Monthly Archives: February 2013

Afzal Guru to Gallows: An Act Played to the Gallery?

– Sudhanshu Karkala

Going by the Supreme Court’s verdict, Afzal Guru deserved the capital punishment “in the interest of satisfying the collective conscience of society”. It was true the nation was shaken when Parliament was attacked.

But, why there is so much discomfort around when unanswered questions in the Afzal Guru case are raised? A national news channel anchor-head declared on February 9 that he would not include anybody who would argue Afzal Guru as innocent on his panel throughout the day. The media, by and large, focused only politics around ‘timing’ of his execution, rather than more serious issues related to his trial.

The Supreme Court didn’t state that he was ‘directly’ involved in the attack on parliament. afzal-guruWithout cross-examining the prosecution witnesses, the trial went on recording the prosecution’s version. Though there were glaring contradictions in the depositions of the prosecution witnesses, the ears concerned remained deaf. Why the strong judiciary of this robust democratic country has not justified its verdict, beyond doubt? Does it want someone to be killed to satisfy a collective conscience?

Afzal Guru himself had admitted that he was a part of JKLF movement and surrendered to police in J&K after he was disillusioned with the idea and disappointed with both India and Pakistan equally. However, he was continuously harassed by the Special Task Force in J&K. In fact, one of those allegedly involved in the parliament attack was initially introduced to Guru by one of the officers in STF. Why people at helm of affairs do not want to probe this statement?

Recently in Bangalore a film producer was acquitted of a murder. In fact the collective conscience of the news channels viewers was that he was the accused and he deserved punishment. In the court the prosecution failed to prove him guilty and he was acquitted. Even if a junior most advocate in the office of the advocate, who defended the film producer and realtor, had come forward to defend Afzal Guru and worked with conviction, he had chances of taking the case to a new front.

A copy of the mercy petition is available on-line in the form of a book. It carries the mercy petition along with details of trial court’s proceedings. The petition has raised many poignant questions why he does not deserve capital punishment. Afzal Guru did not want pardon, because, he said, if he seeks pardon it is admitting to the crime, which he had not committed.

The Hindu, national newspaper, stands out in its coverage of the episode. Whoever reads the articles and news reports in the newspaper will end up with doubts over the prosecution and the way the trial was conducted. The way the whole episode unfolded made many doubt that the police framed Afzal Guru in this case only to avoid being criticized for not tracing the real perpetrators.

ಬಿಜಾಪುರದ ಭವ್ಯ ಸನ್ಮಾನ ಸಾಹಿತ್ಯ ಸಮ್ಮೇಳನ..!

– ಡಾ.ಎಸ್.ಬಿ.ಜೋಗುರ

ಒಂದು ಕಾಲವಿತ್ತು ಬರೆಯುವ, ಯೋಚಿಸುವದನ್ನು ದಮನ ಮಾಡುವ ಸಲುವಾಗಿಯೇ ಪ್ರಭುತ್ವಗಳು ಗಸ್ತು ಹೊಡೆದು ಕಾಯುತ್ತಿದ್ದವು. ಪ್ರಭುತ್ವದ ಬುಡಕ್ಕೆ ತಿವಿಯುವ ಚೂಪುತನದ ವಿಚಾರಗಳಿದ್ದರಂತೂ ಸಹಿಸುತ್ತಲೇ ಇರಲಿಲ್ಲ. ಕಾರ್ಲ ಮಾರ್ಕ್ಸ್ ಜರ್ಮನಿಯಿಂದ ಇಂಗ್ಲಂಡಗೆ, ಇಂಗ್ಲಂಡಿನಿಂದ ಫ಼್ರಾನ್ಸ್‌ಗೆ ಸುತ್ತಿದ್ದು ವಿದೇಶಿ ಪ್ರವಾಸಕ್ಕಾಗಿ ಅಲ್ಲ. ಅವನ ಬರವಣಿಗೆಯ ಚೂಪುತನಕ್ಕೆ ಬೆದರಿ, ಅಲ್ಲಿಯ ಪ್ರಭುತ್ವಗಳು ಅವನನ್ನು ಹಾಗೆ ಸುತ್ತಿಸಿರುವದಿದೆ. ಚರಿತ್ರೆಯುದ್ದಕ್ಕೂ ಇಂಥಾ ಹತ್ತಾರು ಘಟನೆಗಳು ನಡೆದಿರುವದಿದೆ. 1928 ರ ಸಂದರ್ಭದಲ್ಲಿ ಇಟಲಿಯಲ್ಲಿ ಫ಼್ಯಾಶಿಷ್ಟರು ಪಟ್ಟದಲ್ಲಿರುವಾಗ ಕಮ್ಯುನಿಷ್ಟ ಪಕ್ಷದ ನೇತಾರ ಮತ್ತು ಚಿಂತಕನಾಗಿದ್ದ ಆಂಟೊನಿಯೋ ಗ್ರಾಮ್ಸಿ, ಪ್ರಗತಿಪರ ಧೋರಣೆಯನ್ನಿಟ್ಟುಕೊಂಡು ಮಾತನಾಡುವದೇ ತಪ್ಪು ಎನ್ನುವ ಹಾಗೆ ಅವನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದು ಮಾತ್ರವಲ್ಲದೇ ಪ್ರಭುತ್ವದ ಪರವಾಗಿರುವ ಅಧಿಕಾರಿಯೊಬ್ಬ ನ್ಯಾಯಾಧೀಶರ ಎದುರು ಈ ಮನುಷ್ಯ ಎರಡು ದಶಕಗಳ ಕಾಲ ಆಲೋಚನೆ ಮಾಡುವ ಸಾಮರ್ಥ್ಯವನ್ನೇ ಕಳೆದುಕೊಳ್ಳಬೇಕು ಅಂಥಾ ಶಿಕ್ಷೆಯನ್ನು ಕೊಡಿ ಎಂದು ಕೇಳಿಕೊಂಡಿದ್ದ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಅತ್ಯಂತ ಕುತ್ಸಿತ ಬುದ್ದಿಯ ಬಳಕೆಯ ಮೂಲಕ ಹಾಗೆ ಪ್ರಗತಿಪರರಾಗಿರುವವರನ್ನು ಆಗಾಗ ಬೇರೆ ಬೇರೆ ಮಾರ್ಗಗಳನ್ನು ಬಳಸಿ ಮೆತ್ತಗೆ ಮಾಡುವ ಕ್ರಮ ಜಾರಿಯಲ್ಲಿದೆ. ಯೋಚನೆ, ಪ್ರಶ್ನೆ, ತರ್ಕಗಳನ್ನೇ ಸಹಿಸದಿರುವ ಪ್ರಭುತ್ವಗಳು ಯಾವಾಗಲೂ ಇದನ್ನೇ ಮಾಡುತ್ತ ಬಂದಿವೆ. ದಮನಿತರ ದನಿಯಾಗಿ ಇಲ್ಲವೇ ಶೋಷಿತರ ಪರವಾಗಿ ಪ್ರಭುತ್ವಗಳು ಯಾವ ಕಾಲದಲ್ಲೂ ನಿಂತಿರುವ ಉದಾಹರಣೆಗಳಿಲ್ಲ. ಇಂಗ್ಲಂಡ ದೇಶದ ಸಮಾಜಶಾಸ್ತ್ರಜ್ಞ ಸ್ಪೆನ್ಸರ್ “ಇದ್ದವರ ಭಯದಿಂದ ರಾಜ್ಯ ಹುಟ್ಟಿತು” ಎಂದು ಹೇಳಿರುವ ಹಿನ್ನೆಲೆಯೂ ಇದೇ ಆಗಿದೆ. ಇಲ್ಲಿ ಇದ್ದವರ ಎನ್ನುವದನ್ನು ಸ್ಪೆನ್ಸರ್ ಜೀವಂತವಿರುವವರ ಎನ್ನುವ ಅರ್ಥದಲ್ಲಿ ಹೇಳಿದ್ದರೂ ನಾವದನ್ನು ಉಳ್ಳವರ ಭಯದಿಂದ ಎಂತಲೂ ಗ್ರಹಿಸಬಹುದಾಗಿದೆ

