ನಾಗರಿಕ ಹಕ್ಕುಗಳಿಗಾಗಿ ಜನರ ಒಕ್ಕೂಟ-ಕರ್ನಾಟಕ (PUCL-K), ಮತ್ತು ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ – ಮಂಗಳೂರು, ಇವರು “ಪಬ್ ಮತ್ತು ಬರ್ತ್ಡೇ ಪಾರ್ಟಿಗಳ ಮೇಲೆ ನಡೆದ ದಾಳಿ ಹಾಗೂ ಸಂಘ ಪರಿವಾರದ ಕೋಮು ಪೊಲೀಸ್ಗಿರಿ”ಯ ಬಗ್ಗೆ ಸಿದ್ದಪಡಿಸಿದ ಜಂಟಿ ಸತ್ಯಶೋಧನಾ ವರದಿಯನ್ನು ನೆನ್ನೆ ಭಾನುವಾರದಂದು (18-11-2012) ಹಿರಿಯ ವಕೀಲರಾದ ಹೇಮಲತಾ ಮಹಿಷಿಯವರು ಮಂಗಳೂರಿನಲ್ಲಿ ಬಿಡುಗಡೆ ಮಾಡಿದರು. ಆ ವರದಿಯ ಕನ್ನಡ ಮತ್ತು ಇಂಗ್ಲಿಷ್ ಆವೃತ್ತಿಗಳನ್ನು ವರ್ತಮಾನ.ಕಾಮ್ನ ನಮ್ಮ ಓದುಗರಿಗೆ ಒದಗಿಸುತ್ತಿದ್ದೇವೆ. ಮಂಗಳೂರಿನಲ್ಲಿ ನಡೆಯುತ್ತಿರುವ ಕಾನೂನುಬಾಹಿರ ಮತ್ತು ಕೋಮುವಾದಿ ಪ್ರೇರಿತ ಹಿಂಸಾಚಾರ ಮತ್ತು ಕಾರ್ಯಾಚರಣೆಗಳ ಹಿನ್ನೆಲೆಯ ಬಗ್ಗೆ ಈ ವರದಿ ಬೆಳಕು ಚೆಲ್ಲುತ್ತದೆ ಎನ್ನುವ ನಂಬಿಕೆ ನಮ್ಮದು.
ಕನ್ನಡದಲ್ಲಿ: “ಪಬ್ ಮತ್ತು ಬರ್ತ್ಡೇ ಪಾರ್ಟಿಗಳ ಮೇಲೆ ನಡೆದ ದಾಳಿ ಹಾಗೂ ಸಂಘ ಪರಿವಾರದ ಕೋಮು ಪೊಲೀಸ್ಗಿರಿ
ಇಂಗ್ಲಿಷ್ನಲ್ಲಿ: Attacking Pubs and Birthday Parties : A Joint Fact Finding Report