Monthly Archives: September 2011

ಜೀವನದಿಗಳ ಸಾವಿನ ಕಥನ – 3

ಡಾ.ಎನ್. ಜಗದೀಶ್ ಕೊಪ್ಪ

ಪೃಥ್ವಿಯ ಮೇಲಿನ ಭೂವಿನ್ಯಾಸದಲ್ಲಿ ನದಿಗಳ ಪಾತ್ರ ಅನನ್ಯವಾದುದು. ಪರ್ವತಗಳ ಗಿರಿಶ್ರೇಣಿಯಲ್ಲಿ ಹುಟ್ಟಿ ಹರಿಯುವ ನದಿಗಳು, ಸಮುದ್ರ ಸೇರುವ ಮುನ್ನ, ತಾವು ಕ್ರಮಿಸುವ ಹಾದಿಯುದ್ದಕ್ಕೂ ತಮ್ಮ ಇಕ್ಕೆಲಗಳ ಭೂಮಿಯನ್ನು ಫಲವತ್ತಾಗಿಸುತ್ತಾ, ಸುತ್ತ ಮುತ್ತಲಿನ ಪ್ರದೇಶಗಳ ಅಂತರ್ಜಲವನ್ನು ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ.

ನದಿಗಳು, ಮಂಜಿನಿಂದ ಆವೃತ್ತವಾಗಿರುವ ಹಿಮಾಲಯದಂತಹ ಪರ್ವತಶ್ರೇಣಿಗಳಲ್ಲಿ, ಬೇಸಿಗೆ ಕಾಲದಲ್ಲಿ ಹೆಚ್ಚಿನ ಒಳಹರಿವಿನಿಂದ ಪ್ರವಾಹದ ರೀತಿಯಲ್ಲಿ ಹರಿದರೆ, ಇತರೆ ಸಾಮಾನ್ಯ ದಿನಗಳಲ್ಲಿ ಸೂರ್ಯನ ಶಾಖಕ್ಕೆ ಕರಗುವ ಮಂಜುಗೆಡ್ಡೆಯಿಂದಾಗಿ ಸಹಜವಾಗಿ ಹರಿಯುತ್ತವೆ. ನದಿಪಾತ್ರದಲ್ಲಿ ಬೀಳುವ ಮಳೆ, ಹಳ್ಳ-ಕೊಳ್ಳಗಳಲ್ಲಿ ಜಿನುಗುವ ನೀರು ಇವೆಲ್ಲವನ್ನೂ ತನ್ನೊಳಗೆ ಲೀನವಾಗಿಸಿಕೊಳ್ಳುವ ಪ್ರಕ್ರಿಯೆ ನದಿಗೆ ಸಹಜವಾದುದು.

ಈ ನದಿಗಳಲ್ಲಿ ಹರಿಯುವ ನೀರು ಬರೀ ನೀರಷ್ಟೇ ಅಲ್ಲ, ಪರ್ವತ, ಗುಡ್ಡಗಾಡುಗಳ ಇಳಿಜಾರಿನಲ್ಲಿ ಹರಿಯುವ ನೀರು ಅನೇಕ ಗಿಡ-ಮೂಲಿಕೆಗಳನ್ನು ತೋಯಿಸಿ ಹರಿಯುವುದರಿಂದ ಈ ನೀರಿನಲ್ಲಿ ಅನೇಕ ಔಷದೀಯ ಅಂಶಗಳು, ಖನಿಜಾಂಶಗಳು ಮಿಳಿತವಾಗಿರುತ್ತವೆ. ಜೊತೆಗೆ ಈ ನೀರು ಸಿಹಿ ನೀರಾಗಿರುತ್ತದೆ.

ಇಂತಹ ಜೀವ ನದಿಗಳಿಗೆ ಅಣೆಕಟ್ಟು ನಿರ್ಮಿಸುವುದರ ಮೂಲಕ ಅವುಗಳ ಸಹಜ ಹರಿವಿಗೆ ಅಡೆ-ತಡೆ ನಿರ್ಮಿಸಿ ಮಣಿಸುವ ಪ್ರಯತ್ನಕ್ಕೆ 8 ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿದೆ.

ಮೆಸಪೊಟೋಮಿಯ ಈಶಾನ್ಯ ಭಾಗದ ಜಾರ್ಗೊಸ್ ಪರ್ವತಶ್ರೇಣಿಗಳ ತಪ್ಪಲಲ್ಲಿ ಹರಿಯುವ ನದಿಗಳಿಗೆ ಅಣೆಕಟ್ಟು ನಿರ್ಮಿಸಿ, ಕಾಲುವೆ ಮುಖಾಂತರ ನೀರು ಹರಿಸಿರುವುದು ಮೆಸಪಟೋಮಿಯಾ ನಾಗರೀಕತೆಯ ಪ್ರಾಚೀನ ಅವಶೇಷಗಳಿಂದ ದೃಢಪಟ್ಟಿದೆ.

ಸುಮಾರು 6500 ವರ್ಷಗಳ ಹಿಂದೆ ಸುಮೇರಿಯನ್ ಜನಾಂಗ ಟಿಗ್ರಿಸ್ ಮತ್ತು ಯುಪ್ರಟಿಸ್ ನದಿಗಳಿಗೆ ಅಣೆಕಟ್ಟು ನಿರ್ಮಿಸಿರುವುದು ಕಂಡುಬಂದಿದ್ದರೂ ಕೂಡ, ಇದು ಪ್ರವಾಹ ನಿಯಂತ್ರಿಸಲು ಸುಮರಿಯನ್ನರು ಕಂಡುಕೊಂಡಿದ್ದ ಪ್ರಾಚೀನವಾದ ದೇಸಿ ತಂತ್ರಜ್ಞಾನ ಎಂದು ಇತಿಹಾಸತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಈ ಎರಡು ಕುರುಹುಗಳನ್ನು ಹೊರತುಪಡಿಸಿದರೆ, ಕ್ರಿ.ಪೂ.3500 ರಲ್ಲಿ ಈಗಿನ ಜೋರ್ಡಾನ್ ದೇಶದಲ್ಲಿ ಅಂದು ಅಸ್ತಿತ್ವದಲ್ಲಿದ್ದ ಜಾವಾ ಎಂಬ ಪಟ್ಟಣಕ್ಕೆ ಕಾಲುವೆ ಮುಖಾಂತರ ನೀರು ಹರಿಸಲು ನದಿಯೊಂದಕ್ಕೆ 600 ಅಡಿಗಳ ಉದ್ದದ, ವಿಶಾಲವಾದ ಅಣೆಕಟ್ಟು ನಿರ್ಮಿಸಿರುವುದರ ಜೊತೆಗೆ, ನದಿಯುದ್ದಕ್ಕೂ 10 ಸಣ್ಣ ಸಣ್ಣ ಜಲಾಶಯಗಳನ್ನು ಸೃಷ್ಟಿ ಮಾಡಿರುವುದು ಕಂಡುಬಂದಿದೆ.