ಈಗೀಗ ಸಾಹಿತ್ಯಕ ವಲಯದಲ್ಲಿ ಒಂದು ಬಗೆಯ ಮುಗಮ್ಮಾದ ಪರಿಸರ ಒಡಮೂಡತೊಡಗಿದೆ. ಅತ್ಯಂತ ಪ್ರಜಾಪ್ರಾತಿನಿಧಿಕ ರೂಪದಲ್ಲಿ ನಡೆಯಬೇಕಾದ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನಗಳೇ ತೀರಾ ಅಂದಾದುಂದಿಯಾಗಿ ನಡೆಯುತ್ತವೆ. ನಾಡು ನುಡಿಯ ಚಿಂತನೆಗೆ ಅಲ್ಲಿ ಸಮಯ ಉಳಿದರೆ ಮಾತ್ರ ಅವಕಾಶ, ಮಿಕ್ಕದ್ದೆಲ್ಲಾ ಬರೀ ಮೆರವಣಿಗೆ, ಊರುಣಿಗೆ, ಸನ್ಮಾನ, ಹಾರ ತುರಾಯಿ, ಊಟ, ತಿಂಡಿಯಲ್ಲೇ ಮುಗಿದುಹೋಗುತ್ತದೆ. sanmana-sammelanaಸದ್ಯ ಬಿಜಾಪುರದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಸಮ್ಮೇಳನವನ್ನೇ ನೋಡಿ. ಅಲ್ಲಿಯ ಆಮಂತ್ರಣ ಪತ್ರಿಕೆಯಲ್ಲಿ ಸಾಹಿತಿಗಳಿಗಿಂತಲೂ ರಾಜಕಾರಣಿಗಳ ಸಂಖ್ಯೆಯೇ ಹೆಚ್ಚಿಗಿದೆ. ಜೊತೆಗೆ ನೂರಕ್ಕಿಂತಲೂ ಹೆಚ್ಚು ಜನರಿಗೆ ಸನ್ಮಾನ ಇಲ್ಲಿ ನಡೆಯಲಿದೆ. ಹೀಗೆ ಸನ್ಮಾನ, ಹಾರ ತುರಾಯಿಗಳಿಗೆ ತಗಲುವ ವೆಚ್ಚ ಯಾರದ್ದು..? ಬಿಜಾಪುರ ಜಿಲ್ಲೆಯಲ್ಲಿ ಬರದ ಭೀಕರತೆ ಅದಾಗಲೇ ಆರಂಭವಾಗಿದೆ. ದನಕರುಗಳಿಗೆ ಮೇವಿಲ್ಲ, ಕೃಷಿಗೆ ಬಿಡಿ, ಕುಡಿಯಲೂ ನೀರು ಇಲ್ಲದ ಸ್ಥಿತಿಯಲ್ಲಿ ಅನೇಕ ಗ್ರಾಮಗಳಿವೆ. ಹೀಗಿರುವಾಗ ಈ ನೂರಕ್ಕಿಂತಲೂ ಹೆಚ್ಚು ಜನರಿಗೆ ಸನ್ಮಾನ ಮಾಡುವ ಹರಕತ್ತಾದರೂ ಏನಿದೆ..? ಸಮ್ಮೇಳನ ಎನ್ನುವದು ಒಂದು ಅಕೌಂಟೇಬಲ್ ಆಗಿರುವ ಚಟುವಟಿಕೆ. ಪೈಸೆಗೆ ಪೈಸೆ ಲೆಕ್ಕ ಕೊಡಬೇಕು. ಹೀಗಿರುವಾಗ ಯಾವುದಕ್ಕೆ ಒತ್ತು ಕೊಡಬೇಕು, ಯಾವುದಕ್ಕೆ ಕೊಡಬಾರದು ಎನ್ನುವದು ರಾಜ್ಯದ ಅಧ್ಯಕ್ಷರಾದಿಯಾಗಿ, ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿಕೊಳ್ಳುವವರಾದಿಯಾಗಿ ಯೋಚಿಸಬೇಕು. ಸ್ವಯಂಪ್ರೇರಣೆಯಿಂದ ಮೆರವಣಿಗೆ ಮತ್ತು ಸನ್ಮಾನಗಳು ಬೇಡ ಎನ್ನುವ ಮಾತು ಮೂಡಬೇಕು. ಅಂದಾಗ ಆ ಸಾಹಿತ್ಯ ಸಮ್ಮೇಳನ ಪ್ರಾಜ್ಞರ ಸಭೆಯಾಗಿ, ಸಮ್ಮೇಳನವಾಗಿ ಹೆಸರಾಗುವದು. ಇಲ್ಲದಿದ್ದರೆ ಅದೊಂದು ಮೋಜಿನ ಜಾತ್ರೆಯಷ್ಟೇ ಮಹತ್ವ ಪಡೆಯುತ್ತದೆ. ಸಾಹಿತಿಗಳಾದವರು ಬರೀ ವೈಚಾರಿಕತೆಯನ್ನು ಕುರಿತು ಬರೆಯುವವರು ಮಾತ್ರವೇ..? ಅನುಸರಣೆ ಇಲ್ಲವೇ..? ನಡೆ ನುಡಿಯೊಳಗೆ ಹೊಂದಾಣಿಕೆ ಬೇಡ, ಒಂದುತನ ಬೇಕು.

