Monthly Archives: July 2012

“ಕ್ರಾಂತಿ ಚಿರಾಯುವಾಗಲಿ” ಘೋಷಣೆಯನ್ನು ಕುರಿತು – ಭಗತ್ ಸಿಂಗ್

ಇಂಗ್ಲಿಷ್‌ ಮೂಲ: ಸರ್ದಾರ್ ಭಗತ್ ಸಿಂಗ್
ಕನ್ನಡಕ್ಕೆ: ಸುಧಾ ಚಿದಾನಂದಗೌಡ

[ಇದು ರಮಾನಂದ ಚಟರ್ಜಿಯವರು ಮಾಡರ್ನ್ ರಿವ್ಯೂ (modern review)  ಪತ್ರಿಕೆಯಲ್ಲಿ ‘ಕ್ರಾಂತಿ ಚಿರಾಯುವಾಗಲಿ’ ಎಂಬ ಘೋಷಣೆಯನ್ನು ಮೂದಲಿಸಿ ಬರೆದ ಸಂಪಾದಕೀಯಕ್ಕೆ ಉತ್ತರವಾಗಿ ಬರೆದ ಲೇಖನ. ಇದರಲ್ಲಿ ಭಗತ್‌ಸಿಂಗ್ ಈ ಘೋಷಣೆಯ ಅರ್ಥ, ಗುರಿಗಳು ಮತ್ತು ಪ್ರಾಮುಖ್ಯತೆಯನ್ನು ಕುರಿತು ವಿವರಿಸಿದ್ದಾರೆ. ಈ ಪತ್ರವು ‘ದಿ ಟೆಲಿಗ್ರಾಫ್’ ಪತ್ರಿಕೆಯ ಡಿಸೆಂಬರ್ 24, 1929ರ ಸಂಚಿಕೆಯಲ್ಲಿ ಪ್ರಕಟವಾಯ್ತು.]

ಇವರಿಗೆ,

ಸಂಪಾದಕರು,
ಮಾಡರ್ನ್ ರಿವ್ಯೂವ್ (modern review)

ನಿಮ್ಮ ಪತ್ರಿಕೆಯ ಡಿಸೆಂಬರ್ (1929)ರ ಸಂಚಿಕೆಯಲ್ಲಿ “ಕ್ರಾಂತಿ ಚಿರಾಯುವಾಗಲಿ” ಎಂಬ ಶೀರ್ಷಿಕೆಯಡಿಯಲ್ಲಿ ಒಂದು ಟಿಪ್ಪಣಿ ಬರೆದಿದ್ದೀರಿ. ಅದರಲ್ಲಿ ಈ ಘೋಷಣೆ ಅರ್ಥಹೀನವೆಂದು ತಪ್ಪಾಗಿ ಗುರುತಿಸಿದ್ದೀರಿ. ಆಶ್ಚರ್ಯವಾಗ್ತಿದೆ. ಪ್ರತಿಯೊಬ್ಬ ಭಾರತೀಯನೂ ಮೆಚ್ಚುವ ಹಿರಿಯ, ಅನುಭವಿ, ಪ್ರಬುದ್ಧ ಪತ್ರಕರ್ತರು ನೀವು. ನಿಮ್ಮ ಈ ಬರಹಕ್ಕೆ ಉತ್ತರಿಸಬೇಕಾಗಿರುವುದು ದ್ವಂದ್ವವನ್ನು ಸೃಷ್ಟಿಸುವುದಕ್ಕಲ್ಲ. ಅನಿವಾರ್ಯಕ್ಕೆ.

ಈ ಘೋಷಣೆಯಿಂದ ನಾವು ಬಯಸುವುದೇನು, ನಿರೀಕ್ಷಿಸುವುದೇನು ಎಂಬುದನ್ನು ನಿವೇದಿಸುವುದು ನಮ್ಮ ಕರ್ತವ್ಯವೆಂದು ಭಾವಿಸುತ್ತೇವೆ. ವಿಪ್ಲವದ ಈ ಗಳಿಗೆಯಲ್ಲಿ ಈ ನಮ್ಮ ಕೂಗುಗಳು ನಮಗೆಷ್ಟು ಮುಖ್ಯವೋ ಇದಕ್ಕೊಂದು ಪ್ರಚಾರ ಒದಗಿಸುವುದು ಕೂಡಾ ಅಷ್ಟೇ ಮುಖ್ಯ.

ಈ ಕೂಗು ನಮ್ಮಿಂದ ಹುಟ್ಟಿಲ್ಲ. ಇದೇ “ಕೂಗು” ರಷ್ಯಾ ಕ್ರಾಂತಿಯ ದಿನಗಳಲ್ಲೂ ಬಳಸಲ್ಪಟ್ಟಿತ್ತು. ಎಲ್ಲರೂ ಬಲ್ಲಂತೆ ಸಮಾಜವಾದಿ ಲೇಖಕ ಆಪ್ಟನ್ ಸಿಂಕ್ಲೇರ್ ತಮ್ಮ ಇತ್ತೀಚಿನ ಕಾದಂಬರಿ “ಬೋಸ್ಟನ್ ಮತ್ತು ತೈಲ” (Boston & Oil) ದಲ್ಲಿ ಇದೇ ಘೋಷಣೆಯನ್ನು ಅನೇಕ ಆದರ್ಶವಾದಿ ಕ್ರಾಂತಿಕಾರಿ ಪಾತ್ರಗಳ ಮೂಲಕ ಹೇಳಿಸಿದ್ದಾನೆ. ಈ ವಾಕ್ಯವು ರಕ್ತಸಿಕ್ತ ಘರ್ಷಣೆಯು ಸದಾ ಮುಂದುವರಿದೇ ಇರಬೇಕೆಂದು ಎಲ್ಲೂ ಹೇಳಿಲ್ಲ. ಮತ್ತು ಚಲನಶೀಲವಲ್ಲದ ಯಾವುದೂ ಕೆಲಸಮಯದವರೆಗೆ ಕೂಡ ಅಸ್ತಿತ್ವದಲ್ಲಿರುವುದಿಲ್ಲ. ಈ ಘೋಷಣೆ ಕೂಡ ಇದಕ್ಕೆ ಹೊರತಾದುದಲ್ಲ.

ತುಂಬ ಧೀರ್ಘ ಸಮಯದವರೆಗೆ ಬಳಸಲ್ಪಡುವ ಈ ಘೋಷಣೆ ತುಂಬ ಗುರುತರವಾದುದನ್ನು ಸಾಧಿಸುತ್ತಿದೆ. ಅದು ವ್ಯಾಕರಣಬದ್ಧವಾಗಿ ಅಥವಾ ಶಬ್ಧ ಸಂಪತ್ತಿನ ದೃಷ್ಟಿಕೋನದಿಂದ ಸಮರ್ಥಿಸಿಕೊಳ್ಳುವಂಥದ್ದು ಅಲ್ಲದಿರಬಹುದು. ಆದಾಗ್ಯೂ ವಿಚಾರಗಳ ಗ್ರಹಿಕೆಯ ದೃಷ್ಟಿಯಿಂದ ಇದು ಪ್ರಮುಖವಾದದ್ದು. ಇಂಥ ಎಲ್ಲ ಘೋಷಣೆಗಳೂ ಒಂದು ನಿರ್ದಿಷ್ಟ ಪ್ರಜ್ಞೆಯನ್ನೇ ಒಳಗೊಂಡಿವೆ. ಅದು ಭಾಗಷಃ ಹೊಸದಾಗಿ ಒಳಗು ಮಾಡಿಕೊಂಡಿದ್ದೂ ಹೌದು ಮತ್ತು ಭಾಗಷಃ ಅನುವಂಶೀಯವಾಗಿ ಉಳಿಸಿಕೊಂಡಿದ್ದು ಹೌದು. ಪ್ರಜ್ಞೆ ಮತ್ತು ಆಶಯ ಇಲ್ಲಿ ಮುಖ್ಯ ಉದಾಹರಣೆ.

ನಾವು “ಜತಿನ್ ದಾಸ್ ಚಿರಾಯುವಾಗಲಿ” (Long live jatin das) ಎಂದು ಕೂಗಿದರೆ, ಅದರರ್ಥ ಜತಿನ್ ದಾಸ್ ಭೌತಿಕವಾಗಿ ಸದಾ ಕಾಲ ಜೀವಂತವಾಗಿರಲಿ ಎಂದಲ್ಲ. ಹಾಗಿರುವುದು ಸಾಧ್ಯವೂ ಇಲ್ಲ. ಅದು ಧ್ವನಿಸುವುದೇನೆಂದರೆ ಜತಿನ್ ದಾಸ್ ಎಂಬ ವ್ಯಕ್ತಿಯ ಉನ್ನತ ವಿಚಾರಗಳು ಮುಂದುವರಿಯಲಿ, ಎಂದೂ ಕುಂದದ ಸ್ಫೂರ್ತಿಯಾಗಿರಲಿ ಎಂದರ್ಥ. ಅದು ಅನೇಕ ಹುತಾತ್ಮರಿಗೆ, ಹೇಳಿಕೊಳ್ಳಲಾಗದ ಯಾತನೆಯನ್ನು ಅನುಭವಿಸಿದರೂ ಎದೆಗುಂದದೆ, ನಂಬಿದ ಸಿದ್ಧಾಂತಗಳಿಗೆ ಅರ್ಪಿಸಿಕೊಂಡವರಿಗೆ ಮಾರ್ಗದರ್ಶನವಾಗಲಿ ಎಂಬ ತಾತ್ಪರ್ಯ. ಈ ಘೋಷಣೆಯನ್ನು ಪದೇ ಪದೇ ಹೇಳಿಕೊಳ್ಳುವುದರ ಮೂಲಕ ನಮ್ಮ ಧೈರ್ಯ ಹೆಚ್ಚಿಸಿಕೊಂಡು, ವಿಚಾರಗಳನ್ನು ಉಳಿಸಿಕೊಳ್ಳುವುದು ಸಾಧ್ಯ. ಆ ಸ್ಫೂರ್ತಿಗಾಗಿಯೇ ನಾವೀ ಕೂಗನ್ನು ಇನ್ನೂ ಗಟ್ಟಿಯಾಗಿ ಕೂಗಬೇಕಿದೆ.

ಹಾಗೆಯೇ, ಕ್ರಾಂತಿ ಎಂಬ ಪದವನ್ನು ಅಕ್ಷರಷಃ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬಾರದು. ವಿವಿಧ ಅರ್ಥಗಳು ಮತ್ತು ಪ್ರಾಮುಖ್ಯತೆಗಳು ಈ ಶಬ್ಧಕ್ಕೆ ಇವೆ. ಅದು ಉಪಯೋಗಿಸಿಕೊಳ್ಳುವವರು ಅಥವಾ ದುರುಪಯೋಗಪಡಿಸಿಕೊಳ್ಳುವವರ ಆಸಕ್ತಿಗಳ ಮೇಲೆ ಅವಲಂಬಿತ. ಶೋಷಣೆಯನ್ನೇ ಗುರಿಯಾಗಿಸಿಕೊಂಡಿರುವ ಸ್ಥಾಪಿತ ಬ್ಯುರಾಕ್ರಸಿಯ ಏಜೆಂಟರುಗಳ ಪಾಲಿಗೆ ಇದು ರಕ್ತದ ಕಲೆಯ ಭಯಾನಕ ಭಾವನೆಗಳನ್ನೇ ಉದ್ದೀಪಿಸಬಹುದು. ಆದರೆ ಕ್ರಾಂತಿಕಾರಿಗಳಿಗೆ ಅದು ಪವಿತ್ರ ವಾಕ್ಯ.

ಈ ಎಲ್ಲ ವಿಚಾರಗಳನ್ನು ಅಸೆಂಬ್ಲಿ ಬಾಂಬ್ ಕೇಸ್ ಸಂಬಂಧಿತ ಮೊಕದ್ದಮೆಗಳು ನಡೆಯುವಾಗ ವಿಚಾರಣೆಗಳ ನಡುವೆ ದೆಹಲಿಯ ಸೆಷನ್ ಜಡ್ಜ್‌ಗಳ ಎದುರು ಸ್ಪಷ್ಟಪಡಿಸಲು ಯತ್ನಿಸಿ ಹೇಳಿಕೆಯೊಂದನ್ನು ಕೊಟ್ಟಿದ್ದೆವು. ಅದರಲ್ಲಿ “ಕ್ರಾಂತಿ”ಯ ಅರ್ಥವನ್ನು ವಿವರಿಸಿದ್ದೆವು.

ಅಲ್ಲಿ “ಕ್ರಾಂತಿ”ಯು ರಕ್ತಸಿಕ್ತ ಸಂಘರ್ಷವನ್ನು ಒಳಗೊಳ್ಳಲೇಬೆಕಾದ ಅಗತ್ಯವೇನೂ ಇಲ್ಲ ಎಂದು ಹೇಳಿದ್ದೆವು. ಖಂಡಿತವಾಗಿಯೂ “ಕ್ರಾಂತಿ”ಯು ಬಾಂಬ್ ಅಥವಾ ಪಿಸ್ತೂಲ್‌ನ ಸಂಸ್ಕೃತಿಯಲ್ಲ. ಕೆಲಬಾರಿ ಅನಿವಾರ್ಯತೆಗೆ ಕಾರ್ಯಸಾಧನೆಗೆ ಮಾತ್ರ ಆ ದಾರಿ ಹಿಡಿಯಬಹುದು. ಮತ್ತು ಕೆಲವು ಆಂದೋಲನಗಳಲ್ಲಿ ಬಾಂಬ್ ಹಾಗೂ ಪಿಸ್ತೂಲುಗಳು ಪ್ರಮುಖ ಪಾತ್ರ ವಹಿಸುವದರಲ್ಲಿ ಸಂಶಯವೇನೂ ಇಲ್ಲ. ಆದರೆ, ಈ ಕಾರಣಕ್ಕಾಗಿಯೇ ಅದು ಎಲ್ಲ ಸಂದರ್ಭಗಳಲ್ಲಿ ಕಡ್ಡಾಯವೆಂದೂ, ಪ್ರತಿಬಾರಿ ಪ್ರತಿ ಆಂದೋಲನ ರಕ್ತಸಿಕ್ತ ಘರ್ಷಣೆಯೇ ಆಗಬೇಕೆಂದೇನೂ ಇಲ್ಲ. ದಂಗೆಯೇಳುವುದು ಕ್ರಾಂತಿಯಲ್ಲ. ಆದರೆ ದಂಗೆಯೇಳುವುದರ ಮೂಲಕ ಅಂತಿಮವಾಗಿ “ಕ್ರಾಂತಿ”ಯನ್ನು ತಲುಪಬಹುದು ಎನ್ನಬಹುದು. ಈ ಅರಿವಿನಲ್ಲಿ, ಈ ಪ್ರಜ್ಞೆಯಲ್ಲಿ ಕ್ರಾಂತಿ ಎಂದರೆ ಸ್ಫೂರ್ತಿ.