ಪ್ರಾಚೀನ ಇತಿಹಾಸದಲ್ಲಿ ಅತಿದೊಡ್ಡ ಅಣೆಕಟ್ಟಿನ ನಿರ್ಮಾಣವೆಂದರೆ, ಕ್ರಿ.ಪೂ. 2600 ರಲ್ಲಿ 14 ಮೀಟರ್ ಎತ್ತರ, 113 ಮೀಟರ್ ಉದ್ದದ ಅಣೆಕಟ್ಟು ಈಜಿಪ್ಟ್‌ನ ಕೈರೊ ನಗರದ ಬಳಿ ನಿರ್ಮಾಣಗೊಂಡಿರುವುದು. ಈಜಿಪ್ಟ್‌ನಲ್ಲಿ ಪಿರಮಿಡ್ಡುಗಳನ್ನು ನಿರ್ಮಿಸಿದ ವಾಸ್ತುಶಿಲ್ಪಿಗಳು ಮತ್ತು ಕಾರ್ಮಿಕರೇ ಈ ಅಣೆಕಟ್ಟನ್ನು ನಿರ್ಮಿಸಿದ್ದಾರೆ ಎಂದು ಇತಿಹಾಸಕಾರರು ಊಹಿಸಿದ್ದಾರೆ. ಏಕೆಂದರೆ ಈಜಿಪ್ಟ್‌ನ ಮೊದಲ ಪಿರಮಿಡ್ ರಚಿತವಾದ ಕಾಲದಲ್ಲೇ ಈ ಅಣೆಕಟ್ಟು ನಿರ್ಮಾಣಗೊಂಡಿದೆ. 10 ವರ್ಷಕ್ಕೂ ಹೆಚ್ಚು ಕಾಲ ನಡೆದ ಈ ಅಣೆಕಟ್ಟಿನ ಕಾಮಗಾರಿಗೆ 17 ಸಾವಿರ ಬೃಹದಾಕಾರದ ಕತ್ತರಿಸಿಲ್ಪಟ್ಟ ಕಲ್ಲುಗಳನ್ನು ಬಳಸಲಾಗಿದೆ. ದುರಂತವೆಂದರೆ, ಈ ಅಣೆಕಟ್ಟಿನ ನಿರ್ಮಾಣಕಾರ್ಯ ಪೂರ್ಣಗೊಳ್ಳುವ ಮುನ್ನವೇ ಅಣೆಕಟ್ಟಿನ ಒಂದು ಭಾಗ ನೈಲ್ ನದಿಯ ಪ್ರವಾಹದಲ್ಲಿ ಕೊಚ್ಚಿಹೋಯಿತು. ಈ ಅಣೆಕಟ್ಟಿನ ನಿರ್ಮಾಣದ ಉದ್ದೇಶ ಕುಡಿಯುವ ನೀರಿಗಾಗಿ ಮಾತ್ರ ಎಂಬುದು ಇತ್ತೀಚಿನ ಸಂಶೋಧನೆಗಳಿಂದ ಧೃಡಪಟ್ಟಿದೆ. ಅಣೆಕಟ್ಟು ನಿರ್ಮಾಣಕ್ಕೆ ಮುನ್ನವೇ ನೈಲ್ ನದಿಯ ಪ್ರಾಂತ್ಯಗಳಲ್ಲಿ ಕೃಷಿ ಪದ್ಧತಿ ಆಚರಣೆಯಲ್ಲಿತ್ತು.

ಕ್ರಿ.ಪೂ. ಒಂದನೇ ಶತಮಾನಕ್ಕೆ ಮುನ್ನ ಮಧ್ಯಪ್ರಾಚ್ಯದ ಮೆಡಿಟೇರಿಯನ್ ಪ್ರದೇಶದಲ್ಲಿ ಕಲ್ಲು ಮತ್ತು ಅಗಾಧ ಪ್ರಮಾಣದ ಮಣ್ಣು ಬಳಸಿ ಅಣೆಕಟ್ಟು ನಿರ್ಮಿಸಿರುವುದು ಕಂಡುಬಂದಿದೆ. ಇಂತಹದೇ ಕುರುಹುಗಳು ಚೀನಾ ಹಾಗೂ ಮಧ್ಯ ಅಮೆರಿಕಾ ದೇಶಗಳಲ್ಲೂ ಕಂಡುಬಂದಿದೆ.

ಅಣೆಕಟ್ಟುಗಳ ನಿರ್ಮಾಣದಲ್ಲಿ ಸುಧಾರಿತ ತಂತ್ರಜ್ಞಾನ ಪ್ರಥಮಬಾರಿಗೆ ರೋಮನ್ನರ ಯುಗದಲ್ಲಿ ಬಳಕೆಯಾಯಿತು. ಅಂದಿನ ಕಾಲದಲ್ಲಿ ರೋಮ್ ಸಾಮ್ರಾಜ್ಯದ ಅಧೀನಕ್ಕೆ ಒಳಪಟ್ಟಿದ್ದ ಸ್ಪೇನ್‌ನಲ್ಲಿ ರೋಮನ್ನರು ನಿರ್ಮಿಸಿದ್ದ ಅನೇಕ ಅಣೆಕಟ್ಟುಗಳು ಹಲವಾರು ಶತಮಾನಗಳ ಕಾಲ ಅಸ್ತಿತ್ವದಲ್ಲಿದ್ದವು. 15 ನೇ ಶತಮಾನದಲ್ಲಿ ಅಲಿಕಾಂಟ್ ಬಳಿ ಕಲ್ಲಿನಿಂದ ನಿರ್ಮಿಸಿದ ಅಣೆಕಟ್ಟು ಸುಮಾರು 3 ಶತಮಾನಗಳ ಕಾಲ ಜಗತ್ತಿನ ಅತಿದೊಡ್ಡ ಅಣೆಕಟ್ಟು ಎಂಬ ಕೀರ್ತಿಗೆ ಪಾತ್ರವಾಗಿತ್ತು.

ದಕ್ಷಿಣ ಏಷ್ಯಾ ಕೂಡ ಅಣೆಕಟ್ಟು ನಿರ್ಮಾಣ ಮತ್ತು ತಂತ್ರಜ್ಞಾನದ ಬಗ್ಗೆ ದೊಡ್ಡ ಇತಿಹಾಸವನ್ನು ಹೊಂದಿದೆ. ಕ್ರಿ.ಪೂ. 4ನೇ ಶತಮಾನದಲ್ಲಿ ಶ್ರೀಲಂಕಾದಲ್ಲಿ ಮಣ್ಣಿನಿಂದ ನಿರ್ಮಿಸಿದ್ದ 34 ಮೀಟರ್ ಉದ್ದದ ಅಣೆಕಟ್ಟು ಆ ಕಾಲಕ್ಕೆ ಅತಿದೊಡ್ಡ ಅಣೆಕಟ್ಟಾಗಿತ್ತು. 12ನೇ ಶತಮಾನದ ಶ್ರೀಲಂಕಾದ ದೊರೆ ಪರಾಕ್ರಮಬಾಹು ಅವಧಿಯಲ್ಲಿ ಶ್ರೀಲಂಕಾದಲ್ಲಿ 15 ಮೀಟರ್ ಎತ್ತರದ ಸುಮಾರು 4 ಸಾವಿರ ಅಣೆಕಟ್ಟುಗಳನ್ನು ನಿರ್ಮಿಸಲಾಗಿತ್ತು ಎಂದು ಇತಿಹಾಸದ ದಾಖಲೆಗಳು ಹೇಳುತ್ತಿವೆ. ಗ್ರಾಮಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೆರೆಗಳಿಗೆ ನೀರು ತುಂಬಿಸುವುದು ಹಾಗೂ ಕೃಷಿ ಬಳಕೆಗಾಗಿ ಲಂಕನ್ನರು ಭಾರಿ ಪ್ರಮಾಣದಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಿದ್ದರು. ಇವುಗಳಲ್ಲಿ ಒಂದು ಅಣೆಕಟ್ಟು 15 ಮೀಟರ್ ಎತ್ತರ ಮತ್ತು 1.4 ಕಿ.ಮೀ. ಉದ್ದ ಇದ್ದ ಬಗ್ಗೆ ಸಮಾಜಶಾಸ್ತ್ರಜ್ಞ ಎಡ್ಮಂಡ್ ಲೀಚ್ ದಾಖಲಿಸಿದ್ದಾನೆ.

ಅಣೆಕಟ್ಟುಗಳ ನಿರ್ಮಾಣ ಮತ್ತು ತಂತ್ರಜ್ಞಾನ ಕೇವಲ ಕುಡಿಯುವ ನೀರು ಅಥವಾ ಕೃಷಿ ಬಳಕೆಗೆ ಸೀಮಿತವಾಗದೆ ಆಧುನಿಕ ಯುಗದ ಕೈಗಾರಿಗಳ ಸ್ಥಾಪನೆಗೆ ನಾಂದಿಯಾಯಿತು.

ಅಣೆಕಟ್ಟುಗಳ ಮೂಲಕ ಜಲಾಶಯಗಳಲ್ಲಿ ಸಂಗ್ರಹಿಸಿದ ನೀರನ್ನು ಇಳಿಜಾರಿನಲ್ಲಿ ನಿರ್ಮಿಸಿದ ಚಕ್ರಗಳ ಮೇಲೆ ಕೊಳವೆಗಳ ಮೂಲಕ ಹಾಯಿಸಿ, ತಿರುಗುವ ಚಕ್ರಗಳ ಮುಖಾಂತರ ಮೆಕ್ಕೆಜೋಳವನ್ನು ಹಿಟ್ಟು ಮಾಡುವ ಪದ್ಧತಿ ಈಜಿಪ್ಟ್, ರೋಮನ್, ಸುಮೇರಿಯನ್ನರ ಕಾಲದಲ್ಲಿ ಬಳಕೆಯಲ್ಲಿತ್ತು.