ಎಲ್ಲೋ ಒಂದೆಡೆ ಸಾಹಿತ್ಯಕ ಚಟುವಟಿಕೆಗಳು ನಡೆಯುತ್ತಿವೆ ಎಂತಾದರೆ ಸಮಾಜಮುಖಿಯಾದ ಒಂದಿಷ್ಟು ನಿಲುವುಗಳು, ತೀರ್ಮಾನಗಳು ತೀರಾ ಅವಶ್ಯ. ಸಮಾಜದ ಕಡೆಗೆ ಬೆನ್ನು ಮಾಡಿ ನಡೆಸುವ ಯಾವುದೇ ಸಾಹಿತ್ಯಕ ಚಟುವಟಿಕೆಗಳಿಗೆ ಅರ್ಥವಿಲ್ಲ. ಸಾಹಿತ್ಯ ಸರ್ವರಿಗಲ್ಲ ಅಂತ ಹೇಳುವವರಿಗೆ ಅದು ಕೇವಲ ಕೆಲವರಿಗಲ್ಲ ಎನ್ನುವ ಮಾತನ್ನೂ ಹೇಳಬೇಕಾಗುತ್ತದೆ. ನಿಮ್ಮ ಬರವಣಿಗೆಗೆ ಸಮಾಜದ ಕಟ್ಟ ಕಡೆಯವನ ಬದುಕಿನ ಬವಣೆಗಳು ಸರಕಾಗಬಹುದಾದರೆ, ಅವನ ಜೀವನಗಾಥೆ ನಿಮ್ಮ ಪ್ರಶಸ್ತಿಗೆ ಫ಼ಲವಾಗಬಹುದಾದರೆ ಅವನೆಡೆಗೆ ಬೆನ್ನು ಮಾಡದೇ ಮುಖ ಮಾಡಿ ನಿಲ್ಲುವಲ್ಲಿಯೂ ಒಂದು ಬಗೆಯ ತಾತ್ವಿಕತೆಯಿದೆ. ಸಾವಿರಾರು ವರ್ಷಗಳಿಂದ ಗುಣಕ್ಕೆ ಮತ್ಸರವಿಲ್ಲ ಎಂದು ಹೇಳುತ್ತಲೇ ಜಾತಿ, ಜನಾಂಗ, ವರ್ಣ, ಲಿಂಗದ ಆಧಾರದ ಮೇಲೆ ತರತಮನೀತಿಗಳನ್ನು ಅನುಸರಿಸಿಕೊಂಡು ಬರಲಾಗಿದೆ. ಪಶ್ಚಿಮದ ರಾಷ್ಟ್ರಗಳು ಈ ದಿಶೆಯಲ್ಲಿ ತೀರಾ ಉದಾರವಾದಿಗಳು ಎಂದು ಅವರನ್ನು ಅನುಕರಿಸಿದವರೆಲ್ಲಾ ಅವರಂಥಾದರೇ ಹೊರತು ನಮ್ಮಂಥಾಗಲಿಲ್ಲ. ಸ್ವಾತಂತ್ರ್ಯೋತ್ತರ ಸಂದರ್ಭದಲ್ಲಿಯೂ ದಟ್ಟವಾದ ಪಾಶ್ಚಿಮಾತ್ಯ ಪ್ರಭುತ್ವದ ಅನುಭವವಿರುವ ಶಕ್ತಿಗಳೇ ನಮ್ಮನ್ನು ಪರೋಕ್ಷವಾಗಿ ನಮ್ಮ ಗಮನಕ್ಕೆ ಬಾರದ ಹಾಗೆ ಆಳುತ್ತಿವೆ. ಹಾಗೆ ಆಳುವ ಚಾಣಾಕ್ಷತೆ ಕೂಡಾ ಪಾಶ್ಚ್ಯಾತ್ಯ ಸಂಸ್ಕೃತಿಯ ಮೂಲಕ ಕಲಿತಿರುವದೇ ಆಗಿದೆ. 1960 ರ ಸಂದರ್ಭದಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಅಮೇರಿಕೆಯ ಲಿಂಕನ್ ಮೆಮೊರಿಯಲ್ ಹಾಲ್ ಎದುರು ಕಿಕ್ಕಿರಿದು ತುಂಬಿರುವ ಜನರನ್ನು ಉದ್ದೇಶಿಸಿ ಮಾತನಾಡುತ್ತಾ, “ನಾನು ನನ್ನ ನಾಲ್ಕು ಮಕ್ಕಳನ್ನು ಜನಾಂಗ ಭೇದದಿಂದ ಗುರುತಿಸದೇ, ಅವರ ಸಾಮರ್ಥ್ಯದ ಮೇಲೆ ಗುರುತಿಸುವಂತಾಗುವವರೆಗೂ ಈ ಜನಾಂಗಬೇಧ ವಿರೋಧಿ ಆಂದೋಲನವನ್ನು ಮುಂದುವರೆಸುತ್ತೇನೆ,” ಎಂದಿದ್ದರು. ಅವರ ನಂತರವೂ ಅಮೇರಿಕೆಯ ಶಾಲೆಗಳಲ್ಲಿ ಈಗಲೂ ಕರಿಯರು, ಬಿಳಿಯರು ಎನ್ನುವ ತರತಮ ನೀತಿಗಳು ನಮ್ಮ ಜಾತಿಪದ್ಧತಿಯಷ್ಟೇ ನಿರುಮ್ಮುಳವಾಗಿ ಉಳಿದಿವೆ. ಜಾತಿಯನ್ನು ಬೇರೆ ಬೇರೆ ಕಾರಣಗಳಿಗಾಗಿ ಸಮರ್ಥಿಸಿಕೊಳ್ಳುವವರು ಇರುವ ಹಾಗೆ ಅಲ್ಲಿಯೂ ಜನಾಂಗಭೇದವನ್ನು ಬೇರೆ ಬೇರೆ ಕಾರಣಗಳಿಗಾಗಿ ಸಮರ್ಥಿಸಿಕೊಳ್ಳುವವರಿದ್ದಾರೆ. ಇಂಥಾ ಅಂತರಗಳನ್ನು ನೀಗಬೇಕಾದ ಶಕ್ತಿ ಸಾಹಿತ್ಯದಲ್ಲಿದೆ. ಆದರೆ ಅದು ಕೂಡಾ ಸುಖಲೋಲುಪತೆಯ ಸಹವಾಸಕ್ಕೆ ಹಾತೊರೆಯುತ್ತಿರುವದು ವಿಷಾದನೀಯ…

Lusty cheers were more disturbing!

– Sudhanshu Karkala

As soon as I read news report (Feb 6) on Togadia’s rant, a response to Akbaruddin Owaisi’s speech, I thought the prime channels of the nation would pick that up for debate that day. TogadiaInstead, the channels were busy covering Narendra Modi’s speech in a school in Delhi. (Of course, the topic he was asked to speak was “Emerging Business Model in the Global Scenario”. I wonder if he came anywhere near it!)

I was disappointed, of course, not surprised. The coverage he attracted gave an impression that he was presenting the country’s next budget. Through the day the channels played promos of evening ‘national debate’ sessions on his speech. The channels, in fact, took the Togadia issue on Thursday for discussion. However, the attention it attracted or the screen-space it received was meagre in comparison to Modi’s speech.

While Owaisi, in his speech, wanted the police be silent to finish Hindus, Togadia went on to state that whenever police had stood aside silent Hindus had the advantage. Togadia made it clear the police stood aside when Muslims were massacred during the incidents of Nelli (Assam), Bhagalpur (Bihar) and Gujarat in 2002.

Owaisi has been behind bars after a case was filed against him in Hyderabad. owaisiHis brother Asaduddin Owaisi tried to fool the country by insisting the TV anchors to report it as ‘his alleged speech’, raising doubts on the video clips. However, so far Togadia has not done that. In fact, he defended his speech saying that he was just referring to instances of past.

