Daily Archives: November 25, 2014

ಹೈಕೋರ್ಟ್ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ವಿರುದ್ಧ ಇರುವ ಆರೋಪಗಳು


– ರವಿ ಕೃಷ್ಣಾರೆಡ್ಡಿ


[29-09-2014 ರಂದು ಆಮ್ ಆದ್ಮಿ ಪಕ್ಷ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಾದ ಪತ್ರಿಕಾಟಿಪ್ಪಣಿಯ ಪರಿಷ್ಕೃತ ರೂಪ ಈ ಲೇಖನ.]

ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿರುವ ಕೆ.ಎಲ್.ಮಂಜುನಾಥರ ವಿರುದ್ಧ ಹಲವು ಆರೋಪಗಳಿದ್ದು, ಈ ವಿಚಾರವಾಗಿ ವಿಚಾರಣೆ ನಡೆಸಬೇಕು ಮತ್ತು ವಾಗ್ಧಂಡನೆಗೆ ಮುಂದಾಗಬೇಕು ಎಂದು ಪಂಜಾಬ್‌ ರಾಜ್ಯದ ನಾಲ್ಕು ಆಮ್ ಆದಿ ಪಕ್ಷದ ಸಂಸದರು ಅದಕ್ಕೆ ಬೇಕಾದ ಸಹಿಸಂಗ್ರಹಣೆಯಲ್ಲಿ ತೊಡಗಿದ್ದಾರೆ ಎನ್ನುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹಾಗೆಂದು ಸುದ್ದಿ ಹೊರಬಂದ ನಂತರ ರಾಜ್ಯದ ಹಲವು ಪ್ರಭಾವಿ ರಾಜಕಾರಣಿಗಳು ಮತ್ತು ವಕೀಲರು ಪತ್ರಿಕಾಗೋಷ್ಟಿ ನಡೆಸಿ ಆಮ್ ಆದ್ಮಿ ಪಕ್ಷದ ವಿರುದ್ಧ ಆರೋಪಗಳನ್ನು ಮಾಡಿ, ನ್ಯಾಯಮೂರ್ತಿ ಮಂಜುನಾಥರನ್ನು ಸಮರ್ಥಿಸಿಕೊಂಡರು. ಅದರೆ, ಕೆ.ಎಲ್.ಮಂಜುನಾಥರ ವಿರುದ್ಧ ಇರುವ ಆರೋಪಗಳಾದರೂ ಎಂತಹವು?chaitra-saledead-1

ನ್ಯಾಯಮೂರ್ತಿ ಕೆ.ಎಲ್.ಮಂಜುನಾಥರ ವಿರುದ್ಧ ಆರೋಪಗಳಲ್ಲಿ ಪ್ರಮುಖವಾದುದು ಅವರು ಫೆಬ್ರವರಿ 9, 2004 ರಲ್ಲಿ ತಮ್ಮ ಅವಲಂಬಿಯಾಗಿದ್ದ ಮತ್ತು ಆಗ ಇಪ್ಪತ್ತು ವರ್ಷ ವಯಸ್ಸಿನವರಾಗಿದ್ದ ಅವರ ಮಗಳು ಕೆ.ಎಮ್.ಚೈತ್ರ ಎನ್ನುವವರ ಹೆಸರಿನಲ್ಲಿ ಅಕ್ರಮವಾಗಿ, (both illegally and out of turn) ವಯ್ಯಾಲಿಕಾವಲ್ ಸೊಸೈಟಿಯಿಂದ ಸೈಟು ಪಡೆದಿರುತ್ತಾರೆ ಎನ್ನುವುದು. ಆ ಸಮಯದಲ್ಲಿ ಕೆ.ಎಮ್.ಚೈತ್ರರವರು ವಯ್ಯಾಲಿಕಾವಲ್ ಸೊಸೈಟಿಯಲ್ಲಿ ಸದಸ್ಯರಾಗಿರುವುದಿಲ್ಲ ಮತ್ತು ನ್ಯಾಯಾಲಯದ ಆದೇಶದ ಪ್ರಕಾರ ಸಹಸದಸ್ಯರಿಗೆ ಸೈಟು ಕೊಡುವುದೂ ಕಾನೂನುಬಾಹಿರ. ಇದರ ಜೊತೆಗೆ, ಅವರು ತಮಗಾಗಲಿ ತಮ್ಮ ಕುಟುಂಬಸದಸ್ಯರಿಗಾಗಲಿ ಬೆಂಗಳೂರು ನಗರದಲ್ಲಿ ಯಾವುದೇ ಗೃಹಸಂಬಂಧಿ ಆಸ್ತಿ ಇಲ್ಲ ಎನ್ನುವ ಪ್ರಮಾಣಪತ್ರವನ್ನು ಕಾನೂನಿನ ಪ್ರಕಾರ ಸಲ್ಲಿಸಬೇಕಿದ್ದರೂ ಆ ಸೊಸೈಟಿಯವರು ಅವರಿಗೆ ಅದರಿಂದ ವಿನಾಯಿತಿ ಕೊಟ್ಟಿರುತ್ತಾರೆ ಎನ್ನುವ ಮಾಹಿತಿ ಇದೆ.