’ಕ್ರಾಂತಿ’ ಎಂದರೆ ಬದಲಾವಣೆ-ಅದು ಈಗಿರುವುದಕ್ಕಿಂತ ಉತ್ತಮವಾದ ದಿಕ್ಕಿನಲ್ಲಿ ನಡೆಯಬೇಕಾದ ಬದಲಾವಣೆ. ಆ ಬದಲಾವಣೆಗಾಗಿ ಹಾತೊರೆಯುವ ಕ್ರಿಯೆಯೇ ಕ್ರಾಂತಿ. ಸಾಮಾನ್ಯವಾಗಿ ಜನಸಮುದಾಯವು ಸ್ಥಾಪಿತಗೊಂಡ ಸ್ಥಿತಿಗಳಿಗೆ ಇದುವರೆಗೂ ಹೀಗೇ ಇತ್ತು ಹೀಗೇ ಇರುತ್ತೆ ಎಂಬ ಭಾವನೆಗೆ ಜೋತುಬಿದ್ದು, ಅದನ್ನೇ ಅಭ್ಯಾಸ ಮಾಡಿಕೊಂಡಿರುವುದು ಸಹಜ. ಮತ್ತು ಬದಲಾವಣೆ ಎಂಬ ಪದವೇ ಅವರು ನಡುಗುವಂತೆ ಮಾಡುತ್ತದೆ. ಆ ವಿಚಾರ ಬಂದೊಡನೆ ಜನ ಕಂಪಿಸುತ್ತಾರೆ. ಇಂಥ ಅಪಾಯಕಾರಿ ಸ್ಥಿತಿಯು ಕ್ರಾಂತಿಯಿಂದ ಸ್ಫೂರ್ತಿ ಹೊಂದಿ ಬದಲಾವಣೆಗೆ ಸ್ಥಳಾಂತರಗೊಳ್ಳುವ ಅವಶ್ಯಕತೆಯಿದೆ. ಇಲ್ಲವಾದಲ್ಲಿ ಅಧಮತನವೇ, ನೀಚ ನಡಾವಳಿಕೆಗಳೇ ಮೇಲುಗೈ ಸಾಧಿಸಿ, ಇಡೀ ಮನುಕುಲವು ಪ್ರತಿಕೂಲ ಬಲಗಳಿಗೆ ಸಿಕ್ಕಿ, ಹಾದಿ ತಪ್ಪಿ ನಡೆಯಲೂಬಹುದು. ಇಂಥ ಸಂದರ್ಭಗಳು ಯಾವ ಸುಧಾರಣೆಯೂ ಇಲ್ಲದ ಸ್ಥಬ್ದತೆಯನ್ನು ತಲುಪುತ್ತದೆ ಮತ್ತು ಮನುಷ್ಯನ ಪ್ರಗತಿಗೆ ಲಕ್ವಾ ಹೊಡೆಯುತ್ತದೆ.

ಕ್ರಾಂತಿಯ ಸ್ಫೂರ್ತಿಯು ಮನುಷ್ಯನ ಆತ್ಮವನ್ನು ಪುನರುಜ್ಜೀವನಗೊಳಿಸಬಲ್ಲುದು. ಆ ಮೂಲಕ ಪ್ರತಿಕೂಲ ಬಲಗಳು ತಮ್ಮ ಶಕ್ತಿಯನ್ನು ಪರಿಚಯಿಸಿಕೊಂಡು ಮತ್ತೆ ಶಾಶ್ವತವಾಗಿ ಮುಂದುವರಿಯಲು ತಡೆಯೊಡ್ಡಬಹುದು. ಪುರಾತನವಾದ ಅಭ್ಯಾಸಗಳು ಬದಲಾಗಬೇಕು. ಸದಾ ಕಾಲ, ನಿರಂತರವಾಗಿ ಬದಲಾವಣೆ ಜರುಗಬೇಕು. ಅದು ಹೊಸದಕ್ಕೆ ದಾರಿ ಮಾಡಿಕೊಡಬೇಕು. ಆಗ ಒಳ್ಳೆಯದು ಎಂಬ ಭ್ರಮೆ ಹುಟ್ಟಿಸುವ ಯಾವ ಅಭ್ಯಾಸವೂ ಲೋಕವನ್ನು ಹಾಳುಗೆಡವಲಾರದು. ಈ ಅರ್ಥದಲ್ಲಿ ನಾವು ಸದಾ ಈ ಘೋಷಣೆಯ ಕೂಗನ್ನು ಎತ್ತುತ್ತೇವೆ.

ಕ್ರಾಂತಿ ಚಿರಾಯುವಾಗಲಿ.

ಎಲ್ಲರಂತಲ್ಲ ಈ ಸ್ವಾಮೀಜಿ……..ವೈಚಾರಿಕತೆ, ಮಾನವೀಯತೆಗೆ ಮಾರುಹೋದವರು

ನಾಗರಾಜ್ ಹರಪನಹಳ್ಳಿ

ರಾಜಕೀಯ ನಿಲುವುಗಳು ಏನೇ ಇರಲಿ, ಕರ್ನಾಟಕ ಕಂಡ ವೈಚಾರಿಕ ಸ್ವಾಮಿಗಳಲ್ಲಿ ಮುರುಘಾಮಠದ ಶಿವಮೂರ್ತಿ ಶರಣರು ಒಬ್ಬರು. ಅವರ ವೈಚಾರಿಕ ಹಾದಿ ನನಗೆ ಇಷ್ಟ. ಕಳೆದ ರವಿವಾರ (ಜುಲೈ 22) ಶರಣರು ಮುಂಡಗೋಡ ತಾಲೂಕಿನ ಅತ್ತಿವೇರಿ ಬಳಿಯ ಗೌಳಿದೊಡ್ಡಿಗೆ ಭೇಟಿ ನೀಡಿದ್ದರು. ಡಾಂಬರು ರಸ್ತೆಯಿಂದ ಗೌಳಿ ದೊಡ್ಡಿಗೆ ಇರುವುದು ಮಣ್ಣಿನ ರಸ್ತೆ. ಮಳೆಗಾಲವಾದ್ದರಿಂದ ಮಣ್ಣಿನ ರಸ್ತೆ ಸ್ಥಿತಿ ಕೇಳಬೇಕೆ? ಅದು ರೊಜ್ಜಾಗಿತ್ತು. ಶಾಸಕ ವಿ.ಎಸ್.ಪಾಟೀಲ್ ರೊಜ್ಜಿನ ದಾರಿಯಲ್ಲಿ ನಡೆದು ಬಂದರೆ, ಶರಣ ಶಿವಮೂರ್ತಿ ಶರಣರು  ಟ್ಯಾಕ್ಟರ್‌ನಲ್ಲಿ ಬಂದರು. ಹೆಲಿಕಾಪ್ಟರ್ ಬಳಸುವ ಜಗದ್ಗುರು ಅಲ್ಲ ನೋಡಿ. ಹಾಗಾಗಿ  ನಮ್ಮ ಶರಣರು ಮನುಷ್ಯರ ಹಾದಿಯಲ್ಲಿ ನಡೆದವರು. ಸರಳತೆ ಮತ್ತು ಮನುಷ್ಯತ್ವದ ಸ್ಪರ್ಶವಿದ್ದ ಕಾರಣ ಗೌಳಿಗಳ ಜೊತೆ ಮಾತನಾಡುತ್ತಾ ’ನಿಮ್ಮ ಜೊತೆ ಇರುವುದೇ ನನ್ನ ಬದುಕಿನ ಧನ್ಯತಾ ಘಳಿಗೆ’ ಎಂದರು. ’ಸಹಜ ಬದುಕು ನಿಮ್ಮದು. ಪ್ರಕೃತಿ ಜೊತೆ ಬೆರೆತ ನೀವೇ ಧನ್ಯರು ಎಂದ ಶರಣರು, ನೀವು ಮುಖ್ಯವಾಹಿನಿಗೆ ಬನ್ನಿ ಎನ್ನಲಾರೆ, ಮುಖ್ಯವಾಹಿನಿಯೇ ನಿಮ್ಮತ್ತ ಬರಬೇಕು’. ಬುದ್ಧನ ನಡೆ, ಗಾಂಧಿ ಅಂಬೇಡ್ಕರ್ ನಡೆ ಸಾಮಾನ್ಯರು ಇದ್ದ ಕಡೆಗೆ ಇತ್ತು. ಹಾಗಾಗಿ ಅವರಿಗೆ ಜನಸಾಮಾನ್ಯರ ಕಷ್ಟದ ಅರಿವಿತ್ತು. ಬುದ್ಧನ ವಿಚಾರಗಳು ನಿಮ್ಮತ್ತ ಹರಿದು ಬರಬೇಕು ಎಂದು ಶಿವಮೂರ್ತಿ ಶರಣರು ನುಡಿದರು. ಮಕ್ಕಳ ತಲೆ ನೇವರಿಸಿದರು. ಗೌಳಿಗಳ ಜೊತೆ ಸಂಭಾಷಣೆ ಮಾಡಿದರು. ಊಟ ಮಾಡಿದರು. ಕೈಲಾದ ನೆರವು ನೀಡುವುದಾಗಿ ಹೇಳಿ ಹೊರಟರು. ಶಿವಮೂರ್ತಿ ಶರಣರ ನಡೆ ಎಲ್ಲೂ ಕೃತಕ ಎನ್ನಿಸಲಿಲ್ಲ. 12ನೇ ಶತಮಾನದ ಶಿವಶರಣರ ನಡೆಯನ್ನು ನೆನೆಪಿಸುವಂತೆ ಎಲ್ಲವೂ ನಡೆದು ಹೋಯಿತು.

ಇದೆಲ್ಲಾ ತನ್ನನ್ನು ’ಇತರರಿಂದ’ ಜಗದ್ಗುರು ಎಂದು ಕರೆಯಿಸಿಕೊಳ್ಳದ ಶರಣರಿಗೆ ಮಾತ್ರ ಸಾಧ್ಯವಾಗುತ್ತದೆ. 20 ನೇ ವಯಸ್ಸಿಗೆ ಸನ್ಯಾಸ ಸ್ವೀಕರಿಸಿ, ಮುರುಘರಾಜೇಂದ್ರ ಮಠದಲ್ಲಿ ಸಾಧನೆಗೈದು, ಶಿರಸಿ ಶಾಖಾ ಮಠದಲ್ಲಿ 1978 ರಿಂದ 1990ರ ವರೆಗೆ ಶಿವಮೂರ್ತಿ ಶರಣರು ಇದ್ದರು. ಆಗ ಉತ್ತರ ಕನ್ನಡ ಮತ್ತು ಹಾವೇರಿ ಜಿಲ್ಲೆಗಳ ಬಡವರ, ಶ್ರಮಿಕರ ಬದುಕನ್ನು ಅರಿತವರು. 1991 ರಿಂದ ಈತನಕ ಚಿತ್ರದುರ್ಗದ ಮಠದಲ್ಲಿ ಇದ್ದುಕೊಂಡು, ನಾಡು, ಹೊರನಾಡು, ವಿದೇಶಗಳಲ್ಲಿ ಸಂಚರಿಸುತ್ತಾ ಬಸವತತ್ವ ಪ್ರತಿಪಾದನೆ ಮಾಡುತ್ತಾ ಸಾಗಿರುವ ಶರಣರು ಸಮಾಜದಲ್ಲಿ ಮೌನ ಕಾಂತ್ರಿ ನಡೆಸಿರುವುದು ನಿಜ. ಸ್ತ್ರೀ ಸ್ವಾತಂತ್ರ್ಯ, ಸಮಾನತೆಯನ್ನು ತಮ್ಮ ವ್ಯಾಪ್ತಿಯಲ್ಲಿ ಸಾಧ್ಯ ಇರುವಷ್ಟರ ಮಟ್ಟಿಗೆ ಜಾರಿಗೆ ತಂದವರು. ರಾಜ್ಯದ ಉಮ್ಮತ್ತೂರು, ಬದನವಾಳು, ಹೊಳಲ್ಕೆರೆ, ಕಂಬಾಲಪಲ್ಲಿ ಮುಂತಾದ  ಕೋಮುಗಲಭೆ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿ ಕೋಮು ಸೌಹಾರ್ದತೆ ಮತ್ತು ಭಾವೈಕ್ಯತೆ ಮೂಡಿಸಲು ಪ್ರಯತ್ನಿಸಿದ ಶರಣರಲ್ಲಿ ಶಿವಮೂರ್ತಿ ಶರಣರದ್ದು ಮೊದಲ ಹೆಸರು. ಮೂಢನಂಬಿಕೆಗಳ ವಿರುದ್ಧ ಶಿವಮೂರ್ತಿ ಶರಣರು ನಡೆಸಿರುವ ಹೋರಾಟ ಸಹ ಸ್ಮರಣೀಯ. ಕಾಂತ್ರಿಕಾರಿ ಕವಿ ಗದ್ಧರ್, ನಟಿ ಶಬನಾ ಆಜ್ಮಿ. ದಲೈಲಾಮ, ಬಿಳಿಗಿರಿ ರಂಗನ ಬೆಟ್ಟದ ಡಾ. ಸುದರ್ಶನ್, ಬೀದರ್‌ನ ಸಿದ್ಧರಾಮ ಶರಣರು, ಮೇಧಾ ಪಾಟ್ಕರ್ ಮುಂತಾದವರಿಗೆ ಬಸವಶ್ರೀ ಪ್ರಶಸ್ತಿಯನ್ನು ಶ್ರೀ.ಮುರುಘಾ ಮಠದ ವತಿಯಿಂದ ನೀಡುತ್ತಾ ಬಂದಿದ್ದಾರೆ. ಇಂತಹ ಪ್ರಗತಿಪರ ಶರಣರು (ಸ್ವಾಮಿ) ಗೌಳಿ ದೊಡ್ಡಿಗೆ ಬರುತ್ತಿರುವಾಗ ಅವರನ್ನು ಕಾಣುವ ಕುತೂಹಲ ನನಗೂ ಇತ್ತು. ಶರಣರನ್ನು ಹತ್ತಿರದಿಂದ ಕಾಣುವ ಸಂದರ್ಭ ಅಂತೂ ಒದಗಿ ಬಂದಿತ್ತು.