The anger Owaisi attracted for his speech is absent in case of Togadia. Maharashtra government did not register the case until the Centre insisted it to book one. In both the cases more disturbing than the speeches were lusty cheers of the gatherings. The cheers inspired the speakers to spew more venom and spread the message of hatred in
strong words.

The people who hailed the speakers in both the cases lack humanity and have least respect for idea of ‘secular state’. These are the ones who have supported the electoral-politics rooted in communalism. Such people are everywhere and that is the reason why TV channels offer space on their prime-time news debates to such ‘hate speakers’.

If you recall who spent considerable time in studios of Pramod_MutalikKannada TV channel in the recent time the list would go with Go. Madhusudan, BJP MLC, Pramod Mutalik of Srirama Sene, Dr. Chidananda Murthy, a noted scholar among a few others.

TV crew prefer Pramod Mutalik or Madhusudan, despite knowing the fact very well that they are against to a particular community and hard-core communalists. Janashri News channel telecast the debate on Pramod Mutalik’s threat not to allow Indo-Pak cricket match in Bangalore repeatedly (at least thrice), knowing very well that the government would not allow his men barge into the stadium. The TV channels air such debates, because primarily their business is to ‘playing to the galleries’, which is filled with lusty cheer-leaders.

ಪಂಪ ಪ್ರಶಸ್ತಿಯ ಪಾಡು

– ಡಾ. ಎನ್. ಜಗದೀಶ್ ಕೊಪ್ಪ

ಇದು ಈ ನಾಡಿನ ಸಾಂಸ್ಕೃತಿಕ ಲೋಕಕ್ಕೆ ಬಡಿದ ಗರವೋ, ಆವರಿಸಿಕೊಂಡ ವಿಸ್ಮೃತಿಯೋ ಯಾವುದನ್ನೂ ನಿರ್ದಿಷ್ಟವಾಗಿ ವಿವರಿಸಿ ಹೇಳಲಾಗದ ಅಸಹಾಯತೆ ನನ್ನದು.

ಕಳೆದ ಜನವರಿ ಕೊನೆಯ ವಾರ ಧಾರವಾಡದಲ್ಲಿ ಸಾಹಿತ್ಯ ಸಂಭ್ರಮವನ್ನು ಸವಿದವರು ಇನ್ನೂ ಅದರ ನೆನಪಿನಲ್ಲಿ ಮುಳುಗೇಳುತ್ತಿದ್ದಾರೆ. ಇದರ ಜೊತೆಗೆ ಪಂಚನದಿಗಳ ನಾಡೆಂದು ಹೆಸರಿಗಷ್ಟೇ ಪ್ರಸಿದ್ಧಿಯಾಗಿರುವ ಬಿಜಾಪುರದಲ್ಲಿ ಇದೇ ಪೆಬ್ರವರಿ 8. 9 ಮತ್ತು 10 ರಂದು ಮೂರು ದಿನಗಳ ಕಾಲ ನಡೆಯುವ ಸಾಹಿತ್ಯ ಸಮ್ಮೆಳನವೆಂಬ ಜಾತ್ರೆಗೆ ಎಲ್ಲರೂ ಸಡಗರದಿಂದ ತಯಾರಾಗುತ್ತಿದ್ದಾರೆ. ಇಂತಹ ಹುಸಿ ಎನಿಸಬಹುದಾದ ಸಂಭ್ರಮಗಳ ನಡುವೆ ನಮ್ಮ ಸರ್ಕಾರದ ಅವಿವೇಕತನ ಮತ್ತು ಮೂರ್ಖತನಗಳ ಬಗ್ಗೆ ಈವರೆಗೆ ಯಾವೊಬ್ಬ ಸಾಹಿತಿಯೂ, ಅಥವಾ ಧಾರವಾಡದ ಸಾಹಿತ್ಯ ಸಂಭ್ರಮದಲ್ಲಿ ಪರಸ್ಪರ ಬೆನ್ನು ಕೆರದುಕೊಂಡು, ಕೆರೆತವನ್ನು ಇನ್ನಿಲ್ಲದಂತೆ ನೀಗಿಸಿಕೊಂಡ ಉತ್ತೋಮೋತ್ತಮರು ಚಿಂತಿಸಲಿಲ್ಲ. ಸರ್ಕಾರ ಪಂಪ ಪ್ರಶಸ್ತಿ ಪ್ರದಾನ ಮಾಡುವ ಕುರಿತು ತಾಳಿರುವ ನಿರ್ಲಕ್ಷ್ಯ ಧೋರಣೆಯನ್ನು ಯಾರೂ ಚರ್ಚಿಸಲಿಲ್ಲ.

ಕರ್ನಾಟಕ ಸರ್ಕಾರವು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಕುರಿತ ಕಾಳಜಿ ಮೇಲಿನ ಕಾರಣದಿಂದ ಹುಟ್ಟು ಹಾಕಿದ “ಕನ್ನಡ ಮತ್ತು ಸಂಸ್ಕೃತಿ ಇಲಾಖೆ” ಎಂಬ ಸಂಸ್ಥೆ ತಾನು ಮೂಲಭೂತವಾಗಿ ಮಾಡಬೇಕಾದ ಕರ್ತವ್ಯವನ್ನು ಹೊರತು ಪಡಿಸಿ ಉಳಿದೆಲ್ಲವನ್ನೂ ರಾಜರೋಷವಾಗಿ ಮಾಡುತ್ತಿದೆ. G.H.nayakaಕನ್ನಡದ ಹಿರಿಯ ವಿಮರ್ಶಕ ಹಾಗೂ ನೇರನುಡಿ ಮತ್ತು ಸಜ್ಜನಿಕೆಗೆ ಹೆಸರಾದ ಪ್ರೊ. ಜಿ.ಹೆಚ್. ನಾಯಕರಿಗೆ ಕರ್ನಾಟಕದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ “ಪಂಪ ಪ್ರಶಸ್ತಿ”ಯನ್ನು ಆರು ತಿಂಗಳ ಹಿಂದೆಯೆ ಸರ್ಕಾರ ಘೋಷಿಸಿತು. ಆದರೆ ಈವರೆಗೆ ಪ್ರಶಸ್ತಿಯನ್ನು ವಿತರಿಸದೆ, ಆದಿಕವಿ ಪಂಪ ಮತ್ತು ನಾಡಿನ ಹಿರಿಯ ವಿಮರ್ಶಕರಿಗಿಬ್ಬರಿಗೂ ಒಟ್ಟಿಗೆ ಅಪಮಾನ ಮಾಡಲಾಗಿದೆ ಎಂಬ ತಾತ್ವಿಕ ಸಿಟ್ಟು ಯಾರೊಬ್ಬರಲ್ಲಿಯೂ ಈವರೆಗೆ ಗೋಚರಿಸದಿರುವುದು ಆಶ್ಚರ್ಯವಾಗಿದೆ. ಯಾವನೋ ಒಬ್ಬ ಸಿನಿಮಾ ನಟನ ದಾಂಪತ್ಯದ ಬಿರುಕನ್ನು ಕರ್ನಾಟಕದ ಅಳಿವು ಉಳಿವಿನ ಸಮಸ್ಯೆ ಎಂಬಂತೆ ಚರ್ಚೆಯ ನೆಪದಲ್ಲಿ ಚಚ್ಚಿ ಬಿಸಾಡುತ್ತಿರುವ ದೃಶ್ಯ ಮಾಧ್ಯಮಗಳು, ಸಾಹಿತ್ಯ ಸಮ್ಮೇಳನ ಎಂದರೆ ಅಲ್ಲಿ ಬಡಿಸಲಾಗುವ ಊಟದ ವಿವರ ಎಂದು ಭಾವಿಸಿರುವ ಮುದ್ರಣ ಮಾಧ್ಯಗಳಿಗೂ ಪಂಪ ಪ್ರಶಸ್ತಿಯ ಕುರಿತಂತೆ ಯಾವುದೇ ಅರಿವಿಲ್ಲ.