ನಂತರದ ದಿನಗಳಲ್ಲಿ ವಯ್ಯಾಲಿಕಾವಲ್ ಸೊಸೈಟಿ ಮತ್ತು ಬಿಡಿಎ ಮಧ್ಯೆ ಒಂದು ಮೊಕದ್ದಮೆ ಹೈಕೋರ್ಟಿನಲ್ಲಿ ದಾಖಲಾಗುತ್ತದೆ. ಇದಕ್ಕೆ ಸಂಬಂಧಪಟ್ಟ ತೀರ್ಪನ್ನು ನ್ಯಾಯಮೂರ್ತಿ ಕೆ.ಎಲ್.ಮಂಜುನಾಥರವರು ದಿನಾಂಕ 5-7-2005 ರಂದು ನೀಡುತ್ತಾರೆ. ತಮ್ಮ ಅವಲಂಬಿತ ಮಗಳಿಗೆ ಸದರಿ ಸೊಸೈಟಿಯಿಂದ ಸೈಟು ಪಡೆದಿರುವ ಕಾರಣಕ್ಕಾಗಿ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥರು ಆ ಸೊಸೈಟಿಗೆ ಸಂಬಂಧಿಸಿದ ವಿಚಾರಣೆಯಿಂದ ನ್ಯಾಯಾಂಗ ಶುದ್ಧತೆಯನ್ನು ಕಾಪಾಡುವ ನೈತಿಕ ಕಾರಣಕ್ಕಾಗಿ ಮತ್ತು ಹಿತಾಸಕ್ತಿ ಸಂಘರ್ಷದ ಕಾರಣಕ್ಕಾಗಿಯೂ (conflict of interest) ಹಿಂದೆಸರಿಯುವುದು ಅತ್ಯವಶ್ಯಕವಾಗಿತ್ತು. ಅವರು ಹಾಗೆ ಮಾಡದೆ ನ್ಯಾಯಾಂಗದ chaitra-saledead-2ನಿಷ್ಪಕ್ಷಪಾತತನವನ್ನು ಎತ್ತಿಹಿಡಿಯಲಿಲ್ಲ ಎನ್ನುವುದು ಪ್ರಮುಖ ಆರೋಪ.

ಇದೊಂದೇ ಪ್ರಕರಣದಲ್ಲಿ ತಮ್ಮ ಅವಲಂಬಿತ ಮಗಳ ಹೆಸರಿನಲ್ಲಿ ಸೈಟು ಪಡೆಯುವುದೇ ಅಲ್ಲದೆ, ಸೈಟು ಕೊಟ್ಟ ಸೊಸೈಟಿಯ ಮೊಕದ್ದಮೆಯನ್ನು ತಾವೇ ನ್ಯಾಯಮೂರ್ತಿಯಾಗಿ ನಿಭಾಯಿಸುವುದು ಮತ್ತು ತೀರ್ಪು ನೀಡಿರುವುದು ಅನೈತಿಕ ಎಂದು ಮೇಲ್ನೋಟಕ್ಕೆ ಕಾಣಿಸುತ್ತದೆ.