ಈ ತಂತ್ರಜ್ಙಾನವನ್ನೇ ಮೂಲವನ್ನಾಗಿಟ್ಟುಕೊಂಡು ಪ್ರಾನ್ಸ್ ಮೂಲದ ಟರ್ಬೈನ್ ಎಂಬ ಇಂಜಿನಿಯರ್ 1832ರಲ್ಲಿ ಯಂತ್ರವೊಂದನ್ನು ಆವಿಷ್ಕರಿಸಿ, ವಿದ್ಯುತ್ ಉತ್ಪಾದನೆಗೆ ತಳಹದಿ ಹಾಕಿದ. ಆತ ಕಂಡುಹಿಡಿದ ಯಂತ್ರಕ್ಕೆ ಅವನ ಹೆಸರನ್ನೇ ಇಡಲಾಯಿತು.

17ನೇ ಶತಮಾನದ ವೇಳೆಗೆ ಇಂಗ್ಲೆಂಡ್, ಜರ್ಮನಿ, ಇಟಲಿ ಮುಂತಾದ ದೇಶಗಳಲ್ಲಿ ಅಣೆಕಟ್ಟುಗಳ ಕೆಳಭಾಗದಲ್ಲಿ ನಿರ್ಮಿಸಿದ ವಾಟರ್ ಮಿಲ್ ತಂತ್ರಜ್ಞಾನದಿಂದ ಕಬ್ಬಿಣ ಕುಟ್ಟುವುದು, ಜೋಳದ ಹಿಟ್ಟಿನ ತಯಾರಿಕೆ, ಕಾಗದ ಉತ್ಪಾದನೆಗೆ ಬೇಕಾದ ಪಲ್ಪ್ ತಯಾರಿಕೆ ಮುಂತಾದ ಕಾರ್ಯಗಳು ನಡೆಯುತ್ತಿದ್ದವು.

19ನೇ ಶತಮಾನದ ಪೂರ್ವದಲ್ಲಿ ಕೈಗಾರಿಕೆಗಳ ಬಳಕೆಗಾಗಿ 200 ಅಣೆಕಟ್ಟುಗಳನ್ನು ನಿರ್ಮಿಸಲಾಗಿತ್ತು. 20ನೇ ಶತಮಾನದ ಪ್ರಾರಂಭದವರೆಗೆ ಹರಿಯುವ ನದಿಗೆ ಅಡ್ಡಲಾಗಿ ಕಟ್ಟುತ್ತಿದ್ದ ಅಣೆಕಟ್ಟುಗಳಿಗೆ ಕಲ್ಲು, ಇಟ್ಟಿಗೆ, ಗಾರೆ ಬಳಸುತ್ತಿದ್ದರೂ ಕೂಡ, ಇವುಗಳ ನಿರ್ಮಾಣದ ವ್ಯವಸ್ಥೆಯಲ್ಲಿ ಯಾವುದೇ ವೈಜ್ಞಾನಿಕ ತಳಹದಿ ಇರುತ್ತಿರಲಿಲ್ಲ.

ಈ ದಿಶೆಯಲ್ಲಿ, ಅಲ್ಲಿಯತನಕ ನಿರ್ಮಿಸಲಾಗಿದ್ದ ಅಣೆಕಟ್ಟುಗಳ ಸಫಲತೆ-ವಿಫಲತೆಗಳನ್ನು ಕೂಲಂಕುಷವಾಗಿ ಪರಾಮರ್ಶಿಸಿ, 1930 ರಲ್ಲಿ ಪ್ರಥಮವಾಗಿ ನದಿಯ ನೀರಿನ ಹರಿವು, ಅಣೆಕಟ್ಟು ನಿರ್ಮಿಸುವ ಸ್ಥಳದ ಮಣ್ಣಿನ ಪರೀಕ್ಷೆ, ಭೂಗರ್ಭದಲ್ಲಿನ ಕಲ್ಲುಗಳು, ಅಣೆಕಟ್ಟಿನ ನೀರಿನ ಸಂಗ್ರಹ ಹಾಗೂ ಅದರ ಒತ್ತಡದಿಂದಾಗುವ ಭೂಗರ್ಭದಲ್ಲಾಗುವ ಪರಿವರ್ತನೆ ಮುಂತಾದವುಗಳ ಕುರಿತು ಅಧ್ಯಯನ ನಡೆಸಲಾಯಿತು. ಇಂತಹ ವೈಜ್ಞಾನಿಕ ಹಾಗೂ ಕೂಲಂಕುಷ ಅಧ್ಯಯನಗಳ ನಡುವೆ ಕೂಡ ಅಣೆಕಟ್ಟುಗಳ ದುರಂತ ಸಾಮಾನ್ಯವಾಗಿತ್ತು. ಪ್ರತಿ 10 ಅಣೆಕಟ್ಟುಗಳಲ್ಲಿ ಒಂದು ಅಣೆಕಟ್ಟು ದುರಂತದಲ್ಲಿ ಪರ್ಯಾವಸಾನಗೊಳ್ಳುತ್ತಿತ್ತು.

ಪ್ರಾನ್ಸ್‌ನ ಇಂಜಿನಿಯರ್ ಟರ್ಬೈನ್ ಆವಿಷ್ಕರಿಸಿದ ವಿದ್ಯುತ್ ಯಂತ್ರದಿಂದಾಗಿ ಜಲ ವಿದ್ಯುತ್‌ಗೆ ಭಾರಿ ಬೇಡಿಕೆ ಉಂಟಾದ ಕಾರಣ ಅಮೆರಿಕಾ, ಯೂರೋಪ್ ಖಂಡಗಳಲ್ಲಿ ಸಾಕಷ್ಟು ಅಣೆಕಟ್ಟುಗಳು ನಿರ್ಮಾಣವಾದವು. 1900ರಲ್ಲಿ 30ರಷ್ಟಿದ್ದ ಅಣೆಕಟ್ಟುಗಳ ಸಂಖ್ಯೆ 1930ರ ವೇಳೆಗೆ 200ಕ್ಕೆ ತಲುಪಿತ್ತು.

ಅಮೆರಿಕಾದಲ್ಲಿ ವಿಶಾಲವಾದ ಬೃಹತ್ ಹುಲ್ಲುಗಾವಲು ಪ್ರದೇಶಗಳನ್ನು ನೀರಾವರಿಗೆ ಒಳಪಡಿಸುವ ಉದ್ದೇಶದಿಂದ ಅಣೆಕಟ್ಟುಗಳ ನಿರ್ಮಾಣ ಪ್ರಾರಂಭವಾದರೂ, ನಂತರ ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾಗುವಂತೆ, ಜಲ ವಿದ್ಯುತ್ ಯೋಜನೆಗೆ ಒತ್ತು ನೀಡಿ ಭಾರಿ ಪ್ರಮಾಣದಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಲಾಯಿತು.

ಅಮೆರಿಕಾ ಸರಕಾರ ಸೇನಾಪಡೆಯ ತಂತ್ರಜ್ಞರನ್ನು ಒಳಗೊಂಡ ತಂಡವೊಂದನ್ನು ರಚಿಸಿ, ಈ ತಂಡದ ಮೂಲಕ ಜಲ ವಿದ್ಯುತ್‌ಗಾಗಿ ಕಬ್ಬಿಣ-ಸಿಮೆಂಟ್ ಬಳಸಿ, 1930ರವರೆಗೆ 50 ಅಣೆಕಟ್ಟುಗಳನ್ನು ನಿರ್ಮಿಸಿ 1931 ರಲ್ಲಿ ಜಗತ್ತಿನ ಬೃಹತ್ ಅಣೆಕಟ್ಟುಗಳಲ್ಲಿ ಒಂದಾದ ಕೊಲರ್‍ಯಾಡೊ ನದಿಯ ಹೂವರ್ ಅಣೆಕಟ್ಟೆಯನ್ನು ನಿರ್ಮಾಣಮಾಡಿತು.

ಅಮೆರಿಕಾದಲ್ಲಿ ನಿರ್ಮಿಸಲಾದ ಅಣೆಕಟ್ಟುಗಳ ಮೂಲಕ ಉತ್ಪಾದಿಸಿದ ಜಲ ವಿದ್ಯುತ್ ಕೈಗಾರಿಕಾ ಕ್ರಾಂತಿಗೆ ನಾಂದಿಯಾಗುವುದರ ಜೊತೆಗೆ, ವಿಶ್ವದ ಮಹಾ ಯುದ್ಧಕ್ಕೆ ಬೇಕಾದ ಯುದ್ಧ ಸಾಮಗ್ರಿ, ವಿಮಾನಗಳ ತಯಾರಿಕೆಗೂ ಸಹಕಾರಿಯಾಯಿತು. 1945ರವರೆಗೆ ಕಲ್ಲಿದ್ದಲು ಆಧಾರಿತ ಹಾಗೂ ಅಣು ವಿದ್ಯುತ್ ಪ್ರಾರಂಭವಾಗುವವರೆಗೆ ಅಮೆರಿಕ ಸರಕಾರ ವಿದ್ಯುತ್ ಉತ್ಪಾದನೆಯನ್ನು ಗುರಿಯಾಗಿಸಿಕೊಂಡು 100ಕ್ಕೂ ಹೆಚ್ಚು ಅಣೆಕಟ್ಟುಗಳನ್ನು ನಿರ್ಮಾಣ ಮಾಡಿತ್ತು.