ಕಳೆದ ಮೂರು ತಿಂಗಳ ಹಿಂದೆಯೆ ಜಿ.ಹೆಚ್. ನಾಯಕರು ಪ್ರಶಸ್ತಿ ಪ್ರದಾನ ಮಾಡಲು ಸರ್ಕಾರ ಅನುಸರಿಸುತ್ತಿರುವ ವಿಳಂಬ ಧೋರಣೆ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಪ್ರೊ. ಬರಗೂರು ರಾಮಚಂದ್ರಪ್ಪ ಸಹ ಸರ್ಕಾರದ ನಿಧಾನ ಗತಿಯ ಧೋರಣೆ ಬಗ್ಗೆ ಪತ್ರಿಕೆಗಳಲ್ಲಿ ಪ್ರತಿಕ್ರಿಯಿಸಿದ್ದರು. pampaಆದರೆ ತಮ್ಮ ಅಧಿಕಾರದ ಕುರ್ಚಿ ಉಳಿಸಿಕೊಳ್ಳುವ ಗುರಿ ಒಂದನ್ನು ಹೊರತು ಪಡಿಸಿ ಜಗತ್ತಿನ ಯಾವ ಗೊಡವೆಗಳು ನಮಗೆ ಬೇಡ ಎಂಬಂತಿರುವ ನಮ್ಮ ಜನಪ್ರತಿನಿಧಿಗಳಿಗೆ ಇಂತಹ ಮಾರ್ಮಿಕವಾದ ಮಾತುಗಳು ಹೇಗೆ ತಾನೆ ತಲುಪಲು ಸಾಧ್ಯ?

ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೆಶಕ ಸ್ಥಾನದಲ್ಲಿ ಕುಳಿತಿರುವ ಮನು ಬಳಿಗಾರ್ ಓರ್ವ ಅಧಿಕಾರಿಯಷ್ಟೇ ಅಲ್ಲ, ಜೊತೆಗೆ ಸ್ವತಃ ಒಬ್ಬ ಲೇಖಕ. ಅವರಿಗಾದರೂ ಸಾಹಿತ್ಯ ಲೋಕದ ಈ ಸೂಕ್ಷ್ಮತೆಯ ವ್ಯವಹಾರಗಳು ಅರ್ಥವಾಗಬಾರದೆ? ಇಲಾಖೆಯ ವತಿಯಿಂದ ಆರ್ಥಿಕ ನೆರವು ಪಡೆದ ಸಂಘಟನೆಗಳು ಏರ್ಪಡಿಸುವ ಸನ್ಮಾನ ಕಾರ್ಯಕ್ರಮದಲ್ಲಿ ಹಾರ ತುರಾಯಿಗಳಿಗೆ ನಡುಬಗ್ಗಿಸಿ ಕೊರಳು ಒಡ್ಡುವುದೆ ಕಾಯಕ ಎಂದು ಈ ನಿರ್ದೆಶಕರು ಭಾವಿಸಿದಂತಿದೆ. ಅಧಿಕಾರಿಗಳು ಸಾಹಿತಿಯಾಗಿ, ಸಾಹಿತಿಗಳು ರಾಜಕಾರಣಿಗಳಾಗಿ ಪರಿವರ್ತನೆಯಾಗುತ್ತಿರುವ ಈ ಪರ್ವ ಕಾಲದಲ್ಲಿ ಕನ್ನಡ ಸಾಂಸ್ಕೃತಿಕ ಲೋಕದ ದುರಂತಗಳ ಬಗ್ಗೆ ಯಾರಲ್ಲಿ ಪ್ರಶ್ನಿಸುವುದು?

ಸರ್ಕಾರಕ್ಕೆ ಮತ್ತು ಸಂಸ್ಕೃತಿ ಇಲಾಖೆಗೆ ನನ್ನ ಪ್ರಶ್ನೆ ಇಷ್ಟೇ: “ನಿಮಗೆ ನಿಗದಿ ಪಡಿಸಿದ ದಿನಾಂಕದಂದು ಪ್ರಶಸ್ತಿ ವಿತರಣೆ ಮಾಡುವ ಯೋಗ್ಯತೆ ಮತ್ತು ಸಾಮರ್ಥ್ಯವಿಲ್ಲವೆಂದ ಮೇಲೆ ಪ್ರಶಸ್ತಿಯನ್ನು ಏಕೆ ಘೋಷಣೆ ಮಾಡುತ್ತೀರಿ?”

“ಪಂಪ ಪ್ರಶಸ್ತಿ” ಎನ್ನುವುದು ಆರು ತಿಂಗಳಿಗೆ ಅಥವಾ ಮೂರು ತಿಂಗಳಿಗೆ ನೀಡುವ ವೃದ್ಧಾಪ್ಯ ವೇತನ ಅಥವಾ ವಿಧವಾ ವೇತನದಂತಹ ಮಾಸಾಶನಗಳಲ್ಲ. ಪಂಪ ಪ್ರಶಸ್ತಿಗೆ ಅದರದೇ ಘನತೆ, ಗೌರವ ಇದೆ. ನಿಮಗೆ ಘನತೆ, ಗೌರವಗಳು ಇಲ್ಲದಿದ್ದರೆ ಚಿಂತೆ ಇಲ್ಲ. (ಅವುಗಳು ಇವೆ ಎಂದು ನನಗನಿಸಿಲ್ಲ.) ಆದರೆ ಪ್ರಶಸ್ತಿಯನ್ನು ಅಪಮೌಲ್ಯಗೊಳಿಸಬೇಡಿ.