ಗೌಳಿ ಜನಾಂಗ ಉತ್ತರ ಕನ್ನಡದ ಬುಡಕಟ್ಟು ಜನಾಂಗಗಳ ಪೈಕಿ ಒಂದು. ಕಾಡಿನ ಜೊತೆ ಸಂಬಂಧ ಹೊಂದಿದವರು. ದನ ಎಮ್ಮೆ ಸಾಕಿ ಬದುಕಿನ ಬಂಡಿ ಸಾಗಿಸಿದವರು. ಅವರ ಹಟ್ಟಿಗಳಲ್ಲಿ ದನಗಳ ಜೊತೆ ಸಹಜೀವನ ನಡೆಸಿದವರು. ಅವರ ಮಕ್ಕಳು ಪೌಷ್ಠಿಕ ಅಂಶಗಳ ಕೊರತೆಯಿಂದ ಬಳಲಿದವರು. ಶರಣರು ಬರುವ ಎರಡು ತಾಸಿಗೂ ಮೊದಲು ದೃಶ್ಯಮಾಧ್ಯಮದ ಮಿತ್ರರ ಜೊತೆ ನಾನು ಗೌಳಿಗಳ ಜೀವನ ಮತ್ತು ಅವರ ಕಷ್ಟಗಳನ್ನು ಅರಿಯಲು ಯತ್ನಿಸಿದ್ದೆವು. ಶಾಸಕ ವಿ.ಎಸ್.ಪಾಟೀಲ್ ಸಹ ನಮ್ಮ ಜೊತೆ ಇದ್ದರು. ಮುಂಡಗೋಡನ ಇತರ ಗೌಳಿ ಹಾಡಿಗಳಿಗಿಂತ ಅತ್ತಿವೇರಿ ಬಳಿಯ ಗೌಳಿ ದೊಡ್ಡಿ ಸ್ಥಿತಿ ಅಧೋಗತಿಗೆ ಇಳಿದ ಕಾರಣಗಳನ್ನು ತಿಳಿಯಲು ನಾವು ಯತ್ನಿಸಿದ್ದೆವು. ಅತ್ತಿವೇರಿ ಪಕ್ಷಿಧಾಮದ ಬಳಿ ಜಲಾಶಯದ ಹಿನ್ನೀರು ಗೌಳಿಗಳ ಬದುಕನ್ನು ಸ್ವಲ್ಪಮಟ್ಟಿಗೆ ಕಿತ್ತುಕೊಂಡರೆ, ಅಲ್ಲಿನ ಅಭಯಾರಣ್ಯದ ನೆಪದಲ್ಲಿ ಅರಣ್ಯಾಧಿಕಾರಿಗಳು ಗೌಳಿಗಳ ಮೇಲೆ ನಿರಂತರವಾಗಿ ನಡೆಸಿರುವ ಮಾನಸಿಕ ದೌರ್ಜನ್ಯ ಆತಂಕಕಾರಿಯಾದುದು. ಇದು ನನ್ನ ಮನ ಕಲಕಿತು. ನೂರಾರು ವರ್ಷಗಳಿಂದ ಇರುವ ಗೌಳಿಗಳನ್ನು ಜಾಗ ಬಿಟ್ಟು ತೆರಳಿ ಎಂದರೆ, ’ಅವರೆಲ್ಲಿಗೆ’ ಹೋಗಬೇಕು? ಅಭಯಾರಣ್ಯ ಪ್ರದೇಶದಲ್ಲಿ ನೆಲಸಿದ ಬುಡಕಟ್ಟು ಜನರ ಸ್ಥಿತಿ ಇದು. ಬದುಕಿನ ಅಸ್ಥಿರತೆ, ಇಲ್ಲಿನ ಗೌಳಿಗಳನ್ನು ಕಾಡಿದೆ. ಜೊಯಿಡಾದ ಕುಂಬ್ರಿ ಜಮೀನಿನಲ್ಲಿ ಭತ್ತದ ಗದ್ದೆ ಮಾಡಿ ಬದುಕುತ್ತಿರುವ ಕುಣಬಿಗಳು, ಸಿದ್ಧಿಗಳು, ಗೌಳಿಗಳು, ಮರಾಠಿಗರು ಅನುಭವಿಸುತ್ತಿರುವ ಅಸ್ಥಿರತೆ ಇಲ್ಲೂ ಸಹ ಇದೆ ಎಂದು ಮನವರಿಕೆಯಾಗಲು ಹೆಚ್ಚು ಸಮಯ ಬೇಕಾಗಲಿಲ್ಲ.

ಕೊಡಗಿನ ಮತ್ತು ಚಿಕ್ಕಮಗಳೂರಿನ ಕೆಲ ಅರಣ್ಯ ಪ್ರದೇಶಗಳನ್ನು ಪಶ್ಚಿಮಘಟ್ಟ ವಿಶ್ವಪರಂಪಾರಿಕ ತಾಣದ ಪಟ್ಟಿಗೆ ಸೇರಿಸುವ ನೆಪದಲ್ಲಿ ಅಲ್ಲಿನ ಅರಣ್ಯವಾಸಿಗಳು, ಬುಡಕಟ್ಟು ಜನರು ಮುಂದೆ ಎದುರಿಸಬಹುದಾದ ಕಷ್ಟದ ಸನ್ನಿವೇಶವನ್ನು ಉತ್ತರ ಕನ್ನಡದ ಅರಣ್ಯವಾಸಿಗಳು ಅಭಯಾರಣ್ಯ ಮತ್ತು ಹುಲಿ ಸಂರಕ್ಷಣಾ ಯೋಜನೆಗಳ ಹೆಸರಲ್ಲಿ ಅನುಭವಿಸುತ್ತಿದ್ದಾರೆ. ಅಣಶಿ ಜೊಯಿಡಾ ದಾಂಡೇಲಿ ಅಭಯಾರಣ್ಯ ಪ್ರದೇಶದಲ್ಲಿ ನೆಲಸಿರುವ ಬುಡಕಟ್ಟು ಜನರ ಆತಂಕಗಳು ಸಹ ಕೊಡಗಿನ ಜನರ ಮಾದರಿಯದ್ದೇ ಆಗಿದೆ.  ವಿದೇಶದಿಂದ ಹಣ ಪಡೆದು ಎನ್.ಜಿ.ಓ. ಮುಖವಾಡದಲ್ಲಿ ಪರಿಸರ ರಕ್ಷಕರು ಎಂದು ಪೋಜು ಕೊಡುತ್ತಾ (ಸಮಾಜಸೇವೆ ನೆಪದಲ್ಲಿ) ಕಾರ್ಯನಿರ್ವಹಿಸುತ್ತಿರುವ ಡೋಂಗಿ ಪರಿಸರವಾದಿಗಳು ಅರಣ್ಯವಾಸಿಗಳ ಬಗ್ಗೆ ಎಂದು ತಲೆ ಕೆಡಿಸಿಕೊಂಡಿಲ್ಲ. ಅವರನ್ನು ಅರಣ್ಯದಿಂದ ಹೊರಹಾಕಿ, ಬದುಕನ್ನು ಮೂರಾಬಟ್ಟೆಯನ್ನಾಗಿಸುವ ಮತ್ತು ಯಥಾಸ್ಥಿತಿವಾದವನ್ನು ಪ್ರತಿಪಾದಿಸುವ ಹುನ್ನಾರು ಸಹ ಪರಿಸರವಾದಿಗಳ ಗುಪ್ತಾ ಅಜೆಂಡಾದಲ್ಲಿ ಸೇರಿದೆ ಎಂಬುದು ಈಚೆಗೆ ಬಯಲಾಗತೊಡಗಿದೆ. ಪಶ್ಚಿಮಘಟ್ಟ ಕಾರ್ಯಪಡೆಯ ಅಧ್ಯಕ್ಷರ ಹಿಡನ್ ಅಜೆಂಡಾ ಕೊಡಗಿನ ಬಿಜೆಪಿ ಶಾಸಕರಿಗೆ ನಿಧಾನಕ್ಕೆ ಅರ್ಥವಾಗತೊಡಗಿದೆ. ಪ.ಘ.ಕಾ.ಅಧ್ಯಕ್ಷ ಅಶೀಸರರನ್ನು ಆ ಸ್ಥಾನದಿಂದ ಕಿತ್ತೊಗೆಯಬೇಕು ಎಂದು ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಆಗ್ರಹಿಸಿರುವುದರಲ್ಲಿ ಅರ್ಥವಿದೆ.

ಹುಲಿ ಅಧ್ಯಯನದ ಹೆಸರಲ್ಲಿ ಉಲ್ಲಾಸ್ ಕಾರಂತ ಹತ್ತು ಹುಲಿಗಳ ಜೀವ ತೆಗೆದ ಕತೆಯನ್ನು ಅರಣ್ಯ ಪ್ರೀತಿಸುವ ಅರಣ್ಯಾಧಿಕಾರಿಗಳು ನೆನಪಿಸಿಕೊಳ್ಳಬೇಕಿದೆ. ಜಿಲ್ಲೆಯ ಪರಿಸರವಾದಿಗಳಿಗಿಂತ ಹೆಚ್ಚಾಗಿ ಬುಡಕಟ್ಟು ಜನರು, ಕಾಡಿನ ವಾಸಿಗಳು ಅರಣ್ಯವನ್ನು ಪ್ರೀತಿಸಿದ್ದಾರೆ. ಈಗ ದೇವರಕಾಡು ಸಂರಕ್ಷಣೆಯ ಹೆಸರಲ್ಲಿ 50 ಕೋಟಿ ರೂಪಾಯಿಗಳನ್ನು ನೀಡುವಂತೆ ಪಶ್ಚಿಮಘಟ್ಟ ಕಾರ್ಯಪಡೆಯ ಅಧ್ಯಕ್ಷರು ಸರ್ಕಾರವನ್ನು ಕೇಳುತ್ತಿದ್ದಾರೆ. ಹಣದ ಮೇಲೆ ಯಾವಾಗಲೂ ಪರಿಸರವಾದಿಗಳ ಕಣ್ಣು ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ. ತಮ್ಮ ಎನ್.ಜಿ.ಓ.ಗೆ ಬರುವ ವಿದೇಶಿ ದುಡ್ಡಿನಿಂದಲೇ ಕಾಡಿನ ಬಗ್ಗೆ ಕಾಳಜಿಯ ಕಾರ್ಯಕ್ರಮಗಳನ್ನು ರೂಪಿಸಬಹುದಲ್ಲ. ಬುಡಕಟ್ಟು ಜನರಿಗೆ ಕಾಡಿನ ಉತ್ಪನ್ನಗಳು ಸಹ ದಕ್ಕದಂತೆ ಮಾಡಿದ ಶ್ರೇಯಸ್ಸು ಉತ್ತರ ಕನ್ನಡದ ಕೆಲ  ಪರಿಸರವಾದಿಗಳಿಗೆ ಸಲ್ಲುತ್ತದೆ. ಕಾಡಿನ ಉತ್ಪನ್ನಗಳು ನಾಡಿನ ಮೇಲ್ಜಾತಿಯ ಜನರಿಗೆ ಸಿಕ್ಕುವಂತೆ ಮಾಡಿ, ಅದರಿಂದ ಸಣ್ಣ ಉದ್ಯಮ ನಡೆಸಿ ಬದುಕನ್ನು ಸಬಲೀಕರಣ ಮಾಡಿಕೊಂಡ ಖ್ಯಾತ ಪರಿಸರವಾದಿಗಳು ನಮ್ಮಲ್ಲಿದ್ದಾರೆ. ಇದರ ಅರಿವನ್ನು ನಾವು ಕಾಡಿನ ಜನರಿಗೆ ಕೊಡಬೇಕಿದೆ. ಪಶ್ವಿಮ ಘಟ್ಟವನ್ನು ವಿಶ್ವಪಾರಂಪರಿಕೆ ಪಟ್ಟಿಗೆ ಸೇರ್ಪಡೆಯಾಗುವಷ್ಟರ ಮಟ್ಟಿಗೆ ಕಾಡನ್ನು ರಕ್ಷಿಸಿದವರು ಕಾಡಿನಲ್ಲಿರುವ ಬುಡಕಟ್ಟು ಜನರೇ ಹೊರತು, ಪರಿಸರವಾದಿಗಳಲ್ಲ. ಹಾಗಾಗಿ ವಿಶ್ವಪಾರಂಪರಿಕ ’ಪಟ್ಟ’ವನ್ನು ಈಗ ಕಟ್ಟಿಕೊಂಡರೆಷ್ಟು, ಬಿಟ್ಟರೆಷ್ಟು. ನಮ್ಮ ನಾಡಿನ ಜನ ನೆಮ್ಮದಿಯಿಂದ ಇದ್ದು, ಪಶ್ಚಿಮಘಟ್ಟವನ್ನು ಈಗ ಇರುವಂತೆ ರಕ್ಷಿಸಿಕೊಂಡರೆ ಸಾಕಲ್ಲವೇ?

