲವಾಗಿ ,ಮಾನವೀಯತೆ , land of the lawವನ್ನು ಗೌರವಿಸುವ ಪ್ರವತ್ತಿ ಉದ್ದೀಪನವಾಗುತ್ತದೆ .
ಇದು ಎಲ್ಲಾ ಶಾಂತಿಪ್ರಿಯ ಭಾರತೀಯ ನಾಗರಿಕರ ಆಶಯ
ಕರ್ತವ್ಯನಿಷ್ಠ ಪೊಲೀಸರಿಗೆ ಕೋಮುವಾದಿ ಎಂಬ ಬಿರುದನ್ನೂ ಹಿಂದೆ ಮುಂದೆ ಯೋಚನೆ ಮಾಡದೆ ಕೊಡುವ ನೀವು ಸೂರಿಂಜೆಯನ್ನು ವಿವಾದತ್ಮಕ ಎಂದುದಕ್ಕೆ ತಕರಾರು ತೆಗೆಯುತ್ತೀರಿ!! ಇದು ಹಿಪಾಕ್ರಸಿಯಲ್ಲವೇ ಸಲೀಂ ಅವರೇ? ಫೇಸ್ಬುಕ್ ನಲ್ಲಿ ಬರುವ ಅಭಿಪ್ರಾಯಗಳ ಬಗ್ಗೆ ನೀವೇ ಅಸಹ್ಯ ವ್ಯಕ್ತಪಡಿಸಿದ್ದೀರಿ ಅದೇ ಫೇಸ್ಬುಕ್ ನಲ್ಲಿ ಸೂರಿಂಜೆ ಬರಹಗಳಿಗೆ ಬಂದ ಲೈಕುಗಳ ಆಧಾರದ ಮೇಲೆ ಸೂರಿಂಜೆ ಶ್ರೇಷ್ಠ ಅನ್ನುತ್ತೀರಿ! ಇದೂ ಸಹ ಹಿಪಾಕ್ರಸಿಯಲ್ಲವೇ ಬಾವ ಅವರೇ? ಎಲ್ಲರ ಜೀವ ಅಮೂಲ್ಯ ಅಂತೀರಿ, ಚತ್ತೀಸ್ ಘದದಲ್ಲಿ ನಕ್ಸಲ್ ದಾಳಿಗೆ ತುತ್ತಾದ ಜನರ ಬಗ್ಗೆ ಇದುವರೆಗೆ ಒಂದೂ ಮಾನವೀಯ ಕಮೆಂಟನ್ನು ಮಾಡಿಲ್ಲ ನೀವು! ಇದೆಂತಹ ಮಾನವೀಯತೆ ನಿಮ್ಮದು???
“ನೀವು assume ಮಾಡುವುದು ಏನೆಂದರೆ – ಭಾರತದ ಮುಸ್ಲಿಮರೆಲ್ಲಾ Congressna Card carrying member ಎಂದಾ ? Very wrong.”
ಇಮಾಂ ಬುಖಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ಕೊದತಕ್ಕದು ಅಂತ ಮುಸಲ್ಮಾನರಿಗೆ ಈ ವರೆಗೆ ಎಷ್ಟು ಬಾರಿ ಫತ್ವಾ ಕೊಟ್ಟಿದ್ದಾರೆ ಗೊತ್ತಾ ಬಾವ ಅವರೇ? ಆದರೆ ಒಮ್ಮೆಯೂ ನೀವು ಬುಖಾರಿಯ ಫತ್ವಾವನ್ನು ವಿರೋಧಿಸಿ ಪ್ರತಿಕ್ರಿಯೆ ಕೊಟ್ಟದ್ದು ನನ್ನ ಕಣ್ಣಿಗೆ ಬಿದ್ದಿಲ್ಲ. ನೀವು ಕಾಂಗ್ರೆಸ್ ಕಾರ್ಡ್ ಕ್ಯಾರಿಯಿಂಗ್ ಮೆಂಬರ್ ಅಲ್ಲ ಅಂತ ನಾನು ಹೇಗೆ ನಂಬಲಿ?
ಒಂದಾ ನಿಮ್ಮದು ಜಾಣ ಮರೆವು ಅಥವಾ ಅರಿವಿನ ಕೊರತೆ. ನಾನೆಲ್ಲೂ Face Book ನ್ನು ತೆಗಳಿಲ್ಲ ,ಆದ್ರೆ ನಿಮ್ಮಂಥ ಕೆಲವರ ಕ್ರೂರ comments ಗಳನ್ನು ಕಂಡಿಸಿದ್ದೇನೆ .ನಕ್ಷಲರ ಕುರಿತ ನನ್ನ ನಿಲುವಿನ ಕುರಿತು ನಿಮಗೆ ಕನಸು ಬಿತ್ತೆ? ಇನ್ನು ಜಗತ್ತಿನ ಎಲ್ಲಾ ವಿಷಯಕ್ಕೂ ಪ್ರತಿಕಯಿಸಲು ನಾನೇನೂ U.N.Ambassador ಅಲ್ಲ,ಆದರೆ “ವರ್ತಮಾನ “ದಲ್ಲಿ ಅಂಥಾ ಒಂದು ಲೀಖನ ಪ್ರಕಟವಾಗಿ ದ್ದಿದ್ದರೆ ಕಂಡಿತಾ ಮಾನವೀಯವಾಗಿ ಪ್ರತಿಕಯಿಸುತ್ತಿದ್ದೆ. ನಿಮ್ಮ ಹಾಗೆ ಒಂದು ಸಮುದಾಯದ ಬಗ್ಗೆ ಅಸಹನೆ ತೋರುತ್ತಿರಲಿಲ್ಲ.
ಇನ್ನು ಮುಸ್ಲಿಂರ ಬಗ್ಗೆ ನಿಮಗೆ ತುಂಬಾ ಪ್ರೆಜುಡಿಸ್ ಇದೆ,ಅದನ್ನು ಕಳಚಿಟ್ಟು ನೋಡಿದರೆ,ನೀವು ತಿಳಿಸಿದ ಇಮಾಂ ದೆಲ್ಹಿಯ ಒಂದು ಮಸೀದಿಯ ಇಮಾಂ ,ಇಡೀ ದೇಶದ್ದು ಅಲ್ಲ,ಮುಸ್ಲಿಮರು ರಾಜಕೀಯವಾಗಿ ಸ್ವತಂತ್ರ ತಿರ್ಮಾನ ಕೈ ಕೊಳ್ಳುವಂತವರು ಎಂದು ತಿಳಿಯ ಬಹುದು .
ನೀವು ಅಸಲಿ ವಿಶಯ ವಾದ ಒಬ್ಬ ಅಮಾಯಕನ ದಾರುಣ ಹತ್ಯೆಯನ್ನು ಯಾವುದಕ್ಕೆಲ್ಲಾ ಜೋಡಿಸುವ ,ಅದರಿಂದ ಪಲಾಯನ ಮಾಡುವ ಬದಲು -ನಿಮ್ಮ ಮನಸ್ಸಾಕ್ಸಿಯ ಕರೆಗೆ ಓಗೊಟ್ಟು ,ಈ ನರಹತ್ಯೆಯನ್ನು ಕಂಡಿಸಿ . ಅದಕ್ಕೆ ಬಲಿಯಾದವನು ನಿಮ್ಮ್ವನಲ್ಲ ಎಂಬ ಒಂದೇ ಕಾರಣಕ್ಕೆ ಈ ಮಾರಣ ಕ್ರತ್ಯ ವನ್ನು Blind ಆಗಿ justify ಮಾಡಬೇಡಿ
“ಮುಸ್ಲಿಂರ ಬಗ್ಗೆ ನಿಮಗೆ ತುಂಬಾ ಪ್ರೆಜುಡಿಸ್ ಇದೆ”
“ಬಲಿಯಾದವನು ನಿಮ್ಮ್ವನಲ್ಲ ಎಂಬ ಒಂದೇ ಕಾರಣಕ್ಕೆ ಈ ಮಾರಣ ಕ್ರತ್ಯ ವನ್ನು Blind ಆಗಿ justify ಮಾಡಬೇಡಿ”
“ನಿಮ್ಮ ಹಾಗೆ ಒಂದು ಸಮುದಾಯದ ಬಗ್ಗೆ ಅಸಹನೆ ತೋರುತ್ತಿರಲಿಲ್ಲ.”
ಇದೊಳ್ಳೆ ತಮಾಷೆ ಆಯಿತಲ್ಲ! ನನ್ನ ಬಗ್ಗೆ ನಿಮಗೆ ಇಷ್ಟೆಲ್ಲಾ ಪೂರ್ವಗ್ರಹ ಇದೆ ಅಂತ ಗೊತ್ತಿದ್ದರೆ ನಿಮ್ಮ ಗೊಡವೆಗೆ ಬರುತ್ತಿರಲಿಲ್ಲ! ನಿಮ್ಮ ವಿಕೃತಿಗೆ ನನ್ನೇಕೆ ಬಾಲಿ ಕೊಡಲಿ?
“ಜಗತ್ತಿನ ಎಲ್ಲಾ ವಿಷಯಕ್ಕೂ ಪ್ರತಿಕಯಿಸಲು ನಾನೇನೂ U.N.Ambassador ಅಲ್ಲ”
ನಿಮ್ಮ selective ಮಾನವೀಯತೆ ಹಾಗೂ ಸಾಕ್ಷಿ ಪ್ರಜ್ಞೆಯ ಪರಿಚಯ ನಮಗಿದೆ. ಆದುದರಿಂದ ನಿಮ್ಮ ಈ ಹೇಳಿಕೆ ಆಶ್ಚರ್ಯವನ್ನು ಹುಟ್ಟಿಸಲಿಲ್ಲ, ಬದಲಿ ಜಿಗುಪ್ಸೆ ಹುಟ್ಟಿಸಿತು. ಸತ್ತವನು ಮುಸಲ್ಮಾನ ಎಂಬ ಒಂದೇ ಒಂದು ಕಾರಣಕ್ಕೆ ಸೂರಿಂಜೆಯ ಪೂರ್ವಗ್ರಹ ಪೀಡಿತ ಲೇಖನಕ್ಕೆ ಚಪ್ಪಾಳೆ ತಟ್ಟುವ ಬುದ್ಧಿ ನಿಮ್ಮದು.
“ಜಗತ್ತಿನ ಎಲ್ಲಾ ವಿಷಯಕ್ಕೂ ಪ್ರತಿಕಯಿಸಲು ನಾನೇನೂ U.N.Ambassador ಅಲ್ಲ”
ಸಲಾಂ ಬಾವ ಅವರೇ, ಸರಿ. ನೀವಿರುವುದು ಮಧ್ಯಪ್ರಾಚ್ಯ ದೇಶದಲ್ಲಿ. ದುರ್ಘಟನೆಯಲ್ಲಿ ಸತ್ತ ಕಬೀರ್ ನಿಮ್ಮ ನೆಂಟನೂ ಅಲ್ಲ ಸ್ನೇಹಿತನೂ ಅಲ್ಲ. ಹೋಗಲಿ ಅವನ ಕನಿಷ್ಠ ಪರಿಚಯವೂ ನಿಮಗಿಲ್ಲ. ದುರ್ಘಟನೆ ನಡೆದ ಸ್ಥಳದಲ್ಲಿ ನೀವಿರಲಿಲ್ಲ, ನೀವು ಪ್ರತ್ಯಕ್ಷದರ್ಶಿಯೂ ಅಲ್ಲ. ಘಟನೆ ಬಗ್ಗೆ ರಂಗುರಂಗಿನ ಕತೆ ಬರೆದ ಸೂರಿಂಜೆಯ ಪರಿಚಯವೂ ನಿಮಗಿಲ್ಲ ಅಂತ ನೀವೇ ಹೇಳಿದ್ದೀರಿ. ಹೀಗಿದ್ದರೂ ಸಹ ಕಬೀರ್ ಸಾವಿನ ವಿಷಯ ನಿಮ್ಮಿಂದ ಪ್ರತಿಕ್ರಿಯೆಯನ್ನು ಹುಟ್ಟಿಸಿತು. ಯಾಕೆ?
ನಿಮ್ಮಿ ಬ್ಬರಲ್ಲೂ ಇಲ್ಲದ “ಮಾನವೀಯತೆ “ಎಂಬ ಒಂದು ಸೆನ್ಸಟಿವಿಟಿ ನನ್ನಲ್ಲಿ ಇರುವುದರಿಂದ. ಮತ್ತು ನಿಮ್ಮಲ್ಲಿ ಅದರ ಲವಲೇಶವೂ ಇಲ್ಲದೆ ಇರುವುದರಿಂದ -ನೀವು ಈ ಲೇಖನಕ್ಕೆ negative ಆಗಿ ಪ್ರತಿಕಯಿಸಿದಿರಿ .ಪಾರ್ಸಿ(fake?) ಹೆಸರಿಟ್ಟ ನೀವು ಕನ್ನಡ ಬಲ್ಲಿರಾದರೆ,ಕನ್ನಡಿಗನೇ ಆದ ನಾನು ಯಾಕೆ ಕ ಮೆಂಟಿಸಬಾರದು. ನಿಮ್ಮ ರಾಜಾದಿಕಾರ “ಬರ್ರ್,ಬರ್ರ್ ” ಬಂದರೆ ಇನ್ನೂ ಇದಕ್ಕೂ ಕತ್ತರಿ ಬೀಳಬಹುದು ಅಲ್ಲವಾ?
ಸಲಾಂ ಬಾವ ಅವರೇ, ಒಬ್ಬ ಅಕ್ರಮ ದನ ಸಾಗಣಿಕೆದಾರನ ಬಗ್ಗೆ ನೀವು ತೋರುವ ಮಾನವೀಯತೆಯನ್ನು ಚತ್ತೀಸ್ ಘಡದ ನಕ್ಸಲರ ಕೈಯಲ್ಲಿ ಕೊಲೆಗೀಡಾದ ಪೋಲೀಸರ ಬಗ್ಗೆಯೂ ತೋರಿದ್ದರೆ ನಿಮ್ಮ ಬಗ್ಗೆ ಹೆಮ್ಮೆ ಉಂಟಾಗುತ್ತಿತ್ತು. ಆದರೆ ನಿಮಗೆ ಚತ್ತೀಸ್ ಘಡದಲ್ಲಿ ಹೋದ ಜೀವಗಳು ನಗಣ್ಯ ಎಂಬಂತೆ “ಜಗತ್ತಿನ ಎಲ್ಲಾ ವಿಷಯಕ್ಕೂ ಪ್ರತಿಕಯಿಸಲು ನಾನೇನೂ U.N.Ambassador ಅಲ್ಲ” ಅಂತ ಬಹಳ ಧಾರ್ಷ್ಟ್ಯದಿಂದ ಹೇಳಿದ್ದೀರಿ. ತನ್ಮೂಲಕ ನಿಮ್ಮ selective ಮಾನವೀಯತೆಯ ಮತ್ತೊಂದು ಸ್ಯಾಂಪಲ್ ಅನ್ನು ವರ್ತಮಾನದ ಪ್ರಾಜ್ಞ ಓದುಗರಿಗೆ ಕೊಟ್ಟಿದ್ದೀರಿ.
ಅಂದ ಹಾಗೆ ಗೋಡ್ಬೋಲೆ ಎನ್ನುವುದು ಫಾರ್ಸಿ ಹೆಸರಲ್ಲ ನೀವು ಅಂದುಕೊಂಡಂತೆ! ಗೋಡ್ಬೋಲೆ ಅನ್ನುವುದು ಕೊಂಕಣಸ್ಥ ಬ್ರಾಹ್ಮಣರ ಒಂದು ಉಪನಾಮ. ಕರ್ನಾಟಕದಲ್ಲಿ ಮುಸಲ್ಮಾನರಷ್ಟೇಲ್ಲ, ಅನೇಕ ಕೊಂಕಣಸ್ಥ ಬ್ರಾಹ್ಮಣರೂ ಇದ್ದಾರೆ! ನಿಮಗಿಂತ ನಿಜಾರ್ಥದಲ್ಲಿ ಕೊಂಕಣಸ್ಥ ಬ್ರಾಹ್ಮಣರೇ ಅಲ್ಪಸಂಖ್ಯಾತರು. 😉
@ಸಲಾಂ ಬಾವಾ
೧) ಪೋಲಿಸರು ಕೂಡ ಒತ್ಡಡದಲ್ಲಿ ಕೆಲಸ ಮಾಡುತ್ತಿರುತ್ತಾರೆ, ಪ್ರತಿಕೂಲ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿರುತ್ತಾರೆ ಎಂಬುದು ಗಮನದಲ್ಲಿರಲಿ. ಅವರೂ ನಮ್ಮಂತೆ ಮನುಷ್ಯರೆ. ಅದೂ ಸೂಕ್ಷ್ಮ ಚೆಕ್ ಪೋಸ್ಟಗಳಲ್ಲಿರುವ ಪೋಲಿಸರಿಗೆ ಜವಾಬ್ದಾರಿ/ ಹೊಣೆ ಜಾಸ್ತಿ. ಚೆಕ್ ಪೋಸ್ಟಗಳಲ್ಲಿ ವಾಹನ ಚಾಲಕರ ಅಸಹಕಾರ, ವರ್ತನೆ ಪೋಲಿಸರಲ್ಲಿ ಅನುಮಾನ ಹುಟ್ಟಿಸುವ ಸಾಧ್ಯತೆ ಇರುತ್ತದೆ. ನಾಳೆ ದೊಡ್ಡದೇನಾದರೂ ಅನಾಹುತ ನಡೆದರೆ..’ಪೋಲಿಸರೇನು ದನ ಕಾಯುತ್ತಿದ್ದರೆ?’ ಅನ್ನುವ ಮಾತು ಕೇಳಬೇಕಾಗಿ ಬರುತ್ತದೆ. ಎಲ್ಲೋ ಕುಳಿತು ಘಟನಾ ಸ್ಥಳದಲ್ಲಿಯೇ ಇದ್ದರೇನೊ ಎಂಬಂತೆ ಲೇಖನ ಬರೆದರೂ..ವಾಸ್ತವ ಬೇರೆ ಇರುವ ಸಾಧ್ಯತೆ ಇರುತ್ತದೆ.
೨) ಅಷ್ಟಕ್ಕೂ ಉದ್ದೇಶಪೂರ್ವಕವಾಗಿ ಮಾಡಿದ ಕೊಲೆ/ ನಕಲಿ ಎನ್ ಕೌಂಟರ್ ಅನಿಸಿದ್ದರೆ…ದೂರು ಕೊಟ್ಟು, ಸಾಕ್ಷಿ ಕೊಟ್ಟು ತನಿಖೆ ಮಾಡಿಸಿ. ನ್ಯಾಯ ಹೊರಗೆ ಬರಲಿ. ಅದನ್ನು ಬಿಟ್ಟು ಊಹಾಪೋಹಗಳಿಂದ ಬೆಂಕಿ ಹಚ್ಚದಿರಿ. ನಿಮ್ಮ ಈ ಸೆಲೆಕ್ಟಿವ ಮಾನವೀಯತೆಯ ಪ್ರದರ್ಶನ ಹೊಸದೇನಲ್ಲ, ಗೊತ್ತಿಲ್ಲದ್ದೇನಲ್ಲ.
೩)ನಿಮಗೆ ಮೋದಿ ಪರವಾಗಿ ಇರುವವರು ಕೌರವರು, ಮೋದಿ ವಿರುದ್ಧ ಇರುವವರೆಲ್ಲ ಪಾಂಡವರು ಎಂಬ ಭಾವನೆ ಇರುವುದು ಸಹಜ. ಈ ಸಹಜತೆಯೆ ನಿಮ್ಮ ತಲೆಯಲ್ಲಿರುವುದೇನು ಮತ್ತು ನೀವೆಷ್ಟು ‘ಮಾನವೀಯ’ರು ಎಂಬುದನ್ನು ತೋರಿಸುತ್ತದೆ. ಇನ್ನೊಂದೇನೆಂದರೆ, ಈ ಮಾನವೀಯತೆಯ ಪಾಠ, ಮಾನವೀಯತೆಯ ಮಾನದಂಡ ಎಡಬಿಡಂಗಿಗಳಿಂದ ನಾವು ಕಲಿಯಬೇಕಾಗಿಲ್ಲ.. ಮೊದಲು ನಿಮ್ಮಲ್ಲಿರುವ ಮತಾಂಧರನ್ನು ಹುಡುಕಿ. ಆವರನ್ನು ತಿದ್ದಿ.. ಅವರ ತಪ್ಪುಗಳನ್ನು ಖಂಡಿಸಿ. ಆಮೇಲೆ ಉಳಿದವರಿಗೆ ಉಪದೇಶ ಮಾಡಲು ಅರ್ಹತೆ ಬರುತ್ತದೆ.. ತೀರ ಅಮಾಯಕರಂತೆ, ತೀರ ತುಳಿಯಲ್ಪಟ್ಟವರಂತೆ, ಹೆದರಿಕೆಯಲ್ಲೇ ಜೀವಿಸುತ್ತಿರುವವರಂತೆ ವರ್ತಿಸದಿರಿ. ವಾಸ್ತವ ಏನು ಅನ್ನುವುದು ಎಲ್ಲರಿಗೂ ಗೊತ್ತು.