ಇದರ ಜೊತೆಗೆ ವಯ್ಯಾಲಿಕಾವಲ್ ಸೊಸೈಟಿಯ ಬಡಾವಣೆಯನ್ನು ಅಭಿವೃದ್ಧಿಪಡಿಸಿದ್ದ ಲಕ್ಷ್ಮಣ್ ಎನ್ನುವವರು ಪಾಲುದಾರರಾಗಿದ್ದ “ಶ್ರೀ ಶಕ್ತಿ ಬ್ಯುಲ್ಡರ್ಸ್” ಗೆ ಸಂಬಂಧಿಸಿದ ಕೇಸನ್ನು ನ್ಯಾಯಮೂರ್ತಿ  ಕೆ.ಎಲ್.ಮಂಜುನಾಥರವರು 19-09-2003 ರಂದು ವಿಲೇವಾರಿ ಮಾಡಿರುತ್ತಾರೆ. ಇದೇ ಶ್ರೀ ಶಕ್ತಿ ಬ್ಯುಲ್ಡರ್ಸ್‌ರವರು ಅಭಿವೃದ್ಧಿ ಪಡಿಸಿದ ವೈಯಾಲಿಕಾವಲ್ ಸೊಸೈಟಿಯವರ ಬಡಾವಣೆಯಲ್ಲಿ ನ್ಯಾ.ಮಂಜುನಾಥರ ಮಗಳಿಗೆ ಸೈಟು ಹಂಚಿಕೆಯಾಗುತ್ತದೆ (9-2-2004). ಮತ್ತು ನಂತರ ವೈಯಾಲಿಕಾವಲ್ ಸೊಸೈಟಿ ಮತ್ತು ಬಿಡಿಎ ಮಧ್ಯೆ ನಡೆಯುತ್ತಿದ್ದ ದಾವೆಯನ್ನು ನ್ಯಾ.ಮಂಜುನಾಥರು (5-7-2005) ವಿಲೇವಾರಿ ಮಾಡುತ್ತಾರೆ. ಇದೇ ಸೊಸೈಟಿಗೆ ಸಂಬಂಧಿಸಿದ ಇನ್ನೂ ಕೆಲವು ಮೊಕದ್ದಮೆಗಳ ವಿಲೇವಾರಿಯನ್ನೂ ಸದರಿ ನ್ಯಾಯಮೂರ್ತಿಗಳು ನಂತರದ ದಿನಗಳಲ್ಲಿ ಮಾಡುತ್ತಾರೆ (17-01-2007, 20-07-2010).