ಕೊನೆ ಹನಿ :

ಚಿತ್ರದುರ್ಗಕ್ಕೂ ನನಗೂ ಬಿಡಿಸಲಾಗದ ನಂಟಿದೆ. ಸಾಸಲು ಗ್ರಾಮದ ಹತ್ತಿರ ಭರಮಣ್ಣ ನಾಯಕನ ದುರ್ಗಾ ಎಂಬ ಪುಟ್ಟ ಗ್ರಾಮವಿದೆ. ಅಲ್ಲಿನ ಬೆಟ್ಟದ ಮೇಲೆ ಏಕನಾಥೇಶ್ವರಿ ಸಹ ನೆಲಸಿದ್ದಾಳೆ. ಅದು  ನನ್ನ ಅಜ್ಜನ ಊರು. ದುರ್ಗದ ಕೋಟೆಯನ್ನು 1991ರಲ್ಲಿ ಒಮ್ಮೆ ಸುತ್ತಿ ಬಂದಿದ್ದೆ. ಪುಟ್ಟಣ್ಣ ಕಣಗಾಲ್, ತಳುಕಿನ ಸುಬ್ಬರಾಯರು, ಚಾಮಯ್ಯ ಮೇಷ್ಟ್ರು, ಆರತಿ, ವಿಷ್ಣುವರ್ಧನ್, ಕೋಟೆ ಸುತ್ತುವಾಗ ನನ್ನ ನೆನಪಿನ ಅಂಗಳದಲ್ಲಿ ಹಾದು ಹೋದರು. ಅಷ್ಟು ಗಾಢವಾಗಿ ನನ್ನನ್ನು ನಾಗರಹಾವು ಸಿನಿಮಾ ತಟ್ಟಿತ್ತು.

ಚಿತ್ರದುರ್ಗದಲ್ಲಿ ಶೂನ್ಯಪೀಠಾಧಿಪತಿ ಮುರುಘಾ ಶಾಂತವೀರರು ನೆಲೆ ನಿಲ್ಲುವಂತೆ ದೊರೆ ಭರಮಣ್ಣ ನಾಯಕ ಕೋರಿಕೊಂಡನಂತೆ. ಅದಕ್ಕಾಗಿ ಶ್ರೀಗಳಿಗೆ ಕ್ರಿ.ಶ.1703ರಲ್ಲಿ ಚಿತ್ರದುರ್ಗ ಕೋಟೆಯ ಮೇಲೆ ಹಾಗೂ ನಗರದ ಪಶ್ಚಿಮ ಭಾಗದ ಹೊರಹೊಲಯದಲ್ಲಿ ಬೃಹತ್ ಮಠಗಳನ್ನು ಕಟ್ಟಿಸಿಕೊಟ್ಟನಂತೆ. ಅಂದಿನಿಂದ ಇಂದಿನವರೆಗೆ ಶೂನ್ಯಪೀಠವು ಶ್ರೀ ಮುರುಘರಾಜೇಂದ್ರ ಮಠದಲ್ಲಿ ಮುಂದುವರೆದಿದೆ. ಮಠ ಪ್ರಗತಿ ಪರ ಹಾದಿಯಲ್ಲಿ ಸಾಗಿ ನಾಡಿನುದ್ದಕ್ಕೂ ಬೆಳಕಿನ ದೀಪಗಳನ್ನು ಹಚ್ಚುತ್ತಿದೆ.

ನೀವೇ ಮಾಧ್ಯಮದ ಮೇಲೆ ಚಾಟಿ ಬೀಸಿದರೆ ಹೇಗೆ ?


-ಚಿದಂಬರ ಬೈಕಂಪಾಡಿ


 

ಮಂಗಳೂರಲ್ಲಿ ‘ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ’ಘಟನೆಯ ಕುರಿತು ಪೊಲೀಸರ ವಕ್ರದೃಷ್ಟಿ ಮಾಧ್ಯಮದವರ ಮೇಲೆ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಒಂದಷ್ಟು ವಿಚಾರಗಳು. ದಕ್ಷ ಪೊಲೀಸ್ ಅಧಿಕಾರಿ ಎನ್ನುವ ಖ್ಯಾತಿ ಪಡೆದಿದ್ದ ಹಾಲಿ ಮಂಗಳೂರು ಪೊಲೀಸ್ ಆಯುಕ್ತರು ಹೀಗೇಕಾದರು? ಈ ಪ್ರಶ್ನೆಯನ್ನು ನನ್ನನ್ನು ನಾನೇ ಕೇಳಿಕೊಳ್ಳುತ್ತಿದ್ದೇನೆ. ಅವರು ಈ ಹಿಂದೆ ದಕ್ಷಿಣ ಕನ್ನಡ ಪೊಲೀಸ್ ಅಧಿಕಾರಿಯಾಗಿದ್ದವರು. ಕೋಮುಗಲಭೆ ನಿಯಂತ್ರಿಸುವುದರಲ್ಲಿ ಪಳಗಿದವರು. ಅತ್ಯಂತ ಸೂಕ್ಷ್ಮ ಸಂದರ್ಭದಲ್ಲೂ ಚಾಣಾಕ್ಷತೆಯಿಂದ ಕಾರ್ಯನಿರ್ವಹಿಸಿದವರು. ಪತ್ರಕರ್ತನಾಗಿ ಅವರನ್ನು ಹತ್ತಿರದಿಂದ ಬಲ್ಲವನಾದ ನಾನೇ ಈಗ ಕಕ್ಕಾಬಿಕ್ಕಿಯಾಗುವಂತಾಗಿದೆ.

ದಾಳಿ ನಡೆದ ವಿಚಾರವನ್ನು ಪೊಲೀಸರಿಗೆ ತಿಳಿಸಲಿಲ್ಲ ಎನ್ನುವ ಆರೋಪದ ಮೇಲೆ ಇಬ್ಬರು ಮಾಧ್ಯಮ ಸ್ನೇಹಿತರ ಮೇಲೆ ಕೇಸು ಜಡಿದು ಸಮಾಧಾನಪಟ್ಟುಕೊಳ್ಳುವ ಮನಸ್ಥಿತಿ ಸೀಮಂತ್ ಕುಮಾರ್ ಅವರಿಗೆ ಬಂದದ್ದು ನಿಜಕ್ಕೂ ಬೇಸರದ ಸಂಗತಿ. ಮಾಧ್ಯಮದವರ ಹೇಳಿಕೆಯನ್ನು ನಂಬುವುದಾದರೆ ಪೊಲೀಸ್ ಅಧಿಕಾರಿಗೆ ಕರೆ ಮಾಡಿದ್ದಾರೆ, ಆದರೆ ಸ್ವೀಕರಿಸಿಲ್ಲವಂತೆ.(ಮೊಬೈಲ್ ಕರೆಗಳನ್ನು ಟ್ರೇಸ್ ಮಾಡಿದರೆ ಗೊತ್ತಾಗುತ್ತದೆ ಎನ್ನುವುದು ಅವರಿಗೂ ಗೊತ್ತು). ಮಾಹಿತಿಯನ್ನು ಮಾಧ್ಯಮದವರೇ ಕೊಡಬೇಕೆಂದು ನಿರೀಕ್ಷೆ ಮಾಡಿದ್ದೇ ಮೊದಲ ತಪ್ಪು, ಹಾಗಾದರೆ ಇಂಟೆಲ್‌ಜೆನ್ಸಿ ಬರ್ಖಾಸ್ತ್ ಆಗಿದೆಯೇ? ಅಥವಾ ಅದು ಸರಿಯಾಗಿ ಕೆಲಸ ಮಾಡುತ್ತಿಲ್ಲ ಅಂದುಕೊಳ್ಳೋಣವೇ?

ಇಂಥ ಘಟನೆಗಳು ಇಲ್ಲಿಗೇ ಅಂತ್ಯವಾಗಬೇಕು ಎನ್ನುವುದು ಎಲ್ಲರ ಹಾರೈಕೆಯಾದರೂ, ಪೊಲೀಸರು ಮಾಧ್ಯದವರತ್ತ ನೆಟ್ಟಿರುವ ನೋಟ ನೋಡಿದರೆ ದಾಳಿ ಹತ್ತಿಕ್ಕುವುದಕ್ಕಿಂತಲೂ ಮಾಧ್ಯಮದ ಮಂದಿಯ ಬಾಯಿಗೆ ಬೀಗ ಹಾಕುವಂಥ ಯತ್ನಕ್ಕೆ ಹಾತೊರೆಯುವಂತಿದೆ.

ಪೊಲೀಸರು ಅನೈತಿಕ ಚಟುವಟಿಕೆ (ಮಾರ್ನಿಂಗ್ ಮಿಸ್ಟ್ ಘಟನೆಯ ಬಗ್ಗೆ ಅಲ್ಲ) ಅಥವಾ ಮಾದಕ ವಸ್ತು ಮಾರಾಟ ದಂಧೆಯ ಬಗ್ಗೆ ದೂರು ನೀಡಿದರೆ ಸ್ಪಂದಿಸುತ್ತಿಲ್ಲ ಎನ್ನುವುದು ಹತಾಶೆಯಾದವರ ಮಾತು. ಇದನ್ನು ಇಲಾಖೆ ನೊದಲು ಅರ್ಥ ಮಾಡಿಕೊಳ್ಳಬೇಕು. ಇಂಥ ಹತಾಶೆಯಿಂದಾಗಿಯೇ ನೈತಿಕ ಪೊಲೀಸ್ ಕಾರ್ಯಾಚರಣೆಗಳು ಆರಂಭವಾದವು. ಇಲಾಖೆ ಸರಿಯಾಗಿ ಕಾರ್ಯಾಚರಣೆ ಮಾಡುತ್ತಿದ್ದರೆ ಜನ ಸ್ವಯಂಪ್ರೇರಣೆಯಿಂದ ದೂರುಕೊಡುತ್ತಿದ್ದರು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಅನಿವಾರ್ಯವಾಗಿ ಸಣ್ಣಪುಟ್ಟ ರಾಜಿಪಂಚಾಯಿತಿಗಳಿಗೆ, ವಸೂಲಿಗೆ ಭೂಗತ ಲೋಕದ ಸಂಪರ್ಕ ಇದ್ದವರ ಮೊರೆಹೋಗುತ್ತಿದ್ದಾರೆ. ಅದೂ ಭೂಮಾಫಿಯಾ ಬಂದ ಮೇಲೆ ಮಂಗಳೂರಿನ ಚಿತ್ರಣವೇ ಬದಲಾಗಿದೆ. ಹತ್ತು-ಹದಿನೈದು ವರ್ಷಗಳ ಹಿಂದೆ ಯಾಕೆ ಇಂಥ ಕಾರ್ಯಾಚರಣೆ ಮಂಗಳೂರಲ್ಲಿ ನಡೆಯುತ್ತಿರಲಿಲ್ಲ? ದಾಳಿಯ ಸುದ್ದಿ ಮಾಧ್ಯಮದವರಿಗೆ ಮೊದಲು ಮುಟ್ಟಿದೆ ಎನ್ನುವುದರ ಅರ್ಥ ಪೊಲೀಸ್ ಇಲಾಖೆಯ ಮೇಲೆ ವಿಶ್ವಾಸ ಕಡಿಮೆಯಾಗಿದೆ ಎನ್ನುವುದೇ ಹೊರತು ಬೇರೆ ಅಲ್ಲ. ಈ ವಿಚಾರವನ್ನು ಅತ್ಯಂತ ತಾಳ್ಮೆಯಿಂದ ಯೋಚಿಸಿ.

ಹಾಸಟ್ಟಿ ಎನ್ನುವ ಪೊಲೀಸ್ ಅಧಿಕಾರಿಯನ್ನು ರೌಡಿಗಳು ಹತ್ಯೆ ಮಾಡಿದಾಗ ಈ ಜಿಲ್ಲೆಯ ಜನ, ಮಾಧ್ಯಮಗಳು (ಆಗ ಟಿವಿ ಚಾನೆಲ್‌ಗಳಿರಲಿಲ್ಲ)  ಪೊಲೀಸರಿಗೆ ಕೊಟ್ಟ ಬೆಂಬಲವನ್ನು ಅವಲೋಕಿಸಿ. ಆಗ ಜಾತಿ, ಮತ, ಧರ್ಮ, ಭಾಷೆ ಇಂಥ ಅಡ್ಡಗೋಡೆಗಳಿರಲಿಲ್ಲ. ಕಸ್ತೂರಿರಂಗನ್, ರೇವಣ್ಣ ಸಿದ್ಧಯ್ಯ, ಕೆಂಪಯ್ಯ, ನೀಲಂ ಅಚ್ಚುತರಾವ್, ಎಂ.ಆರ್.ಪೂಜಾರ್, ಭಾಸ್ಕರ್ ರಾವ್, ಸುರೇಶ್ ಬಾಬು ಮುಂತಾದ ಪೊಲೀಸ್ ಅಧಿಕಾರಿಗಳಿದ್ದಾಗ ಯಾಕೆ ಮಾಧ್ಯಮಗಳ ಮೇಲೆ ಕೆಂಗಣ್ಣು ಬಿದ್ದಿರಲಿಲ್ಲ? ರಿಪ್ಪರ್ ಚಂದ್ರನ್ ದಂಡುಪಾಳ್ಯ ಗ್ಯಾಂಗಿಗಿಂತೇನೂ ಕಡಿಮೆ ಅಪರಾಧ ಮಾಡಿದವನಲ್ಲ. ಅವನ ಪತ್ತೆ ಕಾರ್ಯಾಚರಣೆಯಲ್ಲಿ ಪೊಲೀಸ್ ಅಧಿಕಾರಿಗಳು ಮಾಧ್ಯಮಗಳನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಂಡು ಯಶಸ್ವಿಯಾದರೆನ್ನುವ ಇತಿಹಾಸವಿದೆ. ಈ ಮಾತುಗಳನ್ನು ಹೇಳಿದ ಕಾರಣವೆಂದರೆ ದಾಳಿ ಮಾಡಿದವರು ಯಾರು, ಅದು ಸರಿಯೇ, ತಪ್ಪೇ? ಸ್ಟೇ ಹೋಮ್‌ನಲ್ಲಿ ನಡೆದಿದ್ದೇನು? ಎನ್ನುವ ಕುರಿತು ಕಾಳಜಿ ಮಾಡುವುದಕ್ಕಿಂತಲೂ ಮಾಧ್ಯಮದಲ್ಲಿ ದಾಳಿ ಸುದ್ದಿ ಹರಿದಾಡಿತೆನ್ನುವ ಸಿಟ್ಟಿಗೆ ಮಾಧ್ಯಮಗಳ ಮಂದಿಗೆ ಬರೆ ಹಾಕಲು ಹೊರಟದ್ದು ಸರಿಯಲ್ಲ. ಕ್ಷಣಕ್ಕೆ ಸಿಟ್ಟು ಮತ್ತು ಹತಾಶೆಯಿಂದ ಹಾಗೆ ಮಾಡಿದರೆ ಭವಿಷ್ಯದ ದಿನಗಳಲ್ಲಿ ಇಲ್ಲಿ ಕೆಲಸ ಮಾಡಬೇಕಾದ ಅಧಿಕಾರಿಗಳು ಸಮಸ್ಯೆ ಅನುಭವಿಸಬೇಕಾಗುತ್ತದೆ.