೪) ಯಾವುದೇ ‘ಫಲಾ’ಪೇಕ್ಷೆಯಿಲ್ಲದೆ, ‘ಮಾನವೀಯತೆ’ ಉಳಿಸಲೆಂದೇ ಅಹರ್ನಿಶಿ ದುಡಿಯುವ ಪತ್ರಕರ್ತರ ಗುಂಪೇ ಭಾರತದ ಇತರೆಡೆಯಲ್ಲಿ ಇರುವಂತೆ ಕರ್ನಾಟಕದಲ್ಲೂ ಇದೆ.. ಇವರ ಚಟುವಟಿಕೆ/ಕಾರ್ಯಶೈಲಿಯನ್ನು ಕೂಲಂಕುಶವಾಗಿ ಎಲ್ಲರೂ ಗಮನಿಸುತ್ತಿದ್ದಾರೆ. ಇವರ “ನಿರ್ಬೀತ ,ದೌರ್ಜನ್ಯದ ವಿರುದ್ದ ಅಹರ್ನಿಶಿ ಹೋರಾಡುವ” ಕಾರ್ಯಶೈಲಿಯ ಬಗ್ಗೆ ನಾವು ನಂಬಬೇಕೆಂದು ನೀವು ಭಾವಿಸಿದರೆ..ಒಂದು ಮಾತು ‘ಹೂ ಇಡಲು ಬೇರೆ ಕಿವಿ ಹುಡುಕಿ’!
೫) ನಿಮಗೆ ಅಷ್ಟು ಮಾನವೀಯತೆ, ಕಾಳಜಿ ಇದ್ದಲ್ಲಿ, ಕಾಡಿನ ನಕ್ಸಲೀಯರಿಗೆ ಬೆಂಬಲ ಕೊಡುವ ನಾಡಿನ ನಕ್ಸಲೀಯರನ್ನು ಖಂಡಿಸಿ. ನಕ್ಸಲರು ಇರುವ ತನಕ ಪೋಲಿಸರ ಮೇಲೆ ಅನಗತ್ಯ ಒತ್ತಡ ಇರುತ್ತದೆ. ಇಂತಹ ಆಕಸ್ಮಿಕಗಳು ಸಂಭವಿಸುತ್ತಲೇ ಇರುತ್ತವೆ. ಅತ್ತ ಯಾರದೋ ಮಕ್ಕಳನ್ನು ಕಾಡಿಗೆ ಕಳುಹಿಸಿವುದು..ಇತ್ತ ಇಂತಹ ಅನಾಹುತಗಳಾದ ಮೇಲೆ ತನಿಖಾ ವರದಿ, ಪ್ರತಿಭಟನಾ ಸಭೆ, ಹತ್ತು ಲಕ್ಷ ಪರಿಹಾರ ಕೊಡಿ ಎನ್ನುವುದು..ಇಂತಹ ನಾಟಕಗಳು ಬಹುಕಾಲ ನಡೆಯುವುದಿಲ್ಲ.
ನಿಮ್ಮಂಥ ತೊಗಾಡಿಯನ ಮಕ್ಕಳಿಗೆ ಸಭ್ಯತೆಯ ಭಾಷೆ ಅರ್ಥವಾಗುದಿಲ್ಲ . ನಾನು ಸುಸಂಸ್ಕ್ರತವಾಗಿ ಒಬ್ಬ ಮಹನೀಯರ ಹತ್ತಿರ ವಾದ ಮಾಡುತ್ತಿದ್ದೆ. ನೀವಲ್ಲಾ ಕ ಮೆಂಟಿಗರು ,ನಿಮಗೆ ಸಿಕ್ಕಿದ್ದಲೆಲ್ಲಾ ನ್ನೇ ತೂರಿಸುವ ದುಷ್ಟ ಅಬ್ಯಾಸ. “ಹೂ ಇಡಲು” ನೀವೇನು ಹಿಜಡಾ ನೇ ? ಇಲ್ಲಿ ನಡೆದದ್ದು ಓರ್ವ ಯುವಕನ ಬರ್ಬರ ಹತ್ಯೆ ,ಅದನ್ನು ಖಂಡಿಸಲು ಸಹಾ ನಿಮ್ಮಂಥ ವಿಕ್ರತ ಮನಸ್ಸಿಗರ ಮರ್ಜಿ ಕಾಯ ಬೇಕೆಂದರೆ -” .ಇಲ್ಲಿ ಖಾಕಿ ಉಗ್ರ ರು,ಸಂಘ ಪರಿವಾರದ ಕುಮ್ಮಕ್ಕಿನಿಂದ ನಡೆಸಿದ ಈ ಕ್ರತ್ಯ ,ಕಬೀರನ ಶವವನ್ನು ಕೊಂಡೊಯ್ಯಲು ಬಂದ ಅವರ ಕುಟುಂಬದವರ ಮೇಲೆ ಹಲ್ಲೆ ಮಾಡಿ ,ಅವರ ಕಾರನ್ನೇ ಪುಡಿ ಮಾಡಿದವರನ್ನು ಮಾಡಲು ನಿಮ್ಮಂಥ ನರಿಂದಲೇ ಸಾದ್ಯ ,ಹೊರತು ಓರ್ವ ಸಭ್ಯ ನಾಗರಿಕನಿಂದ ಅಲ್ಲ .
ನಿಮ್ಮ ಸಹಾನುಭೂತಿ ಯಾರಿಗೆ ಬೇಕಾಗಿದೆ ?ಎಲ್ಲದರಲ್ಲೂ ಕೋಮನ್ನೇ ಕಾಣುವ ,ಅದೇ ವಿಷವನ್ನು ,ವಿದ್ವೇಷ ವನ್ನು ಪೂರಾ ಸಮಾಜದಲ್ಲಿ ಬಿತ್ತುವ ನಿಮ್ಮಂಥವರಿಂದ ಯಾವ ಪುರುಷಾರ್ಥ ಸಾಧ್ಯವಾಗಿದೆ ?
ಸಹೋದರ ಸಮುದಾಯದ ಓರ್ವ ಸಹೋದರಿಯ ಪ್ರಭುದ್ದ , ಹೇಳಿಕೆಯನ್ನು ಓದಿ,ನಿಮ್ಮ ಪೀತ ಕಣ್ಣಿಗೆ ಹಿತವಾದರೆ !”ಫಲಾಪೇಕ್ಸ್ ,ನಾಟಕ ಎಂದೆಲ್ಲಾ ಬೊಗಳೆ ಬಿಡುವ ನೀವು
ಅದರ ಆಚೆ ಯೋಚಿಸುವ ,ಮಾನವೀಯ ಗುಣದ ಕಿಂಚಿತೂ ಹತ್ತಿರ ಇರದವರು.
The fake encounter of a Muslim youth from Mangalore by the notorious Anti-Naxal Force personnel in Sringeri taluk of Chikmagalur district and subsequent developments have triggered suspicions of a joint operation by Sangh Parivar and ANF with the sole intention of disturbing peace in the society. It seems that the heavily armed ANF deliberately misused their weapons in a bid to accomplish the mission of Sangh Parivar.
cheddi
The rubbish reasons given by the ANF to justify their crime is nothing but an apparent attempt to cover-up the cold-blooded murder of the youth, who was eking out his livelihood through the cattle business. The victim Kabeer’s family members, who are legally carrying out cattle trade for many years, had recently shifted from Jokatte to Krishnapur on the outskirts of the port city. Not a single member in his family has any crime record.
According to reliable sources, Kabeer was gunned down at close range by ANF personnel, who had realized that Kabeer and four others onboard a pick-up truck were transporting cattle. They had not indulged in any illegal activity. In spite of this fact ANF opened fire on them!
There are many ambiguities in the claims of police, according to whom ANF personnel assumed that the people on board pick-up vehicle to be naxals and they were forced to open fire when they ran. The ANF personnel initially claimed that they grew suspicious when the driver failed to pay heed to their direction to stop the vehicle near the check-post. Both claims are contradictory. It is impossible to believe people alighting from a moving vehicle and trying to escape by running!
There are several questions which the police need to answer about this so called encounter: Was there any necessity to open fires at a person, who had no guns in his hands? Why did they shoot him in his chest at close range? Was it not an apparent attempt to murder him instead of capturing? Why did the police allow Sangh Parivar miscreants to attack on the family members of the victim, who had come to Sringeri to claim the dead body? The local residents and family members of the victim are accusing that the ANF personnel have committed this ‘murder’ as per the directions of Sangh Parivar. Some are also accusing that the Sangh Parivar elements within ANF committed this crime. Don’t you think that there must be some truth in these allegations?
This is not the first time ANF unleashing its brutality against innocent citizens in Western Range. We have seen similar fake encounter cases at Menasinahadya in Koppa taluk, Cheru reserve forest area near Subrahmanya and Manjalakadu forest area near Belthangady in recent years. Unfortunately, neither these incidents were considered seriously by the government, nor ANF faced any high level probe for their unpardonable blunders.
The fresh fake encounter once again proved the brutality and bloodthirstiness of the heavily armed ANF. Not only ANF, but also the entire police department and the state government of Karnataka are morally responsible for this coldblooded murder. One thing the government must not forget: Kabeer’s death was the death of trust and patience of the peace-loving people of the state.
[ನಿಮ್ಮಂಥ ತೊಗಾಡಿಯನ ಮಕ್ಕಳಿಗೆ ಸಭ್ಯತೆಯ ಭಾಷೆ ಅರ್ಥವಾಗುದಿಲ್ಲ ]
ಯಾಕೆ ಹಸಿ ಮೆಣಸಿನ ಕಾಯಿ ಇಟ್ಟುಕೊಂಡುವರ ಹಾಗೆ ಆಡುತ್ತಿದ್ದೀರಿ?? ವಾದದ ಬಂಡವಾಳ ಮುಗಿಯಿತೆ? ಅಂದ ಹಾಗೆ ನೀವೇನು ಒಸಾಮಾ ಬಿನ್ ಲಾದೆನ್ ನ ಮಗನಾ?? ಸಭ್ಯತೆ ಏನು ಗುತ್ತಿಗೆ ತೆಗೆದುಕೊಂಡಿದ್ದೀರ?
[ನಿಮಗೆ ಸಿಕ್ಕಿದ್ದಲೆಲ್ಲಾ ನ್ನೇ ತೂರಿಸುವ ದುಷ್ಟ ಅಬ್ಯಾಸ. “ಹೂ ಇಡಲು” ನೀವೇನು ಹಿಜಡಾ ನೇ ? ]
ಅದನ್ನೇ ಹೇಳಿದ್ದು..ಇಂಥಾ ಸ್ಟೋರಿ, ಯಾವನಾದರೂ ಹಿಜಡಾ ಸಿಕ್ಕರೆ ಅವನ ಮುಂದೆ ಹೇಳಿ..ಗೊತ್ತಾಯಿತೆ? ಅಥವಾ ಕನ್ನಡಿ ಮುಂದೆ ನಿಂತು ಹೇಳಿಕೊಳ್ಳಿ.
[ಇಲ್ಲಿ ಖಾಕಿ ಉಗ್ರ ರು,ಸಂಘ ಪರಿವಾರದ ಕುಮ್ಮಕ್ಕಿನಿಂದ ನಡೆಸಿದ ಈ ಕ್ರತ್ಯ ]
ನೀವೇನು ತನಿಖಾ ಸಂಸ್ಥೆ ಮುಖ್ಯಸ್ಥರೆ? ನೀವು ತನಿಖೆ ಮಾಡಿದ್ರಾ? ಪ್ರತ್ಯಕ್ಷ ದರ್ಶಿನಾ? ಈ ಪೋಲಿಸರು, ಸಂಘ ಪರಿವಾರದವರ ಮೇಲೆ ಅಪಾದನೆ ಮಾಡಲು ಇವರೇನು ಬಿಟ್ಟಿ ಸಿಕ್ಕಿದ್ದಾರಾ? ಅಥವಾ ನೀವು ಊಟ ಹಾಕುತ್ತಿರೊ ಇವರಿಗೆ?
[ನಿಮ್ಮ ಸಹಾನುಭೂತಿ ಯಾರಿಗೆ ಬೇಕಾಗಿದೆ ? ]
ಒಳ್ಳೆಯವನಿಗೆ ಮಾತ್ರ ಸಹಾನುಭೂತಿ ಮತ್ತು ಪ್ರೀತಿ ಜಾತಿ-ಮತ-ಧರ್ಮದ ಗಡಿಯಿಲ್ಲದೆ.. ಆದರೆ ನಾಟಕ ಕಂಪನಿಗಳಿಗಲ್ಲ.
[ಎಲ್ಲದರಲ್ಲೂ ಕೋಮನ್ನೇ ಕಾಣುವ ,ಅದೇ ವಿಷವನ್ನು ,ವಿದ್ವೇಷ ವನ್ನು ಪೂರಾ ಸಮಾಜದಲ್ಲಿ ಬಿತ್ತುವ ನಿಮ್ಮಂಥವರಿಂದ ಯಾವ ಪುರುಷಾರ್ಥ ಸಾಧ್ಯವಾಗಿದೆ ?]
ಮಹಾನುಭಾವ..ನಿಮ್ಮ ಕಮೆಂಟಗಳನ್ನು ಓದಿದ ಯಾರಿಗಾದರೂ (ನಿಮ್ಮ ‘ಸಹೋದರ/ಸಹೋದರಿ’ ಯರನ್ನು ಬಿಟ್ಟು!.) ಇದರ ಬಗ್ಗೆ ಸ್ಫಷ್ಟವಾಗಿ ಅರ್ಥವಾಗಿರುತ್ತದೆ..
[ಸಹೋದರ ಸಮುದಾಯದ ಓರ್ವ ಸಹೋದರಿಯ ಪ್ರಭುದ್ದ , ಹೇಳಿಕೆಯನ್ನು ಓದಿ,ನಿಮ್ಮ ಪೀತ ಕಣ್ಣಿಗೆ ಹಿತವಾದರೆ !”ಫಲಾಪೇಕ್ಸ್ ,ನಾಟಕ ಎಂದೆಲ್ಲಾ ಬೊಗಳೆ ಬಿಡುವ ನೀವು
ಅದರ ಆಚೆ ಯೋಚಿಸುವ ,ಮಾನವೀಯ ಗುಣದ ಕಿಂಚಿತೂ ಹತ್ತಿರ ಇರದವರು. ]
ಒಹೊ…ಈ ನಿಮ್ಮ ಸಹೋದರಿ ಬರೆದು ಬಿಟ್ಟುಳು..ನಾವಿದನ್ನು ಕುರಿಯಂತೆ ನಂಬಿ ಬಿಡಬೇಕು! ಮತ್ತು ಇದಕ್ಕೆ ಪ್ರಭುಧ್ಧ ಹೇಳಿಕೆ ಅನ್ನಬೇಕು!!. ಕೋಸ್ಟಲ್ ಡೈಜೆಸ್ಟ ನ ಸಹೋದರಿಯ ಹೇಳಿಕೆ ಓದಿ ಆದ ಮೇಲೆ, ವಾರ್ತಾಭಾರತಿಗೆ ಹೋಗಿದ್ದರೆ,,ಚಿಕ್ಕಪ್ಪ/ದೊಡ್ಡಪ್ಪ ಗಳ ‘ಪ್ರಭುದ್ಧ’ ಹೇಳಿಕೆಗಳು ಸಿಗುತ್ತಿದ್ದವು..
ಅಂದ ಹಾಗೆ, ಸಭ್ಯತೆಯ ಮಹಾಪುರುಷರೆ, [heavily armed ANF deliberately misused their weapons in a bid to accomplish the mission of Sangh Parivar. cheddi ] ,,”cheddi ” ಯಾಕೆ ಬಂತು ಇದರಲ್ಲಿ? ನಿಮ್ಮ ಸಹೋದರಿ ಬರೆದ ಮೂಲ ಲೇಖನದಲ್ಲಿ ಇದು ಇತ್ತೆ? ಅಥವಾ ಎಂದಿನಂತೆ ಚೆಡ್ಡಿ ಕಾಕಿಕೊಳ್ಳುವುದನ್ನು ಮರೆತಿದ್ದರಿಂದ ನೆನಪಿಗೆ ಬಂತೊ?
“ಅಂದ ಹಾಗೆ ನೀವೇನು ಒಸಾಮಾ ಬಿನ್ ಲಾದೆನ್ ನ ಮಗನಾ??”
ವಿಜಯ್ ಅವರೇ, ಸಲಾಂ ಬಾವ ಅವರು ಯಾರ ಮಗನೇ ಇರಲಿ ಅದರಿಂದ ನಮಗೇನಾಗಬೇಕು? ತಂದೆಯ ನೆನಪಾದುದರಿಂದ ಬಾವ ಅವರು ತೊಗಾಡಿಯಾ ಅಂತ ನಾಮಸ್ಮರಣೆ ಮಾಡಿದ್ದಾರೆ. ಬಹುಶಃ ತೊಗಾಡಿಯಾ ಅವರನ್ನು ಪಿತೃಸ್ಥಾನದಲ್ಲಿಟ್ಟು ನೋಡುವವರಿರಬೇಕು ಈ ಬಾವ! ಇನ್ನು ಸಯದ್ ಶಹಾಬುದ್ದೀನ್ ಅವರನ್ನೂ ಭಕ್ತಿಯಿಂದ ನೆನಪಿಸಿಕೊಂಡಿರುವುದರಿಂದ ಶಹಾಬುದ್ದೀನ್ ಅವರೂ ಇವರಿಗೆ ಪಿತೃಸಮಾನ ಎನ್ನಬಹುದು. ಭಾರತದ ಮತೀಯವಾದಿ ರಾಜಕಾರಣದ ಎರಡು ತಲೆಗಳಾದ ತೊಗಾಡಿಯಾ ಹಾಗೂ ಶಹಾಬುದ್ದೀನ್ ಇಬ್ಬರನ್ನೂ ಬಾವ ಅವರು ಪಿತೃರೂಪದಲ್ಲಿ ನೋಡಿದ್ದಾರೆ ಎಂದ ಮೇಲೆ ಬಾವ ಅವರು ನಿಜಕ್ಕೂ ಗ್ರೇಟ್!
@ಗೋಡಬೋಲೆ..
ಹೂಂ..ನೀವು ಹೇಳುವುದು ಸರಿಯಾದದ್ದೆ. ಮೊದಲೇ ಈ ಸೈಯದ್ ‘ಶಾಬಾನೊ’ ಶಹಾಬುದ್ದೀನ್ ಪ್ರಭಾವದ ಬಗ್ಗೆ ಪರಿಚಯ ಮಾಡಿಕೊಟ್ಟಿದ್ದರೆ ಒಳ್ಳೆಯದಿತ್ತು…’ಮಾನವೀಯತೆ’ ಯ ಹರಿಯುವಿಕೆ ಅರ್ಥವಾಗಿರುತ್ತಿತ್ತು!..:)
Blog ನಲ್ಲಿ ಎಲ್ಲಾ ವಾದ ,ಪ್ರತಿವಾದಗಳಿಗೂ ಒಂದು ಪರಿದಿ ಇದೆ. ಇದು ಕೇವಲ ಯಾವ ತಾತ್ವಿಕ ಸ್ವರೂಪವೂ ಇಲ್ಲದೆ ಸಂತೆ ಚರ್ಚೆಯಾಗಿ ನೀವಿಬ್ಬರೂ ಇದನ್ನು ಪರಿವರ್ತಿಸಿದಿರ.ಚೆಡ್ಡಿ ಇತ್ತಾ ?ಲೇ ಖನ ಓದಿ- coastal digest ನಲ್ಲಿದೆ . ನೀವು ಜಗತ್ತಿನಲ್ಲಿ ಫ್ಯಾಸಿಸ್ಟ Ideology ನ್ನು ಅಲ್ಲದೇ ಬೇರೆ ಯಾವುದನ್ನೂ ನಂಬುವುದಿಲ್ಲ .ಈಗ ನಿಮ್ಮ ನಾಯಕರೆ ನಾಮೋ ಅಂಥ ಶುದ್ದ ಉಗ್ರರೇ ಎಲ್ಲರನ್ನು ಸೇರಿಸಿ ಮುನ್ನಡೆಯುವ,inclusive growth with muslims ಕುರಿತು ಭಾಷಣ ಮಾದುತ್ತಾರೆ. ಜಗತ್ತು ಕ್ಪಿಪ್ರವಾಗಿ ಬದಲಾಗುತ್ತಿದೆ,ಮತ್ತು ಚಿಕ್ಕದಾಗುತ್ತಿದೆ. ನೀವು ಮಾತ್ರಾ ದನ,ಸೆಗಣಿ ಎಂದು ಗೊಡ್ಡು ಸಂಪ್ರದಾಯದ ಸುತ್ತಲೂ ಸುತ್ತುವುದುದನ್ನು ಬಿಟ್ಟು ಬಿಡಿ, ಮುಸಲ್ಮಾನರೂ ಬದಲಾಗುತ್ತಿದ್ದಾರೆ. ಇಡೀ ಜಗತ್ತು ಭಾರತವನ್ನು ವೀಕ್ಸಿಸುತ್ತಿದೆ .ಭ್ರಿಟನ್ ನಲ್ಲಿ ೭೫ ಬುದ್ದಿಜೀವಿಗಳು ,ವಿಜ್ಞಾನಿ ಗಳು ಮೋದಿ ಭಾರತ ಪ್ರಧಾನಿಯಾಗುವುದನ್ನು ಖಡಾ ಕಂಡಿತ ವಿರೂದಿಸಿದ್ದಾರೆ ಮತ್ತು ಪತ್ರಿಕಾ ಹೇಳಿಕೆ ಕೊಟ್ತಿದ್ದಾರೆ. ಅವರಲ್ಲಿ ನೀವು ಕುಹಕಿಸುವ ಭಾಬರನ ಮಕ್ಕಳು ಯಾರು ಇಲ್ಲಾ,ಎಲ್ಲಾ ಸಹೋದರ ಸಮುದಾಯದವರು .