ರಾಹುಲ್ ಗಾಂಧಿ : ಅರೆಮನಸಿನ ನಾಯಕತ್ವ ಹಾನಿಕಾರಕ

– ಆನಂದ ಪ್ರಸಾದ್

ಕಾಂಗ್ರೆಸ್ಸಿಗರ ನಿರೀಕ್ಷೆಯಂತೆ ರಾಹುಲ್ ಗಾಂಧಿಗೆ ಪಕ್ಷದಲ್ಲಿ ಉಪಾಧ್ಯಕ್ಷರ ಹುದ್ಧೆ ನೀಡಲಾಗಿದ್ದು ಮುಂದಿನ ಸಾರ್ವತ್ರಿಕ ಚುನಾವಣೆಗಳನ್ನು ರಾಹುಲ್ ನೇತೃತ್ವದಲ್ಲಿ ಎದುರಿಸಲು ಜೈಪುರ ಚಿಂತನ ಶಿಬಿರದಲ್ಲಿ ವೇದಿಕೆ ಸಿದ್ಧಪಡಿಸಲಾಗಿದೆ. ಅಂತೂ ಇಂತೂ ಒಲ್ಲದ ಮನಸ್ಸಿನಿಂದ ರಾಹುಲ್ ಗಾಂಧಿ ಜವಾಬ್ದಾರಿ ವಹಿಸಿಕೊಳ್ಳಲು ಒಪ್ಪಿಕೊಂಡಿರುವಂತೆ ಕಂಡುಬರುತ್ತದೆ. ಇದು ಒಲ್ಲದ ಗಂಡಿಗೆ ಬಲವಂತದ ಮದುವೆ ಮಾಡಿದಂತೆ ಕಾಣುತ್ತದೆ. ಸ್ವಯಂ ಸ್ಫೂರ್ತಿ ಹಾಗೂ ಉತ್ಸಾಹ ಇಲ್ಲದಿದ್ದರೆ ನೇತೃತ್ವ ಯಶಸ್ವಿಯಾಗಲಾರದು. ಅಂಥ ಸ್ಪೂರ್ತಿ ಹಾಗೂ ಪಕ್ಷವನ್ನು ಮುನ್ನಡೆಸುವ ಉತ್ಸಾಹ ರಾಹುಲರಲ್ಲಿ ಇದುವರೆಗೆ ಕಂಡುಬಂದಿಲ್ಲ. ಅಧಿಕಾರ ಎಂಬುದು ವಿಷವಿದ್ದಂತೆ ಎಂದು ತನ್ನ ತಾಯಿ ಸೋನಿಯಾರ ಮಾತನ್ನು ಚಿಂತನ ಶಿಬಿರದ ತನ್ನ ಭಾಷಣದಲ್ಲಿ ರಾಹುಲ್ ಉಲ್ಲೇಖಿಸಿದರು. ಇದು ನಿಜವೂ ಹೌದು. ಅಧಿಕಾರವನ್ನು ಸರಿಯಾಗಿ ವಿವೇಚನೆಯಿಂದ ಬಳಸದೆ ಇದ್ದರೆ ಅದುವೇ ವಿಷವಾಗಿ ವ್ಯಕ್ತಿಯನ್ನು ಬಲಿ ತೆಗೆದುಕೊಳ್ಳುತ್ತದೆ. Sonia-Rahulಇದಕ್ಕೆ ರಾಜೀವ ಗಾಂಧಿ ಹಾಗೂ ಇಂದಿರಾ ಗಾಂಧಿಯವರೇ ಸ್ಪಷ್ಟ ನಿದರ್ಶನ. ದೇಶವನ್ನು ಮುನ್ನಡೆಸುವ ಮಹತ್ವದ ಜವಾಬ್ದಾರಿ ಇರುವ ಹುದ್ಧೆಗಳಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡರೆ ಅದು ಜೀವಕ್ಕೇ ಮುಳುವಾಗಬಹುದು ಎಂಬುದು ಇವರ ವಿಷಯದಲ್ಲಿ ಸತ್ಯವೆಂದು ಕಂಡುಬರುತ್ತದೆ. ರಾಜಕೀಯವಾಗಿ ರಾಹುಲ್ ಮುಗ್ಧರು. ಹೀಗಾಗಿ ಇವರು ದಿಟ್ಟ ನಿರ್ಧಾರಗಳನ್ನು ಸ್ವತಂತ್ರವಾಗಿ ತೆಗೆದುಕೊಳ್ಳುವ ಮನೋಭಾವ ಬೆಳೆಸಿಕೊಳ್ಳದಿದ್ದರೆ ಕಾಂಗ್ರೆಸ್ ಮುಂಬರುವ ದಿನಗಳಲ್ಲಿ ಹಿನ್ನಡೆ ಅನುಭವಿಸಲಿದೆ.

ರಾಜೀವ ಗಾಂಧಿಯವರೂ ಅನುಭವವಿಲ್ಲದೆ ಏಕಾಏಕಿ ಪ್ರಧಾನಮಂತ್ರಿಯಂಥ ಉನ್ನತ ಹುದ್ಧೆಯನ್ನು ಏರಿದವರು. ಅವರು ಆರಂಭದಲ್ಲಿ ದೇಶಕ್ಕೆ ಒಳಿತನ್ನು ಮಾಡಬೇಕೆಂಬ ಪ್ರಾಮಾಣಿಕ ಕಾಳಜಿಯನ್ನು ಹೊಂದಿದ್ದರು. ಆದರೆ ಅವರಿಗೆ ಸಲಹೆಗಳನ್ನು ನೀಡುವವರು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಲು ಕಾರಣರಾದರು. ಉದಾಹರಣೆಗೆ ಶಾಬಾನು ಪ್ರಕರಣದಲ್ಲಿ ಅಲ್ಪಸಂಖ್ಯಾತರನ್ನು ಓಲೈಸಲು ತೆಗೆದುಕೊಂಡ ನಿರ್ಧಾರ, ಅಯೋಧ್ಯೆಯ ವಿವಾದಿತ ಕಟ್ಟಡದ ಬೀಗ ತೆಗೆಸಿ ಹಿಂದೂಗಳನ್ನು ಓಲೈಸಲು ತೆಗೆದುಕೊಂಡ ನಿರ್ಧಾರ ಇಂಥ ನಿರ್ಧಾರಗಳು ಅಡ್ಡಹಾದಿಯ ರಾಜಕೀಯ ನಿರ್ಧಾರಗಳಾಗಿದ್ದು ಇದು ಅವರ ಸುತ್ತ ಇದ್ದ ಕುಟಿಲ ಸಲಹೆಗಾರರು ನೀಡಿದ ಸಲಹೆಗಳ ಕಾರಣದಿಂದ ತೆಗೆದುಕೊಂಡವು ಎಂಬುದರಲ್ಲಿ ಸಂದೇಹವಿಲ್ಲ. ನೇರ ಹಾದಿಯಲ್ಲಿ ರಾಜಕೀಯ ಹಾಗೂ ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಂಡು ಜನಪರ, ಅಭಿವೃದ್ಧಿಪರ ರಾಜಕೀಯಕ್ಕೆ ಒತ್ತು ಕೊಟ್ಟಿದ್ದರೆ ಓಲೈಕೆ ರಾಜಕೀಯ ಮಾಡುವ ಅಗತ್ಯವೇ ಕಾಂಗ್ರೆಸ್ಸಿಗೆ ಬರುತ್ತಿರಲಿಲ್ಲ. ಇಂಥ ಸರಳ ವಿಷಯಗಳೂ ಕಾಂಗ್ರೆಸ್ಸಿಗರಿಗೆ ಅರ್ಥವಾಗದಿರುವ ಕಾರಣ ಅವರು ಜಾತಿ ರಾಜಕೀಯ, ಅಲ್ಪಸಂಖ್ಯಾತರ ಓಲೈಕೆ ರಾಜಕೀಯ, ಬಹುಸಂಖ್ಯಾತರ ಓಲೈಕೆ ರಾಜಕೀಯ ಹೀಗೆ ನಾನಾ ವಿಧದ ಕುಟಿಲ ತಂತ್ರಗಳ ಮೊರೆ ಹೋಗುವ ಕೆಟ್ಟ ಪ್ರವೃತ್ತಿ ಬೆಳೆದಿದೆ. ಇದರಿಂದ ಹೊರಬರದ ಹೊರತು ಕಾಂಗ್ರೆಸ್ಸಿಗೆ ಭವಿಷ್ಯವಿಲ್ಲ.

