ಸಾವಿನ ಕಥನಕ್ಕೆ ಮುನ್ನ ಒಂದು ಟಿಪ್ಪಣಿ

ಸ್ನೇಹಿತರೆ,

ಹೇಳಬೇಕಾದ ಎಲ್ಲವನ್ನೂ ಈ ಕೆಳಗಿರುವ ಡಾ. ಜಗದೀಶ್ ಕೊಪ್ಪರವರ ಮುನ್ನುಡಿಯೇ ಹೇಳುತ್ತಿದೆ. ಈ ಲೇಖನ ಸರಣಿ ಇನ್ನು ಮುಂದೆ ಪ್ರತಿ ಭಾನುವಾರ “ವರ್ತಮಾನ”ದಲ್ಲಿ ಪ್ರಕಟವಾಗಲಿದೆ. ನಾಳೆ ಮೊದಲ ಕಂತು. ಜಗದೀಶ್‌ರವರು “ವರ್ತಮಾನ”ದ ಪ್ರಯತ್ನಕ್ಕೆ ಕೊಡುತ್ತಿರುವ ಬೆಂಬಲವನ್ನು ಶ್ಲಾಘಿಸುತ್ತ, ಈ ಲೇಖನ ಸರಣಿ ನಮ್ಮೆಲ್ಲರ ಅರಿವನ್ನು ವಿಸ್ತರಿಸಲಿ ಎಂದು ಆಶಿಸುತ್ತೇನೆ.

ರವಿ ಕೃಷ್ಣಾ ರೆಡ್ಡಿ


ಸಾವಿನ ಕಥನಕ್ಕೆ ಮುನ್ನ ಒಂದು ಟಿಪ್ಪಣಿ

ಹರಿಯುವ ನೀರಿಗೆ ಗಂಗೆಯೆಂದು ಕೈಯೆತ್ತಿ ಮುಗಿದವರ ನೆಲದ ಸಂಸ್ಕೃತಿಯಿಂದ ಬಂದ ನನ್ನಂತಹವನಿಗೆ ಇಂದಿನ ಅಭಿವೃದ್ಧಿಯ ಅಂಧಯುಗದಲ್ಲಿ ಇಲ್ಲಿನ ಗಾಳಿ, ನೀರು ಮಾರಾಟದ ಸರಕಾಗಿ ಬಿಕರಿಯಾಗುತ್ತಿರುವುದು ನೋವಿನ ಸಂಗತಿ.

ಜಗತ್ತಿನ ಜೀವನದಿಗಳನ್ನು ಅಣೆಕಟ್ಟುಗಳ ಹೆಸರಿನಲ್ಲಿ ಕೊಂದು ಹಾಕುತ್ತಿರುವ ಕಥನವೇ ಈ ” ಜೀವನದಿಗಳ ಸಾವಿನ ಕಥನ”. ಎಂಟು ವರ್ಷಗಳ ಹಿಂದೆ ಡಾಕ್ಟರೇಟ್ ಪದವಿಗಾಗಿ ಜಾಗತೀಕರಣ ಕುರಿತಂತೆ ಅಧ್ಯಯನ ಮಾಡುತಿದ್ದ ಸಮಯದಲ್ಲಿ ಸಿಕ್ಕ ಮಾಹಿತಿಯನ್ನು ನಿಮ್ಮೆದುರು ಅನಾವರಣಗೊಳಿಸುತಿದ್ದೇನೆ.

ಈ ಸಂದರ್ಭದಲ್ಲಿ ಪೆಟ್ರಿಕ್ ಮೆಕ್ಕಲಿಯವರ “ಸೈಲೆನ್ಸ್‌ಡ್ ರಿವರ್‍ಸ್” (ಸ್ಥಬ್ದವಾದ ನದಿಗಳು) ಹಾಗೂ ಮೌಡೆ ಬಾರ್‍ಲೋ ಅವರ “ಬ್ಲೂ ಕವನೆಂಟ್” (ನೀಲಿ ಒಂಪ್ಪಂಧ) ಮತ್ತು “ಬ್ಲೂ ಗೋಲ್ಡ್” (ನೀಲಿ ಚಿನ್ನ) ಕೃತಿಗಳಿಂದ ಪ್ರೇರಣೆ ಪಡೆದು ಈ ಲೇಖನ ಮಾಲೆ ರಚಿಸಿದ್ದೇನೆ.

ಈ ಲೇಖನ ಮಾಲೆಯ ಬಗ್ಗೆ ನಿಮ್ಮ ತಕರಾರುಗಳು ಏನೇ ಇರಲಿ, ನದಿಗಳ ಬಗ್ಗೆ, ನೀರಿನ ಬಗ್ಗೆ ನಿಮ್ಮ ಆಲೋಚನಾ ಕ್ರಮ ಬದಲಾದರೆ, ನನ್ನ ಶ್ರಮ ಸಾರ್ಥಕ.

ಡಾ.ಎನ್.ಜಗದೀಶ ಕೊಪ್ಪ
ಧಾರವಾಡ

One thought on “ಸಾವಿನ ಕಥನಕ್ಕೆ ಮುನ್ನ ಒಂದು ಟಿಪ್ಪಣಿ

Leave a Reply

Your email address will not be published. Required fields are marked *