ಪೊಲೀಸ್ ಇಲಾಖೆ ಯಾವಾಗಲೂ ಮಾಹಿತಿ ಕಲೆ ಹಾಕಲು ಮುಂಚೂಣಿಯಲ್ಲಿರಬೇಕು. ಮಾಹಿತಿ ಮೂಲಗಳನ್ನು ಇಲಾಖೆ ಹೊಂದಿದ್ದರೆ ಮಾತ್ರ ಕಾನೂನು ಸುವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸಾಧ್ಯ. ಪೊಲೀಸ್ ಮತ್ತು ಮಾಧ್ಯಮಗಳ ಮಂದಿಯ ನಡುವೆ ಸಂಪರ್ಕ ಇರಬೇಕಾಗುತ್ತದೆ. ಅದು ಹಿಂದೆ ಇತ್ತು, ಈಗ ಇಲ್ಲ. ಆದರೆ ಅಂಥ ಸಂಪರ್ಕ ವೃತ್ತಿಧರ್ಮವನ್ನು ಮೀರುವಂತಿರಬಾರದು.

ಇದಕ್ಕೊಂದು ಉದಾಹರಣೆ ಅಂದುಕೊಳ್ಳಬಹುದು. ಉಡುಪಿಯಲ್ಲಿ ದನದ ವ್ಯಾಪಾರಿಯನ್ನು ಸಂಘಟನೆಯವರು ಬೆತ್ತಲೆ ಮಾಡಿದ ಘಟನೆ ನೆನಪಿರಬಹುದು. ಆಗ ನಾನು ಪತ್ರಿಕೆಯ ಪ್ರಧಾನ ವರದಿಗಾರನಾಗಿದ್ದೆ. ಉಡುಪಿಯಿಂದ ಬೆತ್ತಲೆ ಪ್ರಕರಣದ ಸುದ್ದಿ ಮತ್ತು ಫೋಟೋಗಳು ಕಚೇರಿಗೆ ಬಂದಿದ್ದವು, ಇಲ್ಲಿಂದ ಬೆಂಗಳೂರಿನ ಪ್ರಧಾನ ಕಚೇರಿಗೆ ರವಾನೆಯಾಗಿದ್ದವು. ಈ ಸುದ್ದಿಯನ್ನು ಫೋಟೋ ಸಹಿತ ಮುಖಪುಟದಲ್ಲಿ ಪ್ರಕಟಿಸಲು ಕಾರ್ಯನಿರ್ವಾಹಕ ಸಂಪಾದಕರು ನಿರ್ಧರಿಸಿ ರಾತ್ರಿ ಪತ್ರಿಕೆ ಮುದ್ರಣಕ್ಕೆ ಹೋಗುವ ಮುನ್ನ (ರಾತ್ರಿ 1 ಗಂಟೆ ಹೊತ್ತಿಗೆ) ಮತ್ತೊಮ್ಮೆ ಘಟನೆಯ ಮಾಹಿತಿಯನ್ನು ನನ್ನಿಂದ ಪಡೆದುಕೊಂಡರು. ಪತ್ರಿಕೆಯಲ್ಲಿ ಆ ಸುದ್ದಿ ಫೋಟೋ ಸಹಿತ ಪ್ರಕಟವಾಗಿತ್ತು. ಆಗ ಧರಂ ಸಿಂಗ್ ಮುಖ್ಯಮಂತ್ರಿ. ಉಡುಪಿಯಲ್ಲಿ ಮುರುಗನ್ ಎಸ್ಪಿಯಾಗಿದ್ದರು. ಪಶ್ಚಿಮ ವಲಯದ ಡಿಐಜಿಯಾಗಿ ಸತ್ಯನಾರಾಯಣ ರಾವ್ ಇದ್ದರು. ಮುಂಜಾನೆ ಈ ಸುದ್ದಿ ಓದಿದ ಧರಂ ಸಿಂಗ್ ಕೆಂಡಾಮಂಡಲರಾಗಿದ್ದಾರೆ. ನೇರವಾಗಿ ಎಸ್ಪಿಗೆ ದೂರವಾಣಿ ಕರೆ ಮಾಡಿ ಉಡುಪಿಯಲ್ಲಿ ಏನು ನಡೆದಿದೆ? ಎಂದು ಕೂಲ್ ಆಗಿ ಕೇಳಿದ್ದಾರೆ. ‘ಲಾ ಅಂಡ್ ಆರ್ಡರ್ ಓಕೆ ಸಾರ್’ ಅಂದಿದ್ದಾರೆ. ಆದರೆ ಉಡುಪಿ ಬೀದಿಯಲ್ಲಿ ಜನರ ಮುಂದೆ ರಾತ್ರಿ ಹತ್ತು ಗಂಟೆ ಹೊತ್ತಿಗೆ ವ್ಯಕ್ತಿಯನ್ನು ಬೆತ್ತಲೆ ಮಾಡಿರುವುದು ಎಸ್ಪಿಯವರಿಗೇ ಗೊತ್ತಿರಲಿಲ್ಲವಂತೆ. ಆಗ ಧರಂ ಸಿಂಗ್ ಲೆಫ್ಟ್ ರೈಟ್ ತೆಗೆದುಕೊಂಡಿದ್ದಾರೆ.

ಆ ನಂತರ ಮುರುಗನ್ ತಮ್ಮ ಕೆಳಗಿನವರನ್ನು ಕೇಳಿದ್ದಾರೆ. ಆಗ ಅವರು ಕೊಟ್ಟ ಉತ್ತರ ಬೆತ್ತಲೆ ನಡೆದ ಘಟನೆ ನಿಜ, ಅದು ಸಣ್ಣ ವಿಚಾರ ಎನ್ನುವ ಕಾರಣಕ್ಕೆ ನಿಮಗೆ ತಿಳಿಸಿರಲಿಲ್ಲ ಅಂದರಂತೆ. ಈ ಉತ್ತರ ಕೇಳಿ ಕೆಂಡಾಮಂಡಲರಾದ ಮುರುಗನ್ ತಮಗೆ ಮಾಹಿತಿ ಕೊಡದವರ ಬೆವರಿಳಿಸಿದ್ದಾರೆ. ಎರಡು ದಿನಗಳ ನಂತರ ಮುರುಗನ್ ನನಗೆ ಫೋನ್ ಮಾಡಿ ನಿಮ್ಮೊಂದಿಗೆ ಮಾತನಾಡಬೇಕು ಉಡುಪಿಗೆ ಬರುವಿರಾ? ಅಂದರು. ಅವರು ಮಂಗಳೂರಲ್ಲಿ ಟ್ರೈನಿಂಗ್ ಮಾಡುತ್ತಿದ್ದಾಗ ಪರಿಚಯವಿತ್ತು. ಆದರೆ ಉಡುಪಿಗೆ ಹೋಗಬೇಕಲ್ಲ ಎಂದುಕೊಂಡು ಸಾಧ್ಯವಾದರೆ ಬರುತ್ತೇನೆ ಅಂದೆ. ನಿಮಗೆ ಕಾರು ಕಳುಹಿಸುತ್ತೇನೆ, ಬಂದು ಹೋಗಿ, ಮಾತನಾಡಬೇಕು, ಅಂದರು. ಒಪ್ಪಿದೆ. ಕಾರು ಮತ್ತು ನನಗೂ ಪರಿಚಿತರಾಗಿದ್ದ ಪೊಲೀಸ್ ಅಧಿಕಾರಿಯೂ ಬಂದಿದ್ದರು. ನೇರವಾಗಿ ಅವರ ಮನೆಗೆ ಹೋದೆ. ಕಾಫಿ ಕೊಟ್ಟರು. ಸೌಜನ್ಯದ ಮಾತುಗಳ ನಂತರ ಬೆತ್ತಲೆ ಪ್ರಕರಣದ ಸುದ್ದಿ, ಫೋಟೋ ಕುರಿತು ಧರಂ ಸಿಂಗ್ ಅವರ ಸಿಟ್ಟಿಗೆ ಕಾರಣವಾದ ಘಟನೆಯನ್ನು ವಿವರಿಸಿದರು. ಇಷ್ಟೇ ಆಗಿದ್ದರೆ ಫೋನ್ ಮೂಲಕ ಮಾತನಾಡುತ್ತಿದ್ದರು. ಆದರೆ ಅವರಿಗೆ ಹೇಳಬೇಕಾಗಿದ್ದನ್ನು ಖುದ್ದು ಹೇಳಿದರು. ‘ನೀವು ಪರಿಚಿತರು. ಈ ಘಟನೆ ಬಗ್ಗೆ ನನಗೆ ಒಂದು ಮಾತು ಹೇಳಿದ್ದರೆ ಮುಜುಗರ ಪಡುವಂತಿರಲಿಲ್ಲ. ಇನ್ನು ಮುಂದೆ ಆಗಾಗ ನಾನೇ ನಿಮಗೆ ಫೋನ್ ಮಾಡ್ತೀನಿ, ಸಹಕಾರ ಕೊಡಿ,’ ಅಂದರು. ಮುರುಗನ್ ಅವರ ಮಾತಿನಲ್ಲಿ ಸುದ್ದಿ, ಫೋಟೋ ಪ್ರಕಟವಾಗಿರುವುದಕ್ಕೆ ಆಕ್ಷೇಪವಿರಲಿಲ್ಲ. ಬದಲಾಗಿ ತಮಗೆ ಮಾಹಿತಿ ಸಿಗಲಿಲ್ಲ ಎನ್ನುವ ಕೊರಗಿತ್ತು. ಆ ಹೊಣೆಯನ್ನು ಅವರು ನನ್ನ ಮೇಲೆ ಹೊರಿಸಲಿಲ್ಲ. ತಮ್ಮ ಸಹೋದ್ಯೋಗಿಗಳು ಆ ಘಟನೆಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳದೆ ಅವಗಣನೆ ಮಾಡಿದರು ಎನ್ನುವುದು ಗೊತ್ತಿತ್ತು. ಐಪಿಎಸ್ ಅಧಿಕಾರಿಯಾಗಿದ್ದ ಮುರುಗನ್ ಮಾಹಿತಿಯ ಕೊರತೆಯಿಂದಾಗಿ ಎಡವಟ್ಟು ಮಾಡಿಕೊಂಡ ನೋವನ್ನು ತೋಡಿಕೊಂಡರೇ ಹೊರತು ಬೆದರಿಕೆ ಹಾಕಲಿಲ್ಲ ಎನ್ನುವುದು ಮುಖ್ಯ.

ಈ ಘಟನೆಗೂ, ಮಂಗಳೂರಿನ ಈಗಿನ ಘಟನೆಗೂ ಅದೆಷ್ಟು ಅಂತರ? ಮಂಗಳೂರಲ್ಲಿ ಪೊಲೀಸ್ ಅಧಿಕಾರಿಗಳಿಂದ ಇಂಥ ಸೌಜನ್ಯವನ್ನು ಮಾಧ್ಯಮಗಳು ನಿರೀಕ್ಷೆ ಮಾಡುವುದು ತಪ್ಪಲ್ಲ. ಆದರೆ ಮಾಧ್ಯಮ ಮಂದಿಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದರೆ ಪರಿಣಾಮ ಏನಾಗಬಹುದು? ಯಾರು ಆ ಕೆಲಸ ಮಾಡುತ್ತಾರೋ ಅವರೇ ಸೋಲನ್ನು ಒಪ್ಪಿಕೊಂಡಂತಾಗುತ್ತದೆ. ತಪ್ಪು ಮಾಡಿದ್ದರೆ ಅವರಿಗಿರುವ ಕಾನೂನು ದತ್ತವಾದ ಅಧಿಕಾರವನ್ನು ಮುಲಾಜಿಲ್ಲದೆ ಮಾಧ್ಯಮದವರ ಮೇಲೆಯೂ ಪ್ರಯೋಗಿಸಬಹುದು.

ಅಧಿಕಾರಿಗಳ ವಿರೋಧ ಕಟ್ಟಿಕೊಂಡರೆ ಸರ್ಕಾರ ಯಶಸ್ವಿಯಾಗಿ ಕೆಲಸ ಮಾಡಿ ಸಾಧನೆ ಮಾಡಲು ಸಾಧ್ಯವಿಲ್ಲ ಎನ್ನುವುದು ವಾಸ್ತವ. ಅಂತೆಯೇ ಮಾಧ್ಯಮಗಳನ್ನು ಹೆಡೆಮುರಿಕಟ್ಟುವಂಥ ಪ್ರಯತ್ನಗಳು ಬುದ್ಧಿವಂತರು ಮಾಡುವ ಕೆಲಸವಲ್ಲ. ಅಧಿಕಾರದ ಆಚೆಗೂ ಒಂದು ಲೋಕವಿರುತ್ತದೆ. ಅದರಲ್ಲಿ ಸಿಗುವ ಅನುಭವ ಅಮೂಲ್ಯವಾದುದು. ಸಾರ್ವಜನಿಕ ಸಂಪರ್ಕ, ಸಂವಹನ ದೊಡ್ಡ ಗಂಡಾಂತರವನ್ನು ಸುಲಭವಾಗಿ ಪರಿಹಾರ ಮಾಡಬಲ್ಲದು. ಇಲಾಖೆಗೆ ಕಳಂಕ ಬಂತು ಎನ್ನುವ ಕಾರಣಕ್ಕಾಗಿಯೇ ಮಾಧ್ಯಮಗಳ ಮೇಲೆ ಹರಿಹಾಯ್ದರೆ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಪ್ರತೀ ಪೊಲೀಸ್ ಠಾಣೆಯಲ್ಲಿ ಜನಸಂಪರ್ಕ ಸಭೆ ಮಾಡುವುದು ಕಡ್ಡಾಯವಲ್ಲವೇ? ಅಂಥ ಸಭೆಗಳು ನಡೆಯುತ್ತಿವೆಯೇ? ಗಲಭೆಯಾದಾಗ ಮಾತ್ರವಲ್ಲವಲ್ಲವೇ ಸಭೆ ನಡೆಸುವುದು? ತಿಂಗಳಿಗೆ ಅರ್ಧ ಗಂಟೆ ಠಾಣೆಯಲ್ಲಿ ಕುಳಿತು ಆಯುಕ್ತರು ಜನಸಂಪರ್ಕ ಸಭೆ ನಡೆಸಿದರೆ ಎಲ್ಲಾ ಅಪನಂಬಿಕೆಗಳು ದೂರವಾಗುತ್ತವೆ, ಮಾಹಿತಿ ನೀವು ಇರುವಲ್ಲಿಗೇ ಬರುತ್ತವೆ. ಪ್ರಯೋಗ ಮಾಡಿದರೆ ಫಲ ಸಿಗುತ್ತದೆ.