ನಿಮ್ಮಂಥ ಸಂತೆ ಚರ್ಚಿಗರಲ್ಲಿ ವಾದಿಸಲು ಕೇವಲ ಪ್ರಾಥಮಿಕ ಶಾಲೆಯ ಮಗು ಸಾಕು,ಅಸ್ಟೇ ನಿಮ್ಮ capacity.
ನೀವೆಲ್ಲಾ classless,below the level, uncultured and low Intellectuality ಮನುಷ್ಯರು. So to hell with you and your ideology.
ಸಲಾಂ ಬಾವ ಅವರೇ, ಅಕ್ರಮ ದನಸಾಗಾಣಿಕದಾರನ ಸಾವನ್ನು ನೆಪವಾಗಿಟ್ಟುಕೊಂಡು ನಿಮ್ಮ ಹೃದಯದಲ್ಲಿರುವ ನಂಜನ್ನೆಲ್ಲ ಇಲ್ಲಿ ಕಾರಿಕೊಂಡಿದ್ದೀರಿ. ಅದೆಷ್ಟೋ ಸಮಯದಿಂದ ಶೇಖರಿಸಿಟ್ಟುಕೊಂಡ ಹೃದಯದ ನಂಜು ಈ ಮೂಲಕವಾದರೂ ಕಡಿಮೆ ಆಗಿ ಆದಷ್ಟು ಬೇಗ ಗುಣಮುಖರಾಗುತ್ತೀರಿ ಎಂದು ಹಾರೈಸುತ್ತೇನೆ. ನಿಮಗೆ ಒಳ್ಳೆಯದಾಗಲಿ.
[ ಕೇವಲ ಯಾವ ತಾತ್ವಿಕ ಸ್ವರೂಪವೂ ಇಲ್ಲದೆ ಸಂತೆ ಚರ್ಚೆಯಾಗಿ ನೀವಿಬ್ಬರೂ ಇದನ್ನು ಪರಿವರ್ತಿಸಿದಿರಿ]
ಕುಣಿಲಾರವನಿಗೆ ನೆಲ ಡೊಂಕು!.
[ಚೆಡ್ಡಿ ಇತ್ತಾ ?ಲೇ ಖನ ಓದಿ- coastal digest ನಲ್ಲಿದೆ .]
coastaldigestDOTcom/index.php/coastal-plus/63864-kabeer-encounter-anf-sangh-parivar-joint-operation
ಫುಲ್ ಲೇಖನದ ಕೊಂಡಿಯನ್ನೇ ಕೊಟ್ಟಿದ್ದೇನೆ. ಇಲ್ಲಿ cheddi ಎಲ್ಲಿದೆ ತೋರಿಸಿ ಸಭ್ಯತೆಯ ಮಹಾಪುರುಷರೆ. ಇಷ್ಟು ಸಣ್ಣ ಲೇಖನದಲ್ಲೇ ನಿಮಗೆ ಬೇಕಾದ್ದನ್ನು ತುರುಕುವ, ಅದನ್ನು ತೋರಿಸಿದ ಮೇಲೂ ಸುಳ್ಳು ಹೇಉವ ಮಹಾನುಭಾವರಿಂದ ತಾತ್ವಿಕತೆಯ ಉಪದೇಶ ಬೇರೆ!
[ನೀವು ಜಗತ್ತಿನಲ್ಲಿ ಫ್ಯಾಸಿಸ್ಟ Ideology ನ್ನು ಅಲ್ಲದೇ ಬೇರೆ ಯಾವುದನ್ನೂ ನಂಬುವುದಿಲ್ಲ ಈಗ ನಿಮ್ಮ ನಾಯಕರೆ ನಾಮೋ ಅಂಥ ಶುದ್ದ ಉಗ್ರರೇ ಎಲ್ಲರನ್ನು ಸೇರಿಸಿ ಮುನ್ನಡೆಯುವ,inclusive growth with muslims ಕುರಿತು ಭಾಷಣ ಮಾದುತ್ತಾರೆ.]
ಈ ಸೈಯದ್ ‘ಶಾಬಾನೊ’ ಶಹಾಬುದ್ದೀನ ಪ್ರಭಾವಿತರದು ಎರವಲು ಬುದ್ಧಿ…ಆದರೆ ಮಾತು ಮಾತ್ರ ಮಾನವೀಯತೆಯ ಗುತ್ತಿಗೆ ಹಿಡಿದವರಂತೆ!!
[ನೀವು ಮಾತ್ರಾ ದನ,ಸೆಗಣಿ ಎಂದು ಗೊಡ್ಡು ಸಂಪ್ರದಾಯದ ಸುತ್ತಲೂ ಸುತ್ತುವುದುದನ್ನು ಬಿಟ್ಟು ಬಿಡಿ, ಮುಸಲ್ಮಾನರೂ ಬದಲಾಗುತ್ತಿದ್ದಾರೆ. ]
ನಮಗೆ ಎರಡೂ ಕಣ್ಣು ಶುದ್ಧವಿದೆ ಮತ್ತು ತಲೆಯಲ್ಲಿ ಸ್ವಂತ ಬುದ್ಧಿಯಿದೆ. ಈ ರೀತಿ ಕಾಮಿಡಿಯನ್ನು ನಿಮ್ಮ ಬಂದು-ಬಾಂಧವರ ಮುಂದೆ ಮಾಡಿ..ನಂಬಬಹುದು!.
[ಇಡೀ ಜಗತ್ತು ಭಾರತವನ್ನು ವೀಕ್ಸಿಸುತ್ತಿದೆ .ಭ್ರಿಟನ್ ನಲ್ಲಿ ೭೫ ಬುದ್ದಿಜೀವಿಗಳು ,ವಿಜ್ಞಾನಿ ಗಳು ಮೋದಿ ಭಾರತ ಪ್ರಧಾನಿಯಾಗುವುದನ್ನು ಖಡಾ ಕಂಡಿತ ವಿರೂದಿಸಿದ್ದಾರೆ ಮತ್ತು ಪತ್ರಿಕಾ ಹೇಳಿಕೆ ಕೊಟ್ತಿದ್ದಾರೆ. ಯಾರು ಇಲ್ಲಾ,ಎಲ್ಲಾ ಸಹೋದರ ಸಮುದಾಯದವರು .]
ಹುಂ..ಅದಕ್ಕೆ ಈಗ ಏನು ಮಾಡೋಣ ಅಂತೀರಿ? ರಾಹುಲ್ ಗಾಂಧಿಯನ್ನ ಪ್ರಧಾನಿ ಮಾಡೋಣವೊ ಅಥವಾ ಅಸಾವುದ್ದೀನ ಒವೈಸಿಯನ್ನೊ? ಸಾಹೇಬರಿಗೆ ಪಶ್ಚಿಮದಿಂದ ಬಂದಿದ್ದೇ ಶ್ರೇಷ್ಠ ಅಥವಾ ಅಲ್ಲಿಯವರು ಹೇಳಿದರೇ ನಂಬಲೇಬೇಕು ಎನ್ನುವ ಭಾವನೆ ಇರುವಂತಿದೆ.
[ನಿಮ್ಮಂಥ ಸಂತೆ ಚರ್ಚಿಗರಲ್ಲಿ ವಾದಿಸಲು ಕೇವಲ ಪ್ರಾಥಮಿಕ ಶಾಲೆಯ ಮಗು ಸಾಕು,ಅಸ್ಟೇ ನಿಮ್ಮ capacity.
ನೀವೆಲ್ಲಾ classless,below the level, uncultured and low Intellectuality ಮನುಷ್ಯರು. So to hell with you and your ideology.]
ಪಾಪ..ಕನ್ನಡಿ ನೋಡುತ್ತ ಮಾತನಾಡುತ್ತಿರಬೇಕು. Get well soon!!.. ಸ್ವಂತ ಕಾಲು, ಸ್ವಂತ ಬುದ್ಧಿಯ ಮೇಲೆ ನಡೆದಾಡುವ ದಿನಗಳು ಬರಲಿ ಎಂಬ ಹಾರೈಕೆ. 🙂
“ನಿಮ್ಮಂಥ ತೊಗಾಡಿಯನ ಮಕ್ಕಳಿಗೆ ಸಭ್ಯತೆಯ ಭಾಷೆ ಅರ್ಥವಾಗುದಿಲ್ಲ”
ಸಲಾಂ ಬಾವ ಅವರೇ, ನಿಮ್ಮ ಈ ಮಾತುಗಳು ನಿಮಗೆ ಶೋಭೆ ನೀಡುತ್ತವೆಯೇ? ನಿಮ್ಮನ್ನು ಇಲ್ಲಿ ಯಾರಾದರೂ ಮದಾನಿಯ ಮಕ್ಕಳೆಂದೂ ಒವೈಸಿಯ ಮೊಮ್ಮಕ್ಕಳೆಂದೂ ಕರೆದಿದ್ದಾರೆಯೇ? ತೊಗಾಡಿಯನ ಮಕ್ಕಳು ನೀವೇ ಇರಬಹುದು. ಅಲ್ಲ ಅಂತ ಏನು ಗ್ಯಾರಂಟಿ? ನಿಮ್ಮ ಮಾನವೀಯತೆಯಲ್ಲಿರುವ ಮೋಸವನ್ನು ತೋರಿಸಿಕೊಟ್ಟಿದ್ದಕ್ಕೆ ತೊಗಾಡಿಯನ ಮಕ್ಕಳು ಅಂತೆಲ್ಲ ಅನಾಗರಿಕವಾಗಿ ಕರೆಯುವುದು ಸರಿಯೇ?
“ಖಾಕಿ ಉಗ್ರ ರು,ಸಂಘ ಪರಿವಾರದ ಕುಮ್ಮಕ್ಕಿನಿಂದ ನಡೆಸಿದ ಈ ಕ್ರತ್ಯ”
ಇದು ನೀವು ಮಾಡುತ್ತಿರುವ ಆಪಾದನೆ. ನಿಮ್ಮ ಆಪಾದನೆಗೆ ಪೂರಕವಾಗಿ ಆಧಾರ ಏನಿದೆ? ತನಿಖೆ ಆಗುವ ಮೊದಲೇ ಎಲ್ಲವನ್ನೂ ಪ್ರತ್ಯಕ್ಷ ನೋಡಿದವರ ಹಾಗೆ ವರ್ತಿಸುವುದು ನ್ಯಾಯವೇ?
“They had not indulged in any illegal activity.”
ಇದು ಸತ್ಯವೇ? ಪೋಲೀಸರ ವರ್ತನೆ ಸರಿ ಅಂತ ಹೇಳುತ್ತಿಲ್ಲ. ಆದರೆ ಅವರ ಮೇಲೆ ಸಲ್ಲದ ಆರೋಪ ಮಾಡುವುದು ಸರಿಯೇ? ಕಬೀರ್ ಜೊತೆಗಿದ್ದ ವಾಹನ ಚಾಲಕ ಪ್ರವೀಣ್ ಪೂಜಾರಿ ಈ ಹಿಂದೆ ಇದೇ ರೀತಿ ಅಕ್ರಮವಾಗಿ ದನ ಸಾಗಿಸುತ್ತಿದ್ದಾಗ ಚೆಕ್ ಪೋಸ್ಟ್ ಒಂದರಲ್ಲಿ ಕಂಡ ಪೋಲೀಸರ ಮೇಲೆ ಗಾಡಿ ಓಡಿಸಿ ಕೊಲ್ಲುವ ಪ್ರಯತ್ನ ಮಾಡಿದ್ದ ಹಾಗೂ ಅವನಿಗೆ ಕೊಲೆ ಯತ್ನ ಮಾಡಿದ ಅಪರಾಧಕ್ಕೆ ಶಿಕ್ಷೆಯೂ ಆಗಿತ್ತು ಅಂತ ಇಂದು ವರದಿಯಾಗಿದೆ. ಈ ಬಗ್ಗೆ ಏನು ಹೇಳುತ್ತೀರಿ?
ನನಗೆ ಈಗ ಸಂಶಯ ವಾಗುತ್ತದೆ -ನೀವು ಇಬ್ಬರೂ ಒಂದೇ ವ್ಯಕ್ತಿಯಾ ಎಂದು . ಒಬ್ಬರು ಅಸಭ್ಯ ವಾಗಿ ಬರೆದು ನನ್ನ ಅಭಿಮಾನ ಕೆಣಕಿದರೆ ಅದನ್ನು ಸಹಿಸಲು ಸಾದ್ಯವಿಲ್ಲ . ಅವರ ವರಸೆಯಲ್ಲಿಯೀ ಅವರಿಗೆ ಉತ್ತರ ಕೊಟ್ಟಿದ್ದೇನೆ . ಅದರಿಂದ ನಿಮಗೇಕೆ ನೋವಾಗ ಬೇಕು.ನಿಮ್ಮಲ್ಲಿ ಅತ್ಯಂತ ಸಭ್ಯವಾಗಿ ಇದ್ದೆನಲ್ಲಾ ! ನಾನು ಒಂದು ನರಹತ್ಯೆಯನ್ನು ಖಂಡಿಸಿ ಬರೆದರೆ ಅದನ್ನು ಪ್ರತಿಭಟಿಸುವ ನೀವು ಈಗೇಕೆ ಒಬ್ಬ ಕಮೆಂಟಿಗರಿಗೆ ಎದುರೇಟು ಕೊಟ್ಟರೆ ನನ್ನನ್ನು ಆಕ್ಸೇಪಿಸುತ್ತೇರಿ ?. ನಿಮ್ಮ ಸಮುದಾಯದವನೆಂದೆ .
Blog ನಲ್ಲಿ ಎಲ್ಲಾ ವಾದ ,ಪ್ರತಿವಾದಗಳಿಗೂ ಒಂದು ಪರಿದಿ ಇದೆ. ಇದು ಕೇವಲ ಯಾವ ತಾತ್ವಿಕ ಸ್ವರೂಪವೂ ಇಲ್ಲದೆ ಸಂತೆ ಚರ್ಚೆಯಾಗಿ ನೀವಿಬ್ಬರೂ ಇದನ್ನು ಪರಿವರ್ತಿಸಿದಿರ.ನೀವು ಸಹಾ ಅದೇ ಮಟ್ಟಕ್ಕೆ ಇಳಿದುದರಿಂದ ನಿಮ್ಮನ್ನು ಸಹಾ ಅದೇ ತಂದೆಯ ಮಗ ಎಂದು ಸಂಭೋಷಿ ಬೇಕು.
ನೀವೆಲ್ಲಾ classless,below the level, uncultured and low Intellectuality ಮನುಷ್ಯರು. So to hell with you and your ideology.
ಮನಸ್ಸು ಹೃದಯ ತುಂಬಾ ನಂಜನ್ನೇ ಶೇಖರಿಸಿ ಇಟ್ಟುಕೊಂಡಿರುವ ಸಲಾಂ ಬಾವ ಅವರ ಸಂಸ್ಕೃತಿಯ ನಗ್ನ ದರ್ಶನ ಇಲ್ಲಾಗುತ್ತಿದೆ. ಮಾತೆತ್ತಿದರೆ ಅಪ್ಪನ ಅಮ್ಮನ ಬಗ್ಗೆ ಮಾತನಾಡುವ ಇವರ ಪ್ರತಿ ಕಮೆಂಟಿನಲ್ಲೂ ಹೊಲಸೇ ತುಂಬಿದೆ! ಇಂಥ ‘ಸುಸಂಸ್ಕೃತ’ರು ಮುಸ್ಲಿಂ ಸಮುದಾಯದ ಸಾಂಸ್ಕೃತಿಕ ವಕ್ತಾರನಂತೆ ವರ್ತಿಸುವುದನ್ನು ನಿಲ್ಲಿಸಬೇಕು. ಏಕೆಂದರೆ ಮುಸಲ್ಮಾನರಲ್ಲಿ ಬಹುಮಂದಿ ಬಾವ ಅವರ ಈ ಅಪ್ಪ-ಅಮ್ಮ ‘ಸಂಸ್ಕೃತಿ’ಯನ್ನು ಒಪ್ಪುವುದಿಲ್ಲ. ಒಂದು ಕೋತಿ ವನವನ್ನು ಕೆಡಿಸಿದಂತೆ ಈ ಬಾವ ತಮ್ಮ ‘ಸಂಸ್ಕೃತಿ’ಯಿಂದ ಮುಸ್ಲಿಮ ಸಮುದಾಯಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ.
ಮ್ಮ ಭಾಷೆಯಲ್ಲಿಯ್ ಉತ್ತರ ಕೊಟ್ಟರೆ -ನಂಜು ,ಪಂಜು ಎಂದೆಲ್ಲಾ ಬಡಬಡಿಸುತ್ತೀರಿ. ನನಗೆ ನನ್ನ ಸಮುದಾಯಕ್ಕೆ ನಿಮ್ಮಂಥ ಮತ್ಹಾನದರಿಂದ ಯಾವ ಡೊಂಗಿ conduct certificate ನ ಅಗತ್ಯ ಇಲ್ಲ. ನನ್ನ ಬಹಪಾಲು ಮಿತ್ರರು ಸಹೋದರ ಸಮುದಾಯದವರು ಮತ್ತು ನಿಮ್ಮಂಥ ಉಗ್ರರು ಎಲ್ಲಾ ಸಮುದಾಯದಲ್ಲಿಯೂ ಅಲ್ಪಸಂಖ್ಯಾಕರೆ !ನೀವು ಸಹ ಮುಸ್ಲಿಮರನ್ನು ಆತ್ಮೀಯವಾಗಿ ಅರಿಯಲು ನೋಡಿ ,ಮತ್ತು ಯಾರು ಎಲ್ಲಿ ಲೇಖನ ಬರೆದರೂ ಅದನ್ನು ಕೇವಲ ಕೋಮುವಾದಿ ಕಣ್ಣಿನಿಂದ ಪ್ರತಿಕಯಿಸಲು ಹೋಗದೆ ವಸ್ತು ನಿಸ್ಟ ವಾಗಿ,ಮಾನವೀಯವಾಗಿ ಪ್ರತಿಕಯಿಸಲು ಪ್ರಯತ್ನಿಸಿ ಶುಭ ಹಾರಯ್ಕೆಗಳು
ಸಲಾಂ ಬಾವ ಅವರೇ, ನಿಮ್ಮ ಲೆವೆಲ್ಲೇ ಬೇರೆ ನನ್ನ ಲೆವೆಲ್ಲೇ ಬೇರೆ! ನಿಮ್ಮ ಭಾಷೆಯೇ ಬೇರೆ ನನ್ನ ಭಾಷೆಯೇ ಬೇರೆ! ದಯವಿಟ್ಟು ನಿಮ್ಮ ಅಸಭ್ಯ ವರ್ತನೆಯನ್ನು ನನ್ನ ತಲೆಗೆ ಹೊರಿಸುವ ಚೀಪ್ ಯತ್ನವನ್ನು ಬಿಡಿ. ನಾನು ಅ) ನಿಮ್ಮನ್ನು ಒವೈಸಿಯ ಮಗ, ಮದಾನಿ ಮಗ ಅಂತೆಲ್ಲ ಕರೆದಿಲ್ಲ ಆ) ಮೋದಿಯ ವೈಭವೀಕರಣವನ್ನೂ ಎಲ್ಲೂ ಮಾಡಿಲ್ಲ (ನನ್ನ ವೋಟು ಕೇಜ್ರೀವಾಲ್ ಅವರಿಗೆ) ಇ) ಮುಸಲ್ಮಾನರ ತುಚ್ಚೀಕರಣವನ್ನೂ ಮಾಡಿಲ್ಲ ಈ) ನಕ್ಸಲರ ಉಪಟಳದಿಂದ ರಾಜ್ಯದ ಜನತೆಯನ್ನು ರಕ್ಷಿಸುತ್ತಿರುವ ಪೋಲೀಸರನ್ನು ನರಹಂತಕರು ಅಂತ ಕರೆದಿಲ್ಲ ಉ) ವರ್ತಮಾನದ ಓದುಗರ ಬೌದ್ಧಿಕ ಸಾಮರ್ಥ್ಯದ ಬಗ್ಗೆ ಅಪಹಾಸ್ಯ ಮಾಡಿಲ್ಲ. ನಿಮ್ಮ ವಾದದಲ್ಲಿರುವ ಲೋಪದೋಷಗಳನ್ನು ತೋರಿಸಿಕೊಟ್ಟಿದ್ದು ನನ್ನ ಅಪರಾಧ (ನಿಮ್ಮ ದೃಷ್ಟಿಯಲ್ಲಿ). ಆ ಅಪರಾಧಕ್ಕೆ ನಿಮ್ಮಿಂದ ಹೇಳಿಸಿಕೊಂಡದ್ದು ಸಾಕು. ಹೊಲಸಿನ ಹೊಂಡಕ್ಕೆ ಕಲ್ಲು ಹೊಡೆಯುವ ಹವ್ಯಾಸ ನನಗಿಲ್ಲ. ನಿಮ್ಮ ದುರ್ವರ್ತನೆಯನ್ನು ಮುಂದುವರೆಸಿ, ನನ್ನ ಅಭ್ಯಂತರವಿಲ್ಲ. ನಮಸ್ಕಾರ!
Mr.Godbole, Thanks,ಹೆಸರಿನ ವಿಷಯದಲ್ಲಿ ಸಂ ಶಯ ನಿವಾರಣೆಗೆ,ನಿಮಗೆ ಚತ್ತೀಸ್ಗಡ ಇಷ್ಟು ತಲೆಗೆ ಯಾಕೆ ಹತ್ತಿದೆ ಎಂದು ಅರ್ಥವಾಗುತ್ತಿಲ್ಲ ,ಆದರೂ ನಿಮ್ಮ doubt clear ಮಾಡಲು ನನ್ನ ಹಿಂದಿನ ಕಾಮೆಂಟಿನ ಸಾಲು .