ಇನ್ನೊಂದು ಪ್ರಕರಣ “ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಗೃಹನಿರ್ಮಾಣ ಸಹಕಾರ ಸಂಘ”ಕ್ಕೆ ಸಂಬಂಧಿಸಿದ್ದು. ಈ ಬಡಾವಣೆಯನ್ನು ಅಭಿವೃದ್ಧಿ ಪಡಿಸಿದ್ದು ಸಹ ಮೇಲೆ ಉಲ್ಲೇಖಿಸಿರುವ ಲಕ್ಷ್ಮಣ್‌ರ ಪಾಲುದಾರಿಕೆಯ ಶ್ರೀ ಶಕ್ತಿ ಬ್ಯುಲ್ಡರ್ಸ್.jd-agreement-1 ಸಹಕಾರ ಸಂಘ ತನ್ನ ಬಡಾವಣೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಶ್ರೀ ಶಕ್ತಿ ಬ್ಯುಲ್ಡರ್ಸ್ ಜೊತೆ ಒಪ್ಪಂದ ಮಾಡಿಕೊಳ್ಳುತ್ತದೆ ಮತ್ತು ಬಡಾವಣೆ ನಿರ್ಮಾಣಕ್ಕಾಗಿ ಶ್ರೀ ಶಕ್ತಿ ಬ್ಯುಲ್ಡರ್ಸ್‌ಗೆ ಕೋಟ್ಯಾಂತರ ರೂಪಾಯಿ ಬಿಡುಗಡೆ ಮಾಡುತ್ತದೆ. ಆದರೆ ಹಣ ಬಿಡುಗಡೆ ಮಾಡುವಾಗ ಕಾನೂನಿನ ಪ್ರಕಾರ ಮೂಲದಲ್ಲಿಯೇ ತೆರಿಗೆ ಹಿಡಿದುಕೊಳ್ಳಬೇಕಿತ್ತು ಎಂದು ಆದಾಯ ತೆರಿಗೆ ಇಲಾಖೆಯವರು ಮೊಕದ್ದಮೆ ದಾಖಲಿಸುತ್ತಾರೆ. ಇದಕ್ಕೆ ಸಂಬಂಧಿಸಿದ ಮೊಕದ್ದಮೆಯನ್ನು ಹೈಕೋರ್ಟಿನ ದ್ವಿಸದಸ್ಯ ಪೀಠ 10-03-2010 ರಂದು ವಿಲೇವಾರಿ ಮಾಡುತ್ತದೆ. ನ್ಯಾ.ಕೆ.ಎಲ್.ಮಂಜುನಾಥ್ ಆ ದ್ವಿಸದಸ್ಯ ಪೀಠದಲ್ಲಿದ್ದ ಒಬ್ಬ ನ್ಯಾಯಮೂರ್ತಿಯೂ ಆಗಿರುತ್ತಾರೆ.