ರಷ್ಯಾ ಕೂಡ ಅಣೆಕಟ್ಟುಗಳ ನಿರ್ಮಾಣದಲ್ಲಿ ಹಿಂದೆ ಬಿದ್ದಿರಲಿಲ್ಲ. ಇಲ್ಲಿ ಅಣೆಕಟ್ಟುಗಳ ನಿರ್ಮಾಣದ ಗುರಿ ಜಲ ವಿದ್ಯುತ್‌ಗಿಂತ, ನದಿಗಳ ಹುಚ್ಚು ಪ್ರವಾಹವನ್ನು ನಿಯಂತ್ರಿಸುವುದೇ ಆಗಿತ್ತು.

ರಷ್ಯಾದ ಗೂಢಾಚಾರ ಸಂಸ್ಥೆ ಕೆ.ಜಿ.ಬಿ.ಯ ನಿಯಂತ್ರಣದಲ್ಲಿ ಡೈಪಿರ್ ನದಿಗೆ 1932ರಲ್ಲಿ ಬೃಹತ್ ಅಣೆಕಟ್ಟು ನಿರ್ಮಿಸಿ, ಜಲವಿದ್ಯುತ್ ತಯಾರಿಕೆಗೆ ನಾಂದಿ ಹಾಡಿತು. 1970 ರವೇಳೆಗೆ ರಷ್ಯಾದಲ್ಲಿ ಬಹುತೇಕ ನದಿಗಳಿಗೆ ಅಣೆಕಟ್ಟುಗಳನ್ನು ನಿರ್ಮಿಸಿ, ಪ್ರವಾಹ ನಿಯಂತ್ರಣದೊಂದಿಗೆ 1 ಲಕ್ಷದ 20 ಸಾವಿರ ಚ.ಕಿ.ಮೀ. ಪ್ರದೇಶವನ್ನು ನೀರಾವರಿಗೆ ಒಳಪಡಿಸಲಾಯಿತು.

ಚಿತ್ರಗಳು : ವಿಕಿಪೀಡಿಯ

ಸಾಯಿಸಿ, ಬದುಕಿಸುವ ಮೀಡಿಯಾ!!

ಸುದ್ದಿ ವಾಹಿನಿಗಳ ಸ್ಪರ್ಧೆ ಎಂಥ ಅವಾಂತರ ಸೃಷ್ಟಿಸುತ್ತವೆ ಎಂಬುದಕ್ಕೆ ಕಳೆದ ವಾರದಲ್ಲಿ ಆದ ಘಟನೆಗಳೇ ಸಾಕ್ಷಿ. ನಟ ದೀಪಕ್ ಚಿತ್ರೀಕರಣದ ವೇಳೆ ಅನಾಹುತಕ್ಕೆ ಗುರಿಯಾಗಿ ಸತ್ತರೆಂದು ಸುದ್ದಿಯಾಗಿದ್ದು, ನಟ ದರ್ಶನ್ ಹೆಂಡತಿಯನ್ನು ಹೊಡೆದು ಬಂಧಿತರಾಗಿದ್ದು ಈ ವಿಷಯದಲ್ಲಿ ದೃಶ್ಯ ಮಾಧ್ಯಮ ವಿಚೇಚನೆ ಇಲ್ಲದೆ ನಡಕೊಂಡಿತು. ಈ ಬಗ್ಗೆ ಇವತ್ತಿನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪತ್ರಕರ್ತ ತುರುವೀಹಾಳ ಚಂದ್ರು ಲೇಖನ ಬರೆದಿದ್ದಾರೆ.

ಜನಪದ ವೈದ್ಯ: ಸದ್ಯ ಮತ್ತು ಮುಂದುವರಿಕೆಯ ನೆಲೆ

* ಡಾ. ಅರುಣ್ ಜೋಳದಕೂಡ್ಲಿಗಿ

ಚಳ್ಳಕೆರೆಯಲ್ಲಿ ಶ್ರೀದೇವಿ ಮೂಳೆ ಚಿಕಿತ್ಸಾಲಯವಿದೆ. ಅದು ಐದಾರು ಜನ ಇಕ್ಕಟ್ಟಿನಲ್ಲಿ ಕೂರಬಹುದಾದಷ್ಟು ಪುಟ್ಟದೊಂದು ರೂಮು. ಅಲ್ಲಿ ಮೂಳೆನೋವು, ಉಳುಕು, ಸೊಂಟನೋವು, ನರಸಮಸ್ಯೆ ಮುಂತಾದವುಗಳಿಂದ ಬಾದಿತರಾದ ರೋಗಿಗಳು ಸದಾ ಕಿಕ್ಕಿರಿದಿರುತ್ತಾರೆ. 34 ವರ್ಷದ ಯುವ ನಾಟಿ  ವೈದ್ಯ ಎನ್.ಲಕ್ಷ್ಮಣ್ ಅವರು ಮೂಳೆಗೆ ಸಂಬಂದಿಸಿದ ನೋವುಗಳಿಗೆ ಇಲ್ಲಿ ಚಿಕಿತ್ಸೆ ನೀಡುತ್ತಿರುತ್ತಾರೆ. ಅತ್ಯಾಧುನಿಕ ಆಸ್ಪತ್ರೆಗಳಲ್ಲಿ ಬಗೆಹರಿಯದ ಮೂಳೆ ಸಮಸ್ಯೆಗಳನ್ನು ಲಕ್ಷ್ಮಣ್ ವಾಸಿ ಮಾಡಿದ್ದಾರೆಂಬುದು ಆತನ ಬಗೆಗಿನ ಜನಾಭಿಪ್ರಾಯ. ಈ ವಿಷಯವಾಗಿ ಲಕ್ಷ್ಮಣ್ ಅವರೊಂದಿಗೆ ಮಾತನಾಡಿದಾಗ, ಆತನ ಮಾತು ಮತ್ತು ಅನುಭವದಿಂದ ಜನಪದ ವೈದ್ಯಕ್ಕೆ ಹೇಗೆ ಮರುಜೀವ ನೀಡಬಹುದು ಎನ್ನುವ ಬಗ್ಗೆ ಒಳನೋಟಗಳು ಹೊಳೆದವು.

ಲಕ್ಷ್ಮಣ್ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ಪರುಷರಾಮಪುರದ ಹತ್ತಿರದ ಪಿ. ಮಹದೇವಪುರದವರು. ಇವರ ಅಜ್ಜ, ಅಪ್ಪ ಸಹ ಮೂಳೆಗೆ ಸಂಬಂಧಿಸಿದ ಜನಪದ ವೈದ್ಯವನ್ನು ಮಾಡುತ್ತಿದ್ದರಂತೆ, ಲಕ್ಷ್ಮಣ್ ಪಿಯುಸಿ ಪೇಲಾಗಿ ಉದ್ಯೋಗ ಅರಸಿ ಬೆಂಗಳೂರಿಗೆ ಹೋದರಂತೆ, ಅಲ್ಲಿ ಆಕಸ್ಮಿಕವಾಗಿ ಅಪಘಾತವೊಂದರಲ್ಲಿ ಕಾಲುಮುರಿದುಕೊಂಡು ಮತ್ತೆ ತನ್ನ ಸ್ವಂತ ಊರಿಗೆ ಮರಳಬೇಕಾಯಿತು. ಇಲ್ಲಿ ತನ್ನ ತಂದೆಯಿಂದ ಮೂಳೆ ಮುರಿತಕ್ಕೆ ಚಿಕಿತ್ಸೆ ಪಡೆದು ಗುಣಮುಖವಾಗುವ ಹೊತ್ತಿಗೆ ನಾನೆ ಯಾಕೆ ಅಪ್ಪನ ವಿದ್ಯೆಯನ್ನು ಕಲಿಯಬಾರದು ಅನ್ನಿಸಿದೆ. ಆಗ ಅಪ್ಪನ ಜತೆ ತಾನು ಮೂಳೆ ಚಿಕಿತ್ಸೆ ಮಾಡುವ ನಾಟಿ ವೈದ್ಯದ ವಿಧಾನಗಳನ್ನು ಕಲಿತಿದ್ದಾನೆ. ನಂತರ ಲಕ್ಷ್ಮಣ್ ಸ್ವತಃ ಮೂಳೆ ಸಂಬಂಧಿ ನೋವುಗಳಿಗೆ ಚಿಕಿತ್ಸೆ ನೀಡಲು ಶುರು ಮಾಡಿದ್ದಾರೆ.