ಆದರೆ “ವರ್ತಮಾನ “ದಲ್ಲಿ ಅಂಥಾ ಒಂದು ಲೀಖನ ಪ್ರಕಟವಾಗಿ ದ್ದಿದ್ದರೆ ಕಂಡಿತಾ ಮಾನವೀಯವಾಗಿ ಪ್ರತಿಕಯಿಸುತ್ತಿದ್ದೆ. ನಿಮ್ಮ ಹಾಗೆ ಒಂದು ಸಮುದಾಯದ ಬಗ್ಗೆ ಅಸಹನೆ ತೋರುತ್ತಿರಲಿಲ್ಲ.”
ಅನ್ಯಾಯ ,ಹಿಂಸೆಯನ್ನು ಅದರ ಯಾವುದೇ ಪ್ರಕಾರದಲ್ಲಿ ನಾನು ಖಂಡಿಸುತ್ತೇನೆ .ಆದರೆ ಯಾರದೇ ಬಲವಂತದ ಹೇರಿಕೆಯ ಮೇರೆಗೆ ಅಲ್ಲ .ಭಾರತ ಕಂಡ ಅತ್ಯಂತ ಮುತ್ಸದ್ದಿ ರಾಜಕಾರಣಿ ಗಳಲ್ಲಿ ಒಬ್ಬರಾದ ,ಹಿರಿಯ ರಾಜತಾಂತ್ರಿಕ ಶ್ರೀ ಸಯೇದ್ ಶಾಹಾಬುದ್ದೀನ್ ಹೇಳಿಕೆ ಕೊಟ್ಟಿದ್ದರು- ” ನಾನು ವಂದೇ ಮಾತರಂ ನ್ನು ಕೆಂಪು ಕೋಟೆಯ ಮೇಲಿನಿಂದ ಘಂಟಾಘೋಷವಾಗಿ ಹಾಡಬಲ್ಲೆ ,ಆದರೆ ಅದ್ವಾನಿ ಅಥವಾ ಸಂಘ ಪರಿವಾರಕ್ಕೆ ನನ್ನ ದೇಶ ಭಕ್ತಿಯ ಸಬೂತು ಮಾಡಲು ಅಲ್ಲ ” ಎಂದು . I stand with this saying.
ಸಲಾಂ ಬಾವ ಅವರೇ, ಸೈಯದ್ ಶಹಾಬುದ್ದೀನ್ ಅವರನ್ನು ತುಂಬಾ ಹತ್ತಿರದಿಂದ ನೋಡಿ ಬಲ್ಲೆ ನಾನು. ಅವರ ಯೋಗ್ಯತೆ ನಿಮಗಿಲ್ಲ. ಅವರೆಂದೂ ಯಾರನ್ನೂ ತೊಗಾಡಿಯಾನ ಮಕ್ಕಳು ಅಂತ ಅಸಭ್ಯವಾಗಿ ಕರೆದಿಲ್ಲ. ಅವರ ಹೆಸರಿನ ದುರುಪಯೋಗ ಮಾಡುವ ಬದಲು ಅವರ ಒಳ್ಳೆಯ ಗುಣಗಳಲ್ಲಿ ಒಂದನ್ನಾದರೂ ಬೆಳೆಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಿ.
“ನಿಮಗೆ ಚತ್ತೀಸ್ಗಡ ಇಷ್ಟು ತಲೆಗೆ ಯಾಕೆ ಹತ್ತಿದೆ ಎಂದು ಅರ್ಥವಾಗುತ್ತಿಲ್ಲ ” ನಾನು ಆಗಲೇ ಹೇಳಿದೆನಲ್ಲ, ನಿಮಗೆ ಮಂಗಳೂರಿನ ಒಬ್ಬ ಅಕ್ರಮ ದನ ಸಾಗಾಣಿಕದಾರನ ಬಗ್ಗೆ ಇರುವ ಮಾನವೀಯತೆ ನಕ್ಸಲರ ಧಾಳಿಗೆ ಒಳಾಗಾಗಿ ಸತ್ತ ಪೋಲೀಸರ ಬಗ್ಗೆ ಇಲ್ಲ. ನಿಮ್ಮ selective ಮಾನವೀಯತೆಗೆ ನಿಮ್ಮಲ್ಲಿ ತುಂಬಿ ತುಳುಕಾಡುತ್ತಿರುವ ಮತೀಯತೆಯೇ ಕಾರಣ.
ಎಂತಾ ಮಾರಾಯ್ರೇ ಇದು?? ನಮಸ್ತೇ ಸದಾ ವತ್ಸಲೇ ಮಾತೃಭೂಮಿ ” ಎನ್ನುತ್ತಾ ಎದೆ ಮೇಲೆ ಕೈಯಿಟ್ಟುಕೊಂಡು ಪ್ರಾರ್ಥನೆ ಮಾಡಿ ದಿನದ ಆರಂಭ ಮಾಡುತ್ತಾರೆ,ಓರ್ವ ಜನಪ್ರತಿನಿಧಿ ಮಹಿಳೆಯನ್ನು ಅಸಭ್ಯವಾಗಿ ನಿಂದಿಸಿ ರಸ್ತೆಯಲ್ಲಿ ಎಳೆದಾಡಿ ಗಲಾಟೆ ಮಾಡುತ್ತಾರೆ… ಊಟಕ್ಕೆ ಕುಳಿತ ಮಹಿಳೆಯನ್ನು ಅನ್ನಕ್ಕೆ ಕೈ ಹಾಕುವ ಮೊದಲೇ ಎಬ್ಬಿಸಿ ಓಡಿಸುತ್ತಾರೆ.. ಎಪ್ಪತ್ತರ ಹಿರಿಯ ಜೀವಿಗೆ ಸೆಗಣಿ ಎರಚಿ ಕೇಕೆ ಹಾಕಿ ನಗುತ್ತಾರೆ, ಅಡಳಿತ ಮಾಡಿ ಅಂತ ಕಳುಹಿಸಿದರೆ ಪವಿತ್ರವಾದ ವಿಧಾನಸಭೆಯಲ್ಲಿ ಕುಳಿತು ಕೋಟ್ಯಾಂತರ ಜನರ ಎದುರಿನಲ್ಲೇ ಪೋಲಿ ಚಿತ್ರ ನೋಡುತ್ತಾರೆ… ಪರಮತಸಹಿಷ್ಣುಗಳು ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ, ಚರ್ಚುಗಳಿಗೆ ಕಲ್ಲು ಹೊಡಿಯುತ್ತಾರೆ, ಮುಸ್ಲಿಮರಿಗೆ ಗುಂಡು ಹೊಡೆಸುತ್ತಾರೆ….ಇದ್ಯಾವ ರೀತಿಯ ಧರ್ಮರಕ್ಷಣೆ? ಇದ್ಯಾವ ರೀತಿಯ ಸಂಸ್ಕೃತಿ? ಯವುದೇ ಬ್ಲಾಗೆ ನೋಡಿ ,ಇವರದ್ದೇ ಆಸ್ತಿಯಂತೆ ವರ್ತಿಸುತ್ತಾರೆ,ಹೀನ ,ಅಮಾನವೀಯ ಭಾಷೆ ಉಪಯೋಗಿಸುತ್ತಾರೆ .ಎಲ್ಲರಿಗೂ ಧಮಕಿ ಕೊಟ್ಟು ಗೂಂಡಾಗಿರಿ ತೋರಿಸುತ್ತಾರೆ ಮತ್ತು ಮಾತು ಮಾತಿಗೆ ಭಾರತೀಯ ಸಂಸ್ಕೃತಿ ಅಂತ ಬೊಬ್ಬೆ ಇಟ್ಟು ,ಕ್ರತಿಯಲ್ಲಿ ಅಖಂಡ ಭಾರತವನ್ನು ಒಡೆಯುವ ಸಂಚು .ದಿಕ್ಕಾರವಿದೆ ಇಂಥಾ ಡೊಂಗಿ ದೇಶ ಭಕ್ತರಿಗೆ
ಎಂತಾ ಮಾರಾಯ್ರೇ ಇದು?? ನಮಸ್ತೇ ಸದಾ ವತ್ಸಲೇ ಮಾತೃಭೂಮಿ ” ಎನ್ನುತ್ತಾ ಎದೆ ಮೇಲೆ ಕೈಯಿಟ್ಟುಕೊಂಡು ಪ್ರಾರ್ಥನೆ ಮಾಡಿ ದಿನದ ಆರಂಭ ಮಾಡುತ್ತಾರೆ,ಓರ್ವ ಜನಪ್ರತಿನಿಧಿ ಮಹಿಳೆಯನ್ನು ಅಸಭ್ಯವಾಗಿ ನಿಂದಿಸಿ ರಸ್ತೆಯಲ್ಲಿ ಎಳೆದಾಡಿ ಗಲಾಟೆ ಮಾಡುತ್ತಾರೆ… ಊಟಕ್ಕೆ ಕುಳಿತ ಮಹಿಳೆಯನ್ನು ಅನ್ನಕ್ಕೆ ಕೈ ಹಾಕುವ ಮೊದಲೇ ಎಬ್ಬಿಸಿ ಓಡಿಸುತ್ತಾರೆ.. ಎಪ್ಪತ್ತರ ಹಿರಿಯ ಜೀವಿಗೆ ಸೆಗಣಿ ಎರಚಿ ಕೇಕೆ ಹಾಕಿ ನಗುತ್ತಾರೆ, ಅಡಳಿತ ಮಾಡಿ ಅಂತ ಕಳುಹಿಸಿದರೆ ಪವಿತ್ರವಾದ ವಿಧಾನಸಭೆಯಲ್ಲಿ ಕುಳಿತು ಕೋಟ್ಯಾಂತರ ಜನರ ಎದುರಿನಲ್ಲೇ ಪೋಲಿ ಚಿತ್ರ ನೋಡುತ್ತಾರೆ… ಪರಮತಸಹಿಷ್ಣುಗಳು ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ, ಚರ್ಚುಗಳಿಗೆ ಕಲ್ಲು ಹೊಡಿಯುತ್ತಾರೆ, ಮುಸ್ಲಿಮರಿಗೆ ಗುಂಡು ಹೊಡೆಸುತ್ತಾರೆ….ಇದ್ಯಾವ ರೀತಿಯ ಧರ್ಮರಕ್ಷಣೆ? ಇದ್ಯಾವ ರೀತಿಯ ಸಂಸ್ಕೃತಿ? ಯವುದೇ ಬ್ಲಾಗೆ ನೋಡಿ ,ಇವರದ್ದೇ ಆಸ್ತಿಯಂತೆ ವರ್ತಿಸುತ್ತಾರೆ,ಹೀನ ,ಅಮಾನವೀಯ ಭಾಷೆ ಉಪಯೋಗಿಸುತ್ತಾರೆ .ಎಲ್ಲರಿಗೂ ಧಮಕಿ ಕೊಟ್ಟು ಗೂಂಡಾಗಿರಿ ತೋರಿಸುತ್ತಾರೆ ಮತ್ತು ಮಾತು ಮಾತಿಗೆ ಭಾರತೀಯ ಸಂಸ್ಕೃತಿ ಅಂತ ಬೊಬ್ಬೆ ಇಟ್ಟು ,ಕ್ರತಿಯಲ್ಲಿ ಅಖಂಡ ಭಾರತವನ್ನು ಒಡೆಯುವ ಸಂಚು .ದಿಕ್ಕಾರವಿದೆ ಇಂಥಾ ಡೊಂಗಿ ದೇಶ ಭಕ್ತರಿಗೆ
@ Vijay- niಮ್ಮಂಥ ಭಾಅಲಿಶರ ಹತ್ತಿರ ವಾದಿಸಬೇಕ್ಕದದ್ದು ಕೆಸರಿಗೆ ಕಲ್ಲಿರಚ್ದಂತೆ ನೀವು ಪೀತ ಪತ್ರಿಕೆಯಲ್ಲಿ ವಾದಿಸಲು ಅರ್ಹರು . ಇಂಥಾ ಪ್ರಬುದ್ಧ್ ಲೇ ಖನ ಕ್ಕೆ ,ಇಂಥ ಅಪ್ರಭುದ್ದರ ಜೊತೆ ವ್ಯರ್ಥ್ ವಾದಿಸುದರಿಂದ ನನಗೆ ಖೇದವಿದೆ .But I am forced to, cheddi-ಆದರೆ ಅದು ನಾನು ಸೇರಿಸದಲ್ಲ ,ಯಾವುದೂ copy ಮಾಡುವಾಗ
ಸೇರಿರಬಹುದು .ನಾನೇ ಸೇರಿಸಿದ್ದು ಅಂತ ನೀವು ವಾದಿಸುದಾದ್ರೆ – I have no problem ,
ನೀವು ಈ ಎಲ್ಲಾ ಸಂಘ ಪರಿವಾರಿಗಳು ಮನುಷ್ಯ್ ,ಮನುಷ್ಯ್ ರ ಮದ್ಯೇ ದ್ವೇಷ ಬಿತ್ತುವುದು -ಕೇವಲ್ ಮೋಒದಿಗಾಗಿ ಮತ್ತು ಅಧಿಕಾರಕ್ಕಾಗಿ ಅಲ್ಲವೇ ನೀವು ಮೋದಿ ಕನಸು ಬಿಡಿ ,ಅದು ಕೇವಲ” ಗರ್ರ “ಗೆ ಮಾತ್ರ ಸೀಮಿತ ,೧೬ಕ್ಕೆ ಅದು ಟುಸ್ಸ್ನ್ದು ಎಂದು ಓಡೆ ಯುತ್ತದೆ .ಭಾರತದಂಥ ಮಹಾನ್ ದೇಶದ ಪ್ರದಾನಿಯಾಗಲು ಅವರು ಯಾವ ಅನ್ಗಲ ನಿಂದ ನೋಡಿದರೂ ಆರ್ಹರಲ್ಲ .ಅವರ Body Language,Knowledge & intellectuality ನೋಡಿ -ಅವರ ಅರ್ಹರೆ ಎಂದು ನೀವೇ ತೀ ರ್ಮಾನಿಸಿ
ಒಳ್ಳೆಯದು ಯಾವುದೇ ದಿಕ್ಕಿನಿಂದ ಬರಲಿ ,ಅದನ್ನು ಸ್ವಾಗತಿಸಬೇಕು ಽದು ಬಿಟ್ಟು ನಿಮ್ಮ ಹಾಗೆ ಕೇವಲ ಗೋಡ್ಸ್ ಯ ತತ್ವಾದಾ ರಕಲಾ ಗಳು ಎಲ್ಲಾ ಬ್ಹಾರತೀಯ ರಿಗೆ ಸಾದ್ಯ್ವವೇ ?
ಇಲ್ಲವಾದರೆ ಒಬ್ಬ ಅಮಾಯಕ ಯುವಕನ (ಅವನ ಜಾತಿ ಯಾವುದೇ ಆಗಿರಲಿ) ಕೊಲೆಯನ್ನು ಖಂಡಿಸುವ ಬದಲು ಅದನ್ನು ನ್ಯಾಯಿಕರಿಸುವುದು ಹಿಂಸಾ ಪ್ರಿಯರಿಗೀ ಮಾತ್ರ ಸ್ಸ್ವೀಕಾರ್ಹ್ .ನೋಡಿ .
೧) ಇಂತಹದೊಂದು ಪ್ರಭುದ್ಧ ಲೇಖನ (!!!!!! No comments)
೨) ಭಾರತ ಕಂಡ ಅತ್ಯಂತ ಮುತ್ಸದ್ದಿ ರಾಜಕಾರಣಿ ಗಳಲ್ಲಿ ಒಬ್ಬರಾದ ,ಹಿರಿಯ ರಾಜತಾಂತ್ರಿಕ ಶ್ರೀ ಸಯೇದ್ ಶಾಹಾಬುದ್ದೀನ್ (ಪಾಪ..ಶಾಬೊನೊ ಪ್ರಕರಣದಲ್ಲಿ ಈ ಮುತ್ಸದ್ದಿಯ ಪಾತ್ರ ಮರೆತುಹೋಗಿದೆಯೇನೊ)
೩) ಕಾಪಿ ಮಾಡುವಾಗ ಸೇರಿರಬಹುದು ( ಈ ವಿಷಯ ಮೊದಲು ಗೊತ್ತಿರಲಿಲ್ಲ!..ಅದಕ್ಕೆ ಅಲ್ಲಿಯೇ ಲೇಖದಲ್ಲಿದೆ ನೋಡಿ ಎಂದದ್ದು. ಈಗ ತಪ್ಪಾಗಿರಬಹುದು ಎಂಬ ವರಸೆ )
ಏನೇ ಇರಲಿ, ನಿಮ್ಮಂತಹ ‘ಅತ್ಯಂತ ಪ್ರಭುದ್ಧ’ ರ ಜೊತೆಗೆ ಒಂದು ನಾಲ್ಲು ಕಮೆಂಟುಗಳ ವಾದ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪೂರ್ವ ಜನ್ಮದ ಪುಣ್ಯ :).. ಇನ್ನು ಹೆಚ್ಚಿನ ಪುಣ್ಯ ನನಗೆ ಬೇಕಾಗಿಲ್ಲ.
ಇನ್ನೂ ಮೇ ೧೬ ಕ್ಕೆ ಮೋದಿ ಬರದಿದ್ದರೆ, ನನಗೆ ತೀರ ಆಕಾಶ ಕುಸಿದು ಬಿದ್ದಂತಹ ಆಘಾತ ಆಗುವುದಿಲ್ಲ..ಕಳೆದ ಆರವತ್ತು ವರುಷಗಳಿಂದ ಇದ್ದದ್ದು ಇನ್ನೊಂದೈದು ವರುಷ ಮುಂದುವರಿಯುತ್ತದೆಯಷ್ಟೆ. ಆದರೆ ಮೋದಿ ಬಂದರೆ ನಿಮ್ಮಂತಹ ವಿಚಾರಧಾರೆಯವರ ಹೊಟ್ಟೆಗಳಲ್ಲಿ, ಈಗಾಗಲೇ ಸಣ್ಣ ವೃಣ ರೂಪದಲ್ಲಿರುವುದು, ಆಲ್ಸರ್ ಆಗಿ ಪೂರ್ಣ ಮ್ರಮಾಣದಲ್ಲಿ ಬದಲಾಗಿ, ನಿಮ್ಮ ಅಸಾಧ್ಯ ನರಳುವಿಕೆಯನ್ನು ನೋಡುವ ಸ್ಥಿತಿ ನಮಗೆ ಬರುತ್ತದೆಯಲ್ಲ ಎಂದು ಸಂತಾಪವೆನಿಸುತ್ತಿದೆ!.
[ಭಾರತದಂಥ ಮಹಾನ್ ದೇಶದ ಪ್ರದಾನಿಯಾಗಲು ಅವರು ಯಾವ ಅನ್ಗಲ ನಿಂದ ನೋಡಿದರೂ ಆರ್ಹರಲ್ಲ .ಅವರ Body Language,Knowledge & intellectuality ನೋಡಿ -ಅವರ ಅರ್ಹರೆ ಎಂದು ನೀವೇ ತೀ ರ್ಮಾನಿಸಿ]
.ಹಾಗಾರದೆ ಯಾರು ಅರ್ಹರು? ಹತ್ತು ವರುಷ ಬಾಯಿ ಮುಚ್ಚಿಕೊಂಡು ಕೂತ ಮೌನಮೋಹನ ಸಿಂಗರೆ? ಎಲ್ಲ ಸಮಸ್ಯೆಗೂ ಆರ.ಟಿ.ಐ , ಮಹಿಳಾ ಸಬಲಿಕರಣ ಪರಿಹಾರ ಎನ್ನುವ ರಾಹುಲ್ ಗಾಂಧಿಯೇ? ಗುಲಾಮಿ ಸಂಸ್ಕೃತಿಯ ಕಪಿಲ ಸಿಬ್ಬಲ್, ಚಿದಂಬರಂ, ಮೊಯ್ಲಿಗಳೆ? ನಮ್ಮ ದೇವೇಗೌಡರೆ? ಅಥವಾ ಒಮ್ಮೆ ಪ್ರಧಾನಿಯಾಗೋಣ ಎಂಬ ಆಸೆಯಲ್ಲಿರುವ ಮುಲಾಯಂ, ಲಾಲೂ, ಮಾಯಾವತಿಗಳೆ?
ಮೋದಿ ಏನು ಗುಜರಾತಿನಲ್ಲಿ ಹನ್ನೆರಡು ವರುಷ ಕತ್ತೆ ಕಾಯುತ್ತಿದ್ದರೆ? ಆಡಳಿತ ಮಾಡಲಿಲ್ಲವೆ? ಅವರ Body Language ನಲ್ಲಿ ಏನಾಗಿದೆ? ಈ sophisticated, armchair intelectual ಗಳಿಗೆ ಉರಿ ಬಿಳುವಂತೆ ಮಾತನಾಡುತ್ತಾರೆಂದೆ? ಇನ್ನು intellectuality ಬಗ್ಗೆ ಈ ಸಿಬ್ಬಲ್, ತರೂರ, ಕೆಲವು ಎಡಬಿಡಂಗಿ ಪಂಥೀಯ ಲೇಖಕರು ಶಂಖ ಊದಿದ್ದನ್ನೇ ನೀವು ನಂಬುತ್ತೀರ? ಯಾರದೋ ಎರವಲು ವಿಚಾರಗಳಲ್ಲದೆ, ನಿಮ್ಮ ಸ್ವಂತ ವಿಚಾರ ವಂತಿಕೆಯಿಂದ ಹುಟ್ಟಿದ ಮೋದಿ ವಿಶ್ಲೇಷಣೆ ಇದ್ದರೆ ಹೇಳಿ, ಕೇಳೋಣ.