Journalists are not paid informants of police

– Rajesh Devanahalli

Mangalore is once again in limelight for a wrong reason. Three years ago, the hooligans of pro-Hindu organisation attacked on a pub in Mangalore and assaulted girls in the guise of protecting ‘Indian culture’. The attackers did not clarify if ‘assaulting women’ is also part of ‘Indian culture’.

The police and advocates for Hindu Jagaran Vedike in particular and the BJP in general are trying to divert the issue by repeating baseless arguments. First the attackers and their supporters termed it a ‘rave party’. One of the victims in the incident had to come out with his birth certificate before the cameras to prove that Saturday happened to be his birthday and his friends had gathered to greet him.

ADGP (Law and Order) Bipin Gopalakrishna also clarified that it was not a rave party. No banned goods seized, except beer no other drink was served in the party. God knows, who informed these hooligans that a rave party starts at 6.30 pm that too in a homestay!

Any child can understand these facts. But people like Pramila Nesargi, former legislator and advocate, Jagadish Karanth, state convener of Hindu Jagaran Vedike and many so called supporters of hooligans can’t digest these facts. A few people taking part in TV debates try to divert the issue stating that the homestay had no licence. It is a different issue altogether. Homestay authorities’ failure to obtain licence does not warrant an attack on youth celebrating a birthday party there.

The police have filed a case against Newz 24 reporter Navin Soorinje along with the attackers. According the police the crime he committed was ‘not informing the police’ well before the event took place. The police are behaving as if the journalists are paid servants of police. No journalist expects the police inform the journalist before reaching the crime spot. Similarly, they should not expect the journalists inform them. Journalists’ duty is to inform their heads and send the reports.

In this incident as Navin himself explained in detail, he tried to contact the concerned police officer, who did not receive the call. He also made one of his friends call the same officer, but no response. They had done this out of concern for the girls attacked in the incident, though it was not their duty.

It seems the police showed extra excitement to book him by drawing a comparison between the homestay attack with what happened in Assam recently. A local channel reporter in Assam had recorded molestation of a girl in public for 45 minutes. The incident attracted criticism across the country forcing the editor quit the post. However, this is not similar to what happened in Mangalore.

As Navin Soorinje wrote, commissioner of police Seemanth Kumar Singh wanted to ‘teach Navin a lesson’ for criticising the incident by comparing it to Taliban attitude. The commissioner is not ready to accept the fact that Taliban culture is very much in practice in his city.

Senior journalist Dinesh Amin Mattu in his Monday column in Prajavani pointed out that the number of policemen in a city like Mangalore is many times more than the number of reporters. Besides, the police have intelligence staff. Why can’t the police chief admit failure of his intelligence in the city? It demands no greater intelligence to understand that police intelligence staff has to have sources in the outfits like Hindu Jagarana Vedike, particularly in cities like Mangalore, to pre-empt their acts and take necessary measures to avoid them. The intelligence in Mangalore failed in 2009 and now as well.

The only ways left to the police to avoid such attacks in future are – arrest all those involved in the attack, book serious cases, pursue them seriously and ensure that they are found guilty in the court of law, as they are already proved to be guilty beyond doubt in public glare.

ಮಂಗಳೂರು ಘಟನೆಯಲ್ಲಿ ಪತ್ರಕರ್ತನಾಗಿ ನಾನು ಸರಿಯಾಗಿದ್ದೀನಾ?


-ನವೀನ್ ಸೂರಿಂಜೆ   


 

ಜುಲೈ 28 ಸಂಜೆ 6.45 ರ ವೇಳೆ. ನನ್ನ ಸುದ್ದಿ ಮೂಲ ಯುವಕನೊಬ್ಬ ನನಗೆ ಕರೆ ಮಾಡಿದ್ದ. ಆತ ಪಡೀಲ್ ನಿವಾಸಿ. ಆತ ನನಗೆ ತಿಳಿಸಿದ್ದಿಷ್ಟು. “ನವೀನಣ್ಣ, ನಮ್ಮ ಪಡೀಲ್ ಜಂಕ್ಷನ್ನಲ್ಲಿ ಒಂದು ಟಿಂಬರ್ ಯಾಡರ್್ ಇದೆಯಲ್ವ. ಅಲ್ಲಿ ಒಂದು ಸುಮಾರು 30 ಮಂದಿ ಯುವಕರು ನಿಂತುಕೊಂಡು ಮಾತನಾಡುತ್ತಿದ್ದರು. ಇನ್ಯಾರನ್ನೋ ಕರೆಯಲು ಇನ್ಯಾರಿಗೋ ಒತ್ತಾಯಿಸುತ್ತಿದ್ದರು. ಬೈಕುಗಳನ್ನು ರೆಡಿ ಇಟ್ಟುಕೊಳ್ಳಿ ಎನ್ನುತ್ತಿದ್ದರು. ಬಹುಷಃ ಅವರು ನಮ್ಮ ಮೇಲಿನ ಗುಡ್ಡೆಯಲ್ಲಿರುವ ಗೆಸ್ಟ್ ಹೌಸ್ಗೆ ದಾಳಿ ಮಾಡಲು ಯೋಚಿಸುತ್ತಿದ್ದಾರೆ ಎನಿಸುತ್ತದೆ. ಬ್ಯಾರಿ ಹುಡುಗರು, ಹಿಂದೂ ಹುಡುಗಿಯರು ಎಂದೆಲ್ಲಾ ಮಾತನಾಡುತ್ತಿದ್ದರು” ಎಂದ. ಅವರು ಯಾವ ಸಂಘಟನೆಯವರು ಅಂತಿ ತಿಳ್ಕೋ ಮಾರಾಯ ಎಂದೆ ನಾನು. ಅವರು ಹಿಂದೂ ಸಂಘಟನೆಗಳು ಎಂಬುದಷ್ಟೇ ಅವನಿಗೆ ಖಚಿತವಾಯ್ತೆ ವಿನಹ ನಿಖರವಾಗಿ ಯಾವ ಸಂಘಟನೆ ಎಂಬುದು ತಿಳಿಯಲಿಲ್ಲ.

ತಕ್ಷಣ ನನ್ನ ಮನಸ್ಸಿಗೆ ಬಂದ ಪ್ರಶ್ನೆ “ಈ ಮಾಹಿತಿಯನ್ನು ಪೊಲೀಸರಿಗೆ ನೀಡಬೇಕೇ ಬೇಡವೇ”‘ ಎಂಬುದು. ದಾಳಿ ಯಾರು ಮಾಡುತ್ತಿದ್ದಾರೆ ಎಂದು ಗೊತ್ತಿಲ್ಲ. ಯಾಕಾಗಿ, ಯಾರ ಮೇಲೆ, ಯಾವ ಸಂಘಟನೆ, ಎಲ್ಲಿಗೆ ದಾಳಿ ಮಾಡುತ್ತಿದೆ ಎಂಬುದೂ ಗೊತ್ತಿಲ್ಲ. ಒಂದು ತೀರಾ ಪ್ರಾಥಮಿಕ ಮಾಹಿತಿಯಷ್ಠೆ ತಿಳಿದಿದೆ. ಸಂಘಟನೆಯ ಕಾರ್ಯಕರ್ತರೇ ಫೋನಾಯಿಸಿದ್ದರೆ ಪೊಲೀಸರಿಗೆ ಮಾಹಿತಿ ನೀಡಬಹುದಿತ್ತು. ನನ್ನ ಸುದ್ದಿಮೂಲ ಮಾಹಿತಿ ನೀಡಿದ್ದರಿಂದ ಆ ಸುದ್ದಿಯನ್ನು ಖಚಿತಪಡಿಸಿಕೊಂಡೇ ಪೊಲೀಸರಿಗೆ ಮಾಹಿತಿ ನೀಡೋಣ ಎಂದುಕೊಂಡು ನಾನು ಮತ್ತು ನನ್ನ ಕ್ಯಾಮರಮೆನ್ ಪಡೀಲ್ ಗುಡ್ಡೆಯ ಮೇಲಿರುವ ಗೆಸ್ಟ್ ಹೌಸ್ ಕಡೆ ಬೈಕಿನಲ್ಲಿ ತೆರಳಿದೆ.

ಒಂದೈದು ನಿಮಿಷದಲ್ಲಿ ಪಡೀಲ್ ಗುಡ್ಡೆಯಲ್ಲಿರುವ ಮಾನರ್ಿಂಗ್ ಮಿಸ್ಬಾ ಎನ್ನುವ ಹೋಂ ಸ್ಟೇ ಅಥವಾ ಗೆಸ್ಟ್ ಹೌಸ್ ಹೊರಭಾಗದಲ್ಲಿ ನಾನು ಮತ್ತು ನನ್ನ ಕ್ಯಾಮರಮೆನ್ ಇದ್ದೆವು. ಆಗ ಅಲ್ಲಿ ಯಾವ ದಾಳಿಕೋರರೂ ಇರಲಿಲ್ಲ. ಐದು ನಿಮಿಷ ಅಲ್ಲೇ ಕಾದು ನಿಂತೆವು. ಯಾರು ಯಾಕಾಗಿ ಈ ಹೋಂ ಸ್ಟೇಗೆ ದಾಳಿ ಮಾಡಲು ಸಿದ್ದತೆ ಮಾಡುತ್ತಾರೆ ಎಂಬುದು ಗೊತ್ತೇ ಆಗಲಿಲ್ಲ. ಪಡೀಲ್ ಹೆದ್ದಾರಿಯಿಂದ ಅಂದಾಜು ಅರ್ಧ ಕಿಮಿ ರಸ್ತೆ ದಾರಿಯಲ್ಲಿ ಈ ಹೋಂ ಸ್ಟೇ ಇದೆ. ಇದರ ಸುತ್ತಲೂ ದೊಡ್ಡದಾದ ಕಂಪೌಂಡ್ ಇದೆ. ಒಂದೇ ಒಂದು ಗೇಟ್ ಇದೆ. ಗೇಟ್ನಿಂದ 60 ಮೀಟರ್ ದೂರದಲ್ಲಿ ಹೋಂ ಸ್ಟೇ ಬಂಗಲೆ ಇದೆ. ನಾನು ಗೇಟ್ ಹತ್ತಿರ ನಿಂತು ಒಮ್ಮೆ ಇಡೀ ಬಂಗಲೆಯತ್ತಾ ಕಣ್ಣಾಡಿಸಿದೆ. ಅಲ್ಲಿ ದಾಳಿ ಮಾಡಲು ಕಾರಣವಾಗುವಂತಹ ಯಾವುದೇ ಆ್ಯಕ್ಟಿವಿಟೀಸ್ ನನಗೆ ಗೋಚರಿಸಲಿಲ್ಲ. ಒಬ್ಬಳು ಹುಡುಗಿ ಹೊರಗೆ ಚೇರ್ನಲ್ಲಿ ಕುಳಿತಿದ್ದಳು. ಇನ್ನಿಬ್ಬರು ಹುಡುಗರು ಬಂಗಲೆಯ ಮತ್ತೊಂದು ಮೂಲೆಯಲ್ಲಿ ನಿಂತುಕೊಂಡು ಮೊಬೈಲ್ನಲ್ಲಿ ಆಟವಾಡುತ್ತಿದ್ದರು. ಅವರು ಯಾವುದೇ ರೀತಿಯಲ್ಲೂ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿರಲಿಲ್ಲ. ಆದುದರಿಂದ ದಾಳಿಕೋರರು ಬಯಸುವ ಸನ್ನಿವೇಶ ಅಲ್ಲಿರಲಿಲ್ಲ. ಆದುದರಿಂದ ಆಗಲೂ ನನಗೆ ಪೊಲೀಸರಿಗೆ ಮಾಹಿತಿ ನೀಡಬೇಕು ಅನ್ನಿಸಲಿಲ್ಲ. ನನ್ನ ಮಾಹಿತಿ ತಪ್ಪಾದರೆ ಒಂದಿಡೀ ಪೊಲೀಸ್ ಇಲಾಖೆಗೆ ತಪ್ಪು ಮಾಹಿತಿ ನೀಡಿದಂತಾಗುತ್ತದೆ. ಮತ್ತು ಹೋಂ ಸ್ಟೇಯಲ್ಲಿದ್ದವರಿಗೆ ವಿನಾಕಾರಣ ಪೊಲೀಸ್ ಕಿರುಕುಳ ನೀಡಲು ಕಾರಣನಾಗುವಂತಾಗುತ್ತೇನೆ ಎಂಬ ಆತಂಕದಿಂದಲೇ ಮಾಹಿತಿ ನೀಡಲಿಲ್ಲ. ನಾನು ಈ ರೀತಿ ಯೋಚಿಸುತ್ತಿರುವಾಗಲೇ ಸುಮಾರು ಮೂವತ್ತೂ ಅಧಿಕ ಇದ್ದ ತಂಡವೊಂದು ಹೋಂ ಸ್ಟೇಯ ಗೇಟಿನತ್ತಾ ಬರುತ್ತಿತ್ತು. ನಾನು ತಕ್ಷಣ ಕುತೂಹಲದಿಂದಲೇ ಕೇಳಿದೆ. “ಏನು ವಿಷಯ? ಏನಾಗ್ತಾ ಇದೆ ಇಲ್ಲಿ ?” ಎಂದು ತುಳುವಿನಲ್ಲಿ ಪ್ರಶ್ನಿಸಿದೆ. ತಕ್ಷಣ ಯುವಕನೊಬ್ಬ “ಬ್ಯಾರಿಗಳು ನಮ್ಮ ಹಿಂದೂ ಹುಡುಗಿಯರನ್ನು ಇಲ್ಲಿ ಕರೆದುಕೊಂಡು ಬಂದಿದ್ದಾರೆ. ಅವರನ್ನು ಬಿಡಬಾರದು”‘ ಎಂದ. ಅಷ್ಟರಲ್ಲಿ ಗುಂಪಿನಲ್ಲಿದ್ದ ಇನ್ನಿತರ ಯುವಕರು ಹೊರಗೆ ಕುಳಿತಿದ್ದ ಹುಡುಗಿಯತ್ತಾ ಕೈ ತೋರಿಸಿ, :ಅಲ್ಲಿ ಅಲ್ಲಿ ಇದ್ದಾಳೆ ಹುಡುಗಿ, ಅಗೋ ಹುಡುಗರು ಅಲ್ಲಿದ್ದಾರೆ ” ಎಂದು ಯುವಕ ಯುವತಿಯರತ್ತಾ ಓಡಿಕೊಂಡು ದಾಳಿಗೆ ಸಿದ್ದರಾದರು. ತಕ್ಷಣ ದಾಳಿ ಅರಿವಾದ ಯುವತಿ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಲು ಬಂಗಲೆಯ ಒಳ ಹೋದಳು. ಮತ್ತು ಬಾಗಿಲು ಹಾಕಲು ಯತ್ನಿಸಿದಳು. ಆಗ ಸುಮಾರು 30 ರಷ್ಟಿದ್ದ ದಾಳಿಕೋರರು ಬಾಗಿಲನ್ನು ಬಲವಾಗಿ ದೂಡಿ ಬಾಗಿಲು ತೆರೆಯುವಲ್ಲಿ ಸಫಲರಾದರು.