ಪಿಯುಸಿ ಓದಿದ ಲಕ್ಷ್ಮಣ್ ತಂದೆಯಿಂದ ಕಲಿತದ್ದನ್ನಷ್ಟೆ ಅಲ್ಲದೆ, ಮೂಳೆ ನರಕ್ಕೆ ಸಂಬಂದಿಸಿದ ಪುಸ್ತಕಗಳನ್ನು ಓದಿ ತಿಳಿದಿದ್ದಾರೆ, ನಂತರ ಮೂಳೆತಜ್ಞ ನರತಜ್ಞ ಡಾಕ್ಟರುಗಳನ್ನು ಸಂಪಕರ್ಿಸಿ ಈ ಬಗ್ಗೆ ವೈಜ್ಞಾನಿಕವಾಗಿಯೂ ತಿಳಿದುಕೊಂಡಿದ್ದಾರೆ. ಅಂತೆಯೇ ಆಯುವರ್ೇದದ ಚಿಕಿತ್ಸೆಯ ಮಾದರಿಗಳನ್ನೂ ಕಲಿತಿದ್ದಾರೆ. ಹೀಗೆ ಮೂಳೆ ಸಂಬಂಧಿಯಾದ ಹಲವು ಬಗೆಯ ತಿಳುವಳಿಕೆ ಪಡೆದು ನಾಟಿ ವೈದ್ಯದಲ್ಲಿ ತನ್ನದೇ ಆದ ಒಂದು ವಿಶಿಷ್ಠ ವಿಧಾನವನ್ನು ರೂಪಿಸಿಕೊಂಡಿದ್ದಾರೆ. ತನ್ನ ತಾತ, ತಂದೆಯವರ ವೈದ್ಯದ ವ್ಯಾಪ್ತಿಯನ್ನು ಅಗಾಧವಾಗಿ ವಿಸ್ತರಿಸಿದ್ದಾರೆ. ಅಂತೆಯೇ ಜನಪದ ವೈದ್ಯದ ಬಗ್ಗೆ ಜನರಲ್ಲಿ ಹೊಸ ವಿಶ್ವಾಸವನ್ನು ಮೂಡಿಸಿದ್ದಾರೆ.

ಹದಿಮೂರು ವರ್ಷದಿಂದ ಚಳ್ಳಕೆರೆಯಲ್ಲಿ ಚಿಕಿತ್ಸೆ ಮಾಡುತ್ತಿದ್ದು, ಈತನಕ ಸುಮಾರು ಇಪ್ಪತ್ತೈದು  ಸಾವಿರಕ್ಕಿಂತ ಹೆಚ್ಚು ಜನರಿಗೆ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡಿದ್ದಾರೆ. ಇದು ಲಕ್ಷ್ಮಣ್ ಅವರ ಕಿರಿ ವಯಸ್ಸಿನ ಹಿರಿಯ ಸಾಧನೆ. ಆತ ಜನಸಾಮಾನ್ಯರಿಗೆ ಮೂಳೆ ನರಗಳ ಬಗ್ಗೆ ಸರಳವಾಗಿ ವಿವರಿಸಿ, ಆ ಕುರಿತು ಜಾಗೃತಿ ಮೂಡಿಸುತ್ತಾನೆ. ಈತನ ಬಳಿಗೆ ಬರುವ ರೋಗಿಗಳು ಬಹುಪಾಲು ಬಡವರು ರೈತರು ಹಳ್ಳಿಗರು. ಹಾಗಾಗಿ ಇವರು ಚಿಕಿತ್ಸೆಗೆ ಪಡೆವ ಹಣ ಕೂಡ ಜನಸಾಮಾನ್ಯರಿಗೆ ನಿಲುಕುವ ಕಡಿಮೆ ಮೊತ್ತ. ಯಾವುದೇ ಆಥರ್ೋಪೆಡಿಕ್ಸ ಡಾಕ್ಟರಿಗಿಂತ ಕಡಿಮೆ ಇಲ್ಲ ಎನ್ನುವಂತಿರುವ ಲಕ್ಷ್ಮಣ್ ಹಮ್ಮು ಬಿಮ್ಮುಗಳಿಲ್ಲದ ಸರಳ ವ್ಯಕ್ತಿ. ತನ್ನಿಂದ ಈ ರೋಗಕ್ಕೆ ಚಿಕಿತ್ಸೆ ಕೊಡಲು ಸಾದ್ಯವಿಲ್ಲ ಎಂತಾದರೆ, ಉಪಯುಕ್ತ ಮಾರ್ಗದರ್ಶನ ಮಾಡುತ್ತಾರೆ. ಇದನ್ನೆಲ್ಲಾ ನೋಡಿದರೆ ಲಕ್ಷ್ಮಣ್ ಜನಪದ ವೈದ್ಯವನ್ನು ಅರ್ಥಪೂರ್ಣವಾಗಿ ಮುಂದುವರಿಸುತ್ತಿದ್ದಾರೆ ಅನ್ನಿಸುತ್ತದೆ.

ಕನರ್ಾಟಕದ ಗ್ರಾಮೀಣ ಭಾಗದಲ್ಲಿ ಈಗಲೂ ಈ ತರಹದ ಸಾವಿರಾರು ಜನಪದ ವೈದ್ಯರಿದ್ದಾರೆ. ಅವರು ತಮ್ಮ ಸುತ್ತಮುತ್ತ ಸಿಗುವ ಗಿಡಮೂಲಿಕೆಗಳನ್ನು ಬಳಸಿ ಚಿಕಿತ್ಸೆ ಮಾಡುತ್ತಾರೆ. ಇಂದಿನ ಆಧುನಿಕ ವೈದ್ಯದ ಪ್ರಭಾವದಿಂದಾಗಿ ಜನಪದ ವೈದ್ಯರಲ್ಲಿ ನಂಬಿಕೆ ಕಡಿಮೆಯಾಗಿದೆ. ಚಿಕಿತ್ಸೆ ಪಡೆಯುವವರ ಸಂಖ್ಯೆ ಇಳಿಮುಖವಾಗುತ್ತಿದೆ. ಹಿಂದೆ ನಾಟಿ ವೈದ್ಯವನ್ನು ಮಾಡುತ್ತಿದ್ದವರು ಈಗ ಕೈಬಿಟ್ಟಿದ್ದಾರೆ. ವಂಶಪಾರಂಪರ್ಯ ಮುಂದುವರಿಕೆ ಸಹ ಕುಂಟಿತವಾಗುತ್ತಿದೆ. ಕಾರಣ ಹೊಸ ತಲೆಮಾರು ತನ್ನ ತಾತ ಮುತ್ತಾತರಿಂದ ಬಂದ ವೈದ್ಯವನ್ನು ಮುಂದುವರಿಸಲು ಆಸಕ್ತಿ ತೋರದಾಗಿದ್ದಾರೆ. ಇದರಿಂದ ಗ್ರಾಮೀಣ ಭಾಗದ ರೈತರು, ಹಳ್ಳಿಗರು, ಬಡವರಿಗೆ ತೊಂದರೆಯಾಗಿದೆ. ಕಾರಣ ಇಂದು ಆಧುನಿಕ ವೈದ್ಯವನ್ನು ಕಲಿತವರು ಹಳ್ಳಿಗಳಿಗೆ ಹೋಗಿ ಚಿಕಿತ್ಸೆ ಕೊಡುವ ಮನಸ್ಸು ಮಾಡುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಕೆಲಸಮಾಡಬೇಕಾಗಿರುವ ದಾದಿಯರೇ(ನರ್ಸಗಳು) ನಗರಗಳಲ್ಲಿ ಮನೆ ಮಾಡಿಕೊಂಡು ಹಳ್ಳಿಗಳಿಗೆ ವಿಮುಖರಾಗಿದ್ದಾರೆ. ಬಹುಪಾಲು ಸರಕಾರಿ ಆಸ್ಪತ್ರೆಗಳು ಸ್ವತಃ ರೋಗಿಗಳಂತೆ ನರಳುತ್ತಿವೆ. ಇನ್ನು ನಗರದ ದೊಡ್ಡ ದೊಡ್ಡ ಆಸ್ಪತ್ರೆಗಳು ವಿಧಿಸುವ ಚಿಕಿತ್ಸೆಯ ದುಬಾರಿ ಮೊತ್ತವನ್ನು ಹಳ್ಳಿಗರಿಗೆ ಭರಿಸಲು ಸಾದ್ಯವಾಗುತ್ತಿಲ್ಲ. ಇದನ್ನು ನೋಡಿದರೆ ಇಂದು ಜನಪದ ವೈದ್ಯಕ್ಕೆ ಮರುಜೀವ ನೀಡುವ ಅಗತ್ಯವಿದೆ.