“ಹಾಗಾರದೆ ಯಾರು ಅರ್ಹರು?”
ತೊಗಾಡಿಯ ಮದಾನಿ ಒವೈಸಿ ಶಹಾಬುದ್ದೀನ್ ಅವರಿಗೂ ಒಂದು ಅವಕಾಶ ಕೊಡೋಣವೇ ವಿಜಯ್? 😉
🙂 :).. ಹೌದಲ್ಲವೆ! ಇವರುಗಳ ಹೆಸರು ಹೇಗೆ ಬಿಟ್ಟು ಹೋಯಿತು ಲಿಸ್ಟ್ ನಿಂದ?! ಇವರನ್ನೆಲ್ಲ ಸೇರಿಸಿ ಒಂದು ಸಮ್ಮಿಶ್ರ ಸರಕಾರ ಮಡಬೇಕು!..
ಸಲಾಂ ಬಾವ ಅವರಿಗೆ– ಸರ್ಕಾರ ಸಿ ಐ ಡಿ ತನಿಖೆಗೆ ಆದೇಶಿಸಿದೆ. ಅದರ ತೀರ್ಪು ಒಪ್ಪಿತವಾಗದಿದ್ದರೆ ಸಿ ಬಿ ಐ ತನಿಖೆಗೆ ಆಗ್ರಹಿಸಬಹುದು. ನೋಡೋಣ. ತನಿಖೆಗೆ ಮೊದಲೇ ನಾವುಗಳು ನ್ಯಾಯಾಧೀಶರಂತೆ ತೀರ್ಪು ಕೊಡುವುದು ಬೇಡ. ಇಲ್ಲಿ ಗಮನಿಸ ಬೇಕಾದ ಅಂಶವೆಂದರೆ ಆರೋಪಿ/ಅಪರಾಧ/ಮೃತರಾದವರು ‘ಅಲ್ಪ ಸಂಖ್ಯಾತರೋ ‘/’ಬಹುಸಂಖ್ಯಾತರೋ ‘ ಎಂಬ ನಿಲುವಿನಿಂದ ಯಾವುದೇ ಒಂದು ಪ್ರಕರಣವನ್ನು ನೋಡುವ ರೀತಿ. ಇದು ಸರಿಯೇ? ಪಿ ಎಸ್ ಐ ಮಲ್ಲಿಕಾರ್ಜುನ ಬಂಡೆ ಯವರು ಕೆಲಸದಲ್ಲಿ ಇದ್ದಾಗಲೇ ಗುಂಡೇಟಿನಿಂದ ಮೃತರಾದಾಗ ‘ಈ ಪ್ರಗತಿಪರರು’,’ ಜಾತ್ಯಾತೀತರು’ ಏಕೆ ಇಷ್ಟು ಉತ್ಸಾಹ ತೋರಿಸಲಿಲ್ಲ?–ಎಂ ಎ ಶ್ರೀರಂಗ ಬೆಂಗಳೂರು
ಪಿ ಎಸ್ ಐ ಮಲ್ಲಿಕಾರ್ಜುನ ಬಂಡೆ ಅವರು ಸತ್ತದ್ದು ರೌಡಿ ಹಾರಿಸಿದ ಗುಂಡಿನಿಂದ. ಕಬೀರ್ ಸತ್ತಿರುವುದು ಸರ್ಕಾರದ ಅಂಗವಾಗಿರುವ ಪೊಲೀಸರು ಹಾರಿಸಿದ ಗುಂಡಿನಿಂದ. ಸರ್ಕಾರದ ಅಂಗವಾಗಿರುವ ಪೊಲೀಸರು ಒಬ್ಬ ವ್ಯಕ್ತಿಯನ್ನು ವಿನಾ ಕಾರಣ ಗುಂಡಿಟ್ಟು ಕೊಲ್ಲುವುದು ಹೆಚ್ಚು ಪ್ರತಿಭಟನೆಗೆ ಅರ್ಹವಾದುದು ಏಕೆಂದರೆ ಸರ್ಕಾರವು ಹೀಗೆ ನಾಗರಿಕರನ್ನು ಕೊಲ್ಲಲು ಆರಂಭಿಸಿದರೆ ನಾಳೆ ಸರ್ಕಾರವು ತನಗೆ ಆಗದ, ತನ್ನ ಸಿದ್ಧಾಂತ, ಆಡಳಿತವನ್ನು ವಿರೋಧಿಸುವ ವ್ಯಕ್ತಿಗಳನ್ನು ಎನ್ಕೌಂಟರ್ ನೆಪದಲ್ಲಿ ಕೊಲ್ಲಬಹುದು. ಇದು ಕ್ರಮೇಣ ಸರ್ವಾಧಿಕಾರಿ ಆಡಳಿತಕ್ಕೆ ದಾರಿ ಮಾಡಿಕೊಡುತ್ತದೆ. ಹೀಗಾಗಿ ಇಂಥ ಸರ್ಕಾರೀ ಕೃಪಾಪೋಷಿತ ಕೊಲೆಗಳು ತೀವ್ರ ಪ್ರತಿಭಟನೆಗೆ ಅರ್ಹವಾಗಿವೆ. ಸರ್ಕಾರ ನೇಮಿಸಿದ ಪೊಲೀಸರು ಜನತೆಯ ರಕ್ಷಣೆ ಮಾಡಬೇಕೇ ಹೊರತು ಅವರೇ ನಾಗರಿಕರನ್ನು ಕೊಲ್ಲುವುದು ತೀವ್ರ ಖಂಡನಾರ್ಹ. ಬಂಡೆಯನ್ನು ಕೊಂದ ರೌಡಿಯ ವಿರುದ್ಧ ಪ್ರತಿಭಟನೆ ಮಾಡುವುದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ ಏಕೆಂದರೆ ರೌಡಿ ಸಂವಿಧಾನವನ್ನು ಹಾಗೂ ನಾಗರಿಕ ಬದುಕಿನ ವಿಧಾನವನ್ನು ಗೌರವಿಸುವ ವ್ಯಕ್ತಿ ಆಗಿರುವುದಿಲ್ಲ. ಸರ್ಕಾರ ಎಂಬುದು ಸಂವಿಧಾನದ ನಿರ್ದೇಶಕ ತತ್ವಗಳ ಅನುಸಾರ ಹಾಗೂ ನಾಗರಿಕ ವಿಧಾನಗಳ ಮೂಲಕ ಆಯ್ಕೆಯಾದ ಒಂದು ವ್ಯವಸ್ಥೆ ಆಗಿರುವುದರಿಂದ ಸರ್ಕಾರವನ್ನು ಎಚ್ಚರಿಸಲು ಪ್ರತಿಭಟನೆಗಳು ಅನಿವಾರ್ಯ.
“ಸರ್ಕಾರವು ತನಗೆ ಆಗದ, ತನ್ನ ಸಿದ್ಧಾಂತ, ಆಡಳಿತವನ್ನು ವಿರೋಧಿಸುವ ವ್ಯಕ್ತಿಗಳನ್ನು ಎನ್ಕೌಂಟರ್ ನೆಪದಲ್ಲಿ ಕೊಲ್ಲಬಹುದು.”
ಆನಂದ ಪ್ರಸಾದ್ ಅವರೇ, ಅಕ್ರಮ ದನಸಾಗಣಿಕದಾರ ಕಬೀರ ಹಾಗೂ ಅವನ ಜೊತೆಗಾರರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಸಿದ್ಧಾಂತ ಹಾಗೂ ಆಡಳಿತವನ್ನು ವಿರೋಧಿಸಿದ್ದಾರ? ಎಲ್ಲಿ ಯಾವಾಗ ಮತ್ತು ಏಕೆ? ಈ ಬಗ್ಗೆ ನಮಗೆ ಗೊತ್ತಿರದ ಮಾಹಿತಿ ನಿಮಗೆ ತಿಳಿದಿದೆ ಅಂತ ನಿಮ್ಮ ಕಮೆಂಟಿನಿಂದ ಸ್ಪಷ್ಟವಾಗಿದೆ. ತಮ್ಮ ಬಳಿ ಇರುವ ಮಾಹಿತಿಯನ್ನು ಪೂರ್ಣವಾಗಿ ಪ್ರಕಟಗೊಳಿಸಿದರೆ ನಾವುಗಳು ಒಟ್ಟು ಸೇರಿ ಕರ್ನಾಟಕದ ಕಾಂಗ್ರೆಸ್ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಬಹುದು.
ವಿನಾಕಾರಣ ಎಂದು ತಾವು ಹೇಗೆ ಹೇಳುತ್ತಿರಿ?
ಹಾಗಾದರೆ ಪೊಲೀಸರು ಸಮಾಜಘಾತಕರು ಏನೇ ಮಾಡಿದರು ಸುಮ್ಮನಿರಬೇಕೆ? ಅವರು ಪೋಲಿಸರನ್ನು ಕೊಲ್ಲಲು ಪ್ರಯತ್ನಿಸಿದರೂ ಇವರು ಮಾತ್ರ ಅವರನ್ನು ಕೊಲ್ಲಬಾರದು. ಅವರನ್ನು ಜೀವಸಹಿತ ಹಿಡಿಯಲು ಪ್ರಯತ್ಸಿಸಬೇಕು ಎಂದು ನಿಮ್ಮ ಅನಿಸಿಕೆಯೇ?
ನ್ಯಾಯವಾಗಿ ದನದ ವ್ಯಾಪಾರ ಮಾಡುತ್ತಿದ್ದಾರೆ ಒಂದು ಪಿಕ್-ಅಪ್ ವಾಹನದಲ್ಲಿ ೪-೫ ದನಗಳನ್ನು ಮಾತ್ರ ಸಾಗಿಸಬಹುದು. ಇಲ್ಲಿ ೨೦ಕ್ಕಿನ್ತಲು ಹೆಚ್ಹು ದನಗಳನ್ನು ಆ ವಾಹನದಲ್ಲಿ, ಅದೂ ಅವೇಳೆಯಲ್ಲಿ ತೆಗೆದುಕೊಂಡು ಹೋಗುತ್ತಿದ್ದರೆ ಎಂದರೆ ಅದು ಕಾನೂನು ಬಾಹಿರ ಕೃತ್ಯ ಅಂತಲೇ ಅರ್ಥ.
ಪೋಲೀಸರ ವಿಚಾರಣೆಗೆ ಸಹಕಾರ ನೀಡದೆ ಆತ ಓಡಿಹೋಗಲು ಪ್ರಯತ್ಸಿದ್ದು ಸರಿಯೇ? ಊಡಿಹೊಗುವಾಗ ತಪ್ಪಿ ಆತನ ಎದೆಗೆ ಗುಂಡು ಬಿದ್ದಿದೆ. ಅದನ್ನೇ ನೆಪವಾಗಿಸಿಕೊಂಡು ಎಸ್ಟೊಂದು ಪ್ರತಿಭಟನೆ ಮಾಡುವ ಅಗತ್ಯವಿರಲಿಲ್ಲ.
ಸರಕಾರ ಆತನಿಕೆ ೧೦ ಲಕ್ಷ ಪರಿಹಾರ ಕೊಟ್ಟದ್ದು ಸರಿಯೇ? ವಿಚಾರಣೆ ಆದಮೇಲೆ ಆತ ನಿರಪರಾಧಿ ಎಂದದಮೇಲೆ ಅಸ್ತು ಪರಿಹಾರ ಕೊಡಲಿ. ಅದು ಬಿಟ್ಟು ಕೂಡಲೇ ೧೦ ಲಕ್ಷ ಪರಿಹಾರ ಕೊಟ್ಟದ್ದು ತಪ್ಪು.
ಕಬೀರನ ಬಳಿ ಯಾವುದೇ ಮಾರಕ ಆಯುಧವೂ ಸಿಕ್ಕಿಲ್ಲ. ಹೀಗಿರುವಾಗ ಆತ ಸುಸಜ್ಜಿತ ಬಂದೂಕು ಹೊಂದಿದ ನಕ್ಸಲ್ ನಿಗ್ರಹ ದಳದ ಪೊಲೀಸರಿಗೆ ಪ್ರಾಣಾಪಾಯ ಉಂಟುಮಾಡಲು ಹೇಗೆ ಸಾಧ್ಯ? ಅಲ್ಲಿ ಇದ್ದ ನಕ್ಸಲ್ ನಿಗ್ರಹ ದಳದ ಪೊಲೀಸರಿಗೆ ಒಂದು ಸಣ್ಣ ಗಾಯವೂ ಆಗಿಲ್ಲ. ಹೀಗಿರುವಾಗ ಅವರಿಗೆ ಪ್ರಾಣಾಪಾಯ ಇತ್ತು ಎಂಬುದಕ್ಕೆ ಯಾವುದೇ ಸಮರ್ಥನೆ ಇಲ್ಲ. ಅವರು ಅಕ್ರಮವಾಗಿ ದನ ಸಾಗಾಟ ಮಾಡಿದ್ದರೂ ಅದಕ್ಕೆ ಮರಣದಂಡನೆ ಶಿಕ್ಷೆ ನೀಡುವ ಅಧಿಕಾರ ನಕ್ಸಲ್ ನಿಗ್ರಹ ದಳದ ಪೊಲೀಸರಿಗೆ ಇಲ್ಲ. ಅಕ್ರಮ ಸಾಗಾಟ ಮಾಡಿದರೆ ಅವರ ಮೇಲೆ ಪ್ರಕರಣ ದಾಖಲು ಮಾಡಿ ಕೋರ್ಟಿಗೆ ಹಾಜರುಪಡಿಸುವುದಷ್ಟೇ ಪೋಲೀಸರ ಕರ್ತವ್ಯ. ಅದನ್ನು ಬಿಟ್ಟು ಒಬ್ಬನ ಪ್ರಾಣ ತೆಗೆಯುವ ಅಧಿಕಾರ ಪೊಲೀಸರಿಗೆ ಇಲ್ಲ.
[ಕಬೀರನ ಬಳಿ ಯಾವುದೇ ಮಾರಕ ಆಯುಧವೂ ಸಿಕ್ಕಿಲ್ಲ. ಹೀಗಿರುವಾಗ ಆತ ಸುಸಜ್ಜಿತ ಬಂದೂಕು ಹೊಂದಿದ ನಕ್ಸಲ್ ನಿಗ್ರಹ ದಳದ ಪೊಲೀಸರಿಗೆ ಪ್ರಾಣಾಪಾಯ ಉಂಟುಮಾಡಲು ಹೇಗೆ ಸಾಧ್ಯ?]
ಅವರ ಹತ್ತಿರ ಆಯುಧವೇನೂ ಇಲ್ಲ ಎಂದು ತಿಳಿಯುವುದು ಯಾವಾಗ? ಸಿಕ್ಕಿ ಬಿದ್ದಾಗ ತಾನೆ? ಕಬೀರ ಮತ್ತು ಸಹಚರರು ಪಿಕ್ ಅಪ್ ವ್ಯಾನ್ ನಿಂದ ಓಡುವ ಅವಶ್ಯಕತೆ ಏನಿತ್ತು? ಸುಮ್ಮನೆ ಕುಳಿತು ಕೊಳ್ಳಬಹುದಿತ್ತು ಅಥವಾ ಕೈ ಮೇಲೆ ಎತ್ತಬಹುದಿತ್ತು. ಪಿಕ್ ಅಪ್ ವ್ಯಾನ್ ನಲ್ಲಿ ಒಬ್ಬ ಮನುಷ್ಯ ಎಲ್ಲೂ ಓಡಿಹೋಗದೇ ಹಾಗೆಯೇ ಕುಳಿತಿದ್ದ…ಪೋಲಿಸರು ಅವನಿಗೆ ಗುಂಡು ಹೊಡೆದರೆ ? ಇನ್ನು ಮತ/ಧರ್ಮ ನೋಡಿ ಗುಂದು ಹೊಡೆದರು ಅಂದುಕೊಳ್ಳೋಣ, ಹಾಗಿದ್ದಲ್ಲಿ ಇದ್ದವರಲ್ಲಿ ಪ್ರಮೋದ ಪೂಜಾರಿ ಎನ್ನುವವನೊಬ್ಬನೇ ಹಿಂದುವಾಗಿದ್ದ. ಹಾಗಿದ್ದಾಗ ಪಿಕ್ ಅಪ್ ವ್ಯಾನ್ ನಲ್ಲಿ ಕುಳಿತವನಿಗೂ ಗುಂಡುಹೊಡೆದು, ಸಾಕ್ಷವೇ ಇಲ್ಲದಂತೆ ಮಾಡಬಹುದಿತ್ತಲ್ಲ!.
[ಅಕ್ರಮ ಸಾಗಾಟ ಮಾಡಿದರೆ ಅವರ ಮೇಲೆ ಪ್ರಕರಣ ದಾಖಲು ಮಾಡಿ ಕೋರ್ಟಿಗೆ ಹಾಜರುಪಡಿಸುವುದಷ್ಟೇ ಪೋಲೀಸರ ಕರ್ತವ್ಯ. ಅದನ್ನು ಬಿಟ್ಟು ಒಬ್ಬನ ಪ್ರಾಣ ತೆಗೆಯುವ ಅಧಿಕಾರ ಪೊಲೀಸರಿಗೆ ಇಲ್ಲ.]
ಅವರು ದನ ಸಾಗಣೆ ಮಾಡಿದ್ದಕ್ಕೆ ಗುಂದು ಹೊಡೆದರೆ? ಗುಂಡು ಬಿದ್ದದ್ದು ಅವರ ಅನುಮಾನಾಸ್ಪದ ಓಡುವಿಕೆಯಿಂದ. ಇದೇ ತನಿಕೊಡು ಚೆಕ್ ಪೋಸ್ಟಗೆ ಹಿಂದೆ ಎರಡು ಬಾರಿ ನಕ್ಸಲ್ ರು ಧಾಳಿ ಮಾಡಿದ್ದಾರೆ. ಅಂದಾಗ ಇವರ ನಡೆ ಪೋಲಿಸರಿಗೆ ಗೊಂದಲ ಹುಟ್ಟಿಸಿರಬಾರದೇಕೆ? ಇವರು ಓಡಿಹೋಗಿ, ಮರೆಯ ಕತ್ತಲಿಸಿಂದ ಧಾಳಿ ಮಾಡಬಹುದು ಅನಿಸಿರಬಾರದೇಕೆ? ಉಳಿದೆಲ್ಲ ಕಂತೆ-ಪುರಾಣಗಳ ವಿಚಾರ ಮಾಡಲು ಪೋಲಿಸರಿಗೆ ಸಮಯವಿತ್ತೆ ಆಗ?
“of the youth, who was eking out his livelihood through the cattle business.” ಎಂದು ಪಾಪದವನಂತೆ ಬಿಂಬಿಸುವ ಇವರಿಗೆ, ಮೂರು ದನಗಳನ್ನು ಸಾಗಿಸಬೇಕಾದ ವ್ಯಾನಿನಲ್ಲಿ ಇಪ್ಪತ್ತು ದನಗಳನ್ನು ಮೂಟೆಗಳಂತೆ ತುರುಕಿದವರ ಬಗ್ಗೆ ಏನೂ ಅನಿಸುವುದಿಲ್ಲವೆ? ಇವರ ಮಾನವೀಯತೆ ಸತ್ತಿದೆಯೆ? ಹೀಗೆ ಒಯ್ಯುವುದು ಸಕ್ರಮ, ಹೊಟ್ಟೆಪಾಡಿಗೆ ಮಾಡುವ ಬಿಸಿನೆಸ್ಸೆ? ಕಳಸ-ಹೊರನಾಡು-ಕುದುರೆಮುಖ -ಆಗುಂಬೆ ಪ್ರದೇಶಗಳಲ್ಲಿ ಬೆಟ್ಟಕ್ಕೆ ಮೇಯಲು ಬಿಟ್ಟ ದನಗಳನ್ನು ಈ ದನಗಳ್ಲರು ಬಲವಂತವಾಗಿ ವ್ಯಾನಿಗೆ ಹಾಕಿಕೊಂಡು ಕದ್ದೊಯ್ಯುವ ಎಷ್ಟೋ ಘಟನೆಗಳು ನಡೆದಿವೆ. ಇಂತವರಿಂದ ಸ್ವಂತ ದನಗಳನ್ನು ಕಳೆದುಕೊಂಡವರು, ಕಬೀರನ ಹೆಣ ಒಯ್ಯಲು ಬಂದಾಗ ತಮ್ಮ ರೋಷ ತೋರಿಸಿರಬಾರದೇಕೆ?