ಇನ್ನು ಭೂಕಬಳಿಕೆಗೆ ಸಂಬಂಧಿಸಿದಂತೆ 2007 ರಲ್ಲಿ ಎ.ಟಿ.ರಾಮಸ್ವಾಮಿಯವರು ಜಂಟಿಸದನ ಸಮಿತಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ. ಆ ವರದಿಯಲ್ಲಿ “ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಗೃಹನಿರ್ಮಾಣ ಸಹಕಾರ ಸಂಘ”ಕ್ಕೆ ಸಂಬಂಧಿಸಿದ ಅಧ್ಯಾಯವೇ ಇದೆ. ಕಾನೂನಿನ ಪ್ರಕಾರ ಹೈಕೋರ್ಟಿನ ಮತ್ತು ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿಗಳು (ಹಾಲಿ, ನಿವೃತ್ತ, ವರ್ಗಾವಣೆಯಾಗಿರುವ ಎಲ್ಲರೂ) ಸರ್ಕಾರಿ ನೌಕರರಲ್ಲ ಮತ್ತು ಅವರು ಯಾವುದೇ ಕಾರಣಕ್ಕೂ ಮೇಲಿನ ಸಹಕಾರಿ ಸಂಘದಲ್ಲಿ ಸದಸ್ಯರಾಗಲು ಅವಕಾಶವಿಲ್ಲ. ಆದರೂ ಸಹ 84 ನ್ಯಾಯಾಧೀಶರು (75 ಹೈಕೋರ್ಟ್ ನ್ಯಾಯಮೂರ್ತಿಗಳು ಮತ್ತು 9 ಸುಪ್ರೀಮ್ ಕೋರ್ಟ್ ನ್ಯಾಯಮೂರ್ತಿಗಳು) ಈ ಸಹಕಾರ ಸಂಘದಿಂದ ನಿಯಮಬಾಹಿರವಾಗಿ ಸೈಟುಗಳನ್ನು ಪಡೆದಿದ್ದಾರೆ ಎಂದು ವರದಿ ಹೇಳುತ್ತದೆ. ಅಷ್ಟೇ ಅಲ್ಲ, ಬಿಡಿಎ ಇಂದಾಗಲಿ, ಯಾವುದಾದರು ಸಹಕಾರಿ ನಿರ್ಮಾಣ ಸಂಸ್ಥೆಯಿಂದಾಗಲಿ ಸೈಟು ಪಡೆದುಕೊಳ್ಳುವವರು ತಮ್ಮ ಹೆಸರಲ್ಲಾಗಲಿ ಅಥವ ಅವಲಂಬಿತ ಕುಟುಂಬದ ಸದಸ್ಯರ ಹೆಸರಿನಲ್ಲಾಗಲಿ ನಗರದಲ್ಲಿ ಯಾವುದೇ ಸೈಟು ಅಥವ ಮನೆಯನ್ನು ಹೊಂದಿರಬಾರದು ಮತ್ತು ಹಾಗೆಂದು ಪ್ರಮಾಣಪತ್ರ ಕೊಡಬೇಕಾಗುತ್ತದೆ. ಆದರೆ, ಸಹಕಾರಿ ಸಂಘದಲ್ಲಿ ಸೈಟು ಪಡೆದ ಯಾವೊಬ್ಬ ನ್ಯಾಯಮೂರ್ತಿಯೂ jd-agreement-2ಹಾಗೆಂದು ಪ್ರಮಾಣಪತ್ರ ನೀಡಿಲ್ಲ ಮತ್ತು ಅನೇಕರಿಗೆ ಹಲವಾರು ಸೈಟು ಆಸ್ತಿಗಳಿದ್ದರೂ ಇಲ್ಲಿಯೂ ಅವರು ಸೈಟು ಪಡೆದಿದ್ದಾರೆ ಎನ್ನಲಾಗಿದೆ. ಎಲ್ಲರಿಗೂ ತಿಳಿದಿರುವಂತೆ ಮಾಜಿ ಲೋಕಾಯುಕ್ತ ಶಿವರಾಜ್ ಪಾಟೀಲರು ಇದೇ ವಿಷಯಕ್ಕೆ ವಿವಾದಕ್ಕೀಡಾಗಿ ತಮ್ಮ ಲೋಕಾಯುಕ್ತ ಹುದ್ದೆಗೆ ರಾಜೀನಾಮೆ ನೀಡಿದ್ದಲ್ಲದೆ, ವೈಯಾಲಿಕಾವಲ್ ಸೊಸೈಟಿಯಿಂದ ಪಡೆದಿದ್ದ ತಮ್ಮ ಹೆಂಡತಿಯ ಹೆಸರಿನಲ್ಲಿದ್ದ ನಿವೇಶನವನ್ನು ವಾಪಸು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಅಂದಹಾಗೆ, ರಾಮಸ್ವಾಮಿಯವರ ವರದಿಯಲ್ಲಿ “ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಗೃಹನಿರ್ಮಾಣ ಸಹಕಾರ ಸಂಘ”ದಿಂದ ನಿವೇಶನ ಪಡೆದಿರುವ ನ್ಯಾಯಮೂರ್ತಿಗಳ ಪಟ್ಟಿಯಲ್ಲಿ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥರ ಹೆಸರೂ ಇದೆ.

ಇದೇ ಸಮಯದಲ್ಲಿ ಕರ್ನಾಟಕ ಹೈಕೋರ್ಟಿನ ಅನೇಕ ನ್ಯಾಯಮೂರ್ತಿಗಳು ಹೈಕೋರ್ಟಿನ ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ಆಸ್ತಿ ವಿವರಗಳನ್ನು ಘೋಷಿಸಿದ್ದಾರೆ (http://karnatakajudiciary.kar.nic.in/judgesAssets&Liabilities.asp). ಆದರೆ ಆ ಪಟ್ಟಿಯಲ್ಲಿ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥರ ಹೆಸರನ್ನು ಕ್ಲಿಕ್ ಮಾಡಿದರೆ ಖಾಲಿ ಪುಟ ಮಾತ್ರ ತೆರೆಯುತ್ತದೆ (http://karnatakajudiciary.kar.nic.in/judgesAssets&Liabilities/klmj.pdf). ರಾಜ್ಯ ಹೈಕೋರ್ಟ್‌ನ ಒಟ್ಟು 32 ನ್ಯಾಯಮೂರ್ತಿಗಳಲ್ಲಿ klmanjunath-judicialsocieity16 ನ್ಯಾಯಮೂರ್ತಿಗಳು ಮಾತ್ರ ಆಸ್ತಿ ಘೋಷಣೆ ಮಾಡಿದ್ದು ಸರಿಯಾಗಿ ಅರ್ಧ ನ್ಯಾಯಮೂರ್ತಿಗಳು ತಮ್ಮ ಆಸ್ತಿ ಘೋಷಣೆ ಮಾಡಿಕೊಂಡಿಲ್ಲ ಮತ್ತು ಅವರಲ್ಲಿ ನ್ಯಾ. ಕೆ.ಎಲ್.ಮಂಜುನಾಥರೂ ಒಬ್ಬರು (29-09-2014 ರಂದು ವೆಬ್‍‌ಸೈಟ್‌ನಲ್ಲಿ ಇದ್ದ ಮಾಹಿತಿ ಪ್ರಕಾರ).