ಜನಪದ ವೈದ್ಯವನ್ನು ಇರುವಂತೆಯೆ ಮುಂದುವರೆಸುವುದು ಕಷ್ಟ. ಹಾಗಾಗಿ ನಾಟಿ ವೈದ್ಯದಲ್ಲಿ ಕೆಲವು ಅವಶ್ಯ ಮಾಪರ್ಾಡುಗಳನ್ನು ತರಬೇಕಿದೆ. ಈ ವೈದ್ಯದೊಂದಿಗೆ ಬೆರೆತ ಮೂಡನಂಬಿಕೆಗಳನ್ನು ಬಿಡಿಸಬೇಕಿದೆ. ದೈವಗಳೊಂದಿಗೆ ಲಗತ್ತಾಗಿರುವ  ನಂಬಿಕೆಯನ್ನು ಕಡಿಮೆ ಮಾಡಬೇಕಿದೆ. ನಾಟಿವೈದ್ಯರನ್ನು ಗುರುತಿಸಿ ಅವರಿಗೆ ವೈದ್ಯಕೀಯದ ಪ್ರಾಥಮಿಕ ತಿಳುವಳಿಕೆಯನ್ನು ನೀಡಬೇಕು. ಈ ಮೂಲಕ ಅವರ ವೈದ್ಯದಲ್ಲಿ ಕೆಲವು ಬದಲಾವಣೆಗೆ ಮಾರ್ಗದರ್ಶನ ಮಾಡಬೇಕು. ಅನುಭವಿ ನಾಟಿ ವೈದ್ಯರ ಮೂಲಕ ಗ್ರಾಮೀಣ ಭಾಗದ ಯುವಕರಿಗೆ ಕಮ್ಮಟಗಳನ್ನು ಮಾಡಿ, ಯುವಕರಲ್ಲಿ  ಜನಪದ ವೈದ್ಯದ ಬಗ್ಗೆ ಆಸಕ್ತಿ ಮೂಡಿಸುವಂತಾಗಬೇಕಿದೆ. ಮುಖ್ಯವಾಗಿ ನಾಟಿ ವೈದ್ಯದಲ್ಲಿ ಮತ್ತೆ ನಂಬಿಕೆ ಹುಟ್ಟುವ ರೀತಿಯಲ್ಲಿ ಗ್ರಾಮೀಣ ಭಾಗದ ಜನರಿಗೆ ಅರಿವು ಮೂಡಿಸಬೇಕು.

ಕನರ್ಾಟಕ ಜಾನಪದ ಅಕಾಡೆಮಿ ಇಂತಹ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಿದೆ. ಸದ್ಯವೆ ಕಾರ್ಯ ಆರಂಭಿಸಲಿರುವ ಜಾನಪದ ವಿಶ್ವವಿದ್ಯಾಲಯ ಜನಪದ ವೈದ್ಯಕ್ಕೆ ಪ್ರತ್ಯೇಕ ವಿಭಾಗ ತೆರೆದು, ಜನಪದ ವೈದ್ಯರನ್ನು ತಯಾರು ಮಾಡಿ ಅಂತವರು ಗ್ರಾಮೀಣ ಭಾಗದಲ್ಲಿ ಕೆಲಸ ನಿರ್ವಹಿಸುವಂತೆ ಪ್ರೇರೇಪಿಸಬೇಕಿದೆ. ನಾಟಿ ವೈದ್ಯ ಪದ್ದತಿಯ ಪರಿಣಿತರನ್ನು `ಜನಪದ ವೈದ್ಯ’ ಎಂಬ ಅಧಿಕೃತ ಸಟರ್ಿಪಿಕೇಟ್ ನೀಡಿ  ಅವರುಗಳು ಚಿಕಿತ್ಸಾ ಕೇಂದ್ರಗಳನ್ನು ನಡೆಸಲು ಅನುವಾಗುವಂತೆ ವ್ಯವಸ್ಥೆ ಮಾಡುವ ಅಗತ್ಯವಿದೆ. ಜನಪದ ವೈದ್ಯರನ್ನು ನಕಲಿ ವೈದ್ಯರೆಂದು ಅಪರಾದಿ ಸ್ಥಾನದಲ್ಲಿ ನಿಲ್ಲಿಸಬಲ್ಲ ಕಾನೂನುಗಳಿಗೂ ತಕ್ಕ ಬದಲಾವಣೆಯನ್ನು ತರುವ ಅಗತ್ಯವಿದೆ.


 

Smoke rising from vehicle set ablaze during the riots around the viewing of Rajkumar.

Rajkumar’s fans were mostly Bangalore’s underclass – Wikileaks

This is what Chennai Consulate of United States thought and reported to their bosses in the US when Rajkumar died and violence errupted in Bangalore:

SUBJECT: VIOLENCE IN BANGALORE FOLLOWS FILM STAR’S DEATH

1. (U) SUMMARY: Street violence rocked Bangalore on April 12 and 13, following the death of Kannada language film superstar Rajkumar. Widespread street riots left eight persons dead and more than 150 injured. The city’s famed information technology industry was forced to shut down operations and now fears a loss of customer confidence.
END SUMMARY

—————————–
ACTOR’S DEATH SPARKS VIOLENCE
—————————–

2. (U) Kannada movie star Rajkumar, aged 77, died at 1:50 PM on April 12, 2006 following a cardiac arrest. The actor, who had appeared in over 200 Kannada movies and was known as a champion of the Kannada language, had a fan following drawn mostly from Bangalore’s underclass. As news of Rajkumar’s death spread, his emotional fans hit the streets, forcing shops and business establishments to draw their shutters. As the afternoon progressed, the mourners became more emotional and began stoning state-owned Bangalore Municipal Transport Corporation buses as well as private cars and some shops and office buildings. City police adopted a low profile which encouraged the violence that left scores injured. The state government closed schools and announced a two day mourning period. Bangalore’s famed information technology industry shut down operations early on April 12 and declared April 13, 2006 a holiday.

——————————————— —-
FUNERAL PROCESSION LEAVES DESTRUCTION IN ITS WAKE
——————————————— —-

3. (SBU) Violence continued following the actor’s funeral procession on April 13 as fans attempted to get close to the cortege. Unlike on the previous day, police reacted aggressively. “We opened fire on 12 occasions,” Mr. Subash Bharani, Additional Director General of Police Law and Order, told Post. A total of eight persons including a training constable died in the violence and 47 police officers received injuries that required hospitalization. In addition, 10 police vehicles were destroyed. Bharani estimated that beyond the injured police officers, 120 members of the general public sustained injuries.

——————————–
VIOLENCE DENTS BANGALORE’S IMAGE
——————————–

4. (U) The overall cost to Bangalore of the violence is estimated at $160 million, according to newspaper reports. None of Bangalore’s information technology companies reported any physical damage but all were forced to shut down their operations during the violence. Infosys CFO T.V. Mohandas Pai estimated that the city’s software firms lost $40 million in revenues during the shutdown as well as some of the luster from their image. “Bangalore’s image took a beating,” Mr. Ashok Soota, CEO, MindTree Consulting and former President of the Confederation of Indian Industry told Post. He believes that customers may begin asking companies to have backup establishments in other locations, a requirement that would hurt profitability.

———————————-
NEW CHIEF MINISTER WAS SLOW TO ACT
———————————-

5. (SBU) New Karnataka Chief Minister Kumarasamy’s administration, caught on the wrong foot by the violence, responded belatedly to the crisis and appears not to have communicated effectively with the police leaders. “There clearly was a breakdown in communication between the police and the political executive,” R.V. Deshpande, Congress leader and former state Industries Minister, told Post.