ಯಾವುದೇ ಅಪರಾಧಿಯಿಂದ ಪೋಲಿಸರ ಜೀವ ಹೋದರೆ, ಮಾನವೀಯತೆ ತೋರಿಸುವವರು ಯಾರೂ ಸಿಗುವುದಿಲ್ಲ. ಮಲ್ಲಿಕಾರ್ಜುನ್ ಬಂಡೆ ಕೇಸಿನಲ್ಲಿ, ಅಲ್ಲಿಯ ಐಜಿಪಿ ಯ ನಡೆಯ ಬಗ್ಗೆ ಅನುಮಾನ ಮೂಡಿತ್ತು..ಯಾರಾದರೂ ಮಾನವೀಯತೆಯ ಗುತ್ತಿಗೆದಾರರು ಪ್ರಶ್ನಿಸಿದರೆ ಅದನ್ನು? ಪರಿಹಾರ ಹೆಚ್ಚಿಸಿ, ಅವರ ಕುಟುಂಬ ದುಡಿಯುವವರಿಲ್ಲದೇ ಆನಾಥವಾಗಿದೆ ಎಂದರೆ? ಇಲ್ಲಿ ಅಕಸ್ಮಿಕವಾಗಿ ಒಬ್ಬ ಆಕ್ರಮ ದನ ಸಾಗಣೆದಾರನಿಗೆ ಗುಂಡೇಟು ಬಿದ್ದರೆ , ಆ ಘಟನಗೆ ಬಣ್ಣ ಕಟ್ಟಿ, ಎನ್ ಕ್ಯಾಶ್ ಮಾಡಿಕೊಳ್ಳುವ ಗುಂಪುಗಳು ಹುಟ್ಟಿಕೊಂಡು ಬಿಡುತ್ತವೆ. ಪೋಲಿಸ- ಬಜರಂಗದಳ ಜಂಟಿ ಕಾರ್ಯಾಚರಣೆ ಎನ್ನುವ ಸುದ್ದಿಗಳ ರಾಜಕೀಯ ಪ್ರಾಯೋಜಕರು ಯಾರು, ಬೆಂದ ಮನೆಯ ಗಳ ಎಣಿಸುವವರು ಯಾರು ಎನ್ನುವ ವಿಷಯ ಕಣ್ಣಿಗೆ ಧಾರಾಳವಾಗಿ ಕಂಡು ಬರುತ್ತಿದೆ. ಇತ್ತ ಸರಕಾರ ಮತಬ್ಯಾಂಕ್ ನ್ನು ವಿರುದ್ದ ಹಾಕಿಕೊಳ್ಳಲಾಗದೆ, ವಿಷಯ ಕುತ್ತಿಗೆಗೆ ಬರುವುದು ಬೇಡ ಅಂದುಕೊಂಡು ೫ ಲಕ್ಷ ಪರಿಹಾರವನ್ನು ಹತ್ತು ಲಕ್ಷಕ್ಕೇರಿಸಿ, ಅವಶ್ಯ ಬಿದ್ದರೆ ಸಿ.ಬಿ.ಐ ತನಿಖೆ ಮಾಡಿಸುತ್ತೇನೆ ಎನ್ನುತ್ತಿದೆ..ಕೆಲವು ಜುಜುಬಿ ರಾಜಕಾರಣಿಗಳು ಯಾರಪ್ಪನ ದುಡ್ಡು ಎನ್ನುವಂತೆ ಒಬ್ಬ ಇಪ್ಪತ್ತು ಕೊಡಿ ಅಂದರೆ, ಇನ್ನೊಬ್ಬ ಮೂವತ್ತು ಕೊಡಿ ಅನ್ನುತ್ತಿದ್ದಾನೆ!.
ಕಬೀರನಿಗೆ ಓಡಿ ಹೋಗುವಾಗ ಗುಂಡು ಹಾರಿಸಿದ್ದರೆ ಗುಂಡು ಬೆನ್ನಿಗೆ ತಾಗಬೇಕಿತ್ತು ಆದರೆ ಗುಂಡು ಎದೆಗೆ ಬಿದ್ದಿದೆ ಎಂದು ಹೇಳುತ್ತಿದ್ದಾರೆ. ಗುಂಡು ಎದೆಗೆ ಬಿದ್ದಿದ್ದರೆ ಅದು ನೇರವಾಗಿ ಎದುರಿಂದಲೇ ಹಾರಿಸಿದ ಗುಂಡೇ ಆಗಿರಬೇಕು. ಹೀಗಾಗಿ ಓಡಿ ಹೋಗುವಾಗ ಗುಂಡು ಹಾರಿಸಿದ್ದು ಎಂಬುದು ಸಂಶಯಾಸ್ಪದವಾಗಿದೆ. ಅಲ್ಲದೆ ಓಡಿ ಹೋದರೂ ಎದೆಗೆ ಗುಂಡು ಹಾರಿಸುವ ಅಗತ್ಯ ಇರಲಿಲ್ಲ, ಪ್ರಾಣಾಪಾಯವಾಗದಂತೆ ಕಾಲಿಗೆ ಹಾರಿಸಬೇಕಾಗಿತ್ತು. ಕಬೀರನ ಜೊತೆ ಟೆಂಪೋದಲ್ಲಿ ಎದುರು ಇದ್ದವರು ಗುಂಡಿನ ಸದ್ದು ಕೇಳಿದ ನಂತರ ಪ್ರಾಣ ಉಳಿಸಿಕೊಳ್ಳಲು ಓಡಿದ್ದು ಎಂದು ಹೇಳಿದ್ದಾರೆ. ಅದನ್ನು ಒಪ್ಪಿಕೊಳ್ಳಬಹುದು. ಅದೂ ಅಲ್ಲದೆ ನಕ್ಸಲರು ಜಾನುವಾರು ಸಾಗಾಟ ಮಾಡಿದ ಒಂದೇ ಒಂದು ಉದಾಹರಣೆ ಇಲ್ಲ. ಹೀಗಿರುವಾಗ ಜಾನುವಾರು ಸಾಗಾಟ ಮಾಡುವವರನ್ನು ನಕ್ಸಲರಲ್ಲ ಎಂಬುದು ಸಾಮಾನ್ಯ ಜ್ಞಾನ. ಇಂಥ ಸಾಮಾನ್ಯ ಜ್ಞಾನವೂ ನಕ್ಸಲ್ ನಿಗ್ರಹ ದಳದ ಪೊಲೀಸರಿಗೆ ಇರಲಿಲ್ಲ ಎಂಬುದು ಕೂಡ ಸಂಶಯಾಸ್ಪದವಾಗಿದೆ. ದನಗಳನ್ನು ಕದ್ದು ತಂದದ್ದು ಎಂದು ಹೇಳಲಾಗದು. ದನಕರುಗಳನ್ನು ಸಾಕಲಾಗದ ರೈತರು ಅವುಗಳನ್ನು ಮಾರಾಟ ಮಾಡಿರುತ್ತಾರೆ. ಹಗಲು ಅವುಗಳನ್ನು ಸಾಗಿಸಿದರೆ ಬಜರಂಗದಳ ಹಾಗೂ ಸಂಘದ ಜನರು ಹಲ್ಲೆ ಮಾಡಿ ತೊಂದರೆ ಮಾಡುತ್ತಾರೆ ಎಂದು ಅವರು ರಾತ್ರಿ ಸಾಗಾಟ ಮಾಡುತ್ತಿದ್ದರು. ರೈತರು ಸಾಕಲಾರದೆ ಮಾರಿದ ದನಗಳನ್ನು ಸಾಗಾಟ ಮಾಡುವುದು ಅಪರಾಧವೇನೂ ಅಲ್ಲ. ಹೀಗಿರುವಾಗ ಅವುಗಳನ್ನು ಸಾಗಿಸುವವರಿಗೆ ತೊಂದರೆ ಮಾಡುವುದು ಎಷ್ಟರ ಮಟ್ಟಿಗೆ ಸಮಂಜಸ? ಬಜರಂಗದಳದವರು ಹಾಗೂ ಸಂಘ ಪರಿವಾರದ ಜನರ ಕಿರುಕುಳವೇ ಇಂಥ ಘಟನೆಗಳು ನಡೆಯಲು ಕಾರಣ.
ಆನಂದ ಪ್ರಸಾದ್ ಅವರೇ,
೧. [ಪೋಲೀಸ್ ಇಲಾಖೆಯಲ್ಲಿ ತಳವೂರಿದ ಸಂಘದ ಸಿದ್ಧಾಂತಕ್ಕೆ ಬ್ರೈನ್ವಾಶ್ ಆದ ವ್ಯಕ್ತಿಗಳು ಕಾಂಗ್ರೆಸ್ ಸರ್ಕಾರದ ಸಿದ್ಧಾಂತಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ.]
೨. [“ಸರ್ಕಾರವು ತನಗೆ ಆಗದ, ತನ್ನ ಸಿದ್ಧಾಂತ, ಆಡಳಿತವನ್ನು ವಿರೋಧಿಸುವ ವ್ಯಕ್ತಿಗಳನ್ನು ಎನ್ಕೌಂಟರ್ ನೆಪದಲ್ಲಿ ಕೊಲ್ಲಬಹುದು.”]
ನೀವೆಂತಹ ಬುಲ್ ಶಿಟ್ಟರ್ ಅಂತ ಇದಕ್ಕಿಂತ ಮಿಗಿಲಾದ ಪುರಾವೆ ಬೇಕೇ?
ತನಿಖೆಗೆ ಮೊದಲೇ ಹೇಳುವುದು ಕಷ್ಟ. ಓದಿಹೊಗುವಾಗ ಅತ್ತಿಸಿಕೊಂದುಬರುತ್ತಿದ್ದಾರಾ ಎಂದು ನೋಡಲು ತಿರುಗಿದಾಗ ಗುಂಡು ಬಿದ್ದಿರಬಹುದು. ಮತ್ತೆ ಒಂದೇ ಸ್ತಳಕ್ಕೆ ಗಿರಿಯಿತ್ತು ಹೊಡೆಯಲು ಇದೇನು ಶೂಟಿಂಗ್ ಸ್ಪರ್ದೆಯೇ? ಗುರಿ ತಪ್ಪಿ ಎದೆಗೆ ಬಿದ್ದಿರಬಹುದು.
ಮತ್ತೆ ವಾಹನದಲ್ಲಿದ್ದುದು ದನಗಳು ಎಂಬುದು ಪೋಲಿಸರಿಗೆನು ಗೊತ್ತು. ಅಕ್ರಮವಾಗಿ ದನ ಸಾಗಿಸುವಾಗ ಕಾಣಬಾರದೆಂದು ತರ್ಪಲು ಮುಚಿರುತ್ತಾರೆ.
ದನಗಳನ್ನು ಸಾಕಲಾರದವರು ಕೊಟ್ಟರೆಂದೇ ಇಟ್ಟುಕೊಳ್ಳೋಣ. ಒಂದು ಪಿಕ್-ಅಪ್ ವಾಹನದಲ್ಲಿ ಎಷ್ಟು ದನಗಳನ್ನು ಸಾಗಿಸಬಹುದು? ಹೆಚ್ಹೆಂದರೆ ೪-೫ ದನಗಳನ್ನು ಸಾಗಿಸಬಹುದು. ಇಲ್ಲಿ ೨೧ ದನಗಳನ್ನು ಸಾಗಿಸಿದ್ದಾರೆ(ಕಸಾಯಿಖಾನೆಗೆ) ಎಂದರೆ ಅದು ಅಕ್ರಮವೇ ಅಲ್ಲವೇ?
ಕಸಾಯಿಖಾನೆಗೆ ಕೊಂಡುಹೋಗುವ ಹಸುಗಳು ಗೊಡ್ಡು ಹಸುಗಳು ಎಂದು ಡಾಕ್ಟರರ ಸರ್ಟಿಫಿಕೇಟ್ ಬೇಕು. ಅಲ್ಲದೆ ಅಸ್ಟೊಂದು ಹಸುಗಳನ್ನು ಅಮಾನುಷವಾಗಿ ಕೊಂಡುಹೋಗುವುದು ಸರಿಯೇ? ಅವುಗಳಿಗೂ ಜೀವವಿಲ್ಲವೇ?
ಕೊಂಡುಹೊಗುವಾಗ(ನ್ಯಾಯಯುತವಾಗಿ) ಭಜರಂಗದಳದವರ ಅಪಾಯವಿದೆ ಎಂದಾದರೆ ಪೋಲೀಸರ ರಕ್ಷಣೆ ಕೇಳಲಿ. ಹೇಗೂ ಅವರಿಗೆ ಈಗ ಸರಕಾರದ ಬೆಂಬಲವಿದೆ.
ಅವರು ಅಕ್ರಮವಾಗಿ ದನಗಳ ಕಳ್ಳ ಸಾಗಾಟ ಮಾಡುತ್ತಿದ್ದರು ಎಂಬುದು ಸ್ಪಸ್ಟ್ತ.
“ಕಬೀರನಿಗೆ ಓಡಿ ಹೋಗುವಾಗ ಗುಂಡು ಹಾರಿಸಿದ್ದರೆ ಗುಂಡು ಬೆನ್ನಿಗೆ ತಾಗಬೇಕಿತ್ತು ಆದರೆ ಗುಂಡು ಎದೆಗೆ ಬಿದ್ದಿದೆ ಎಂದು ಹೇಳುತ್ತಿದ್ದಾರೆ.”
ಅಲ್ಲಿ ನಡೆದದ್ದು ಏನು ಅಂತ ನೀವು ನೋಡಿದ್ದೀರಾ? ಅಕ್ರಮ ದನಸಾಗಾಣಿಕದಾರ ಕಬೀರ ಯಾವ ದಿಕ್ಕಿನಲ್ಲಿ ಓಡಿದ ಅಂತ ಬಲ್ಲಿರಾ? ಪೋಲೀಸರೆಲ್ಲರೂ ಒಂದೇ ಕಡೆ ಇದ್ದು ಕಬೀರ ಅವರ ವಿರುದ್ಧ ದಿಕ್ಕಿನಲ್ಲಿ ಓಡಿದ್ದರೆ ಮಾತ್ರ ಬೆನ್ನಿಗೆ ಗುಂಡು ಬೀಳುವ ಸಾಧ್ಯತೆ. ಇಲ್ಲವಾದರೆ ಗುಂಡು ಎದೆಗೆ ಬೀಳುವ ಸಾಧ್ಯತೆ ತಳ್ಳಿಹಾಕಲು ಸಾಧ್ಯವಿಲ್ಲ. ಸೀ ಓ ಡಿ ಯೋ ಸೀ ಬಿ ಐ ಯೋ ನಿಷ್ಪಕ್ಷಪಾತವಾಗಿ ಪ್ರೊಫೆಶನಲ್ ಆಗಿ ತನಿಖೆ ಮಾಡಲಿ ಬಿಡಿ. ಅದು ಬಿಟ್ಟು ನೀವೇ ಒಬ್ಬ ಎಕ್ಸ್ಪರ್ಟ್ ತರಹ ಪೋಲೀಸರ ವಿರುದ್ಧ ತೀರ್ಪು ಕೊಡುವುದು ಸರಿಯೇ?
ಕಬೀರನ ಜೊತೆಗಾರ ಪ್ರವೀಣ್ ಪೂಜಾರಿ ಈ ಹಿಂದೆ ಪೋಲೀಸ್ ತಡೆಗಟ್ಟೆಯಲ್ಲಿ ತಪಾಸಣೆ ಮಾಡಲು ಬಂದ ಪೋಲೀಸರ ಮೇಲೆ ಗಾಡಿ ಓಡಿಸಿ ಕೊಳ್ಳುವ ಪ್ರಯತ್ನ ಮಾಡಿದ್ದ. ಅವನಿಗೆ ಜೈಲು ಶಿಕ್ಷೆ ಕೂಡ ಆಗಿತ್ತು.
ಆನಂದ ಪ್ರಸಾದ್ ಅವರೇ,
[“ಸರ್ಕಾರವು ತನಗೆ ಆಗದ, ತನ್ನ ಸಿದ್ಧಾಂತ, ಆಡಳಿತವನ್ನು ವಿರೋಧಿಸುವ ವ್ಯಕ್ತಿಗಳನ್ನು ಎನ್ಕೌಂಟರ್ ನೆಪದಲ್ಲಿ ಕೊಲ್ಲಬಹುದು.”]
ಅಕ್ರಮ ದನಸಾಗಣಿಕದಾರ ಕಬೀರ ಹಾಗೂ ಅವನ ಜೊತೆಗಾರರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಸಿದ್ಧಾಂತ ಹಾಗೂ ಆಡಳಿತವನ್ನು ವಿರೋಧಿಸಿದ್ದಾರ? ಎಲ್ಲಿ ಯಾವಾಗ ಮತ್ತು ಏಕೆ? ಈ ಬಗ್ಗೆ ನಮಗೆ ಗೊತ್ತಿರದ ಮಾಹಿತಿ ನಿಮಗೆ ತಿಳಿದಿದೆ ಅಂತ ನಿಮ್ಮ ಕಮೆಂಟಿನಿಂದ ಸ್ಪಷ್ಟವಾಗಿದೆ. ತಮ್ಮ ಬಳಿ ಇರುವ ಮಾಹಿತಿಯನ್ನು ಪೂರ್ಣವಾಗಿ ಪ್ರಕಟಗೊಳಿಸಿದರೆ ನಾವುಗಳು ಒಟ್ಟು ಸೇರಿ ಕರ್ನಾಟಕದ ಕಾಂಗ್ರೆಸ್ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಬಹುದು.
ಕಬೀರ ಹಾಗೂ ಸಂಗಡಿಗರು ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ಸಿದ್ಧಾಂತ ವಿರೋಧಿಸಿದ್ದಾರೆ ಎಂದು ನಾನು ಹೇಳಿಲ್ಲ. ಇದು ನೀವೇ ಆರೋಪಿಸಿಕೊಂಡಿರುವುದು. ಕಬೀರ ಹಾಗೂ ಸಂಗಡಿಗರು ಸಂಘ ಪರಿವಾರದ ಸಿದ್ಧಾಂತವನ್ನು ವಿರೋಧಿಸಿದ್ದಾರೆ ಅಥವಾ ಅವರ ಸಿದ್ಧಾಂತವನ್ನು ಪುರಸ್ಕರಿಸಿಲ್ಲ. ಸಂಘದ ಸಿದ್ಧಾಂತ ದನಗಳನ್ನು ಹತ್ಯೆ ಮಾಡುವುದನ್ನು ವಿರೋಧಿಸುವುದು ಹಾಗೂ ಹತ್ಯೆಗಾಗಿ ದನ ಕೊಂಡೊಯ್ಯುವ ವ್ಯಕ್ತಿಗಳನ್ನು ಹಿಡಿದು ಅವರ ಮೇಲೆ ಕಾನೂನು ಕೈಗೆ ತೆಗೆದುಕೊಂಡು ಹಲ್ಲೆ ನಡೆಸುವುದು. ಕಬೀರನ ಹತ್ಯೆಯ ಮೂಲಕ ಸಂಘದ ಶಕ್ತಿಗಳು ದನಗಳನ್ನು ಹತ್ಯೆಗಾಗಿ ಸಾಗಿಸುವವರಿಗೆ ಉಳಿಗಾಲವಿಲ್ಲ ಎಂಬ ಸಂದೇಶ ನೀಡಲು ಬಯಸಿರುವಂತೆ ಕಾಣುತ್ತದೆ. ಇದಕ್ಕಾಗಿ ಪೊಲೀಸರು ಹಾಗೂ ಸಂಘದ ಶಕ್ತಿಗಳ ನಡುವೆ ಹೊಂದಾಣಿಕೆ ನಡೆದಿರುವಂತೆ ಕಂಡುಬರುತ್ತದೆ. ಪೋಲೀಸ್ ಇಲಾಖೆಯಲ್ಲಿ ತಳವೂರಿದ ಸಂಘದ ಸಿದ್ಧಾಂತಕ್ಕೆ ಬ್ರೈನ್ವಾಶ್ ಆದ ವ್ಯಕ್ತಿಗಳು ಕಾಂಗ್ರೆಸ್ ಸರ್ಕಾರದ ಸಿದ್ಧಾಂತಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಎಲ್ಲೆಲ್ಲಿ ಸಂಘದ ಹಿತ ಕಾಯುವ ಪೊಲೀಸರು ಇದ್ದಾರೋ ಅಲ್ಲೆಲ್ಲ ದನ ಸಾಗಾಟ ನಡೆಸುವುದು ಭಾರೀ ಅಪಾಯಕ್ಕೆ ಕಾರಣವಾಗಿದೆ.
ವಾಸ್ತವಕ್ಕಿಂತ ಅನಿಸಿಕೆಗಳೇ ಮೇಲ್ಗೈ ಪಡೆಯುತ್ತಿದೆ. ಪೋಲಿಸರನ್ನು ನಂಬುವ ಮನಸ್ತಿತಿ ಇಲ್ಲದ್ದಾಗ ಈ ತರದ್ದೇ ಮಾತುಗಳು ಬರುತ್ತವೆ. ತನಿಖೆ ನಡೆಯದೆ ತೀರ್ಪು ಕೊಡುವುದಾದರೆ , ಕಬೀರನ ಮೇಲೂ ಆ ತರಹದ ಸಾವಿರ ಆರೋಪಗಳನ್ನು ಮಾಡಬಹುದು, ತೀರ್ಪು ನೀಡಬಹುದು.
