ಸ್ನೇಹಿತರೆ,
ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪ್ರಶಸ್ತಿ ಪುರಸ್ಕೃತ ಕವಿ ವೀರಣ್ಣ ಮಡಿವಾಳರಿಗೆ ಇದೇ ಭಾನುವಾರದಂದು (ಜೂನ್ 17, 2012) ಬೆಂಗಳೂರಿನಲ್ಲಿ ಅಭಿನಂದನೆ ಕಾರ್ಯಕ್ರಮವೊಂದನ್ನು “ಸಂವಹನ”ದ ಗೆಳೆಯರು ಹಮ್ಮಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ನಟರಾಜ್ ಹುಳಿಯಾರ್, ದಿನೇಶ್ ಅಮೀನ್ಮಟ್ಟು, ಸುಬ್ಬು ಹೊಲೆಯಾರ್, ಮತ್ತು ನಾನು ಭಾಗವಹಿಸಲಿದ್ದೇವೆ. ಅಭಿನಂದನೆ ಕಾರ್ಯಕ್ರಮದ ನಂತರ ಸುಮಾರು 20 ಕವಿಗಳ ಕವಿಗೋಷ್ಟಿ ಇದೆ. ಸ್ಥಳ ಮತ್ತು ಸಮಯದ ವಿವರಗಳು ಕೆಳಗಿನ ಆಹ್ವಾನ ಪತ್ರಿಕೆಯಲ್ಲಿದೆ. ದಯವಿಟ್ಟು ತಾವು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ವರ್ತಮಾನ.ಕಾಮ್ನ ಪರವಾಗಿ ವಿನಂತಿಸುತ್ತೇನೆ.
-ರವಿ ಕೃಷ್ಣಾರೆಡ್ಡಿ