—————————–
IMPACT ON BANGALORE”S FUTURE?
—————————–

6. (SBU) COMMENT: Already beset by infrastructure growing pains which are causing some companies to think twice about expansion in the city, Bangalore now faces another blow to its image. How the state government and industry leaders react will be important determiners of Bangalore’s future as India’s information technology capital. END COMMENT

(Courtesy: wikileaks.org)

ಹನಿ… ಹನಿ…


ಬೆಳಗಾಯಿತು ;
ನನ್ನದಷ್ಟೇಯಲ್ಲ
ಲೋಕದ ಎಲ್ಲ
ಗಾಯಗಳು
ಬೀದಿ ತಲುಪಿದವು

ಎಷ್ಟು ನಿರಾಳವಾಗಿ ರೆಕ್ಕೆ ಬಿಚ್ಚಿದೆ
ಕನ್ಕಪ್ಪಡಿ ಇರುಳಿನಲ್ಲಿ ;
ಏನೂ ಕಾಣುವುದಿಲ್ಲವೆಂದು ಈಗಲೂ ಇರುಳನ್ನೇಕೆ
ದೂರುತ್ತಿ ..

ನಿನ್ನ ನಾಜೂಕು ಬೆರಳುಗಳಿಂದ
ನನ್ನ ಹೆಸರನ್ನ ಎದೆಯ ಮೇಲೆ ಬರೆಯಿಸಿಕೊಳ್ಳುವ
ಆಸೆ ಇನ್ನೂ ಇತ್ತು
ಬದುಕು ನಿನ್ನೆ ದಿನ
ನನ್ನ ಬೆರಳುಗಳಿಂದ ನಿನ್ನ ಹೆಸರನ್ನ
ನಿನ್ನ ಸಮಾಧಿಯ ಮೇಲೆ
ಬರೆಯಿಸಿತು ….


ನಿನ್ನ ಕಾಲು ನೋವಿನ ಸುದ್ದಿ ಈಗಷ್ಟೆ ತಲುಪಿತು
ನಿನ್ನೆ ರಾತ್ರಿ ನನ್ನ ಕನಸಿನಲ್ಲಿ ನೀನು ಅಷ್ಟು ಓಡಾಡಬಾರದಿತ್ತು


ಇದೆಂಥ
ನೋಟ ಗೊತ್ತಿಲ್ಲ
ಇರುಳಿನಲಿ ಚಂದ್ರನ
ಕಂಡು
ಲೋಕ ಬೆಳಗಿನಲಿ
ಹಬ್ಬ ಆಚರಿಸುತ್ತಿದೆ
ಅದಕ್ಕೆಂದೇ
ಕರುಣಾಳು ಹಗಲು
ಕನಸ ಬಿಟ್ಟು ಬಂದವರಿಗೆ
ರೊಟ್ಟಿ ಕೊಡುತ್ತಿದೆ


ಬೆಳಕು
ಕಣ್ಣು ತೆರೆಯಿಸಿದೆಂದರು ;
ಎದ್ದು ನೋಡಿದೆ
ಬೆಳಗಿನಲಿ ಮರಕ್ಕೆ
ಜೋತು ಬಿದ್ದಿತ್ತು
ಬೆಳಕು ಕುರುಡಾಗಿಸಿದ
ಕನ್ಕಪ್ಪಡಿ ..!

೭ .
ಎಷ್ಟು ಸಾರಿ ತೊಳೆದರೂ ಕನ್ನಡಿಯನ್ನು
ಮುಖದ ಕಲೆ ಅಳಿಸಲಾಗದು.
೮ .
ಈ ಮನಸು ಕುದಿಕುದಿವ ಅವಿಶ್ರಾಂತ
ನಡುಗೆಯಲ್ಲಿದೆಯೆಂಬುದು ಸುಳ್ಳೇನಲ್ಲ
ನಿನ್ನ ಅಸಹನೆಗೆ ಕಾರಣವಿರಬಹುದು.
ಕಾದ ಬಂಡೆ ಜಂಗಮ ಕಾಲುಗಳನು
ಸ್ಥಾವರ ಮಾಡಗೊಡುವುದಿಲ್ಲ.
ಸುಡುವ ಕೆಂಡದ ಮೇಲೆ ಕಾಲೂರಿ
ನನ್ನೆಡೆಗೆ ಕೈಚಾಚುವ ಮನಸು ಹೇಳುತ್ತಿದೆ
ಪಾತರಗಿತ್ತಿ, ಹಾರಿ ಹೋಗುವ ಮುನ್ನ
ಸ್ಥಾವರಕ್ಕೂ ಜೀವತುಂಬು.
ಈ ಪ್ರೀತಿ
ಭೋರ್ಗರೆಯುವ ಜಲಧಾರೆಯಿಂದ
ಒಂದು ಹನಿಯನ್ನೂ
ಕೆನ್ನಾಲಿಗೆ ಚಾಚಿ ಪ್ರಜ್ವಲಿಸುವ ಬೆಂಕಿಯಿಂದ
ಒಂದು ಕಿಡಿಯನ್ನೂ
ನಿಗಿನಿಗಿ ಉರಿಯುವ ಸೂರ್ಯನಿಂದ
ಒಂದು ಕಣವನ್ನೂ
ಒಮ್ಮೆಲೆ ಬಂದೆರಗುವ ಬಿರುಗಾಳಿಯ ಧೂಳಿನಿಂದ
ಒಂದು ಅಣುವನ್ನೂ
ಘೀಳಿಡುವ ಆನೆ ಸದ್ದಿನಿಂದ
ಒಂದು ತುಣುಕನ್ನೂ
ಪಡೆದುಕೊಂಡಿದೆ.
ಕ್ಷಮಿಸು ಲೋಕವೆ..
ತಣ್ಣನೆಯ ಪ್ರೀತಿ ಸಾಧ್ಯವಿಲ್ಲ.
೧೦
ನೀನು
ಉಸಿರಾಡುವ ಗಾಳಿಯ ಹಾಗೆ
ಕಣ್ಣಿಗೆ ಕಾಣುವುದಿಲ್ಲ
ನಿನ್ನ ಇರುವಿಕೆ ಮಾತ್ರ
ಪ್ರತಿಕ್ಷಣ ಅರಿವಿಗೆ ಬರುತ್ತದೆ
ಏನು ಹೇಳಲಿ?
ಲೋಕ ಕಲಿಸಿದ ಪಾಠವಿದು
ಒಳಗಿರುವುದೆಲ್ಲ ಹೊರಗೆ ಕಾಣಿಸದು
೧೧
ನೀನು ಬೆಂಕಿಯಿಟ್ಟೆ
ಎಂಬುದು ನೆಪವಷ್ಟೆ
ಸುಟ್ಟ ಮೇಲಷ್ಟೆ
ಗಂಧದ ಕಡ್ಡಿಗೆ ಸುವಾಸನೆ.
೧೨ .
ದೀಪ ಹಚ್ಚಿಟ್ಟ ಮೇಲಾದರೂ
ಎದುರಿನ ಮುಖ ಕಾಣಲಿಲ್ಲವಾದರೆ
ದೋಷ ಎಲ್ಲಿಯದೆಂದು
ಈಗಲಾದರೂ ಹುಡುಕು
೧೩
ನಿನ್ನದೇನು ಮಹಾ?
ಬೆಳಕಾದವನನ್ನು ಕತ್ತಲೆಗೆ ದೂಡುವುದು
ದಿನದ ಪರಂಪರೆ.
೧೪
ಬಿದ್ದ ಮಳೆ ಒಂದೇ.
ಭೂಮಿಯ ಅನುಭವಕ್ಕೆ
ನೂರು ಬಣ್ಣ
೧೫
ಯಾರ ನೋವನ್ನೂ
ಸಹಿಸಲಾಗುವುದಿಲ್ಲ ನನಗೆ
ನನ್ನದರ ಹೊರತು
ಎಲ್ಲರ ಸಾವಿಗೂ ಕಣ್ಣೀರಾಗುವೆ
ನನ್ನದರ ಹೊರತು
೧೬
ಹೂ ಮುಡಿಗಿಡುವಾಗಿನ  ಖದರು
ಜಗುಲಿಗೆ  ಏರಿಸುವಾಗಿನ  ನೆದರು
ಗೋರಿ ಮೇಲೆ ಹರಡುವಾಗಿನ ಸದರು
ಒಂದೇ ಅಲ್ಲ
ಎಲ್ಲೆಡೆ ಇಟ್ಟಿದ್ದು
ಹೂವೇ ಆದರೂ
ಹೂವಿಟ್ಟ ಮನಸು ಘನತೆ ಪಡೆಯುವುದು
ಹೂವು ನಲುಗುವುದು.
೧೭ .
ಒಂದು ರಾತ್ರಿಯಾದರೂ
ನಾನು ಕತ್ತಲಲ್ಲಿ ಉಳಿಯದಂತೆ
ನೋಡಿಕೊಂಡೆ.
ಅದಕ್ಕೆಂದೇ
ಬೆಳಗಾಗುವ ಹೊತ್ತಿಗೆ
ನೀ ಹಚ್ಚಿಟ್ಟ ಹಣತೆಯಲ್ಲಿ
ಐಕ್ಯವಾದೆ.
೧೮
 ತುಟಿಗಳ ಬಿಸಿ ಆರುತ್ತ ನಡೆದಿದೆ
ಎದೆಯ ಕಾತರ ನಿಧಾನದ ಹಾದಿಯಲ್ಲಿದೆ
ಮಳೆಗಾಲದಲ್ಲೇ ಭೂಮಿಯ ಬಿಸಿ ಇಂಗತೊಡಗಿದೆ
ಇದು ನಿನ್ನ ಭಾಷೆಯಲ್ಲಿ ಉದಾಸೀನತೆ
ಲೋಕದ ಭಾಷೆಯಲ್ಲಿ ವೈರಾಗ್ಯ
ಎಲ್ಲ ಭಾಷೆಗಳೂ
ಬಣ್ಣದಲ್ಲಿ ಮುಳುಗೇಳುವ ಸಮಯವಿದು
ನನ್ನ ನಿನ್ನ ಎದೆಯು
ಎಚ್ಚರವಾಗಿಯೇ ಇದ್ದರೆ
ಬಿಸಿ ಆರುವ ತುಟಿಗಳಲ್ಲಿ
ಕಾತರ ಕಳೆದುಕೊಂಡ
ಎದೆಯ ಹಾದಿಯಲಿ
ಹಸಿ ಇಂಗುವ ಭೂಮಿಯಲಿ
ಸಾವು ಇಂಚಿಂಚಾಗಿ
ಬೆಳೆಯುವ ಸತ್ಯ ಗೊತ್ತಾಗುತ್ತಿತ್ತೇನೋ?
೧೯
ನಿನ್ನ ಅರ್ಥ ಮಾಡಿಕೊಳ್ಳುವುದೊಂದು ಕಸರತ್ತು
ನಾನದನ್ನು ನಿಲ್ಲಿಸಿದೆ
ಆ ಗಳಿಗೆಯಿಂದ ನಿನ್ನ ಮೌನ
ಎದೆಗೆ ತಲುಪತೊಡಗಿತು.
ಮಾತು ಕೇಳತೊಡಗಿತು
ಕೆಲವು ಸಂಗತಿಗಳಿರುತ್ತವೆ
ಬಾಯಿ ಬಿಟ್ಟು ಹೇಳಿದರೆ
ಬರೀ ಸದ್ದಷ್ಟೇ ಕೇಳುತ್ತದೆ
ಎಲ್ಲೋ ಇರುವ ಹೂ
ಅರಳಿದ್ದು ಗೊತ್ತಾಗುವ ಹಾಗೆ
ದೇಹದ ಒಳಗುಟ್ಟುಗಳು ಹೀಗಿರುತ್ತವಲ್ಲ
ಮಾತಿಲ್ಲದೆಯೂ
ಹೃದಯಕ್ಕೆ ಮುಟ್ಟುತ್ತವೆ.
೨೦ .
ನಿನ್ನ ನೋಡುವುದೆಂದರೆ
ಕಾತರದಲ್ಲಿ ಕುದಿಯುವುದಲ್ಲ
ನನ್ನ ಮುಖ ನಾನು ಕಾಣುವುದು
೨೧
ಲೋಕ ಅಂದುಕೊಳ್ಳಬಹುದೆಂದು
ನಾನು ಬದಲಾಗಲಾರೆ
ಈ ಬದುಕು
ಪ್ರೇಮದ ಆಟಕ್ಕಾಗಿಯೇ ಮೀಸಲಿದೆ
ಪ್ರೇಮವನ್ನು ಗೆಲ್ಲುತ್ತೇನೆ ಎಂದಲ್ಲ
ಈ ಆಟದಲ್ಲಿ ಸೋಲಾದರೂ ಚಿಂತೆಯಿಲ್ಲ
ಕೊನೆಗೊಮ್ಮೆ ದ್ವೇಷದ ಆಟವನ್ನು
ಆರಂಭಿಸುವುದು
ನನಗೆ ಬೇಡವೆನಿಸಿದೆ.

