ಸ್ನೇಹಿತರೆ,
ವರ್ತಮಾನ.ಕಾಮ್ ನಡೆಸುತ್ತಿರುವ “ಗಾಂಧಿ ಜಯಂತಿ ಕಥಾ ಸ್ಪರ್ಧೆ – 2012” ಕ್ಕೆ ಕತೆಗಳನ್ನು ಕಳುಹಿಸಲು ಆಗಸ್ಟ್ 31 ಕೊನೆಯ ದಿನವಾಗಿತ್ತು. ನಾನು ವೈಯಕ್ತಿಕವಾಗಿ ಊಹಿಸಿದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕತೆಗಳು ಬಂದಿದ್ದವು. ಕನ್ನಡದ ಖ್ಯಾತ ಕತೆಗಾರರೊಬ್ಬರನ್ನು ಮೌಲ್ಯಮಾಪನ ಮಾಡಲು ಕೋರಿಕೊಂಡು, ಬಂದಿದ್ದ ಕತೆಗಳಲ್ಲಿ ನಾವು ಸೂಚಿಸಿದ್ದ ನಿಬಂಧನೆಗಳ ಪರಿಧಿಯೊಳಗಿದ್ದ ಎಲ್ಲಾ ಕತೆಗಳನ್ನು ಅವರಿಗೆ ಕಳುಹಿಸಲಾಗಿದೆ.
ಇತ್ತೀಚಿನ ಮಾಹಿತಿಯ ಪ್ರಕಾರ ಮೌಲ್ಯಮಾಪನದ ಕೆಲಸ ಮುಗಿದಿದೆ. ಹಾಗಾಗಿ, ಅಕ್ಟೋಬರ್ ಎರಡರ ಗಾಂಧಿ ಜಯಂತಿಯಂದೇ ಫಲಿತಾಂಶವನ್ನು “ವರ್ತಮಾನ”ದಲ್ಲಿ ಪ್ರಕಟಿಸಲಾಗುವುದು. ಕತೆಗಳನ್ನು ಕಳುಹಿಸಿರುವವರು ದಯವಿಟ್ಟು ಗಮನಿಸತಕ್ಕದ್ದು. ಫಲಿತಾಂಶದ ನಂತರ ವಿಜೇತ ಕತೆಗಾರರನ್ನು ವೈಯಕ್ತಿವಾಗಿ ಸಂಪರ್ಕಿಸಲಾಗುವುದು.
ನಮಸ್ಕಾರ,
ರವಿ ಕೃಷ್ಣಾರೆಡ್ಡಿ