ಆನಂದ ಪ್ರಸಾದ್ ಅವರಿಗೆ–>>>ಸರ್ಕಾರ ನೇಮಿಸಿದ ಪೊಲೀಸರು ಜನತೆಯ ರಕ್ಷಣೆ ಮಾಡಬೇಕು >>>> ಇದು ಸರಿ. ಆದರೆ ಸಮಾಜ ದ್ರೋಹಿ ಶಕ್ತಿಗಳಿಂದ ,ರೌಡಿಗಳಿಂದ ಅಥವಾ ಯಾವುದೇ ಒಂದು ಸಭೆ,ಸಮಾರಂಭದಲ್ಲಿ ಗದ್ದಲ,ಗೌಜು ಉಂಟಾಗಿ ಜನರಿಗೆ ತೊಂದರೆಯಾದರೆ,ಪ್ರಾಣ ಹಾನಿಯಾದರೆ ‘ಮಾನವ ಹಕ್ಕುಗಳ ಪ್ರತಿಪಾದಕರು’ ಮೊದಲಿಗೆ ದೂರುವುದು ಅದೇ ಪೋಲಿಸರನ್ನು. ನಾವೆಷ್ಟೇ ಸಭ್ಯಸ್ತ ನಾಗರೀಕರಾಗಿದ್ದರೂ ಸಹ ಕರ್ಫ್ಯೂ ಇರುವ ಜಾಗದಲ್ಲಿ/ ನಕ್ಸಲ್ ಚಟುವಟಿಕೆಯ ಒಂದು ಪ್ರದೇಶದಲ್ಲಿ ನಮ್ಮ ವರ್ತನೆ ಅನುಮಾನಾಸ್ಪದವಾಗಿದ್ದರೆ ಪೋಲಿಸರಿಗೆ /ನಕ್ಸಲ್ ನಿಗ್ರಹ ದಳಕ್ಕೆ ಶಂಕೆ ಬರುವುದು ಸಹಜ. ಆ ಪೋಲೀಸರ ಜಾಗದಲ್ಲಿ ನಾನು/ನೀವು/ಮತ್ತ್ಯಾರೇ ಇದ್ದರು ಸಹ ಸಂಶಯಪಡುತ್ತಿದ್ದೆವು. ಇತ್ತೀಚಿಗೆ ಮುಗಿದ ಲೋಕಸಭೆಯ ಚುನಾವಣೆಯ ‘ರೋಡ್ ಶೋ’ ಸಂದರ್ಭದಲ್ಲಿ ನಮ್ಮ ರಾಜ್ಯದ ಅತಿ ಪ್ರಮುಖರ ಜತೆ ರೌಡಿ ಷೀಟರ್ ಗಳು ಇದ್ದದ್ದು ತಮ್ಮಂತಹ ‘ಸಾಮಾಜಿಕ ಸುವ್ಯವಸ್ಥೆ,ನೆಮ್ಮದಿ,ಸೌಹಾರ್ದ ವೇದಿಕೆ’ಯವರಿಗೆ ತಪ್ಪು ಎನಿಸಲಿಲ್ಲ ಏಕೆ? ಅದರ ವಿರುದ್ಧ ಮೆರವಣಿಗೆ,ಧರಣಿ,ಹಕ್ಕೊತ್ತಾಯಗಳಿಗೂ ಚುನಾವಣೆಯ ನೀತಿ ಸಂಹಿತೆಯ ಅಡ್ಡಿ ಇತ್ತೆ?
ಶ್ರೀರಂಗ ಅವರೇ, ಈ ಅಕ್ರಮ ದನಸಾಗಣಿಕದಾರನ ಸಾವು ಸಂಭವಿಸಿದ ಸಮಯದಲ್ಲೇ ಮುಳಬಾಗಿಲಿನ ಮಸೀದಿಯೊಂದರಲ್ಲಿ ಒಬ್ಬ ಮುಸಲ್ಮಾನ ಯುವಕ ಯಾವುದೋ ಕಾರಣಕ್ಕೆ ಕುರಾನ್ ಅನ್ನು ಸುಟ್ಟುಹಾಕಿದ. ಇದರಿಂದ ‘ಸಿಟ್ಟು’ಗೊಂಡ ಕೆಲವು ಮುಸಲ್ಮಾನರು ಆತನನ್ನು ಕೊಂದು ಹಾಕಿದರು. ಅಕ್ರಮ ದನಸಾಗಣಿಕದಾರನ ಸಾವು ಮಾಡಿದ ಸುದ್ದಿಯ ನೂರನೇ ಒಂದು ಭಾಗದಷ್ಟು ಸುದ್ದಿಯನ್ನು ಮುಳಬಾಗಿಲಿನ ಕಗ್ಗೊಲೆ ಪ್ರಕರಣ ಮಾಡಲಿಲ್ಲ! ಕಬೀರನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಹಾಗೂ ಲಕ್ಷಗಟ್ಟಲೆ ಹಣ ಪರಿಹಾರ ಕೊಡಬೇಕು ಅಂತ ಗಲಾಟೆ ಮಾಡಿದ ಹಾಗೆ ಮುಳಬಾಗಿಲಿನ ಮುಸಲ್ಮಾನ ಯುವಕನ ಪರವಾಗಿ ಮುಸಲ್ಮಾನ ನಾಯಕರಾಗಲಿ ನವೀನ ಸೂರಿಂಜೆ ತರಹದ ಪತ್ರಕರ್ತರಾಗಲಿ ಗಲಾಟೆ ಮಾಡಲಿಲ್ಲ! ಪೊಲೀಸರ ಹಾಗೂ ಭಜರಂಗದಳದವರ ಮೇಲೆ ಮಾಡಿದ ರೀತಿಯಲ್ಲಿ ನರಹತ್ಯೆಯ ಆಪಾದನೆಗಳನ್ನೂ ಕಗ್ಗೊಲೆ ನಡೆಸಿದ ಮುಸಲ್ಮಾನರ ಮೇಲೆ ಮಾಡಲಿಲ್ಲ! ವರ್ತಮಾನ ಪತ್ರಿಕೆಯಲ್ಲಿ ಮಸೀದಿಯಲ್ಲಿ ಹತ್ಯೆಗೊಳಗಾದ ಯುವಕನ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುವ ಒಂದು ಲೇಖನವೂ ಪ್ರಕಟಗೊಳ್ಳಳಿಲ್ಲ! ಸಲಾಂ ಬಾವ ಆನಂದ ಪ್ರಸಾದ್ ಮೊದಲಾದವರು “ಕುರಾನ್ ಸುಟ್ಟರೆ ಕೊಲ್ಲಬೇಕಿತ್ತೆ, ಕುರಾನ್ ಸುಟ್ಟವನ ಮೇಲೆ ಪೋಲೀಸ್ ಕಂಪ್ಲೈಂಟ್ ಕೊಟ್ಟು ಕಾನೂನು ರೀತ್ಯ ಶಿಕ್ಷೆ ಕೊಡಿಸಬೇಕಿತ್ತು, ಒಬ್ಬನ ಪ್ರಾಣ ತೆಗೆಯುವ ಅಧಿಕಾರ ಮಸೀದಿಯವರಿಗಿಲ್ಲ, ಕೊಮುವಾದದಿಂದ ಬ್ರೈನ್ ವಾಶ್ ಆದ ಮುಸಲ್ಮಾನರು ಕುರಾನ್ ಸುಟ್ಟವನನ್ನು ಕೊಳ್ಳುವ ಮೂಲಕ ಸುಧಾರಣಾವಾದಿ ಮುಸಲ್ಮಾನರಿಗೆ ಮೆಸೇಜ್ ಕೊಟ್ಟಿದ್ದಾರೆ” ಅಂತೆಲ್ಲ ಹೇಳಿಲ್ಲ! ಇದರಿಂದಲೇ ತಿಳಿದುಬರುತ್ತದೆಯಲ್ಲವೇ ಇವರ ನಿಜಾವದ ಉದ್ದೇಶವೇನು ಅಂತ. 🙂
ರಾಜ್ಯದಲ್ಲಿ ಹಾಗೂ ದೇಶದಲ್ಲಿ ನಿತ್ಯವೂ ಅಲ್ಲಲ್ಲಿ ಅನ್ಯಾಯಗಳು ನಡೆಯುತ್ತಲೇ ಇರುತ್ತವೆ. ಇದಕ್ಕೆಲ್ಲಾ ಪ್ರತಿಕ್ರಿಯಿಸಲು ಅಥವಾ ಪ್ರತಿಭಟಿಸಲು ಸಾಧ್ಯವಿಲ್ಲ. ವರ್ತಮಾನ ವೆಬ್ ಸೈಟ್ ಕೂಡ ಎಲ್ಲ ಕಡೆ ನಡೆಯುವ ಅನ್ಯಾಯಗಳ ಬಗ್ಗೆ ಲೇಖನ ಪ್ರಕಟಿಸಲು ಸಾಧ್ಯವಿಲ್ಲ ಏಕೆಂದರೆ ಇದು ಸಮಾನಾಸಕ್ತರು ತಮಗೆ ಬರೆಯಬೇಕೆಂದು ಅನಿಸಿದ ವಿಷಯಗಳ ಬಗ್ಗೆ ಬರೆಯುವ ಒಂದು ವೇದಿಕೆಯೇ ಹೊರತು ಇದಕ್ಕೆ ಪತ್ರಿಕೆ ಅಥವಾ ಟಿವಿ ವಾಹಿನಿಯಂತೆ ಎಲ್ಲ ಊರುಗಳಿಂದಲೂ ವರದಿ ಮಾಡುವ/ಲೇಖನ ಕಳುಹಿಸುವ ವರದಿಗಾರರು ಇಲ್ಲ. ಆಯಾ ಊರಿನಿಂದ ಯಾವುದಾದರೂ ಅನ್ಯಾಯ ಆದರೆ ಆಯಾ ಊರಿನವರು ಲೇಖನ ಬರೆದು ಕಳುಹಿಸಿದರೆ ಪ್ರಕಟ ಆಗಬಹುದು.
[ರಾಜ್ಯದಲ್ಲಿ ಹಾಗೂ ದೇಶದಲ್ಲಿ ನಿತ್ಯವೂ ಅಲ್ಲಲ್ಲಿ ಅನ್ಯಾಯಗಳು ನಡೆಯುತ್ತಲೇ ಇರುತ್ತವೆ. ಇದಕ್ಕೆಲ್ಲಾ ಪ್ರತಿಕ್ರಿಯಿಸಲು ಅಥವಾ ಪ್ರತಿಭಟಿಸಲು ಸಾಧ್ಯವಿಲ್ಲ.]
ಸರಿ ಮಹಾನುಭಾವರೇ ನಿಮ್ಮ selective ಮಾನವೀಯತೆ ನಮಗೆ ಹೊಸದೇನೂ ಅಲ್ಲ.
ಹಸು ಗೊಡ್ಡು ಆದ್ರೆ ಅದನ್ನು ಕಸಾಯಿಖಾನೆಗೆ ಕೊಡ್ಬೌದಂತೆ …ಆಗ ಅದು ಮಾತೆ ಅಲ್ವೇ ಸಹೋದರರೇ….ಏನಿದು ನಿಮ್ಮ ಭಾವನೆ ಸ್ವಲ್ಪ ವಿವರಿಸಬಹುದೇ ..
ಮಜೀದ್ ಅವರೇ ಗೊಡ್ಡು ದನಗಳನ್ನು ಡಾಕ್ಟರರ ಸರ್ಟಿಫಿಕೇಟ್ ( ದನ ಗೊಡ್ಡು ಎಂದು ) ಇದ್ದರೆ ಅದನ್ನು ಕಸಾಯಿಖಾನೆಗೆ ಸಾಗಿಸಿ ಮಾಂಸ ಮಾಡಬಹುದು ಎಂದು ಈಗಿನ ಕಾನೂನು ಹೇಳುತ್ತದೆ.
ಮತ್ತೆ ಗೋ ಆರಾಧಕರಿಗೆ ಎಲ್ಲ ಗೋವುಗಳು ಪೂಜ್ಯವೇ.
godbole ಅವರಿಗೆ — ನಾನು ಪ್ರತಿ ದಿನ ಓದುವ ಪತ್ರಿಕೆಯೊಂದರಲ್ಲಿ ಮುಳುಬಾಗಿಲಿನ ಆ ಸುದ್ದಿಯನ್ನು ಓದಿದೆ. ಒಂದು ಚುಟುಕು ಸುದ್ದಿಯಾಗಿ ಅದು ಬಂದಿತ್ತು. ಅದು “ಅವರವರೇ” ನಡೆಸಿದ ಕೃತ್ಯವಾದ್ದರಿಂದ ಮಾಮೂಲಿಯಾಗಿ ಪತ್ರಿಕೆಗಳು ಬರೆಯುವ “ಎರಡು ಕೋಮುಗಳು” ಎಂಬ ಪದಗಳೂ ಇರಲಿಲ್ಲ. ರಾಜ್ಯ ಸರ್ಕಾರಕ್ಕೆ ಒಂದು ತಲೆನೋವು ತಪ್ಪಿತು. ನಮ್ಮ ‘ಸೌಹಾರ್ದ ವೇದಿಕೆಯವರಿಗೆ’ ಈ ಬಿಸಿಲ ಝಳದಲ್ಲಿ ಮುಳುಬಾಗಿಲಿಗೆ ಹೋಗಿ ‘ಸತ್ಯ ಶೋಧನೆ’ ಮಾಡುವ ಕಷ್ಟವೂ ಇಲ್ಲವಾಯ್ತು!
@ಆನಂದ ಪ್ರಸಾದ್..
[ಹೀಗಾಗಿ ಓಡಿ ಹೋಗುವಾಗ ಗುಂಡು ಹಾರಿಸಿದ್ದು ಎಂಬುದು ಸಂಶಯಾಸ್ಪದವಾಗಿದೆ. ಅಲ್ಲದೆ ಓಡಿ ಹೋದರೂ ಎದೆಗೆ ಗುಂಡು ಹಾರಿಸುವ ಅಗತ್ಯ ಇರಲಿಲ್ಲ, ಪ್ರಾಣಾಪಾಯವಾಗದಂತೆ ಕಾಲಿಗೆ ಹಾರಿಸಬೇಕಾಗಿತ್ತು]
ಘಟನೆ ನಡೆದದ್ದು ಮುಂಜಾವಿನ ನಾಲ್ಕು-ನಾಲ್ಕೂವರೆಯ ನಡುವೆ. ಪೋಲಿಸ ಸಿಬ್ಭಂದಿ ಎತ್ತಲಿಂದ ಕವರ್ ಮಾಡಿದರು, ಗುಂಡು ಹಾರಿಸಿದರು ಎಂಬ ಬಗ್ಗೆ ಸ್ಫಷ್ಟವಿಲ್ಲ. ಅಂತಹುದರಲ್ಲಿ ದ.ಕ ದ ಕೆಲವು ‘ಇನ್ವೆಸ್ಟಿಗೇಟರ್’ ಗಳು ತಮ್ಮ ಮುಂದೆಯೇ ಪೂರ್ತಿ ಘಟನೆ ನಡೆಯಿತೇನೊ ಎಂಬಂತೆ ವರ್ಣಿಸಿದ್ದಾರೆ. ಅವರನ್ನು ನಂಬಿ ನೀವು ಅದಕ್ಕೆ ನಿಮ್ಮ ಸ್ವಕಲ್ಪಿತ ಅನುಮಾನಗಳನ್ನು ಸೇರಿಸುತ್ತಿದ್ದಿರಿ..ಸಮರ್ಥಿಸುತ್ತಿದ್ದಿರಿ. ರಾತ್ತಿ ಹೊತ್ತಿನಲ್ಲಿ ಶಂಕಾಸ್ಪದವಾಗಿ ಓಡುತ್ತಿರುವವನಿಗೆ ಕಾಲಿಗೆ ಗುಂಡು ಕೊಡೆಯಬೇಕಿತ್ತು, ಮೊಣಕೈಗೆ ಗುಂಡು ಹೊಡೆಯಬೇಕಿತ್ತು ಎಂದೆಲ್ಲ ನಾವು ಇಲ್ಲಿ ಕುಳಿತು ಹೇಳುವುದು ಸುಲಭ. ಕಾಲಿಗೆ ಗುರಿ ಇಡಲು, ಇನ್ನೆಲ್ಲೊ ಗುರಿ ಇಟ್ಟು ಹೊಡೆಯಲು ಅದೇನು ಹಗಲು ಹೊತ್ತೆ ?
[ಕಬೀರನ ಜೊತೆ ಟೆಂಪೋದಲ್ಲಿ ಎದುರು ಇದ್ದವರು ಗುಂಡಿನ ಸದ್ದು ಕೇಳಿದ ನಂತರ ಪ್ರಾಣ ಉಳಿಸಿಕೊಳ್ಳಲು ಓಡಿದ್ದು ಎಂದು ಹೇಳಿದ್ದಾರೆ. ಅದನ್ನು ಒಪ್ಪಿಕೊಳ್ಳಬಹುದು.]
ಉಳಿದವರು ಓಡಿದರೂ ಒಬ್ಬನು ಟೆಂಪೊದಲ್ಲಿ ಕುಳಿತೆ ಇದ್ದ. ಪೋಲಿಸರಿಗೆ ಇವರನ್ನು ಹೊಡೆದು ಕೊಂದು ಹಾಕುವ ಇರಾದೆ ಇದ್ದಲ್ಲಿ, ಇವನನ್ನು ಕೂಡ ಕೊಲ್ಲಬಹುದಿತ್ತಲ್ಲವೆ? ಏಕೆ ಕೊಲ್ಲಲಿಲ್ಲ? ANF ದವರಿಗೆ ಕಬೀರನ ಮೇಲೆ ವೈಯುಕ್ತಿಕ ದ್ವೇಷವಿತ್ತೆ??
[ಅದೂ ಅಲ್ಲದೆ ನಕ್ಸಲರು ಜಾನುವಾರು ಸಾಗಾಟ ಮಾಡಿದ ಒಂದೇ ಒಂದು ಉದಾಹರಣೆ ಇಲ್ಲ. ಹೀಗಿರುವಾಗ ಜಾನುವಾರು ಸಾಗಾಟ ಮಾಡುವವರನ್ನು ನಕ್ಸಲರಲ್ಲ ಎಂಬುದು ಸಾಮಾನ್ಯ ಜ್ಞಾನ. ಇಂಥ ಸಾಮಾನ್ಯ ಜ್ಞಾನವೂ ನಕ್ಸಲ್ ನಿಗ್ರಹ ದಳದ ಪೊಲೀಸರಿಗೆ ಇರಲಿಲ್ಲ ಎಂಬುದು ಕೂಡ ಸಂಶಯಾಸ್ಪದವಾಗಿದೆ.]
ನಿಮ್ಮ ಈ ವಿವರಣೆ ನೋಡಿದರೆ ಸಾಮಾನ್ಯ ಜ್ಞಾನ ಯಾರದು ಕಡಿಮೆ ಆಗಿದೆ ಎಂಬ ಬಗ್ಗೆ ಅನುಮಾನ ಉಂಟಾಗುತ್ತಿದೆ. ನಕ್ಸಲರು ದನಸಾಗಾಟ ಮಾಡಬೇಕೆಂದಿಲ್ಲ..ಆದರೆ ದನಸಾಗಾಟ ಮಾಡುವ ವಾಹನದಲ್ಲಿ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಪ್ರಯಾಣಿಸಬಹುದು!!.. ಈ ಪ್ರಮೋದ ಪೂಜಾರಿ ಈ ಆಕ್ರಮು ಸಾಗಣೆಯಲ್ಲಿ ಟ್ರಿಪ್ ಗೆ ಎರಡು ಸಾವಿರ ಮೇಲು ಸಂಪಾದನೆ ಮಾಡುತ್ತಿದ್ದುದ್ದಾಗಿ ಹಿಂದೊಮ್ಮೆ ಸಿಕ್ಕಿ ಬಿದ್ದಾಗಲೇ ಪೋಲಿಸರಿಗೆ ಹೇಳಿದ ದಾಖಲೆಯಿದೆ. ಇಂತಹವರು ಹಣ ಸಂಪಾದನೆಗೆ ಏನು ಬೇಕಾದರೂ ಮಾಡಬಲ್ಲರು. ಈ ನಕ್ಸಲರು ಹಣ ಕೊಟ್ಟರೆ ಅವರನ್ನೂ ಕೂಡ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಬಿಡಬಲ್ಲರು ಕೂಡ.
[ದನಗಳನ್ನು ಕದ್ದು ತಂದದ್ದು ಎಂದು ಹೇಳಲಾಗದು. ದನಕರುಗಳನ್ನು ಸಾಕಲಾಗದ ರೈತರು ಅವುಗಳನ್ನು ಮಾರಾಟ ಮಾಡಿರುತ್ತಾರೆ. ]
ನೀವು ಸ್ವಲ್ಪ ಕೊಪ್ಪ, ಶೃಂಗೇರಿ, ತೀರ್ಥಹಳ್ಳಿ, ಕಳಸ, ಕುದುರೆಮುಖ ಬೆಲ್ಟ್ ನಲ್ಲಿ ತಿರುಗಾಡಿ ಬನ್ನಿ ಅಥವಾ ಅಲ್ಲಿಯ ಜನರನ್ನು ಮಾತನಾಡಿಸಿ ನಿಮಗೆ ವಾಸ್ತವ ತಿಳಿಯುತ್ತದೆ.
[ಹಗಲು ಅವುಗಳನ್ನು ಸಾಗಿಸಿದರೆ ಬಜರಂಗದಳ ಹಾಗೂ ಸಂಘದ ಜನರು ಹಲ್ಲೆ ಮಾಡಿ ತೊಂದರೆ ಮಾಡುತ್ತಾರೆ ಎಂದು ಅವರು ರಾತ್ರಿ ಸಾಗಾಟ ಮಾಡುತ್ತಿದ್ದರು. ರೈತರು ಸಾಕಲಾರದೆ ಮಾರಿದ ದನಗಳನ್ನು ಸಾಗಾಟ ಮಾಡುವುದು ಅಪರಾಧವೇನೂ ಅಲ್ಲ. ಹೀಗಿರುವಾಗ ಅವುಗಳನ್ನು ಸಾಗಿಸುವವರಿಗೆ ತೊಂದರೆ ಮಾಡುವುದು ಎಷ್ಟರ ಮಟ್ಟಿಗೆ ಸಮಂಜಸ? ಬಜರಂಗದಳದವರು ಹಾಗೂ ಸಂಘ ಪರಿವಾರದ ಜನರ ಕಿರುಕುಳವೇ ಇಂಥ ಘಟನೆಗಳು ನಡೆಯಲು ಕಾರಣ.]