೨೨

ಅವನೆಂದನು
ನಿನ್ನನ್ನು ಪ್ರೀತಿಸಿದರೆ ಪ್ರೇಮಿಯಾಗುವೆ
ಲೋಕವನ್ನು ಪ್ರೀತಿಸಿದರೆ
ದೇವರಾಗುವೆ..
ಅವಳೆಂದಳು
ನನ್ನನ್ನು ಪ್ರೀತಿಸಿ ನನಗೆ ದೇವರಾಗು
ನನಗೆ ದೇವರಾದವನು
ಲೋಕಕ್ಕೂ ದೇವರಾಗುವನು
ನನ್ನನ್ನು ಪ್ರೀತಿಸದವನು
ಲೋಕವನ್ನು ಪ್ರೀತಿಸುತ್ತಾನೆಂದರೆ
ಹೇಗೆ ನಂಬುವುದು?
೨೩ .
ನನ್ನಂತೆ ನಿನ್ನಂತೆ
ಲೋಕದಲ್ಲಿ ಎಲ್ಲರೂ
ಪ್ರೀತಿಯನ್ನು ಬೇಡುತ್ತ ಹೊರಟವರೆ
ಕೊಡುವವರು ಇಲ್ಲದಾಗ
ಬೇಡುವವರ ಸಂಖ್ಯೆ
ದೊಡ್ಡದಾಗುವುದು
ಕೊಡದೇ ಹೋದ ಅರಿವು
ಪಡಕೊಂಡ ಸಮುದ್ರದ ನೀರನ್ನೂ
ಬರಿದಾಗಿಸುವುದು
ಬೇಡುವ ಬದಲು ಕೊಡುವುದನ್ನೇಕೆ
ರೂಢಿಸಿಕೊಳ್ಳಲಿಲ್ಲ?
ಹಾಗೆ ಮಾಡಿದ್ದರೆ
ಸಮುದ್ರದಲ್ಲಿದ್ದೂ
ಬಾಯಾರಿಕೆಯಿಂದ ಸಾಯುವ
ಘೋರತೆಯಿಂದ
ತಪ್ಪಿಸಿಕೊಳ್ಳಬಹುದಿತ್ತೇನೋ?

೨೪

ಬಣ್ಣದ ಚಿಟ್ಟೆ
ಕನಸಿನ ರೆಪ್ಪೆ ಪಿಳುಕಿಸುವುದು
ಹಗಲಿನಲ್ಲಲ್ಲ
೨೫ .
ನೀನು ಪ್ರೀತಿಸದೇ ಇದ್ದರೆ ಏನಾಗುತ್ತಿತ್ತು?
ಏನಿಲ್ಲ
ಎಲ್ಲವೂ ಹಾಗೆಯೇ ಇರುತ್ತಿತ್ತು..
ನಾನೂ..
ನನ್ನೊಳಗಿನ ರಾಕ್ಷಸ ವಿಲಾಸವೂ..

೨೬

ಸಂತನಾದರೇನು?
ಅವಮಾನದ ಕಟಕಟೆಯನ್ನೇರಿದಾಗ
ಅನುಮಾನ
ಎಲ್ಲ ದಿಕ್ಕಿನಿಂದಲೂ
ಎದ್ದು ಬರುವುದು
ಕುರುಡನ ಕೈಯಲ್ಲಿಯ ಕಲ್ಲು
ಯಾವ ದಿಕ್ಕಿನತ್ತ
ತಿರುಗುವುದೆಂದು
ಯಾರಿಗೂ ಗೊತ್ತಾಗುವುದಿಲ್ಲ
ಸ್ವತಃ ಕುರುಡನಿಗೂ ಸಹಾ..
೨೭.
ನಿನ್ನ ಪ್ರೀತಿಯಲ್ಲಿ
ನಾನು ಸುಟ್ಟುಕೊಂಡ ಮೇಲಷ್ಟೇ
ನಿನ್ನ ಪ್ರೀತಿಸುವುದು
ರುಜುವಾತಾಗುವುದು
ಕಳವಳಕ್ಕೆ ಕಾರಣಗಳಿಲ್ಲ
ಸುಡದ ಸುರಕ್ಷಿತ ದಾರಿಯಲ್ಲಿ
ಪ್ರೇಮ ದೊರಕದು

-ವಿಭಾವ