ರಾಹುಲ ಗಾಂಧಿಯವರಿಗೆ ಆಡಳಿತಾತ್ಮಕ ಅನುಭವ ಹೆಚ್ಚೇನೂ ಇಲ್ಲದಿರುವ ಕಾರಣ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಭವ ಕಡಿಮೆ.rahul-hubli ಕಾಂಗ್ರೆಸ್ ಪಕ್ಷದ ಪ್ರಧಾನ ಸಮಸ್ಯೆಯೇ ಭ್ರಷ್ಟಾಚಾರದ ವಿರುದ್ಧ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲಾಗದೆ ಇರುವುದು. ಪಕ್ಷದಲ್ಲಿ ಹಲವು ಭ್ರಷ್ಟರು ಭದ್ರವಾಗಿ ಬೇರೂರಿದ್ದು ಇವರೆಲ್ಲಾ ಭ್ರಷ್ಟಾಚಾರದ ವಿರುದ್ಧ ಪಕ್ಷ ದಿಟ್ಟ ನಿರ್ಧಾರ ತೆಗೆದುಕೊಳ್ಳದಂತೆ ಪಕ್ಷದ ಉನ್ನತ ನಾಯಕತ್ವವನ್ನು ದಾರಿ ತಪ್ಪಿಸುತ್ತಿರುವಂತೆ ಕಾಣುತ್ತದೆ. ಪಕ್ಷದ ಒಳಗೆಯೇ ಇರುವ ಭ್ರಷ್ಟರ ವಿರುದ್ಧ ರಾಹುಲ ಗಾಂಧಿ ಕ್ರಮ ಕೈಗೊಳ್ಳುವ ಧೈರ್ಯ ತೋರಿಸಿದರೆ ಪಕ್ಷದ ಬಗ್ಗೆ ಜನತೆಯಲ್ಲಿ ಒಳ್ಳೆಯ ಅಭಿಪ್ರಾಯ ಮೂಡಬಹುದು. ಇಲ್ಲದೆ ಹೋದರೆ ಪಕ್ಷವು ಜನತೆಯ ವಿಶ್ವಾಸ ಗಳಿಸಿಕೊಳ್ಳುವುದು ಮರೀಚಿಕೆಯಾಗಬಹುದು. ರಾಹುಲ ಗಾಂಧಿ ಪೂರ್ಣ ಮನಸ್ಸಿನಿಂದ ಪಕ್ಷವನ್ನು ಮುನ್ನಡೆಸುವ ಇಚ್ಚಾಶಕ್ತಿ ತೋರಿಸದೆ ಹೋದರೆ ಯಶಸ್ವಿಯಾಗುವ ಸಾಧ್ಯತೆ ಕಡಿಮೆ. ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಪ್ರಾಮಾಣಿಕರೂ, ಚಿಂತನಶೀಲರೂ, ಸಂವೇದನಾಶೀಲರೂ ಆದ ಲೇಖಕರು ಅಥವಾ ವಿಜ್ಞಾನಿಗಳ ಸಲಹೆ ಪಡೆಯುವುದರಿಂದ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಬಚಾವಾಗಬಹುದು.

ಕಾಂಗ್ರೆಸ್ ಪಕ್ಷದ ಬಗ್ಗೆ ನಮಗೆ ಎಷ್ಟೇ ಭಿನ್ನಾಭಿಪ್ರಾಯ, ಅಸಹನೆ, ತಿರಸ್ಕರ ಇದ್ದರೂ ಇದು ದೇಶವ್ಯಾಪಿ ಸಂಘಟನೆ ಹಾಗೂ ದೀರ್ಘ ಇತಿಹಾಸ ಹೊಂದಿರುವ ಕಾರಣ ಪಕ್ಷದ ನಾಯಕತ್ವವನ್ನು ಸಾಧ್ಯವಾದಷ್ಟೂ ಸರಿದಾರಿಯಲ್ಲಿ ಹೋಗುವಂತೆ ಪ್ರೇರೇಪಿಸುವ ಅಗತ್ಯ ಇದೆ. ಇಲ್ಲದೆ ಹೋದರೆ ದೇಶದಲ್ಲಿ ಮೂಲಭೂತವಾದಿಗಳ ಕೈ ಮೇಲಾಗುವ ಸಾಧ್ಯತೆ ಕಂಡುಬರುತ್ತದೆ. ಹೀಗಾಗಿ ಪಕ್ಷವು ಒಂದು ಕುಟುಂಬದ ಹಿಡಿತದಲ್ಲಿ ಇದ್ದರೂ ದೇಶದಲ್ಲಿ ಗಾಂಧಿ, ನೆಹರೂ ಅವರು ಹೊಂದಿದ್ದ ಪ್ರಗತಿಪರ ಚಿಂತನೆಗಳು ಪಕ್ಷದಲ್ಲಿ ಅಲ್ಪ ಮಟ್ಟದಲ್ಲಾದರೂ ಉಳಿದುಕೊಂಡಿವೆ ಬೇರೆ ಪ್ರಗತಿಪರ ಚಿಂತನೆಯ ರಾಜಕೀಯ ಪಕ್ಷಗಳು ಬೆಳೆಯುವ ಸಂಭಾವ್ಯತೆ ದೇಶದಲ್ಲಿ ಕಡಿಮೆ ಇರುವ ಕಾರಣ ಕಾಂಗ್ರೆಸ್ ಪಕ್ಷವನ್ನು ಸರಿಯಾದ ಹಾದಿಯಲ್ಲಿ ನಡೆಯುವಂತೆ ಪ್ರೇರೇಪಿಸಬೇಕಾದ ಅಗತ್ಯ ಇಂದು ಇದೆ.