ಸ್ವಾಮಿ..ಕಾನೂನು ಪ್ರಕಾರ ಖರೀದಿಸಿ, ಸಾಗಿಸುವ ದನಗಳಿಗೆ ಯಾವ ಸಂಘದವನೂ ಏನೂ ಮಾಡಲು ಸಾಧ್ಯವಿಲ್ಲ. ಕಾನೂನು ಪ್ರಕಾರ ಒಂದು ಪಿಕ್ ಆಪ್ ವ್ಯಾನಿನಲ್ಲಿ ಒಯ್ಯಬೇಕಾದದ್ದು ಮೂರು ದನಗಳನ್ನು..ಇಲ್ಲಿ ಒಯ್ಯುತ್ತಿದ್ದದ್ದು ಇಪ್ಪತ್ತೊಂದು. ಇದು ಸಮರ್ಥನೀಯವೆ? ಇದರಲ್ಲಿ ಅಮಾನವೀಯತೆ ಕಾಣಿಸುವುದಿಲ್ಲವೆ ನಿಮಗೆ?
ಕೊನೆಯದಾಗಿ, ಈಗ FIR ರಲ್ಲಿ ಹೆಸರಲಿಸಲ್ಪಟ್ಟ ANF ನ ನವೀನ್ ನಾಯಕ್, ನಕ್ಸಲ್ ನಿಗ್ರಕ ಕಾರ್ಯಾಚರಣೆಯಲ್ಲಿ ರಾಷ್ಟ್ರಪತಿ ಪದಕ ಪಡೆದಿದ್ದರು. ಜುಜುಬಿ ರಾಜಕಾರಣಿಗಳ, ಗಂಜಿ ಸಂಪಾದನೆಯ ವೇದಿಕೆ ಗಳನ್ನು ಕಟ್ಟಿಕೊಂಡವರ ಹುನ್ನಾರಕ್ಕೆ, ಲಾಭಮಾಡಿಕೊಳ್ಳುವಿಕೆ ಬಲಿಯಾಗುವ ಹಾಗೆ ಕಾಣುತ್ತಿದೆ. ಇದು ನಮ್ಮ ದುರ್ದೈವ.
ಎಲ್ಲಾ ಸಾಕ್ಸ್ಯಗಳನ್ನು impartial ಆಗಿ ನೋಡಿದಾಗ ಓರ್ವ ಸಾಮಾನ್ಯ, ಸರಾಸರಿ ಬುದ್ದಿಮತ್ತೆಯ ಮನುಷ್ಯನಿಗೆ ಗೊತಾಗುತ್ತ್ದೆ-ಕಬೀರ್ ನಿರಾಯುದನಾಗಿದ್ದ ,ಎನ್ಫ಼್ ನವರು ಅಪ್ರಚೋದಿತವಾಗಿ, point blank rangeನಿಂದ ಗುಂಡು ಹೊಡೆದು ನಡೆಸಿದ ಹತ್ಯೆ ಎಂದು .ಸರಕಾರಕ್ಕೆ ಪ್ರಾಥಮಿಕ ಪರಿಶೀಲನೆಯಿಂದ ಇದರ ಅರಿವು ಲಬಿಸಿದ್ದರಿಂದಲೇ ಸಿಒಡಿ ತನಿಖೆಗೆ ಆದೇಶಿಸಿದ್ದು ಇಂಥಾ ಒಂದು ಸರಳ ಸತ್ಯವನ್ನು ಅಂಗಿಕರಿಸಲು ಕಲುಷಿತ ಮನಸ್ಸು ತಯಾರಿಲ್ಲವೆಂದರೆ ಇದು ಒಂದು tragedy
ಇನ್ನು ನಮಗೆ ನಮ್ಮದೇ ಆದ ಒಂದು ದೇವ ಸಿದ್ದಾಂತ ಮತ್ತು stand ಇದೆ,ಯಾರಿಂದಲೂ ಎರವಲು ಪಡೆಯುವ ಆವಶ್ಯಕತೆಯಿಲ್ಲ,ಪರಕೀಯರಾದ ಆರ್ಯನ್ ಸಿದ್ದಾಂಥವನ್ನು ಅಪ್ಪಿ ಕೊಂಡವರಿಗೆ ಯಾವ ಸೈದ್ಯಾಂತಿಕ ಬಿರುಸು ಇದೆ .ಎಡಪ೦ಥಿಯ ಸಿ ದ್ದಾಂಥದ ಬಗ್ಗೆ ಅತ್ಯಂತ ಗೌರವವಿದೆ ಮತ್ತು ಇಂದು ಭಾರತೀಯತೆ ಮತ್ತು ಅದರ ಅಖಂಡತೆಯನ್ನು ರಕ್ಷ್ಸಿಸಿವುದರಲ್ಲಿ ಅವರದ್ದು ತುಂಬಾ ದೊಡ್ಡ ಪಾತ್ರ ಇದೆ
ಈ ಲೇಖನಕ್ಕೆ ಪೂರಕವಾಗಿ ಅದರ ಕುರಿತಾಗಿ ಕಾಮೆಂಟ್ ಕೊಡುವುದು ಬಿಟ್ಟು ಬೇರೆಲ್ಲಿಗೆ ಯಾಕೆ ಕೊಂಡೊಯ್ಯ ಬೇಕು. ಹಾಗಾದರೆ ಹಾಜಬ್ಬ ,ಪಬ್ ,ಹೋಮೆಸ್ಟ್ಯ್ ಮುಂತಾದ ಪ್ರಕರಣಕ್ಕೆ ಇಲ್ಲಿ ಪರಸ್ಪರ ಬೆನ್ನು ಚಪ್ಪರಿಸುವ ಮಹನೀಯರಲ್ಲಿ ಎಷ್ಟು ಜನ ಪ್ರತಿಕಯಿಸಿದ್ದಾರೆ . ಮಸೀದಿಯಲ್ಲಿ ದಾಂದಲೆ ನಡೆಸಿದವನನ್ನು ಆ ಪರಿ ಶಿಸ್ಸಿಸಿದ್ದು ತಪ್ಪು,
ಇಸ್ಲಾಂ ಅದಕ್ಕೆ ಯಾವತ್ತು ಅನುಮತಿ ನೀಡೋಲ್ಲ .ತಪ್ಪಿತಸ್ತರಿಗೆ ಕಠಿನ ಶಿಕ್ಸೆಯಾಗಬೇಕು ಽಅದರೆ ಅದಕ್ಕೂ ,ಓರ್ವ ಕಾನೂನು ರಕ್ಷಕ ನಡೆಸಿದ ಹತ್ಯೆಗೂ ಯಾಕೆ ತಳಕು ಹಾಕುವದು ?
Sari raj bhai…haagaadre aa sarakarada kanonu nimma bhaavanege dakke tharuvudillave , innu go hatye nisheda ayitu anthane itkollona (adu aadashtu bega aagabende nanna prartane aagaladru sahabalveya jeevana sigodadre Ade nadeyali,) aaga ee kanonina avaste yenu, matte kabeer adikruta paravanigeya aadhaaradalle go saagata madiddu endaadare …encounter thappallave…
@ ಸಲಾಂ ಬಾವಾ..
[ಅಧಿಕಾರಕ್ಕಾಗಿ ಅಲ್ಲವೇ ನೀವು ಮೋದಿ ಕನಸು ಬಿಡಿ ,ಅದು ಕೇವಲ” ಗರ್ರ “ಗೆ ಮಾತ್ರ ಸೀಮಿತ ,೧೬ಕ್ಕೆ ಅದು ಟುಸ್ಸ್ನ್ದು ಎಂದು ಓಡೆ ಯುತ್ತದೆ .ಭಾರತದಂಥ ಮಹಾನ್ ದೇಶದ ಪ್ರದಾನಿಯಾಗಲು ಅವರು ಯಾವ ಅನ್ಗಲ ನಿಂದ ನೋಡಿದರೂ ಆರ್ಹರಲ್ಲ]
ಇವತ್ತು ಮೇ ೧೬..ಫಲಿತಾಂಶ ಬಂದಿದೆ..ಜ್ವರ ಬಂದಿರಬೇಕು ಸಾಹೇಬರಿಗೆ..ಶೀಘ್ರ ಗುಣಮುಖರಾಗಿ ಎಂಬ ಹಾರೈಕೆ .
ವಿಜಯ್ ಅವರೇ, ಈಗ ಮೋದಿ ಪ್ರಧಾನಿ ಆಗುವುದನ್ನು ತಪ್ಪಿಸುವುದು ಅಡ್ವಾಣಿಯವರಿಗೂ ಸಾಧ್ಯವಿಲ್ಲ. ಆದುದರಿಂದ ಪ್ರಧಾನಿ ಮೋದಿಯವರು ಹಳೆಯದನ್ನು ಮರೆತು ಭ್ರಷ್ಟಾಚಾರ ಮುಕ್ತ ಹಾಗೂ ಸೆಕ್ಯೂಲರ್ ತತ್ವಗಳಿಗೆ ಬದ್ಧವಾದ ಆಡಳಿತ ಕೊಡುತ್ತಾರೆ ಎಂದು ಆಶಿಸೋಣ.
[ಆದುದರಿಂದ ಪ್ರಧಾನಿ ಮೋದಿಯವರು ಹಳೆಯದನ್ನು ಮರೆತು ಭ್ರಷ್ಟಾಚಾರ ಮುಕ್ತ ಹಾಗೂ ಸೆಕ್ಯೂಲರ್ ತತ್ವಗಳಿಗೆ ಬದ್ಧವಾದ ಆಡಳಿತ ಕೊಡುತ್ತಾರೆ ಎಂದು ಆಶಿಸೋಣ]
ಹಳೆಯದನ್ನು ಮರೆಯುವುದು ಅಂದರೆ ನಿಮ್ಮ ೧೨ ವರುಪಗಳ ನಿರಂತರ ಪುಂಗಿನಾದವನ್ನು ಮರೆಯುವುದು ಎಂದೇ??. ಈ ನಿಮ್ಮ ಬ್ರ್ಯಾಂಡಿನ ಒಮ್ಮುಖ ‘ಭ್ರಷ್ಟಾಚಾರ ಮುಕ್ತ ‘, ‘ಸೆಕ್ಯೂಲರ್ ತತ್ವ’ ಗಳ ಪಾಠಕ್ಕೆ ಮತದಾರರು ಚೆನ್ನಾಗಿಯೇ ಬಾರಿಸಿದ್ದಾರೆ. ನಮಗೆ ಬೇಕಾಗಿರುವುದು ನಿಜವಾದ ಭ್ರಷ್ಟಾಚಾರ ಮುಕ್ತ, ಎಲ್ಲರೂ ಒಂದೇ ಎಂಬ ಸೆಕ್ಯೂಲರ್ ತತ್ವಗಳು..ಅವು ಖಂಡಿತವಾಗಿಯೂ ಮೋದಿ ಆಡಳಿತದಲ್ಲಿ ಬರುತ್ತವೆ ಎಂಬ ನಂಬಿಕೆ ಇದೆ.
Where is Anand Prasad??? 🙂
ಮೋದಿ ಸರಕಾರ ಸೆಕ್ಯೂಲರ್ ತತ್ವಗಳಿಗೆ ಹಾಗೂ ಸಮಾನತೆಗೆ ಬದ್ಧವಾಗಿ ನಡೆಯುವಂತೆ ಮಾಡುವುದು ಈ ಸಂದರ್ಭದ ತುರ್ತು. ಆನಂದ ಪ್ರಸಾದ್ ಹಾಗೂ ಸಲಾಂ ಬಾವ ಅವರ ಮೇಲೆ ಹಗೆ ಸಾಧಿಸುವ ಬದಲಿ ಮೋದಿ ಸರಕಾರವನ್ನು ನಿಯಂತ್ರಿಸುವುದು ಹೇಗೆ ಎಂಬುದರ ಬಗ್ಗೆ ವರ್ತಮಾನದಲ್ಲಿ ಚರ್ಚೆಯಾಗಲಿ.
ಮೋದಿಯ ನೇತೃತ್ವದಲ್ಲಿ ಭಾರತದಲ್ಲಿ ಪುರೋಹಿತಶಾಹಿ ವ್ಯವಸ್ಥೆಯ ಪುನರುತ್ಥಾನ ಆಗುವ ಆರಂಭಿಕ ಮುನ್ಸೂಚನೆ ಕಂಡುಬರುತ್ತಿದೆ. ‘ಗಂಗಾ ಆರತಿ’ ಹೆಸರಿನ ಅದ್ಧೂರಿ ಪುರೋಹಿತಶಾಹಿ ಕಾರ್ಯಕ್ರಮ ಮೋದಿಯ ನೇತೃತ್ವದಲ್ಲಿ ವಾರಣಾಸಿಯಲ್ಲಿ ನಿನ್ನೆ ನಡೆದುದು ಹಾಗೂ ಇದನ್ನು ಬಹುತೇಕ ಟಿವಿ ವಾರ್ತಾ ವಾಹಿನಿಗಳು ನೇರ ಪ್ರಸಾರ ಮಾಡಿದುದು ಅತಿರೇಕದ ಪರಮಾವಧಿಯಾಗಿದೆ. ಇಂಥ ಪುರೋಹಿತಶಾಹಿ ಕಂದಾಚಾರಗಳನ್ನು ಸರ್ಕಾರದ ವತಿಯಿಂದ ವೈಭವೀಕರಿಸುವ ಪ್ರವೃತ್ತಿ ಮೋದಿ ಆಳ್ವಿಕೆಯಲ್ಲಿ ಇನ್ನು ಮುಂದೆ ಚರಮಸೀಮೆಗೆ ಮುಟ್ಟುವ ಸಂಭವ ಇದೆ. ಭಾರತದ ಸಂವಿಧಾನವು ಧರ್ಮ ನಿರಪೇಕ್ಷತೆಗೆ ಪ್ರೋತ್ಸಾಹ ಕೊಟ್ಟಿದ್ದರೂ ಬಿಜೆಪಿ ಹಾಗೂ ಸಂಘ ಪರಿವಾರ ಇಂಥ ಪುರೋಹಿತಶಾಹಿ ಕಂದಾಚಾರಗಳಿಗೆ ಹೆಚ್ಚಿನ ಒತ್ತು ಕೊಡುತ್ತಿರುವುದು ವೈಜ್ಞಾನಿಕ ಮನೋಭಾವದ ಬೆಳವಣಿಗೆಗೆ ಮರ್ಮಾಘಾತ ನೀಡಲಿರುವುದು ಖಚಿತ. ಧರ್ಮ ನಿರಪೇಕ್ಷತೆ ಎಂದರೆ ಸರ್ಕಾರದ ಅಥವಾ ಆಳ್ವಿಕರ ವತಿಯಿಂದ ಯಾವುದೇ ಮತೀಯ ಆಚರಣೆಗಳಿಗೆ ಪ್ರೋತ್ಸಾಹ ಕೊಡದೆ ಇರುವುದು ಅಥವಾ ಆಚರಿಸದೆ ಇರುವುದು; ಧಾರ್ಮಿಕ ಆಚರಣೆಗಳು ವೈಯಕ್ತಿಕ ನೆಲೆಯಲ್ಲಿ ಇರಬೇಕೆಂಬುದು. ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಪುರೋಹಿತಶಾಹಿ ಆಚರಣೆಗಳಿಗೆ ಹೆಚ್ಚಿನ ಪ್ರೋತ್ಸಾಹ ಕೊಡುತ್ತಿರುವುದು ವೈಜ್ಞಾನಿಕ ಮನೋಭಾವದ ಬೆಳವಣಿಗೆಯ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಅಲ್ಲ.
ಆನಂದಪ್ರಸಾದ್ ಅವರಿಗೆ— ಇಫ್ತಾರ್ ಕೂಟಗಳಲ್ಲಿ ಭಾಗವಹಿಸುವುದು, ಒಂದು ಧರ್ಮದ ಸಂಕೇತವಾದ ಬಿಳಿಟೋಪಿಯನ್ನು ಧರಿಸುವುದು ಇವೆಲ್ಲಾ ಧರ್ಮ ನಿರಪೇಕ್ಷತೆಯ ಸಂಕೇತಗಳೇ? ಮೋದಿಯವರು ಬಿಳಿ ಟೋಪಿ ಧರಿಸಲು ಒಪ್ಪದೇ ಇದ್ದದ್ದನ್ನು ಟೀಕಿಸಿದವರಿಗೆ, ಚುನಾವಣೆಗೆ ಮುಂಚೆಯೇ ಅದನ್ನೊಂದು issue ಮಾಡಿದವರಿಗೆ ಗಂಗಾ ಆರತಿಯನ್ನು ಟೀಕಿಸುವ ಹಕ್ಕು ಇದೆಯೇ? ನಿನ್ನೆ ಎನ್ ಡಿ ಟಿ ವಿ ಮತ್ತು ಸಿಬಿಎನ್ ಐಬಿಎನ್ ಚಾನೆಲ್ ನಲ್ಲಿ ಈ ಚರ್ಚೆ ಕೇಳಿದ್ದಾಗಿದೆ. ಮೋದಿಯವರು ಗಂಗಾ ಪೂಜೆ ಮಾತ್ರ ಮಾಡಿಲ್ಲ. ಗಂಗಾನದಿ ಮತ್ತು ವಾರಣಾಸಿಯನ್ನು ಶುಚಿ ಮಾಡುವುದು ತಮ್ಮ ಪ್ರಥಮ ಆದ್ಯತೆ ಎಂದಿದ್ದಾರೆ. ಈಗಾಗಲೇ ಆ ಬಗೆಗಿನ ಪ್ರಾಜೆಕ್ಟ್ ಅವರ ಕೈಯಲ್ಲಿದೆ.
ಮೋದಿಯವರು ವೈಯಕ್ತಿಕವಾಗಿ ಹೋಗಿ ಗಂಗಾ ಆರತಿ ಮಾಡಿದ್ದರೆ ಮತ್ತು ಅದಕ್ಕೆ ಮಾಧ್ಯಮಗಳು ಹೆಚ್ಚಿನ ಪ್ರಚಾರ ಕೊಡದಂತೆ ನೋಡಿಕೊಂಡಿದ್ದರೆ ಅವರನ್ನು ಟೀಕಿಸುವ ಅಗತ್ಯ ಬೀಳುತ್ತಿರಲಿಲ್ಲ. ಒಬ್ಬ ಮುತ್ಸದ್ಧಿ ನಾಯಕ ಹಾಗೆ ಮಾಡುತ್ತಾನೆ. ಇಫ್ತಾರ್ ಕೂಟಗಳಲ್ಲಿ ಭಾಗವಹಿಸುವುದು ಅಥವಾ ಬಿಳಿ ಟೋಪಿ ಧರಿಸುವುದು ಕೂಡ ಧರ್ಮ ನಿರಪೆಕ್ಷತೆಗೆ ವಿರುದ್ಧವಾದದ್ದೇ. ಇದು ಒಂದು ಧರ್ಮದ ಓಲೈಕೆ ಮಾಡುವ ವಿಧಾನವಷ್ಟೇ. ಇಂಥ ಓಲೈಕೆಯನ್ನು ವಿರೋಧಿಸುವ ಮೋದಿಯವರು ತನ್ನ ಧರ್ಮದ ಜನರನ್ನು ಓಲೈಸಲು ಅಬ್ಬರದ ಪ್ರಚಾರದೊಂದಿಗೆ ಗಂಗಾ ಆರತಿ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಕೂಡ ವಿರೋಧಾಭಾಸವಾಗಿ ಕಾಣುತ್ತದೆ. ಗಂಗೆಯ ಶುಚೀಕರಣ ಹಾಗೂ ವಾರಣಾಸಿಯ ಅಭಿವೃದ್ಧಿಯ ಪ್ರಾಜೆಕ್ಟ್ ಅವರಲ್ಲಿ ಇದ್ದರೂ ಪುರೋಹಿತಶಾಹೀ ಕಾರ್ಯಕ್ರಮಕ್ಕೆ ಅಬ್ಬರದ ಪ್ರಚಾರ ಕೊಡದೆಯೂ ಅದನ್ನು ಮಾಡಿದ್ದಿದ್ದರೆ ಒಳ್ಳೆಯದಿತ್ತು. ಒಬ್ಬ ಮುತ್ಸದ್ಧಿ ನಾಯಕ ಹಾಗೆ ಮಾಡುತ್ತಿದ್ದ.
Problem is with media, not with Modi. Even AK went straight to Ganga when he entered Varanasi 🙂 How-much ever high you jump now, Modi has a very clear mandate….he is what people of India want….
ಗುಜರಾತಿನ ೨೬ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ೨೬ ಸ್ಥಾನ ಮತ್ತು ರಾಜಸ್ಥಾನದ ೨೫ ಲೋಕಸಭಾ ಕ್ಷೇತ್ರಗಳಲ್ಲಿ ೨೫ರಲ್ಲಿ ಬಿಜೆಪಿ ಗೆದ್ದಿದೆ. ಈ ರೀತಿಯ ಪ್ರವೃತ್ತಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿ. ಒಂದು ರಾಜ್ಯದಿಂದ ವಿರೋಧ ಪಕ್ಷದ ಸದಸ್ಯರ ಉಪಸ್ಥಿತಿ ಇಲ್ಲದೆ ಇದ್ದರೆ ಇದು ಎಂಥ ಪ್ರಜಾಪ್ರಭುತ್ವ? ಆಡಳಿತ ಪಕ್ಷದ ಸದಸ್ಯರು ಮಾಡುವ ತಪ್ಪುಗಳನ್ನು ಪ್ರಶ್ನಿಸಲು ವಿರೋಧ ಪಕ್ಷದ ಸದಸ್ಯರೇ ಇಲ್ಲ. ನಮ್ಮ ಜನರಿಗೆ ಪ್ರಜಾಪ್ರಭುತ್ವದ ಮೂಲಭೂತ ತಿಳುವಳಿಕೆಯೇ ಕಾಣುವುದಿಲ್ಲ.