ಈಗ ನನ್ನ ಪ್ರಜ್ಞೆ ನಿಜವಾಗಿಯೂ ಜಾಗೃತವಾಗಿತ್ತು. ತಕ್ಷಣ ನನ್ನ ಕಚೇರಿ ಮೊಬೈಲ್ 9972570044 ನಿಂದ ಮಂಗಳೂರು ಗ್ರಾಮಾಂತರ ಪೊಲೀಸ್ ನಿರೀಕ್ಷಕ ರವೀಶ್ ನಾಯಕ್ಗೆ 9480805330 ಎಂಬ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದೆ. ಆಗ ಸುಮಾರು 7.15 ರ ಸಂಜೆ ಸಮಯ. ರವೀಶ್ ನಾಯಕ್ ನನ್ನ ಕರೆ ಸ್ವೀಕರಿಸಲೇ ಇಲ್ಲ. ಒಂದು ಕಡೆಯಿಂದ ದಾಳಿ ಪ್ರಾರಂಭವಾಗಿದೆಯಷ್ಟೆ. ಇನ್ನೇನು ಆಗುತ್ತೋ ಎಂಬ ಆತಂಕದ ನಡುವೆಯೇ ಕಕ್ಕಾಬಿಕ್ಕಿಯಾದ ಹುಡುಗಿಯರು ಎಲ್ಲೆಲ್ಲೋ ಓಡಲು ಶುರುವಿಟ್ಟುಕೊಂಡಿದ್ದರು. ಪೊಲೀಸರಿಗೆ ಫೋನ್ ಮಾಡಿದರೆ ಕರೆ ಸ್ವೀಕರಿಸುತ್ತಿರಲಿಲ್ಲ. ಬೇರೆ ದಾರಿ ಕಾಣದೆ ಟಿವಿ 9 ವರದಿಗಾರನಾಗಿರುವ ನನ್ನ ಗೆಳೆಯ ರಾಜೇಶ್ ರಾವ್ ಬಳಿ ಪೊಲೀಸರಿಗೆ ಫೋನ್ ಮಾಡುವಂತೆ ಹೇಳಿದೆ. ರಾಜೇಶ್ ರಾವ್ ಅವರ ಮೊಬೈಲ್ನಿಂದ ಇನ್ಸ್ಸ್ಪೆಕ್ಟರ್ ರವೀಶ್ ನಾಯಕ್ಗೆ ಕರೆ ಮಾಡಿದರು. ಆಗಲೂ ರವೀಶ್ ನಾಯಕ್ ಕರೆ ಸ್ವೀಕರಿಸಲೇ ಇಲ್ಲ.

ನಾವು ಇನ್ಸ್ಸ್ಪೆಕ್ಟರ್ಗೆ ಫೋನ್ ಕರೆ ಮಾಡುತ್ತಿದ್ದಂತೆ ನಮ್ಮ ಕ್ಯಾಮರಾಮೆನ್ ದಾಳಿಕೋರರ ಹಿಂದೆಯೇ ಹೋಗಿ ಕರ್ತವ್ಯ ನಿರ್ವಹಿಸುತ್ತಿದ್ದ. ನಾನು ಮತ್ತು ನನ್ನ ಕ್ಯಾಮರಮೆನ್ ಮಾತ್ರ ಅಲ್ಲಿದ್ದೆವು. ಅಷ್ಟರಲ್ಲಿ ಸ್ಥಳೀಯ ಸಹಾಯ ಎಂಬ ಕೇಬಲ್ ಚಾನೆಲ್ ಕ್ಯಾಮರಮೆನ್ ಶರಣ್ ಮತ್ತು ಫೋಟೋಗ್ರಾಫರ್ ವಿನಯ ಕೃಷ್ಣ ಅಲ್ಲಿಗೆ ಬಂದಿದ್ದರು. ನಾನು ಎಲ್ಲವನ್ನೂ ಮೂಕ ಪ್ರೇಕ್ಷಕನಾಗಿ ನೋಡುತ್ತಿದ್ದೇನೆ. ನನಗೇನೂ ಮಾಡಲಾರದ ಅಪರಾಧಿ ಮನೋಭಾವ ನನ್ನಲ್ಲಿ ಮೂಡಿತ್ತು. ದಾಳಿಕೋರರಲ್ಲಿ ಶೇಕಡಾ 50ಕ್ಕೂ ಅಧಿಕ ಮಂದಿ ಮಧ್ಯಪಾನ ಮಾಡಿದ್ದರು. ನಾನು ಹೇಳಿದರೂ ಕೇಳೋ ಸ್ಥಿತಿಯಲ್ಲಿ ಇರಲಿಲ್ಲ. ಈ ಜಗತ್ತಿನಲ್ಲಿ ಏನೇನೋ ಹಿಂಸೆಗಳು ನಡೆದಿರಬಹುದು. ಆದರೆ ನನ್ನ ಜೀವಮಾನದಲ್ಲಿ ಇಂತಹ ಹಿಂಸೆಯನ್ನು ನೋಡಿರಲಿಲ್ಲ. ನನ್ನ ಕ್ಯಾಮರಾಮೆನ್ ಎಲ್ಲೆಲ್ಲಿ ಹೊಡೆಯುತ್ತಾರೋ ಅಲ್ಲಲ್ಲಿ ಓಡುತ್ತಿದ್ದ. ನಾನು ನೋಡುತ್ತಿದ್ದೆ ಮತ್ತು ಸಾಧ್ಯವಾದಷ್ಟೂ ಕಿರಿಚುತ್ತಿದ್ದೆ. “ಏ ಹುಡುಗಿರಿಗೆ ಹೊಡಿಬೇಡ್ರಿ” ಎಂತ ಬೊಬ್ಬೆ ಹೊಡೆಯುತ್ತಿದ್ದೆ. ನನ್ನ ಬೊಬ್ಬೆ ನನ್ನ ಕ್ಯಾಮರಾದಲ್ಲಿ ದಾಖಲಾಗಿದೆಯೇ ವಿನಹ ದಾಳಿಕೋರರ ಹೃದಯಕ್ಕೆ ತಟ್ಟಲೇ ಇಲ್ಲ. ಹಲ್ಲೆಗೆ ಒಳಗಾದ ಯುವಕರು ಗೋಗೆರೆಯುತ್ತಿದ್ದರು. “ಪ್ಲೀಸ್ ಬಿಟ್ಟುಬಿಡಿ. ನಾವು ಬತರ್್ ಡೇ ಪಾಟರ್ಿ ನಡೆಸುತ್ತಿದ್ದೇವೆ, ಪ್ಲೀಸ್” ಎಂದು ಕಾಲಿಗೆ ಬೀಳುತ್ತಾನೆ. ಆದರೂ ಕ್ರೂರಿ ದಾಳಿಕೋರರ ಮನಸ್ಸು ಕರಗುವುದಿಲ್ಲ. ಇಷ್ಟೇ ಆಗಿದ್ದರೆ ನಾನು ಮರೆತುಬಿಡುತ್ತಿದ್ದೆ. ಆದರೆ ಮುಂದೆ ನನ್ನ ಕಣ್ಣ ಮುಂದೆ ಬಂದಿದ್ದು ಭೀಭತ್ಸ ದೃಶ್ಯಗಳು.

ನಾಲ್ವರು ಹುಡುಗರಿಗೆ ದಾಳಿಕೋರರು ಬಡಿಯುತ್ತಿರುವ ದೃಶ್ಯ ನೋಡಿ ಶಾಕ್ಗೆ ಒಳಗಾದ ಯುವತಿಯರು ದಿಕ್ಕಾಪಾಲಾಗಿ ಓಡಲು ಶುರುವಿಟ್ಟುಕೊಂಡರು. ಬಂಗಲೆಯ ತುಂಬಾ ಓಡುತ್ತಿರುವ ಯುವತಿಯರ ಹಿಂದೆ ಒಂದಷ್ಟು ದಾಳಿಕೋರರ ಓಟ ನಡೆಯುತ್ತಿತ್ತು. ನಂಬಿದರೆ ನಂಬಿ. ಬಿಟ್ಟರೆ ಬಿಡಿ. ಒಬ್ಬಳು ಹುಡುಗಿ ಒಂದನೇ ಮಹಡಿಯಿಂದ ಕೆಳಗೆ ಜಿಗಿದಿದ್ದಾಳೆ. ಅವಳನ್ನು ಹಿಡಿದುಕೊಂಡ ಇಪ್ಪತ್ತೂ ಅಧಿಕ ದಾಳಿಕೋರ ಕಾರ್ಯಕರ್ತರು ಆಕೆಯ ವಸ್ತ್ರಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಆಕೆಯ ಕೆನ್ನೆಗೆ ಬಿಗಿದು, ಗೋಡೆಗೆ ನೂಕಿದ್ದಾರೆ. ಅಷ್ಟರಲ್ಲಿ ಪಿಂಕ್ ಡ್ರೆಸ್ ತೊಟ್ಟುಕೊಂಡಿದ್ದ ಹುಡುಗಿಯೊಬ್ಬಳು ಓಡಲು ಶುರುವಿಟ್ಟುಕೊಂಡಳು. ಆಕೆಯನ್ನು ಹಿಡಿದ ಗೂಂಡಾ ದಾಳಿಕೋರರು ಅಕ್ಷರಶ ಆಕೆಯನ್ನು ಬೆತ್ತಲು ಮಾಡಿದ್ದಾರೆ. ಒಂದು ತುಂಡು ವಸ್ತ್ರ ಹೊರತುಪಡಿಸಿ ವಿವಸ್ತ್ರ ಮಾಡಿದ ನಂತರ ಆಕೆಯ ಅಂಗಾಂಗಳ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ಮಾಡಿದ್ದಾರೆ. ಇದು ನನ್ನನ್ನು ಅಕ್ಷರಶ ಅಧೀರನನ್ನಾಗಿಸಿದ ಧೃಶ್ಯ. ಈ ರೀತಿಯ ದೃಶ್ಯವನ್ನು ನಾನು ನನ್ನ ಜೀವಮಾನದಲ್ಲಿ ನೋಡಿರಲಿಲ್ಲ. ಕೇಳಿದ್ದೆ. ಇವೆಲ್ಲವೂ ವಿಶುವಲ್ ಆಗದೇ ಇರುವಂತದ್ದು. ಶೂಟಿಂಗ್ ಆಗಿದ್ದು ಸ್ವಲ್ಪವೇ ಸ್ವಲ್ಪ ಭಾಗ. ಆನಂತರ ಪಾಟರ್ಿಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಹುಡುಗ ಹುಡುಗಿಯರನ್ನು ಒಂದೇ ಕೋಣೆಯಲ್ಲಿ ಹಾಕಿ ಚಿಲಕ ಹಾಕಿದರು. ಇವೆಲ್ಲವೂ ನಡೆದಿದ್ದು ಮಿಂಚಿನ ವೇಗದಲ್ಲಿ. ಹೆಚ್ಚೆಂದರೆ 15 ನಿಮಿಷದಲ್ಲಿ ಇವೆಲ್ಲವೂ ಮುಗಿದು ಹೋಗಿತ್ತು.