ಹಾಗೆಯೇ, ಇಲ್ಲಿ ಪ್ರಸ್ತಾಪಿಸಿರುವ ಅನೇಕ ವಿಚಾರಗಳು ಕಳೆದ ಎರಡು-ಮೂರು ವರ್ಷಗಳಲ್ಲಿ ಈಗಾಗಲೆ ಅನೇಕ ಮಾಧ್ಯಮಗಳಲ್ಲಿ ಪ್ರಸ್ತಾಪಿತವಾಗಿವೆ.

ಇಂದು ನ್ಯಾಯಾಂಗದ ಸ್ವಾತಂತ್ರ್ಯ, ಪಾರದರ್ಶಕತೆ, ಪ್ರಾಮಾಣಿಕತೆಯನ್ನು ಎತ್ತಿಹಿಡಿಯುವುದು ಮತ್ತು ಆ ನಿಟ್ಟಿನಲ್ಲಿ ಕೆಲಸ ಮಾಡುವುದು ನಮ್ಮೆಲ್ಲರ ಕರ್ತವ್ಯ. ಜಾಮೀನಿಗಾಗಿ ಲಂಚ ಪಡೆಯುವ ನ್ಯಾಯಮೂರ್ತಿಗಳು ಬಂಧನಕ್ಕೊಳಗಾಗಿದ್ದು ಜನಮಾನಸದಲ್ಲಿ ಇನ್ನೂ ಹಚ್ಚಹಸಿರಾಗಿದೆ. ಹಲವು ನ್ಯಾಯಮೂರ್ತಿಗಳ ವಿರುದ್ಧ ಗಂಭೀರ ಆರೋಪಗಳಿವೆ. ನಿವೃತ್ತರಾಗುತ್ತಿದ್ದಂತೆಯೇ ಯಾವುದಾದರೂ ರಾಜ್ಯದ ರಾಜ್ಯಪಾಲರಾಗಿ ಆಯ್ಕೆ ಮಾಡುವ ವಿಚಾರವಾಗಿಯೂ ದೇಶದಲ್ಲಿ ಚರ್ಚೆ ನಡೆಯುತ್ತಿದೆ. ನ್ಯಾಯಾಂಗ ಸುಧಾರಣೆಗಳ ತುರ್ತು ಅಗತ್ಯವನ್ನು ಎಲ್ಲರೂ ಪ್ರತಿಪಾದಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ನಿಷ್ಪಕ್ಷಪಾತ ಮತ್ತು ಯೋಗ್ಯ ವ್ಯಕ್ತಿಗಳು ನ್ಯಾಯಮೂರ್ತಿಗಳಾಗಿರಬೇಕು, ಮತ್ತು ವಿವಾದಾಸ್ಪದ ವ್ಯಕ್ತಿಗಳನ್ನು ನ್ಯಾಯಾಂಗದಿಂದ ಹೊರಗಿಡಬೇಕು ಮತ್ತು ಆ ಕ್ಷೇತ್ರವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಬೇಕುಎನ್ನುವ ನಿಟ್ಟಿನಲ್ಲಿ ಸುಧಾರಣೆಗಳಿಗಾಗಿ ಚಿಂತನೆ ಮತ್ತು ಹೋರಾಟ ನಡೆಸಬೇಕಿದೆ.
klmanjunath-sreeshakthibuilders

klm-judicialsociety