ಕಾಂಗ್ರೆಸ್ ಸೇವಾದಳವನ್ನು ಬೇರುಮಟ್ಟದಿಂದ ಬೆಳೆಸಿ ದೇಶದ ಚಿಂತನೆ ನಡೆಸುವ ಪ್ರವೃತ್ತಿಯನ್ನು ಕಾರ್ಯಕರ್ತರಲ್ಲಿ ಬೆಳೆಸಬೇಕಾದ ಅಗತ್ಯ ಇದೆ. rahul_priyanka_soniaಇಲ್ಲದೆ ಹೋದರೆ ಮೂಲಭೂತವಾದಿ ದೇಶಭಕ್ತರ ಕೈ ಮೇಲಾಗುವ ಸಂಭವ ಇದೆ. ಕಾಂಗ್ರೆಸ್ಸಿನ ಉನ್ನತ ನಾಯಕತ್ವ ಜನರ ಜೊತೆ ನೇರ ಸಂಪರ್ಕ ಹೊಂದಲು ಸೂಕ್ತ ವೆಬ್‌ಸೈಟನ್ನು ರೂಪಿಸಬೇಕಾದ ಅಗತ್ಯ ಇಂದಿನ ಇಂಟರ್ನೆಟ್ ಯುಗದಲ್ಲಿ ಅತ್ಯಂತ ಅಗತ್ಯವಿದೆ. ಮಧ್ಯಮವರ್ಗದ ಹಾಗೂ ಯುವಜನರ ಅಭಿಪ್ರಾಯ ತಿಳಿದುಕೊಳ್ಳಲು ಇದು ಅತೀ ಅಗತ್ಯ. ಮಧ್ಯಮವರ್ಗದ ಯುವಜನತೆಯಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ ತೀವ್ರವಾದ ಬೇಸರ ಹಾಗೂ ಸಿಟ್ಟು ಇರುವುದು ಇಂಟರ್ನೆಟ್ ಜಗತ್ತನ್ನು ಅವಲೋಕಿಸಿದರೆ ತಿಳಿಯುತ್ತದೆ. ಇಂಟರ್ನೆಟ್ಟಿನಲ್ಲಿ ಕಾಂಗ್ರೆಸ್ ಬಗ್ಗೆ ಯಾವುದೇ ಲೇಖನ ಪ್ರಕಟವಾದರೂ ತೀಕ್ಷ್ಣವಾದ ವಿರೋಧ ಅಭಿಪ್ರಾಯ ಮಧ್ಯಮವರ್ಗದ ಯುವಜನತೆಯಿಂದ ಪ್ರಕಟವಾಗುವುದು ಕಂಡುಬರುತ್ತದೆ. ಪಕ್ಷವು ತನ್ನನ್ನು ತಾನು ತಿದ್ದಿಕೊಳ್ಳಬೇಕಾದ ತುರ್ತು ಅಗತ್ಯ ಇದೆ ಎಂಬುದು ಇದರಿಂದ ಕಂಡುಬರುತ್ತದೆ. ರಾಹುಲ ಗಾಂಧಿ ಮಧ್ಯ ವಯಸ್ಸಿನ ಯುವ ಎಂದು ಹೇಳಬಹುದಾದ ರಾಜಕಾರಣಿಯಾದರೂ ಅಧುನಿಕ ತಂತ್ರಜ್ಞಾನವನ್ನು ಅದರಲ್ಲೂ ಇಂಟರ್ನೆಟ್ ಜಗತ್ತಿನಲ್ಲಿ ತನ್ನದೇ ಆದ ಅಸ್ತಿತ್ವವನ್ನು ತೋರಿಸುವ ಯಾವುದೇ ವ್ಯವಸ್ಥೆ ಹೊಂದಿಲ್ಲ. ಒಬ್ಬ ನಾಯಕನಾದವನು ಇಂಥ ನಿರ್ಲಕ್ಷ್ಯ ತೋರಿದರೆ ಆತನು ಜನಪರವಾಗಿ ಬೆಳೆಯುವ ಸಾಧ್ಯತೆ ಇಲ್ಲ.

ದೇಶದಲ್ಲಿ ಮೂಲಭೂತವಾದ ಹೆಚ್ಚುತ್ತಾ ಇದೆ. ಇದಕ್ಕೆ ಕಾರಣ ಪ್ರಗತಿಪರ ರಾಜಕೀಯ ಶಕ್ತಿಗಳು ಮೂಲಭೂತವಾದಿಗಳೊಂದಿಗೆ ರಾಜಿಯಾಗಿರುವುದು. ಹಾಳೂರಿಗೆ ಉಳಿದವನೇ ಗೌಡ ಎಂಬಂತೆ ದೊಡ್ಡ ಬಾಯಿಯ ಮೂಲಭೂತವಾದಿಗಳು ಮೇಲುಗೈ ಪಡೆಯುತ್ತಿದ್ದಾರೆ. ಅರಾಜಕ ಪರಿಸ್ಥಿತಿಗಳಲ್ಲಿ ಸರ್ವಾಧಿಕಾರಿ ಮನೋಭಾವದ ಮೂಲಭೂತವಾದ ಬೇಗನೆ ಮೇಲುಗೈ ಪಡೆಯುತ್ತದೆ. ಕಾಂಗ್ರೆಸ್ ಪಕ್ಷವು ದಿಟ್ಟ ಹಾಗೂ ಚಿಂತನಶೀಲ ನಾಯಕತ್ವವಿಲ್ಲದೆ ಅರಾಜಕ ಪರಿಸ್ಥಿತಿಯನ್ನು ತಲುಪಿದೆ. ಇದರ ಜೊತೆಗೆ ಭ್ರಷ್ಟಾಚಾರವನ್ನು ನಿಯಂತ್ರಿಸದ ಕಾಂಗ್ರೆಸ್ ಪಕ್ಷಕ್ಕೆ ಎದುರಾಗಿ ಪರ್ಯಾಯ ಧಾರ್ಮಿಕ ಮೂಲಭೂತವಾದಿಗಳು ಮಾತ್ರ ಎಂಬ ಸ್ಥಿತಿ ಇರುವುದು ದೇಶಕ್ಕೆ ಒಳ್ಳೆಯದಲ್ಲ. ಒಮ್ಮೆ ದೇಶವು ಹುಸಿ ದೇಶಭಕ್ತರ ಮೂಲಭೂತವಾದಕ್ಕೆ ಸಿಲುಕಿದರೆ ಅದರಿಂದ ಹೊರಬರುವುದು ಅತ್ಯಂತ ಕಠಿಣ ಆಗಲಿದೆ. ಪಾಕಿಸ್ತಾನವೇ ಇದಕ್ಕೆ ಅತ್ಯುತ್ತಮ ಉದಾಹರಣೆ. ಹೀಗಾಗಿ ದೇಶವು ಮೂಲಭೂತವಾದಿಗಳ ತೆಕ್ಕೆಗೆ ಬೀಳದಂತೆ ದೇಶವ್ಯಾಪಿ ಜಾಗೃತಿ ಮೂಡಿಸಬೇಕಾದ ಹೊಣೆಗಾರಿಕೆ ಕಾಂಗ್ರೆಸ್ ಪಕ್ಷದ ಮೇಲೆ ಇದೆ. ಆದರೆ ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರದಲ್ಲಿ ಮುಳುಗಿ ಜನರ ಆಕ್ರೋಶಕ್ಕೆ ಗುರಿಯಾಗಿರುವ ಕಾರಣ ಮುಂಬರುವ ದಿನಗಳು ಭಾರತದ ಪಾಲಿಗೆ ಇನ್ನಷ್ಟು ಕರಾಳವಾಗುವ ಸಂಭವವೇ ಕಂಡುಬರುತ್ತಿದೆ. ಹುಸಿ ದೇಶಭಕ್ತರ ಅಟ್ಟಹಾಸ ಮೇರೆ ಮೀರುತ್ತಿದೆ. ಇಂಥ ಹುಸಿ ದೇಶಭಕ್ತರ ಕೈಯಿಂದ ದೇಶವನ್ನು ರಕ್ಷಿಸಲು ಮಾಧ್ಯಮಗಳು ಮುಂದಾಗಬೇಕಾದ ಅಗತ್ಯ ಇದೆ.