ದಾಳಿಕೋರರ ಕಾರ್ಯಾಚರಣೆ ಒಂದು ಹಂತಕ್ಕೆ ಮುಗಿದ ನಂತರ ಪೊಲೀಸ್ ಇನ್ಸ್ಸ್ಪೆಕ್ಟರ್ ರವೀಶ್ ನಾಯಕ್, ಪೊಲೀಸ್ ಎಸೈ ಮುನಿಕಂಠ ನೀಲಸ್ವಾಮಿ ಮತ್ತು ಪೋಲೀಸ್ ಪೇದೆಗಳು ಬಂದಿದ್ದಾರೆ. ವಿಶೇಷ ಎಂದರೆ ಪೊಲೀಸರಿಗೆ ದಾಳಿಕೋರರ ಜೊತೆ ಮೊದಲೇ ಸಂಪರ್ಕ ಇರೋ ರೀತಿಯಲ್ಲಿ ಪೊಲೀಸರು ವತರ್ಿಸಿದ್ದಾರೆ. ಸುಮಾರು ಅರ್ಧ ಗಂಟೆಗಳಿಗೂ ಹೆಚ್ಚು ಕಾಲ ಪೊಲೀಸರು ದಾಳಿಕೋರರ ಜೊತೆ ಮಾತಕತೆಯಲ್ಲಿ ತಲ್ಲೀನರಾಗಿದ್ದರು. ದಾಳಿಕೋರರ ಬಂಧಿಸುವ ಬದಲು ಅವರ ಜೊತೆ ಹರಟೆ ಹೊಡೆಯುತ್ತಿರುವುದು ನನಗೆ ಆಶ್ಚರ್ಯ ಉಂಟು ಮಾಡಿತ್ತು. ಇವೆಲ್ಲಾ ನಡೆಯುತ್ತಿರಬೇಕಾದರೆ ಪಾಟರ್ಿಯಲ್ಲಿ ಪಾಲ್ಗೊಂಡಿದ್ದ ಯುವಕನೊಬ್ಬ ತಪ್ಪಿಸಿಕೊಳ್ಳಲು ಯತ್ನಿಸಿದ. ತಕ್ಷಣ ಪೊಲೀಸರು ಆ ಯುವಕನನ್ನು ವಶಕ್ಕೆ ತೆಗೆದುಕೊಂಡರು. ಪೊಲೀಸರ ವಶದಲ್ಲಿದ್ದ ಯುವಕನಿಗೆ ದಾಳಿಕೋರರು ಪೊಲೀಸರ ಸಮ್ಮುಖದಲ್ಲೇ ಹಲ್ಲೆ ನಡೆಸಿದರು.

ಅಷ್ಟರಲ್ಲಿ ನಮ್ಮ ಇನ್ನಷ್ಟೂ ಕ್ಯಾಮರಮೆನ್ಗಳು ಬಂದಿದ್ದರು. ನಾನು ನನ್ನ ಕ್ಯಾಮರಮೆನ್ ಜೊತೆ ಕಚೇರಿಗೆ ಬಂದು ಎಲ್ಲಾ ವಿಝುವಲ್ಸ್ ಬೆಂಗಳೂರು ಕಚೇರಿಗೆ ಅಪ್ಲಿಂಕ್ ಮಾಡಿದೆ. 7.45 ಕ್ಕೇ ವರದಿ ಪ್ರಕಟವಾಯಿತು. ವರದಿ ಪ್ರಕಟವಾದ ಕೆಲವೇ ನಿಮಿಷಗಳಲ್ಲಿ ನಮ್ಮ ಚಾನೆಲ್ನಲ್ಲಿ ಬರುತ್ತಿದ್ದ ವರದಿ ಮತ್ತು ದೃಶ್ಯಗಳನ್ನು ರಾಷ್ಟ್ರೀಯ ವಾಹಿನಿಗಳು ಬಳಕೆ ಮಾಡಿಕೊಂಡು ಸುದ್ಧಿ ಪ್ರಕಟಿಸಿದವು. ತಕ್ಷಣ ಇದೊಂದು ರಾಷ್ಟ್ರೀಯ ಸುದ್ಧಿಯಾಗಿ ಮಾರ್ಪಡಾಗಿತ್ತು. ಇದರಿಂದ ತೀವ್ರ ಕೋಪಗೊಂಡಿದ್ದ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ನನ್ನ ಗೆಳೆಯ, ಟಿವಿ 9 ವರದಿಗಾರ ರಾಜೇಶ್ ರಾವ್ಗೆ ದೂರವಾಣಿ ಕರೆ ಮಾಡಿದ್ದಾರೆ. ರಾಜೇಶ್ಗೆ ಸೀಮಂತ್ ಕುಮಾರ್ ಸಿಂಗ್ ಕರೆ ಮಾಡಿದಾಗ ನಾನೂ ಕೂಡಾ ರಾಜೇಶ್ ಜೊತೆಗಿದ್ದೆ. ಸೀಮಂತ್ ಮಾತುಗಳನ್ನು ರಾಜೇಶ್ ಲೌಡ್ ಸ್ಪೀಕರ್ ಇಟ್ಟು ನನಗೆ ಕೇಳಿಸುತ್ತಿದ್ದ. “ನವೀನ ನ್ಯೂಸ್ ಯಾಕೆ ಮಾಡಬೇಕಿತ್ತು. ಅವನಿಗೆ ಅಕ್ಕ ತಂಗಿ ಇಲ್ಲವಾ ? ಅವರಿಗೆ ಹೊಡೆಯಲ್ವ ? ಅದನ್ನು ಟಿವಿಯಲ್ಲಿ ತೋರಿಸ್ತಾರಾ ? ನೋಡ್ಕೋತೀನಿ ನಾನು ಅವನನ್ನು. ಅವನು ಮಂಗಳೂರಿನಲ್ಲಿ ತಾಲೀಬಾನ್ ಸಂಸ್ಕೃತಿ ಇದೆ ಎಂದು ಹೇಳಿದ. ಅಸ್ಸಾಂನ ಘಟನೆಗೆ ಈ ಘಟನೆಯನ್ನು ಹೋಲಿಸಿ ಲೈವ್ ಕೊಟ್ಟ. ಈ ಬಾರಿ ಅವನನ್ನು ಬಿಡುವುದಿಲ್ಲ. ಈ ಕೇಸ್ನಲ್ಲಿ ಅವನನ್ನು ಫಿಕ್ಸ್ ಮಾಡುತ್ತೇನೆ. ಅವನಿಗೆ ಎಷ್ಟು ಬೇಕಾದರೂ ಇಂಪ್ಲ್ಯೂಯನ್ಸ್ ಇರಲಿ. ಫಿಕ್ಸ್ ಮಾಡುವುದು ಮಾಡೋದೆ” ಎಂದು ಸೀಮಂತ್ ಹೇಳುತ್ತಿದ್ದರು. “ಹುಡುಗಿಯರಿಗೆ ಮತ್ತು ಹುಡುಗರಿಗೆ ಹೊಡೆದಿದ್ದು ದೊಡ್ಡ ವಿಷಯ ಅಲ್ಲ. ಅದನ್ನು ಚಿತ್ರೀಕರಿಸಿದ್ದು ಮಹಾ ಅಪರಾಧ,” ಎಂಬುದಷ್ಟೇ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾತಿನ ಅರ್ಥ ಎಂಬುದಂತೂ ಸ್ಪಷ್ಟ.

ಇಂದು ಬೆಳಿಗ್ಗೆ ನನಗೆ ಇನ್ನೊಂದು ಶಾಕ್ ಕಾದಿತ್ತು. ನಾನು ಯಾರ ಪರವಾಗಿ ಸುದ್ದಿ ಮಾಡಿದ್ದೇನೋ ಅವರೇ ನನ್ನ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನನಗೆ ಸ್ಪಷ್ಟವಾಗಿ ಗೊತ್ತಿತ್ತು. ಹಲ್ಲೆಗೊಳಗಾದ ಯಾವುದೇ ಹುಡುಗ ಹುಡುಗಿ ಸ್ವ ಇಚ್ಚೆಯಿಂದ ನನ್ನ ವಿರುದ್ಧ ದೂರು ನೀಡಲು ಸಾದ್ಯವಿಲ್ಲ. ಪ್ಲೀಸ್ ಹೊಡಿಯಬೇಡಿ ಎಂದು ನಾನು ಸಾಧ್ಯವಾದಷ್ಟು ಬೊಬ್ಬೆ ಹಾಕುತ್ತಿದ್ದದ್ದು ಹಲ್ಲೆಗೊಳಗಾದ ಯುವತಿಯರಿಗೆ ಗೊತ್ತಿತ್ತು ಅಂದುಕೊಳ್ಳುತ್ತೇನೆ. ಸಂಜೆಯಾಗುವಾಗ ನನ್ನ ಡೌಟ್ ಕ್ಲೀಯರ್ ಆಗಿತ್ತು. ಮಾಧ್ಯಮದ ಜೊತೆ ಮಾತನಾಡಿದ ಹಲ್ಲೆಗೊಳಗಾದ ಯುವಕರು “ನಾವು ಮಾಧ್ಯಮ ಮಂದಿ ವಿರುದ್ಧ ದೂರು ನೀಡಿಲ್ಲ. ನಮಗೆ ಮಾಧ್ಯಮದವರು ಸಪೋಟರ್್ ಮಾಡಿದ್ದಾರೆ” ಎಂದರು.

ಅದೇನೇ ಇರಲಿ. ಮಂಗಳೂರು ಗ್ರಾಮಾಂತರ ಪೊಲೀಸರು ನನ್ನ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ನಾವು ಚಿತ್ರೀಕರಿಸಿದ ವಿಝುವಲ್ಸ್ ಆಧಾರದಲ್ಲೇ ಈವರೆಗೆ 8 ಮಂದಿ ದಾಳಿಕೋರರನ್ನು ಬಂಧಿಸಿದ್ದಾರೆ. ನಾವು ಒಂದು ಆಕ್ಷೇಪಾರ್ಹ ಘಟನೆಯನ್ನು ಚಿತ್ರೀಕರಿಸಿ ಸುದ್ದಿ ಪ್ರಸಾರ ಮಾಡಿದ್ದೇವೆಯೇ ಹೊರತು ಆಕ್ಷೇಪಾರ್ಹ ದೃಶ್ಯವನ್ನಲ್ಲ ಎಂಬುದು ನನಗೆ ಸ್ಪಷ್ಟತೆ ಇದೆ. ಮಂಗಳೂರಿನಲ್ಲಿ ಜುಲೈ 28 ರಾತ್ರಿ ನಡೆದ ದಾಳಿ ಹೊಸದೇನೂ ಅಲ್ಲ. ಪ್ರತೀ ವಾರಕ್ಕೊಂದು ಇಂತಹ ಘಟನೆ ನಡೆಯುತ್ತದೆ. ಮುಸ್ಲಿಂ ಹುಡುಗ ಹಿಂದೂ ಹುಡುಗಿ ಒಟ್ಟಿಗಿದ್ದರೆ ಹಿಂದೂ ಮತೀಯವಾದಿಗಳು ಅವರಿಗೆ ಹಲ್ಲೆ ಮಾಡಿ ಮತೀಯವಾದಿಗಳೇ ಅವರನ್ನು ಠಾಣೆಗೆ ಕೊಂಡೊಯ್ದು ಪೊಲೀಸರ ವಶಕ್ಕೆ ನೀಡುತ್ತಾರೆ. ಪೊಲೀಸರು ಪ್ರೇಮಿ(ಗೆಳೆಯರು)ಗಳ ತಂದೆ ತಾಯಿಯನ್ನು ಕರೆಸಿ ಎಚ್ಚರಿಕೆ ನೀಡಿ ಕಳುಹಿಸುತ್ತಾರೆ. ನಾವು ಶೂಟಿಂಗ್ ಮಾಡದೇ ಇದ್ದರೆ ಇಲ್ಲೂ ಅಷ್ಟೇ ನಡೆಯುತ್ತಿತ್ತು. ನಮ್ಮ ಶೂಟಿಂಗ್ನಿಂದ ಕೋಮುವಾದಿಗಳ ಒಂದು ಕ್ರೂರ ಮುಖ ಬಯಲಾಗಿದೆ ಮತ್ತು ಎಂಟು ಮಂದಿ ಬಂಧಿತರಾಗುವಂತೆ ಮಾಡಿದೆ. ಯಾರು ಏನೇ ಅನ್ನಲ್ಲಿ. ಯಾವ ಕೇಸೇ ಬೀಳಲಿ. ನಾನು ಪತ್ರಕರ್ತನಾಗಿ ಸಮಾಜಕ್ಕೆ ಏನೋ ನ್ಯಾಯ ನೀಡಿದ್ದೇನೆ ಅನ್ನಿಸುತ್ತಿದೆ. ಅಳುತ್ತಿರುವ ನನ್ನ ಮನಸ್ಸಿಗೆ ಸಧ್ಯ ಅಂತಹ ಸಮಾಧಾನ ಸಾಕು.

ನನ್ನ ಮೇಲೆ ದೂರು ನೀಡಿರುವುದು ಮತ್ತು ನನ್ನ ವಿರುದ್ಧ ಎಫ್ಐಆರ್ ದಾಖಲಿಸಿರುವುದು ದೊಡ್ಡ ವಿಷಯವೇ ಅಲ್ಲ. ನನ್ನ ಮೇಲಿನ ಎಫ್ಐಆರ್ನಿಂದ ದಾಳಿಕೋರ ಕ್ರೂರಿ ಮೃಗಗಳಿಗೆ ಶಿಕ್ಷೆಯಾಗುವುದಾದರೆ ನನ್ನ ಮೇಲಿನ ಎಫ್ಐಆರನ್ನು ನಾನು ಖುಷಿ ಪಡುತ್ತೇನೆ. ಯಾವುದಾದರೂ ಒತ್ತಡಕ್ಕೆ ಮಣಿದು ಆರೋಪದಿಂದ ನನ್ನನ್ನು ಬಿಡುಗಡೆ ಮಾಡುವಾಗ ಅಂತಹ ಬಿಡುಗಡೆಯಿಂದ ಆರೋಪಿ ದಾಳಿಕೋರರಿಗೆ ಲಾಭವಾಗುವುದಾದರೆ ಆಂತಹ ಬಿಡುಗಡೆ ನನಗೆ ಬೇಕಾಗಿಲ್ಲ. ನನ್ನ ಸಮ್ಮುಖದಲ್ಲೇ ನನ್ನ ಸಹೋದರಿಯರ ಮೇಲೆ ದಾಳಿ ನಡೆಸಿದ ದಾಳಿಕೋರರಿಗೆ ನ್ಯಾಯಾಲಯ ಅದೆಂತಹ ಶಿಕ್ಷೆ ನೀಡಿದರೂ ನ್ಯಾಯ ನೀಡಿದಂತಾಗುವುದಿಲ್ಲ. ಆದರೂ ಅವರಿಗೆ ಶಿಕ್ಷೆಯಾಗಬೇಕು.